ಈ ಪ್ರೀತಿ ರಾಮಚಂದ್ರರನ್ನು ಘಟ್ಟ ಹತ್ತಿಸಿತು, ಗುಡ್ಡ ಇಳಿಸಿತು, ಕಡಲು ಕಾಣಿಸಿತು! ಹಾಡಿಸಿತು, ದಣಿಸಿತು, ಕುಣಿಸಿತು,ಮಲಗಿಸಿತು.!‌

ಅತಿ ಸಾಮಾನ್ಯ ಕುಟುಂಬದ ಹುಡುಗರೇ ಹೀಗೆ ಅವರಿವರನ್ನು ನೋಡಿ ʼಏನೋ ಮಾಡಬೇಕು, ಎಂದುಕೊಂಡು ಹೊರಟು ಬಿಡುತ್ತಾರೆ. ನಂತರ ಬದುಕು ಅವರನ್ನು ಎಲ್ಲೋ ಮುಟ್ಟಿಸಿ ಮಜಾ ನೋಡು ಎನ್ನುತ್ತದೆ.

ಇಂಥ ಸಹಸ್ರಾರು ಜನರಂತೆ ಓಡಿ ಹೋದವರು ನಮ್ಮೂರಿನ ಕಾನಗೋಡು ಪರಮೇಶ್ವರ ಭಾಗವತ, ಬೇಡ್ಕಣಿ ಕೃಷ್ಣಾಜಿ, ಹೆಮ್ಮನಬೈ ಲ್‌ ರಾಮಚಂದ್ರ,

ಇವರಲ್ಲಿ ಇಂದು ನಮ್ಮನ್ನಗಲಿದ ರಾಮಚಂದ್ರ ಭಾಗವತ ಹೆಮ್ಮನಬೈಲು ವಿಶೇಶ ವ್ಯಕ್ತಿಯಾಗಿ ಕಾಣುತ್ತಾರೆ.

ರಸ್ತೆ ಸಂಪರ್ಕ, ಮೂಲಭೂತ ಅನುಕೂಲಗಳೇ ಇಲ್ಲದ ಹೆಮ್ಮನಬೈಲ್‌ ಎನ್ನುವ ಕುಗ್ರಾಮದ ಹುಡುಗನಿಗೆ ಅಜ್ಜ- ಅಪ್ಪ, ಮನೆತನದಿಂದ ಬಂದ ಏಕೈಕ ಬಳವಳಿ ಎಂದರೆ ಯಕ್ಷಗಾನ ಪ್ರೀತಿ.

ಈ ಪ್ರೀತಿ ರಾಮಚಂದ್ರರನ್ನು ಘಟ್ಟ ಹತ್ತಿಸಿತು, ಗುಡ್ಡ ಇಳಿಸಿತು, ಕಡಲು ಕಾಣಿಸಿತು! ಹಾಡಿಸಿತು, ದಣಿಸಿತು, ಕುಣಿಸಿತು,ಮಲಗಿಸಿತು.!

ಬಾಲಕ ರಾಮಚಂದ್ರ ಭಾಗವತ ಅಲೆದಾಡದ ಊರುಗಳೇ ಇಲ್ಲ, ಪದ್ಯ ಹೇಳದ ಜಾಗಗಳೇ ಇಲ್ಲ.

ವಾಮನಮೂರ್ತಿ ಕಂಠವೇ ಕೀರ್ತಿ… ಶ್ರಾವಣ ಬಂತು.. ಹಾಡನ್ನು ಬೇಂದ್ರೆ ಕೇಳಿದ್ದರೆ ಸಾರ್ಥಕವಾಯಿತು ಎನ್ನುತಿದ್ದರೇನೋ?

ಸಂಯಮ,ಬದ್ಧತೆ,ತೊಡಗಿಸಿಕೊಳ್ಳುವಿಕೆಯಿಂದ ರಾಜ್ಯದ ಅನೇಕ ಪ್ರಸಿದ್ಧ ಮೇಳಗಳಲ್ಲಿ ಪ್ರಖ್ಯಾತ ಭಾವತರಾಗಿ ಕೆಲಸಮಾಡಿ ಹೆಮ್ಮನಬೈಲು ಭಾಗವತರೆಂದೇ ಯಕ್ಷಲೋಕದಲ್ಲಿ ಛಾಪು ಮೂಡಿಸಿದ ರಾಮಚಂದ್ರ ನಾಯ್ಕ ಇಂದು ನಮ್ಮನ್ನಗಲಿದರು ಎಂದು ಕೇಳುವಾಗ ಅವರ ಹಾಡು,ಅವರ ಯಕ್ಷಪ್ರೀತಿ,ಕಲಾಸಮರ್ಪಣೆಗಳ ನೆನಪೆಲ್ಲ ಮೆರವಣಿಗೆ ಹೊರಡುತ್ತವೆ.

ಹೆಮ್ಮನಬೈಲಿನ ಅಪ್ಪಟ ಮಲೆನಾಡಿನ ಜೀವನಪ್ರೀತಿಯ ಕುಡಿ ಯಕ್ಷ ಗಿಡವಾಗಿ ಮರ ವಾಗಿ ನೆರಳು ನೀಡುತಿದ್ದಾಲೇ ಉರುಳಿ ಬಿದ್ದಿದೆ ಇದರ ನೆರಳು ಮುಂದೆ ಕೂಡಾ ಅನೇಕರನ್ನು ಪೊರೆಯಲಿದೆ.

ಹೆಮ್ಮನಬೈಲಿಂದ ಹೊರಟ ರಾಮಚಂದ್ರ ನ ಪಯಣ ಸಿಗಂದೂರು ಮೇಳದ ವರೆಗೆ ತೆವಳುತ್ತಾ ಬರುವಾಗ ಸಹಿಸಿದ ನೋವುಗಳೂ ಅನೇಕ ಆದರೆ ಕಲಾರಾಧನೆ ಪ್ರೀತಿಯಾಗಿ ಅರಳಿತ್ತಲ್ಲ ಅವರು ಹೋದೆಡೆಯಲ್ಲೆಲ್ಲ ಸಂಗೀತದ ಮಾಧುರ್ಯ ಸುವಾಸನೆಯಂತೆ ಹರಡುತಿತ್ತು. ತನ್ನ ಯಕ್ಷ ಕ್ಷೇತ್ರಕ್ಕೆ ಬದುಕು ಮುಡುಪಾಗಿಟ್ಟ ರಾಮಚಂದ್ರ ಭಾಗವತರು ಯಕ್ಷಗಾನ ಪ್ರಸಂಗಗಳನ್ನೂ ಬರೆದಿದ್ದಾರೆ, ಯಕ್ಷಗಾನ ಪ್ರದರ್ಶನ ಏರ್ಪಡಿಸಿದ್ದಾರೆ, ಯಕ್ಷಗಾನ ಸಂಘಟನೆ ಮಾಡಿದ್ದಾರೆ. ರಾಜ್ಯದ ಯಕ್ಷಲೋಕದ ನೂರರಲ್ಲಿ ಒಬ್ಬರಾಗಿ ಸಾಧಕರೆನಿಸಿಕೊಂಡರೂ ಪ್ರಶಸ್ತಿ-ಪುರಸ್ಕಾರ ಗೌರವಗಳು ದಕ್ಕಿದ್ದು ಕಡಿಮೆ, ೫೭ ನೇ ವಯಸ್ಸಿಗೇ ಇಹಲೋಕ,ಯಕ್ಷಲೋಕ ತ್ಯಜಿಸಿದ ರಾಮಚಂದ್ರ ಭಾಗವತ ತಮ್ಮ ಕೃತಿ, ಕೆಲಸ, ಜನಪ್ರೀಯತೆಯಿಂದಲೇ ನೂರು ವರ್ಷ ಬದುಕಿ ಉಳಿಯುತ್ತಾರೆ. ಯಕ್ಷಪ್ರೇಮಿಗಳು ಅವರ ಕುಟುಂಬವರ್ಗದ ನೋವು-ದುರ್ಖದಲ್ಲಿ ಪಾಲುದಾರರಾಗಬೇಕಷ್ಟೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *