ಈ ಪ್ರೀತಿ ರಾಮಚಂದ್ರರನ್ನು ಘಟ್ಟ ಹತ್ತಿಸಿತು, ಗುಡ್ಡ ಇಳಿಸಿತು, ಕಡಲು ಕಾಣಿಸಿತು! ಹಾಡಿಸಿತು, ದಣಿಸಿತು, ಕುಣಿಸಿತು,ಮಲಗಿಸಿತು.!‌

ಅತಿ ಸಾಮಾನ್ಯ ಕುಟುಂಬದ ಹುಡುಗರೇ ಹೀಗೆ ಅವರಿವರನ್ನು ನೋಡಿ ʼಏನೋ ಮಾಡಬೇಕು, ಎಂದುಕೊಂಡು ಹೊರಟು ಬಿಡುತ್ತಾರೆ. ನಂತರ ಬದುಕು ಅವರನ್ನು ಎಲ್ಲೋ ಮುಟ್ಟಿಸಿ ಮಜಾ ನೋಡು ಎನ್ನುತ್ತದೆ.

ಇಂಥ ಸಹಸ್ರಾರು ಜನರಂತೆ ಓಡಿ ಹೋದವರು ನಮ್ಮೂರಿನ ಕಾನಗೋಡು ಪರಮೇಶ್ವರ ಭಾಗವತ, ಬೇಡ್ಕಣಿ ಕೃಷ್ಣಾಜಿ, ಹೆಮ್ಮನಬೈ ಲ್‌ ರಾಮಚಂದ್ರ,

ಇವರಲ್ಲಿ ಇಂದು ನಮ್ಮನ್ನಗಲಿದ ರಾಮಚಂದ್ರ ಭಾಗವತ ಹೆಮ್ಮನಬೈಲು ವಿಶೇಶ ವ್ಯಕ್ತಿಯಾಗಿ ಕಾಣುತ್ತಾರೆ.

ರಸ್ತೆ ಸಂಪರ್ಕ, ಮೂಲಭೂತ ಅನುಕೂಲಗಳೇ ಇಲ್ಲದ ಹೆಮ್ಮನಬೈಲ್‌ ಎನ್ನುವ ಕುಗ್ರಾಮದ ಹುಡುಗನಿಗೆ ಅಜ್ಜ- ಅಪ್ಪ, ಮನೆತನದಿಂದ ಬಂದ ಏಕೈಕ ಬಳವಳಿ ಎಂದರೆ ಯಕ್ಷಗಾನ ಪ್ರೀತಿ.

ಈ ಪ್ರೀತಿ ರಾಮಚಂದ್ರರನ್ನು ಘಟ್ಟ ಹತ್ತಿಸಿತು, ಗುಡ್ಡ ಇಳಿಸಿತು, ಕಡಲು ಕಾಣಿಸಿತು! ಹಾಡಿಸಿತು, ದಣಿಸಿತು, ಕುಣಿಸಿತು,ಮಲಗಿಸಿತು.!

ಬಾಲಕ ರಾಮಚಂದ್ರ ಭಾಗವತ ಅಲೆದಾಡದ ಊರುಗಳೇ ಇಲ್ಲ, ಪದ್ಯ ಹೇಳದ ಜಾಗಗಳೇ ಇಲ್ಲ.

ವಾಮನಮೂರ್ತಿ ಕಂಠವೇ ಕೀರ್ತಿ… ಶ್ರಾವಣ ಬಂತು.. ಹಾಡನ್ನು ಬೇಂದ್ರೆ ಕೇಳಿದ್ದರೆ ಸಾರ್ಥಕವಾಯಿತು ಎನ್ನುತಿದ್ದರೇನೋ?

ಸಂಯಮ,ಬದ್ಧತೆ,ತೊಡಗಿಸಿಕೊಳ್ಳುವಿಕೆಯಿಂದ ರಾಜ್ಯದ ಅನೇಕ ಪ್ರಸಿದ್ಧ ಮೇಳಗಳಲ್ಲಿ ಪ್ರಖ್ಯಾತ ಭಾವತರಾಗಿ ಕೆಲಸಮಾಡಿ ಹೆಮ್ಮನಬೈಲು ಭಾಗವತರೆಂದೇ ಯಕ್ಷಲೋಕದಲ್ಲಿ ಛಾಪು ಮೂಡಿಸಿದ ರಾಮಚಂದ್ರ ನಾಯ್ಕ ಇಂದು ನಮ್ಮನ್ನಗಲಿದರು ಎಂದು ಕೇಳುವಾಗ ಅವರ ಹಾಡು,ಅವರ ಯಕ್ಷಪ್ರೀತಿ,ಕಲಾಸಮರ್ಪಣೆಗಳ ನೆನಪೆಲ್ಲ ಮೆರವಣಿಗೆ ಹೊರಡುತ್ತವೆ.

ಹೆಮ್ಮನಬೈಲಿನ ಅಪ್ಪಟ ಮಲೆನಾಡಿನ ಜೀವನಪ್ರೀತಿಯ ಕುಡಿ ಯಕ್ಷ ಗಿಡವಾಗಿ ಮರ ವಾಗಿ ನೆರಳು ನೀಡುತಿದ್ದಾಲೇ ಉರುಳಿ ಬಿದ್ದಿದೆ ಇದರ ನೆರಳು ಮುಂದೆ ಕೂಡಾ ಅನೇಕರನ್ನು ಪೊರೆಯಲಿದೆ.

ಹೆಮ್ಮನಬೈಲಿಂದ ಹೊರಟ ರಾಮಚಂದ್ರ ನ ಪಯಣ ಸಿಗಂದೂರು ಮೇಳದ ವರೆಗೆ ತೆವಳುತ್ತಾ ಬರುವಾಗ ಸಹಿಸಿದ ನೋವುಗಳೂ ಅನೇಕ ಆದರೆ ಕಲಾರಾಧನೆ ಪ್ರೀತಿಯಾಗಿ ಅರಳಿತ್ತಲ್ಲ ಅವರು ಹೋದೆಡೆಯಲ್ಲೆಲ್ಲ ಸಂಗೀತದ ಮಾಧುರ್ಯ ಸುವಾಸನೆಯಂತೆ ಹರಡುತಿತ್ತು. ತನ್ನ ಯಕ್ಷ ಕ್ಷೇತ್ರಕ್ಕೆ ಬದುಕು ಮುಡುಪಾಗಿಟ್ಟ ರಾಮಚಂದ್ರ ಭಾಗವತರು ಯಕ್ಷಗಾನ ಪ್ರಸಂಗಗಳನ್ನೂ ಬರೆದಿದ್ದಾರೆ, ಯಕ್ಷಗಾನ ಪ್ರದರ್ಶನ ಏರ್ಪಡಿಸಿದ್ದಾರೆ, ಯಕ್ಷಗಾನ ಸಂಘಟನೆ ಮಾಡಿದ್ದಾರೆ. ರಾಜ್ಯದ ಯಕ್ಷಲೋಕದ ನೂರರಲ್ಲಿ ಒಬ್ಬರಾಗಿ ಸಾಧಕರೆನಿಸಿಕೊಂಡರೂ ಪ್ರಶಸ್ತಿ-ಪುರಸ್ಕಾರ ಗೌರವಗಳು ದಕ್ಕಿದ್ದು ಕಡಿಮೆ, ೫೭ ನೇ ವಯಸ್ಸಿಗೇ ಇಹಲೋಕ,ಯಕ್ಷಲೋಕ ತ್ಯಜಿಸಿದ ರಾಮಚಂದ್ರ ಭಾಗವತ ತಮ್ಮ ಕೃತಿ, ಕೆಲಸ, ಜನಪ್ರೀಯತೆಯಿಂದಲೇ ನೂರು ವರ್ಷ ಬದುಕಿ ಉಳಿಯುತ್ತಾರೆ. ಯಕ್ಷಪ್ರೇಮಿಗಳು ಅವರ ಕುಟುಂಬವರ್ಗದ ನೋವು-ದುರ್ಖದಲ್ಲಿ ಪಾಲುದಾರರಾಗಬೇಕಷ್ಟೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *