ನಾಮಧಾರಿಗಳಿಗೆ ಕೈ ಕೊಟ್ಟ ಕಾಂಗ್ರೆಸ್‌ ಸೋತದ್ದು ೬ ಬಾರಿ!

ಈಗಿನ ಉತ್ತರ ಕನ್ನಡ ಹಿಂದಿನ ಕನ್ನಡ ಜಿಲ್ಲೆ ಈ ಹಿಂದಿನ ಕೆನರಾ ಕ್ಷೇತ್ರದಲ್ಲಿ ನಿರಂತರವಾಗಿ ಗೆಲ್ಲುತಿದ್ದ ಕಾಂಗ್ರೆಸ್‌ ನಿರಂತರ ಸೋಲಲು ಜಿಲ್ಲೆಯ ಬಹುಸಂಖ್ಯಾತ ಮತದಾರರಾದ ದೀವರು ಅಥವಾ ನಾಮಧಾರಿಗಳನ್ನು ಕಡೆಗಣಿಸಿದ್ದು ಕಾರಣವೆ? ಎನ್ನುವ ಪ್ರಶ್ನೆ ಈಗ ಚರ್ಚೆಯ ವಿಷಯವಾಗಿದೆ.

ಹೌದು ಈ ಶತಮಾನದ ಪ್ರಾರಂಭದ ಮೊದಲು ಉತ್ತರ ಕನ್ನಡ ಜಿಲ್ಲೆಯಲ್ಲಿ ಜನತಾ ಪರಿವಾರದ ಪಾರಮ್ಯದ ಕಾಲದಲ್ಲಿ ಕೂಡಾ ಕಾಂಗ್ರೆಸ್‌ ನಿಂದ ದೀವರು ನಾಲ್ಕು ಕ್ಷೇತ್ರಗ ಳಲ್ಲಿ ಶಾಸಕರು, ಉತ್ತರ ಕನ್ನಡದ ಸಂಸದರೂ ಆಗುತಿದ್ದರು.

ದಿ. ದೇವರಾಯ ನಾಯ್ಕ ನಿರಂತರವಾಗಿ ನಾಲ್ಕು ಬಾರಿ ಸಂಸದರಾಗಿ ನಂತರ ಕ್ಷೇತ್ರ ಬಿಟ್ಟುಕೊಟ್ಟರು. ಆಗ ಈ ಕ್ಷೇತ್ರಕ್ಕೆ ಬಂದವರು ಮಾರ್ಗರೇಟ್‌ ಆಳ್ವ ಒಂದು ಅವಧಿಗೆ ಗೆದ್ದು ಎರಡು ಬಾರಿ ಸೋತ ಮಾರ್ಗರೇಟ್‌ ಆಳ್ವ ಬದಲು ಜಿಲ್ಲೆಯ ಬಹುಸಂಖ್ಯಾತ ನಾಮಧಾರಿ, ದೀವರಿಗೆ ಟಿಕೇಟ್‌ ನೀಡಿದ್ದರೆ ಅನಂತಕುಮಾರ ಹೆಗಡೆ ನಿರಂತರ ಗೆಲುವು ಸಾಧ್ಯವೇ ಇರಲಿಲ್ಲ.

೨೦೦೦ ಇಸ್ವಿಯ ಈಚೆಗೆ ಕೆನರಾ ಕ್ಷೇತ್ರದಲ್ಲಿ ೫ ಬಾರಿ ಗೆದ್ದ ಅನಂತಕುಮಾರ ಹೆಗಡೆ ಜಿಲ್ಲೆಯ ಬಹುಸಂಖ್ಯಾತರಾದ ದೀವರ ಎದುರು ಗೆದ್ದಿದ್ದೇ ಇಲ್ಲ. ದಿ.ಜಿ. ದೇವರಾಯ ನಾಯ್ಕ, ಆರ್.‌ ಎನ್.‌ ನಾಯ್ಕ ಜಾದಳದಿಂದ ಚುನಾವಣೆ ಕಣದಿಂದ ಸ್ಫರ್ಧಿಸಿದರಾದರೂ ಅವರ ಸ್ಫರ್ಧೆ ನಾಮಕಾವಾಸ್ತೆಯಾಗಿತ್ತು. ರಾಮಕೃಷ್ಣ ಹೆಗಡೆಯವರ ಜನತಾದಳ ಯು ಬೆಂಬಲ, ಎಸ್.‌ ಬಂಗಾರಪ್ಪನವರು ಬಿ.ಜೆ.ಪಿ. ಸೇರಿದ್ದು ಹೀಗೆ ಅನಾಯಾಸವಾಗಿ ಗೆಲ್ಲಲು ಅವಕಾಶವಾದಾಗಲೆಲ್ಲ ಗೆಲುವು ಕಂಡ ಅನಂತಕುಮಾರ ಹೆಗಡೆ ಎದುರು ಸ್ಫರ್ಧೆಯಲ್ಲಿರುತಿದ್ದವರು ಕಾಂಗ್ರೆಸ್‌ ನ ಮಾರ್ಗರೇಟ್‌ ಆಳ್ವ. ಒಂದು ಬಾರಿ ಅನಂತಕುಮಾರ ಹೆಗಡೆ ವಿರುದ್ಧ ಕಾಂಗ್ರೆಸ್‌ ನಿಂದ ಸ್ಫರ್ಧೆ ಮಾಡಿದವರು ಪ್ರಶಾಂತ್‌ ದೇಶಪಾಂಡೆ ಹಿಂದಿನ ಲೋಕಸಭಾ ಚುನಾವಣೆಯಲ್ಲಂತೂ ಚುನಾವಣೆ ಮೊದಲೇ ಶಸ್ತ್ರತ್ಯಾಗ ಮಾಡಿದ್ದ ಕಾಂಗ್ರೆಸ್‌ ಜಾದಳಕ್ಕೆ ಕ್ಷೇತ್ರ ಬಿಟ್ಟುಕೊಟ್ಟಿತ್ತು!

ಹೀಗೆ ಕಾಂಗ್ರೆಸ್‌ ನ ಮತದಾರರಾದ ನಾಮಧಾರಿಗಳಿಗೆ ಉಪಾಯದಿಂದ ಟಿಕೇಟ್‌ ತಪ್ಪಿಸಿ ಮೇಲ್ವರ್ಗದ ರಾಜಕಾರಣಕ್ಕೆ ಬೆಂಬಲಿಸುತಿದ್ದ ಆರ್.‌ ವಿ. ದೇಶಪಾಂಡೆ ಮತ್ತು ಮಾರ್ಗರೇಟ್‌ ಆಳ್ವ ಅನಂತಕುಮಾರ ಹೆಗಡೆಯವರಿಗೆ ಪರೋಕ್ಷವಾಗಿ ಬೆಂಬಲಿಸಿ ಜಿಲ್ಲೆಯ ಬಹುಸಂಖ್ಯಾತರನ್ನು ತುಳಿದದ್ದು ಹಳೆ ಕತೆ. ಈಗ ಕಾಂಗ್ರೆಸ್‌ ಗೆ ಹೊಸ ಉಭಯ ಸಂಕಟ ಪ್ರಾರಂಭವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ನಂ೧ ಮತದಾರರಾದ ನಾಮಧಾರಿಗಳು ಅಥವಾ ನಂತರದ ಮರಾಠರಿಗೆ ಟಿಕೇಟ್‌ ಕೊಡದಿದ್ದರೆ ಈ ಬಾರಿ ಕೂಡಾ ಬಿ.ಜೆ.ಪಿ. ಅನಾಯಾಸವಾಗಿ ಗೆಲ್ಲುವ ಅಪಾಯವಿದೆ. ಈ ಸೂಕ್ಷ್ಮ ಅರಿತ ಬಿ.ಜೆ.ಪಿ. ಜಯಶಂಕರ್‌, ನಿರ್ಮಲಾ ಸೀತಾರಾಮನ್‌, ಅಜಿತ್‌ ಹನುಮಕ್ಕನವರ್‌, ಹರಿಪ್ರಕಾಶ ಕೋಣೆಮನೆ, ಚಕ್ರವರ್ತಿ ಸೂಲಿಬೆಯಂತಹ ಯಾರೋ ಒಬ್ಬ ಅಭ್ಯರ್ಥಿಯನ್ನು ಹಾಕಿ ಚುನಾವಣೆ ಗೆಲ್ಲುವ ಯೋಚನೆಯಲ್ಲಿದೆ!. ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್‌ ಆರ್.‌ ವಿ. ದೇಶಪಾಂಡೆ, ಅಂಜಲಿ ನಿಂಬಾಳ್ಕರ್‌,ರವೀಂದ್ರನಾಥ ನಾಯ್ಕ, ಭೀಮಣ್ಣ ನಾಯ್ಕ ಅಥವಾ ಜಿ.ಟಿ. ನಾಯ್ಕ ಹಾಗೂ ಆರ್. ಎಚ್.‌ ನಾಯ್ಕ ಸೇರಿದ ಕೆಲವು ಹೆಸರುಗಳನ್ನು ತೇಲಿ ಬಿಟ್ಟಿದೆ.

ರಾಜಕಾರಣದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿರುವ ಹಿರಿಯ ಆರ್.ವಿ. ದೇಶಪಾಂಡೆಯವರಿಗೆ ಜಿಲ್ಲೆಯ ಶಾಸಕರ ಮೇಲೆ ನಂಬಿಕೆ ಇಲ್ಲ. ಅರಣ್ಯ ಅತಿಕ್ರಮಣ ಹೋರಾಟದಿಂದ ಜಿಲ್ಲೆಯ ಗಮನ ಸೆಳೆದ ರವೀಂದ್ರ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್‌ ಅಭ್ಯರ್ಥಿಯಾದರೆ ಗೆಲ್ಲುವ ಸಾಧ್ಯತೆ ಹೆಚ್ಚು ಆದರೆ ಅವರಿಗೆ ಪಕ್ಷದ ವಾತಾವರಣ ಹೇಗೆ ಸಹಕರಿಸುವುದೋ ಎನ್ನುವ ಭಯ. ಬಿ.ಜೆ.ಪಿ. ಟಿಕೇಟ್‌ ಕೇಳಿ ಹವಾ ಎಬ್ಬಿಸಿರುವ ಅನಂತಮೂರ್ತಿ ಹೆಗಡೆಯಂತೆ ಕಾರವಾರದ ಜಿ.ಟಿ. ನಾಯ್ಕ ಮತ್ತು ಕುಮಟಾದ ಆರ್.‌ ಎಚ್.‌ ನಾಯ್ಕರನ್ನು ಪಕ್ಷ ಪರಿಗಣಿಸಿರುವ ಸಾಧ್ಯತೆ ಕಡಿಮೆ. ಈ ನಡುವೆ ರಾಮ ಜಪದ ಬಿ.ಜೆ.ಪಿ.ಗೆ ಗ್ಯಾರಂಟಿ ಮೂಲಕ ಉತ್ತರ ಕೊಡಲು ಹೊರಟಿರುವ ಕಾಂಗ್ರೆಸ್‌ ಗೆ ಸೈದ್ಧಾಂತಿಕ ಸೇನಾನಿಗಳ ಕೊರತೆ ಇರುವುದರಿಂದ ದೇಶಪಾಂಡೆ, ನಿವೇದಿತ್‌ ಆಳ್ವ ಅಥವಾ ಇತರ ಅಲ್ಪಸಂಖ್ಯಾತರ ಸ್ಫರ್ಧೆ ಪರಿಣಾಮ ಭೀರುವ ಸಾಧ್ಯತೆ ಕಡಿಮೆ. ಬಹುಸಂಖ್ಯಾತರ ಮತ ಕ್ರೋಡೀಕರಣ ಹಿನ್ನೆಲೆಯಲ್ಲಿ ಶಿರಸಿ ಕ್ಷೇತ್ರ ಗೆದ್ದಿರುವ ದೀವರಿಗೆ ಈ ಬಾರಿ ರಾಮನೋ? ನಮ್ಮ ಸ್ವಾಭಿಮಾನವೋ? ಎನ್ನುವ ಪ್ರಶ್ನೆ ಎದ್ದಿದೆ. ಕಾಂಗ್ರೆಸ್‌ ತನ್ನ ಗ್ಯಾರಂಟಿ ಪರವಾಗಿ ಪ್ರಚಾರ ನಡೆಸಿ ದೀವರಿಗೆ ಟಿಕೇಟ್‌ ನೀಡಿದರೆ ಶಿರಸಿಯಲ್ಲಿ ಬಿ.ಜೆ.ಪಿ. ಕತೆ ಮುಗಿಸಿದಂತೆ ಉತ್ತರ ಕನ್ನಡದಲ್ಲೂ ಸುಳ್ಳುಭಾಷಣ, ದೇವರು, ಧರ್ಮದ ವ್ಯಭಿಚಾರದ ಮತಾಂಧ ಬಿ.ಜೆ.ಪಿ.ಯನ್ನು ಉತ್ತರ ಕನ್ನಡದಿಂದ ಹೊರಹಾಕಬಹುದು ಎನ್ನಲಾಗುತ್ತಿದೆ. ಅದಕ್ಕೆ ಪೂರಕವಾಗಿ ಕಾಂಗ್ರೆಸ್‌ ಗೆ ಮೀನುಗಾರರು,ಮರಾಠರು, ಸೇರಿದ ಅಹಿಂದ ಬೆಂಬಲ ನಿಚ್ಚಳವಾಗಿದೆ. ಅನಂತಕುಮಾರ, ಕಾಗೇರಿ ವಿಶ್ವೇಶ್ವರ ಹೆಗಡೆ ಬದಲು ಯಾರೋ ಒಬ್ಬನನ್ನು ಗೆಲ್ಲಿಸುವ ಬಿ.ಜೆ.ಪಿ. ಅಹಂಕಾರ ಮರ್ಧನಕ್ಕೆ ವೇದಿಕೆ ಸಿದ್ಧವಾಗಿರುವ ಸಮಯದಲ್ಲಿ ಕಾಂಗ್ರೆಸ್‌ ನ ಮೀನ ಮೇಷ ಮಾರಣಾಂತಿಕವಾದರೂ ಅಚ್ಚರಿಇಲ್ಲ. ಈ ನಡುವೆ ಶಿವರಾಮ ಹೆಬ್ಬಾರ್‌ ನಡೆ ಕಾಂಗ್ರೆಸ್‌, ಬಿ.ಜೆ.ಪಿ. ಗಳ ಕುತೂಹಲದ ಕೇಂದ್ರವಾಗಿರುವುದಂತೂ ಸತ್ಯ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *