ಜೋಗಕ್ಕೆ ಬರಬೇಡಿ ಪ್ಲೀಜ್….ಜೋಗದ ಸಿರಿ ಬೆಳಕಿಲ್ಲ…!

ವಿಶ್ವಪ್ರಸಿದ್ಧ ಜೋಗದ ಜಲಪಾತ ನೋಡದವರುಂಟೆ? ಸಾಯೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ ಎಂದು ಡಾ. ರಾಜ್‌ ಕುಮಾರ್‌ ಹಾಡಿ ಕುಣಿದಾದ ಮೇಲೆ ಮುಂಗಾರು ಮಳೆ ಚಿತ್ರದ ನಂತರ ಜೋಗದ ಗುಂಡಿ ಈಗಿನ ಭಾಷೆಯಲ್ಲಿ ವೈರಲ್‌, ಸೆನ್ಸೆಷನ್‌ ಆಗಿತ್ತು.
ಇದೇ ವೈಭವದ ಮಾತನ್ನು ಹಲವು ದಶಕಗಳಿಂದ ಕೇಳುತ್ತಾ ಬಂದ ಸಾರ್ವಜನಿಕರಿಗೆ ಈಗೊಂದು ಕೆಟ್ಟ ಸುದ್ದಿ ಇದೆ. ಜೋಗದ ಕಲ್ಪನೆ, ಯೋಚನೆ ಎಂದರೆ ರಮ್ಯ,ಗಮ್ಯ ಎಂದುಕೊಂಡವರು ಈಗ ಜೋಗದ ಜಲಪಾತವನ್ನು ನೋಡಲೇ ಬಾರದು. ಪ್ರತಿವರ್ಷ ಮಳೆಗಾಲದಲ್ಲಿ ಅದರಲ್ಲೂ ಜೂನ್ ನಿಂದ ಅಕ್ಟೋಬರ್‌, ನವೆಂಬರ್‌ ವರೆಗೆ ಜೋಗ ಜಲಪಾತ ನೋಡಲು ಹೇಳಿ ಮಾಡಿಸಿದ ಸಮಯ! ಎನ್ನುವ ರೂಢಿಯೊಂದಿತ್ತು. ಆದರೆ ಈಗ ಜೋಗದ ಸ್ಥಿತಿ -ಗತಿ ಹಿಂದಿನಂತಿಲ್ಲ.


ಮಲೆನಾಡಿನಲ್ಲಿ ಕೈಕೊಟ್ಟ ಮಳೆರಾಯ ದಿನಕ್ಕೆ ಆಗೊಮ್ಮೆ ಈಗೊಮ್ಮೆಯೂ ಹನಿಗಳನ್ನು ಚೆಲ್ಲಲು ತಯಾರಿಲ್ಲ. ಮಳೆ ಇಲ್ಲ,ನೀರಿಲ್ಲ ಎಂದರೆ ಜೋಗದ ಜಲಪಾತ ಎಷ್ಟು ನೀರಸವಿರಬೇಡ. ಹೌದು ಈಗ ಜೋಗ ಹಿಂದಿನಂತಿಲ್ಲ ಜೋಗದ ರಾಜ, ರಾಣಿ ರೋರರ್‌, ರಾಕೆಟ್‌ ಜಲಧಾರೆಗಳೆಲ್ಲಾ ಸೊರಗಿವೆ. ಜೋವೆಂದರೆ ಅಬ್ಬರ, ರೋಮಾಂಚನ, ಮಂಜು, ಮನೋಲ್ಲಾಸ ಎನ್ನುವ ಶಬ್ಧಗಳ ಭೌತಿಕ ರೂಪ ಈಗ ಕಾಣಿಯಾಗಿದೆ.


ಸುರಿಯದ ಮುಂಗಾರು ಮಳೆ ಜೋಗವೆಂದರೆ ನಿರ್ಲಿಪ್ತ, ನೀರಸ, ನೀರವೆನ್ನುವಂತೆ ಮಾಡಿದೆ. ಪ್ರತಿವರ್ಷ ಮಳೆಗಾಲದ ಈ ಅವಧಿಯಲ್ಲಿ ಜೋಗ ಜಲಪಾತದ ಸುತ್ತಮುತ್ತ ಮುತ್ತಿಕೊಳ್ಳುತಿದ್ದ ಜನ-ವಾಹನಗಳು ಈಗ ಜೋಗ ಕಡೆ ಮುಖ ಮಾಡುತ್ತಿಲ್ಲ. ಮಳೆಗಾಲದ ಮೂರು ತಿಂಗಳಲ್ಲಿ ವರ್ಷದ ದುಡಿಮೆ ಮಾಡುತಿದ್ದ ಸ್ಥಳೀಯ ವ್ಯಾಪಾರಿಗಳಿಗೆ ಈಗ ಹಸಿದ ಹೊಟ್ಟೆ ಮೇಲೆ ಹಸಿಬಟ್ಟೆ ಎನ್ನುವ ಸ್ಥಿತಿ ಇದೆ.


ಮಳೆಗಾಲವೇನೋ ಕೈಕೊಟ್ಟು ಜೋಗದಸಿರಿ ಬೆಳಕನ್ನು ಕತ್ತಲೆಗೆ ದೂಡಿದೆ. ಇದರ ಜೊತೆಗೇ ಜೋಗದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳಿಂದಾಗಿ ಜೋಗ ಜ(ನ) ಲಪಾತದ ಎದುರು ಮಣ್ಣ-ಧೂಳು ರಾರಾಜಿಸುತ್ತಿದೆ. ಜೋಗದ ಅಭಿವೃದ್ಧಿ ಕಾಮಗಾರಿಗಳಿಂದಾಗಿ ಈಗ ಜೋಗ ಜಲಪಾತದ ಎದುರು ವಾಹನಗಳೂ ಹೋಗುವಂತಿಲ್ಲ ಜನರೂ ಸುಳಿಯುವಂತಿಲ್ಲ. ಪ್ರತಿವರ್ಷ ಮಳೆ ಗಾಲದಲ್ಲಿ ಜೋಗದ ಸಂಭ್ರಮ ಸವಿಯಲು ಬರುತಿದ್ದ ಜನತೆ, ಪ್ರವಾಸಿಗರಿಗೆ ಒಂದು ಸಂದೇಶವಿದೆ. ಪ್ರತಿವರ್ಷ ಮಳೆಗಾಲಕ್ಕೆ ತಪ್ಪದೆ ಜೋಗಕ್ಕೆ ಬರುತಿದ್ದವರು ಈ ವರ್ಷ ಬರಲೇ ಬೇಡಿ ಯಾಕೆಂದರೆ ಜೋಗದಲ್ಲಿ ಈಗ ನೀರಿಲ್ಲ ಬರೀ ಮಣ್ಣು ಧೂಳು ಜೋಗವೆಂದರೆ ನಿಮ್ಮ ಕಣ್ಣಲ್ಲಿದ್ದ ಚೆಂದ ಮನದಲ್ಲಿದ್ದ ಮಧುರತೆ ಅಚಲವಾಗಿರಬೇಕೆಂದರೆ ದಯವಿಟ್ಟು ಈ ವರ್ಷ ಜೋಗದ ಕಡೆ ಬರಲೇ ಬೇಡಿ.!

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *