ಕೃಷಿ ಸಂಸ್ಕೃತಿ ಒಂದು ಜೀವನ ವಿಧಾನ… ಅಲ್ಲಿ ಹಬ್ಬಗಳೇ ಪ್ರಧಾನ!

ಮಲೆನಾಡಿನ ಜನಜೀವನವೆಂದರೆ ಅದೊಂದು ಸಂಸ್ಕೃತಿ. ಕೃಷಿ,ವ್ಯವಸಾಯ ಮಾಡುವುದು ಬೇರೆ ಆದರೆ ವ್ಯವಸಾಯ ಸಂಸ್ಕೃತಿ ಅನುಸರಿಸುವುದಿದೆಯಲ್ಲ ಅದು ಒಂದು ಜೀವನ ಕ್ರಮ. ಇಂಡಿಯಾ ಬಹುತ್ವದ, ಬಹುಸಂಸ್ಕೃತಿಯ ತವರೂರು ಇಲ್ಲಿ ಉತ್ತರ ದಿಂದ ದಕ್ಷಿಣಕ್ಕೆ ಬಂದ, ದಕ್ಷಿಣದಿಂದ ಉತ್ತರಕ್ಕೆ ವಲಸೆ ಹೋದ ಜನ ಹೆಣ್ಣು ಮಾವನ ಮನೆಗೆ ಹೋಗುವಷ್ಟು ಸಹಜ ಆದರೆ ನಮ್ಮ ವಲಸೆಯಿಂದ ನಮ್ಮ ಭಾಷೆ,ಸಂಸ್ಕೃತಿ ಶಿಥಿಲಗೊಳ್ಳುವುದನ್ನು ಅಲ್ಲಗಳೆಯಲಾಗದು.

ಉತ್ತರ ಭಾರತದಿಂದ ವಲಸೆ ಬಂದವರು ನಮ್ಮ ಜನಜೀವನ, ಆಚರಣೆ,ರೂಢಿ-ಸಂಪ್ರದಾಯಗಳ ಮೇಲೆ ಪರಿಣಾಮ ಬೀರಿದ್ದಾರೆ. ಆದರೂ ನಮ್ಮ ಜನ ಸೈನಿಕರ ಹಬ್ಬವನ್ನು ಹನಿ ಹಬ್ಬ ಹುತ್ತರಿ ಹಬ್ಬವಾಗಿ ಆಚರಿಸುತ್ತಾರೆ. ದ್ರಾವಿಡ ಮೂಲದ ಎಲ್ಲರೂ ಬಲಿಚಕ್ರವರ್ತಿಯನ್ನು ಆರಾಧಿಸುತ್ತಾರೆ. ಗಣೇಶ ಚತುರ್ಥಿಯಲ್ಲಿ ಗೌರಿ ಪೂಜೆ ಮಾಡುವ ಜನ ಅಂತರರ್ಜಾತಿ ವಿವಾಹವಾಗಿ ಆದಿವಾಸಿಯೊಂದಿಗೆ ಬದುಕುತ್ತಿರುವ ಗೌರಿಯನ್ನು ಕರೆತಂದು ಪೂಜಿಸುತ್ತಾರೆ.!

ಬೌದ್ಧ ಧರ್ಮದ ಮೂಲ ನೆನಪಿಸಿಕೊಳ್ಳಲು ಸೀಗೆ ಹುಣ್ಣಿಮೆಯಲ್ಲಿ ಭೂಮಿ ಪೂಜೆ ಮಾಡುತ್ತಾರೆ. ನಮ್ಮ ಮಾರಿ-ಚೌಡಿ, ಬೀರಲು, ಭೂತ, ನಮ್ಮದೇ ಕುಟುಂಬದ ಮಹಾಸತಿ ಮಾಸ್ತಿಯಾಗಿ, ವೀರ ತ್ಯಾಗಿ ಕುಮಾರ ರಾಮ, ಬಾಹುಬಲಿ ನಮ್ಮಿಂದ ಪೂಜಿಸಲ್ಪಡುತ್ತಾರೆ. ಯಾಕೆಂದರೆ ಇದೊಂದು ಸಂಸ್ಕೃತಿ ಇಲ್ಲಿ ಕೃಷಿ ಕಾಯಕವೇ ಪ್ರಧಾನ ಉಳಿದಿದ್ದೆಲ್ಲಾ ನಗಣ್ಯ.

ಮಾಂಸಹಾರಿ ಶೂದ್ರರು ದೀಪಾವಳಿಯಲ್ಲಿ ಗೋ ಪೂಜೆ ಮಾಡುತ್ತಾರೆ. ಈ ಪೂಜೆ, ಆಚರಣೆ ರಾಜಕೀಯ ಸೋಂಕಿನಿಂದ ದೂರ. ನಾವೆಲ್ಲಾ ಚಿಕ್ಕವರಿರುವಾಗ ಬಲೀಂದ್ರನ ಬೂರೆ ನೀರು ಚುಮುಕಿಸಿ ಗೋವುಗಳನ್ನು ಊರು, ಕೇರಿ ಕೊಟ್ಟಿಗೆಯೊಳಕ್ಕೆ ಸ್ವಾಗತಿಸುತಿದ್ದೆವು. ಗೋವು ನಮ್ಮ ಸಹಚರ. ಗೋವು ಮಾನವರ ಮಾಂಸಕ್ಕೆ ಬಳಕೆಯಾಗಬಾರದೆಂದು ಆರ್ಯರು ಗೋವಿನಲ್ಲಿ ದೇವರುಗಳಿವೆ ಎಂದು ಸುಳ್ಳು ಹೇಳಿದರು. ಅದು ಚಪ್ಪಲಿ ಹಾಕಿ ನಾಗಬನದಲ್ಲಿ ತಿರುಗಬಾರದೆನ್ನುವಷ್ಟೇ ಶುದ್ಧ ಸುಳ್ಳು. ಅದರ ಹಿಂದೆ ಹಾವು ಪಾದದಡಿ ಸಿಗದಂತೆ ಮುನ್ನೆಚ್ಚರಿಕೆಯ ಜಾಗೃತಿಯೂ ಇರಬಹುದು.

ಇವೆಲ್ಲಾ ಆಚರಣೆಗಳನ್ನು ಜನಜೀವನದ ಭಾಗವಾಗಿ ಸಹಜವಾಗಿ ಸ್ವೀಕರಿಸಿದರೆ ಅದರಿಂದ ಅಪಾಯವಿಲ್ಲ ಆದರೆ ಎಲ್ಲದರಲ್ಲೂ ದೇವರು ಧರ್ಮ ಹುಡುಕಿ ರಾಜಕೀಯ ಮಾಡತೊಡಗಿದೆ ಅದು ನಮ್ಮ ಸಂಸ್ಕೃತಿಗಿಂತ ವಿಕೃತಿಯಾಗುವುದೇ ಹೆಚ್ಚು. ದೀಪಾವಳಿಯಲ್ಲಿ ಹೂವು, ಹೂವಿನಂಥ ಹೆಣ್ಣು ದೀಪಾವಳಿ ವಿಶೇಷಾಂಕದ ಮುಖಪುಟ ಅಲಂಕರಿಸುವುದು ರೂಢಿ, ಸಂಪ್ರದಾಯ, ಸಂಸ್ಕೃತಿ ಅಲ್ಲಿ ಕೇಸರಿಸ್ವಾಮಿ ಪ್ರತ್ಯಕ್ಷವಾಗುವುದು ವ್ಯಾಪಾರದ ವಿಕೃತಿ. ದೀಪಾವಳಿಯ ಸಡಗರದಲ್ಲಿ ಇವೆಲ್ಲಾ ನೆನಪಾದವು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

ಬಿ.ಜೆ.ಪಿ. & ಕಾಂಗ್ರೆಸ್‌ ಗಳಿಂದ ತುಷ್ಟೀಕರಣದ ಸ್ಫರ್ಧೆ… ಕಾಂಗ್ರೆಸ್‌ ಬಸ್ಮಾಸುರ,ಬಿ.ಜೆ.ಪಿ. ಬಕಾಸುರ….

ಮುಸ್ಲಿಂ ಅಲ್ಪಸಂಖ್ಯಾತರನ್ನು ಒಲೈಸುವಲ್ಲಿ ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ ಗಳು ಸ್ಫರ್ಧೆ ನಡೆಸಿದ್ದು ಅಪಾಯಕಾರಿ ನಡೆಗಳಲ್ಲಿ ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಿಂತಿವೆ ಎಂದು...

ಬಹಿರಂಗ ಶುದ್ಧಿ ಜೊತೆಗೆ ಅಂತರಂಗ ಶುದ್ಧಿ ಮಹತ್ವ

ಸಿದ್ದಾಪುರದಲ್ಲಿ ಪವಿತ್ರ ರಂಜಾನ್ ಸಂಭ್ರಮಾಚರಣೆಸಿದ್ದಾಪುರ :31ಒಂದು ತಿಂಗಳ ಕಾಲ ಉಪವಾಸ ವ್ರತವನ್ನು ಆಚರಿಸಿದ ಮುಸ್ಲಿಮ್ ಬಾಂಧವರು ಪವಿತ್ರ ರಂಜಾನ್ (ಈದ್ ಉಲ್ ಫಿತ್ರ )ಹಬ್ಬವನ್ನು...

samajamukhi.net exclusive- ಇಂದು ಕರ್ನಾಟಕ….ಪತ್ರಕರ್ತ ವಿಶ್ವಾಮಿತ್ರ ಹೆಗಡೆ ವಿಧಿವಶ,ಶಿರಸಿಗೆ ಬಾರದ ಗೃಹಸಚಿವ,ಹಳದೋಟದಲ್ಲಿ ನಡೆಯಿತು ಸೇನಾವಿಧಿ!

ಶಿರಸಿಯ ಹಿರಿಯ ಪತ್ರಕರ್ತ ವಿಶ್ವಾಮಿತ್ರ ಹೆಗಡೆ ಭತ್ತಗುತ್ತಿಗೆ ಇಂದು ವಿಧಿವಶರಾಗಿದ್ದಾರೆ. ಪ್ರತಿಷ್ಠಿತ ಭತ್ತಗುತ್ತಿಗೆ ಕುಟುಂಬದ ವಿಶ್ವಾಮಿತ್ರ ಹೆಗಡೆ ಕನ್ನಡಪ್ರಭ,ವಿಶ್ವವಾಣಿ ಸೇರಿದಂತೆ ಕೆಲವು ಪತ್ರಿಕೆಗಳಲ್ಲಿ ಕೆಲಸಮಾಡಿದ್ದರು....

ಸೈನಿಕ ಸುರೇಶ್‌ ನಾಯ್ಕ ಸಾವು

ಕೆಂದ್ರ ರಕ್ಷಣಾ ಪಡೆ ಸಿ.ಆರ್.ಪಿ.ಎಫ್.‌ ನಲ್ಲಿ ಸಹಾಯಕ ಸಬ್‌ ಇನ್ಫೆಕ್ಟರ್‌ ಆಗಿ ಸೇವೆಯಲ್ಲಿದ್ದ ಸುರೇಶ್‌ ಮೂಕಾ ನಾಯ್ಕ ಹಳದೋಟ ರವಿವಾರ ಬೆಂಗಳೂರಿನ ಆಸ್ಫತ್ರೆಯಲ್ಲಿ ನಿಧನರಾದರು....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *