ದೀವರ ಮಠದ ಇತಿಹಾಸ – ತರಳಿ ಆಧಾರಿತ ದೀವರ ಚರಿತ್ರೆ…. ಭಾಗ- 2 samajamukhi.net exclusive-

(ವಿ.ಸೂ.- ಈ ಸಂಶೋಧನಾ ಲೇಖನವನ್ನು ಪೂರ್ತಿ ಅಥವಾ ಭಾಗಶ: ಪ್ರಕಟಿಸುವುದು, ಮುದ್ರಿಸುವುದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದು ಕೃತಿಚೌರ್ಯ, ಕಾನೂನು ಬಾಹೀರ, ಆಸಕ್ತರು ಶೇರ್‌, like ಮಾಡಬಹುದು)

ತರಳಿಯಲ್ಲಿ ೧೯೭೦-೮೦ ರ ದಶಕದಲ್ಲಿ ದೇವಾಲಯ, ಪುರಾತತ್ವ ಸಂಬಂಧಿ ಕುರುಹುಗಳು ಪತ್ತೆಯಾಗುವ ಮೊದಲು ಇಲ್ಲಿ ಈಶ್ವರ ದೇವಸ್ಥಾನವಿತ್ತು. ದಟ್ಟ ಅರಣ್ಯದಿಂದ ಆವೃತ್ತವಾದ ಈ ಪ್ರದೇಶದಲ್ಲಿ ತರಳಿಯ ಅವಧೂತ ಪುರುಷ ಜನಿಸಿ ಆತ ಆಕಾಲದಲ್ಲಿ ಬರಿಗಾಲಲ್ಲಿ ತಿರುಪತಿ ತಲುಪಿ ಅಲ್ಲಿಂದ ಮರಳಿ ಇಲ್ಲಿ ತಪಸ್ಸನ್ನಾಚರಿಸಿದ ಎನ್ನುವ ಅಂಶಗಳ ಹಿನ್ನೆಲೆಯಲ್ಲಿ ಈಗಲೂ ತರಳಿಯಲ್ಲಿ ತಿಮ್ಮಪ್ಪನ ಪಾದುಕೆ ಪೂಜೆ ನಡೆಯುತ್ತದೆ. ( ತಿರುಪತಿಯಿಂದ ಮರಳಿದ ತರಳಿಯ ವ್ಯಕ್ತಿ ಅಭಿನವ ತಿಮ್ಮಪ್ಪನಾದ ಕತೆ)

ವೈಷ್ಣವರ ಪ್ರಭಾವದಿಂದ ಸ್ಥಳೀಯ ಶೈವ ಮೇಲ್ವರ್ಗದವರಿಗೆ ಸೆಡ್ಡು ಹೊಡೆದ ಇಲ್ಲಿಯ ಶ್ರಮಜೀವಿಗಳು ತರಳಿಯಲ್ಲಿ ಪದ್ಮಾವತಿ, ಗಣಪತಿ, ಬೀರಪ್ಪ ದೇವರನ್ನು ಪ್ರತಿಷ್ಠಾಪಿಸಿ ಪೂಜಿಸಿದರು. ಆ ಪೂಜೆಗೆ ಹೊರ ಊರುಗಳಿಂದ ಬಂದ ವೈಷ್ಣವ ಬ್ರಾಹ್ಮಣರು ದೀವರ ಜಾತಿ-ಮಠ, ಪೂಜೆಗಳ ನೇತಾರರಾದರು ಎನ್ನುವಲ್ಲಿಗೆ ಈ ಪ್ರದೇಶದಲ್ಲಿ ಸ್ಥಳೀಯ ಮೂಲನಿವಾಸಿಗಳು ವಲಸೆ ಶೈವ ಅದ್ವೈತಿಗಳಿಗೆ ಸವಾಲ್‌ ಹಾಕಿದ್ದರು ಎನ್ನುವುದು ಸ್ಪಷ್ಠವಾಗುತ್ತದೆ.

ಈ ಹಿನ್ನೆಲೆಯಿಂದ ಬಂದ ಕೆಲವು ವೈಷ್ಣವರು ಚಿಕ್ಕಮಂಗಳೂರು, ಶಿವಮೊಗ್ಗ ಸೇರಿದ ಮಲೆನಾಡಿನ ಜೊತೆ ಕರಾವಳಿಯ ಸಾಂಗತ್ಯ ಪಡೆದು ತರಳಿಯನ್ನೂ ಪ್ರವೇಶಿಸುತ್ತಾರೆ. ಈ ವೇಳೆ ಚಿಕ್ಕ ಬಾಲಕನಾಗಿದ್ದ ಎನ್.ಡಿ. ನಾಯ್ಕ ಹೆಗ್ಗೇರಿ ಯಲ್ಲಿ ಈ ವೈಷ್ಣವ ಪಂಥದ ಯತಿಗಳು, ಪೂಜಾರಿಗಳನ್ನು ನೋಡುತ್ತಾರೆ.

ಆವೇಳೆಗೆ ತರಳಿಗೆ ಬಂದು ದೀವರಿಗೆ ಪೂಜೆ, ಪುನಸ್ಕಾರ, ಧಾರ್ಮಿಕತೆ ಬೋಧಿಸುತಿದ್ದ ಹಿರಿಯನೊಬ್ಬ ಚಪ್ಪಲಿತೊಟ್ಟು ಶಿಷ್ಯರಿಂದ ನಮಸ್ಕರಿಸಿಕೊಳ್ಳುತಿದ್ದ ಎನ್ನುವ ತಕರಾರಿನಿಂದ ಆ ವ್ಯಕ್ತಿಗೆ ವಿರೋಧ ವ್ಯಕ್ತವಾಗಿ ಬಾಲಕೃಷ್ಣ ಸ್ವಾಮೀಜಿಗಳ ಪ್ರವೇಶವಾಗುತ್ತದೆ. ಈ ಹಿಂದಿದ್ದ ವ್ಯಕ್ತಿ ಬಾಲಕೃಷ್ಣ ಸ್ವಾಮೀಜಿಯವರ ವೈಷ್ಣವ ಸಹೋದರ ಎನ್ನುವುದು ಉಲ್ಲೇಖನೀಯ.

ಗುರುದಕ್ಷಿಣೆ ಪಡೆಯುವುದು, ಲೋಕಸಂಚಾರ ಮಾಡುವುದು ಮಾಡುತಿದ್ದ ಗುರು ಬಾಲಕೃಷ್ಣ ವೈಷ್ಣವ ಪರಂಪರೆಯಂತೆ ಸಂಸಾರಿ ಸ್ವಾ ಮಿಯಾಗುತ್ತಾರೆ. ಆ ವೇಳೆಗೆ ದೀವರು ಹಿರಿಯರು ಕಟ್ಟಿಕೊಂಡ ತಂಡ ಬೇಡ್ಕಣಿ ಗೌರ್ಯಾ ನಾಯ್ಕರು, ತರಳಿ ಹನುಮ ನಾಯ್ಕರು, ಅವರಗುಪ್ಪಾ ವೀರಭದ್ರ ನಾಯ್ಕರು, ಬಿಕ್ಕಳಸೆ ಮಹಾಬಲ ನಾಯ್ಕರ ನೇತೃತ್ವದಲ್ಲಿ ಸಮೀತಿಯಾಗಿ ೬-೦೯-೧೯೮೩ ರಲ್ಲಿ ನೋಂದಣಿಯಾಗುತ್ತದೆ.

ಈ ಟ್ರಸ್ಟ್‌ ಸ್ಥಾಪಕ ಅಧ್ಯಕ್ಷರಾಗಿದ್ದ ಗೌರ್ಯಾ ಈರಾ ನಾಯ್ಕರ ನೇತೃತ್ವದಲ್ಲಿ ಸಭೆಗಳಾಗಿ ಮಕ್ಕಳಾಗದ ಹನುಮ ನಾಯ್ಕ ತರಳಿ ಇಲ್ಲಿ ದೇವಸ್ಥಾನ ಪ್ರತಿಷ್ಠಾಪನೆ ಮಾಡುವ ಸಂಕಲ್ಪದಿಂದ ಮೂರ್ತಿ ತಂದಿದ್ದು ಗಮನಕ್ಕೆ ಬಂದು ಮೂರ್ತಿ ಪೂಜೆ- ಪುನಸ್ಕಾರಕ್ಕೆ ದೇವರ ಪ್ರತಿಷ್ಠಾಪನೆಗೆ ಹಣದ ಅಗತ್ಯ ಕಂಡು ಬಂದಾಗ ಸತ್ಯನಾರಾಯಣ ಕಲಸ ಪೂಜೆ ಮಾಡುವ ಮೂಲಕ ಧನ ಸಂಗ್ರಹ ಪ್ರಾರಂಭವಾಗುತ್ತದೆ.

ಈ ವಾರ್ಷಿಕ ಸತ್ಯ ನಾರಾಯಣ ಪೂಜೆ ಪ್ರಾರಂಭದ ಎರಡು ವರ್ಶಗಳ ನಂತ ಈ ತರಳಿ ದೇವಸ್ಥಾನ ಸಮೀತಿಗೆ ಅಧ್ಯಕ್ಷರಾಗಿ ಯುವಕ ವಕೀಲ ಎನ್.ಡಿ. ನಾಯ್ಕರ ಪ್ರವೇಶ ವಾಗುತ್ತದೆ.ಈ ಅವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು ಎಸ್.‌ ಬಂಗಾರಪ್ಪ ಈ ಅವಧಿಯಲ್ಲೇ ತರಳಿ ಮಠದ ದೇವಸ್ಥಾನ ಸ್ಥಾಪನೆಗೆ ರೂಪರೇಶೆಗಳೂ ಪ್ರಾರಂಭವಾಗುತ್ತವೆ.

೧೯೮೩-೮೪, ನಂತರ ೧೯೯೨ ಆನಂತರದ ದಿನಗಳಲ್ಲಿಕೂಡಾ ತರಳಿಯ ದೇವಸ್ಥಾನ ಸಮೀತಿ ಮತ್ತು ಸ್ಥಳೀಯ ಮೇಲ್ವರ್ಗದವರ ನಡುವಿನ ಹೋರಾಟ ಕೋರ್ಟ್‌ ಮೆಟ್ಟಿಲೇರಿ ಯುವ ಅಧ್ಯಕ್ಷರಾಗಿದ್ದ ಎನ್.ಡಿ. ನಾಯ್ಕ ದೇವಸ್ಥಾನದ ಆಸ್ತಿ ಉಳಿಸಿಕೊಂಡರಾದರೂ ದೇವಸ್ಥಾನಕ್ಕೆ ಬಿಟ್ಟಿದ್ದ ಸ್ವಲ್ಪ ಅತಿಕ್ರಮಣ ಜಾಗ ಸ್ವಾಮೀಜಿಯವರ ಕುಟುಂಬದ ಪಾಲಾಯಿತು.

ಹೀಗೆ ಸುಮಾರು ೪೦ ವರ್ಷಗಳ ತರಳಿ ಮಠದ ಚರಿತ್ರೆಯಲ್ಲಿ ಎನ್.ಡಿ. ನಾಯ್ಕರ ನೇತೃತ್ವದ್ದೇ ೩೫ ವರ್ಷಗಳ ಕಾಲ.

ದೀವರ ಸಮಾಜದ ಮೊದಲ ವಕೀಲರಾದ ಎನ್.ಡಿ. ನಾಯ್ಕ ತರಳಿ ಮಠದ ಆಸ್ತಿ ಉಳಿಸಲು ಹೋರಾಡುತ್ತ ಐಸೂರಿನ ಬರಗಾಲದ ದೇವಸ್ಥಾನದ ಜಾಗದ ಪ್ರಕರಣ ಹವ್ಯಕರು, ನಾಯ್ಕರ ನಡುವಿನ ಸಂಘರ್ಷವಾಗಿ ಎನ್.ಡಿ. ನಾಯ್ಕ ಪರ್ಯಾಯ ಪೂಜಾರಿಗಳ ಹುಡುಕಾಟದಲ್ಲಿ ದೀವರಿಗೆ ಬ್ರಮ್ಮೋಪದೇಶ ಪ್ರಾರಂಭಿಸುತ್ತಾರೆ. ಹೀಗೆ ಪೂಜಾರಿಗಳಾದ ದೀವರು ಈಗ ದೇಶ, ರಾಜ್ಯಗಳ ನೂರಾರು ದೇವಾಲಯಗಳಲ್ಲಿ ಪೂಜಾರಿಗಳಾಗಿದ್ದಾರೆ.

ತರಳಿಮಠ ಕೇಂದ್ರೀಕರಿಸಿ ಸಿದ್ಧಾಪುರ, ಶಿರಸಿಗಳಲ್ಲಿ ನಡೆದ ಧಾರ್ಮಿಕ ಚಟುವಟಿಕೆಗಳಿಗೆ ಅವಧೂತ ಕಲ್ಲೇಶ್ವರ ಸ್ವಾಮೀಜಿ ಮಾರ್ಗದರ್ಶನ ಮಾಡಿದ್ದೂ ಕೂಡಾ ದೀವರ ಚರಿತ್ರೆಯೇ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *