ಕಾಳಿ ಸೇತುವೆ ಮುರಿದು ಬಿದ್ದ ಸುಂದರ ಸ್ವಪ್ನ!

ಕಾರವಾರವನ್ನು ಕರ್ನಾಟಕದ ಕಾಶ್ಮೀರ ಎಂದು ಬಣ್ಣಿಸಿದವರು ರವೀಂದ್ರನಾಥ ಠಾಗೂರ್. ರವೀಂದ್ರರ ಕುಟುಂಬಸ್ಥರೊಬ್ಬರು ಕಾರವಾರದಲ್ಲಿ ಅಂದರೆ ಅಂದಿನ ಕನ್ನಡ ಜಿಲ್ಲೆಯಲ್ಲಿ ನ್ಯಾಯಾಧೀಶರಾಗಿದ್ದರು ಎಂದು ಎಲ್ಲೋ ಓದಿದ ನೆನಪು.

ಈ ಸಾಹಿತಿ ರವೀಂದ್ರರ ಹೆಸರನ್ನು ಕಾರವಾರದ ಕಡಲ ತೀರಕ್ಕೆ ನಾಮಕರಣ ಮಾಡಲಾಗಿದೆ. ಇದೇ ಕಾರವಾರದ ಕುರಿತು ಸಾಹಿತಿ ಜಯಂತ ಕಾಯ್ಕಿಣಿ ಕಾರವಾರದ ಎಲ್ಲಾ ರಸ್ತೆಗಳು ಸಮುದ್ರ ಸೇರುತ್ತವೆ ಎಂದು ಸೇರಿಸಿದ್ದಾರೆ.

ಕಾರವಾರ ಅನೇಕರಿಗೆ ಪ್ರವಾಸಿ ತಾಣ ಆದರೆ ನಮ್ಮಂಥವರಿಗೆ ಆ ಊರು ಒಂದು ಇಮೋಶನ್.‌

ನಮ್ಮ ಬಾಲ್ಯಕಾಲದ ಅಧ್ಭುತ ಚಿತ್ರಗಳಲ್ಲಿ ವಿಷ್ಣುವರ್ಧನ್‌ ನಟನೆಯ ಮತ್ತೆ ಹಾಡಿತು ಕೋಗಿಲೆ, ಬಂಧನ, ಮುತ್ತಿನ ಹಾರ ಗಳೊಂದಿಗೆ ಹೃದಯಗೀತೆಯೂ ಒಂದು. ಹೃದಯ ಗೀತೆ ನಮ್ಮ ಎದೆಗಿಳಿಯಲು ಪ್ರಮುಖ ಕಾರಣ ಆ ಚಿತ್ರ ಕಾರವಾರದಲ್ಲೇ ಚಿತ್ರೀಕರಣಗೊಂಡದ್ದು. ಹೃದಯಗೀತೆ ಹಾಡುತಿರೆ ಭೂಮಿ ಸ್ವರ್ಗವಾಗಿದೆ…. ಎಂದು ವಿಷ್ಣುವರ್ಧನ್‌, ಭವ್ಯ ಹಾಡಿ ನಲಿಯುತಿದ್ದರೆ ನಮ್ಮಂಥ ಕಾರವಾರಿಗರಿಗೆ ಭುವಿಯೇ ಸ್ವರ್ಗ.

ಇಂಥ ಅದ್ಭುತ ಅನುಭವಗಳ ಕಾರವಾರದ ಸೊಬಗನ್ನು ವೃದ್ಧಿಸಿದ್ದು ಅಲ್ಲಿಯ ಕಾಳಿ ಸೇತುವೆ. ಜೊಯಡಾದ ಗುಂದದಲ್ಲಿ ಜನ್ಮ ತಳೆಯುವ ಕಾಳಿ ಕಾಡಿನಲ್ಲಿ ಕಾಳಿಂಗ ಸರ್ಪದಂತೆ ಹರಿದುಕಾರವಾರದ ಅರಬ್ಬೀ ಸಮುದ್ರ ಸೇರುವ ಮೊದಲು ನಾಲ್ಕೈದು ಕಡೆ ನಿಂತು ಕೆಲವು ಬೃಹತ್‌ ಆಣೆಕಟ್ಟುಗಳನ್ನು ನಿರ್ಮಿಸಿದೆ. ಈ ಕಪ್ಪು ಸುಂದರಿ ಸಮುದ್ರ ಸೇರುವ ಮೊದಲು ಧುಮ್ಮಿಕ್ಕಿ ದ್ದಲ್ಲೆಲ್ಲಾ ತನ್ನ ಕಪ್ಪು ಕಳೆದು ಬಿಳಿ ಜಲಪಾತ ಸೃಷ್ಟಿಸಿದೆ. ಈ ಕಾಳಿಯನ್ನು ಸಮುದ್ರ ಸೇರುವ ಮೊದಲು ನಿಲ್ಲಿಸಿದ್ದು ಕಾಳಿ ಸೇತುವೆ. ಕಾಳಿ ಸೇತುವೆ ಕೆಳಗೆ ನಿಂತ ಪ್ರೇಮಿಗಳೆಷ್ಟೋ? ಜೀವ ಬಿಟ್ಟ ಭಗ್ನ ಪ್ರೇಮಿಗಳೆಷ್ಟೋ ಲೆಕ್ಕಕ್ಕೂ ಸಿಕ್ಕಿಲ್ಲ.

ಕಾಳಿ ಸೇತುವೆ ದಾಟಿ ಕರ್ನಾಟಕ ಬಿಟ್ಟು ಗೋವಾ ಸೇರುವ ಜನರು ಕಾಳಿಯನ್ನು ಮರೆಯಲುಂಟೆ! ಅಲ್ಲೇ ಎತ್ತರದ ಗುಡ್ಡದಲ್ಲಿ ಸೋದೆ ಅರಸರು ಕೋಟೆ ಕಟ್ಟಿದ್ದರು. ಹಿಂದೂ ಸಾಂಮ್ರಾಟ! ಆ ಕೋಟೆ ಒಡೆದು ಜಯಿಸಿದ್ದ ಎನ್ನುವುದನ್ನು ಸಾರುವ ಕೋಟೆ ಈಗಲೂ ಅಲ್ಲಿದೆ. ಅದೇ ಕೋಟೆಯ ಹೊರಗೆ ರಮ್ಯಾ ಜೂಲಿಯಾಗಿ ಕುಣಿದ ಕುರುಹೂ ಅಲ್ಲಿದೆ!

ಕಾರವಾರ, ಕಾಳಿ ಸೇತುವೆ ಅಂದರೆ ಇಷ್ಟೇ ಅಲ್ಲ ಮ್ಯಾಂಗ್ರೋ ಕಾಡಿನ ಸಿಗಡಿ ಮೀನಿನ ಜನ್ಮ ಸ್ಥಳ, ಮದ್ಯ ಪ್ರೀಯರಿಗೆ ಗೋವಾದ ಸಾರಾಯಿ ದೋಣಿ ಏರಿ ಒಳಬರುವ ಜಾಗ, ಅಲ್ಲೇ ಪಕ್ಕದಲ್ಲಿ ಡಾಲ್ಫಿನ್‌ ಗಳು ಕುಣಿಯುವ ತಾಣ. ಅಲ್ಲಿಂದ ದೋಣಿ ಏರಿದರೆ ಸದಾಶಿವಗಡ ಸೋದೆಯ ಸದಾಶಿವರಾಯ ಕಟ್ಟಿದ ಕೋಟೆಯ ಊರದು ಸದಾಶಿವಗಢ. ದೇವಭಾಗ, ತಿಳುಮಾತಿಗಳಿಗೆ ಅಲ್ಲಿಂದಲೇ ತೆರಳಬೇಕು. ಹೀಗೆ ನಾ ನೋಡಿ ನಲಿಯುವ ಕಾರವಾರ ಬರೆದು, ನೋಡಿ, ಹೇಳಿ, ಕೇಳಿ ಮುಗಿಯದ ಸೋಜಿಗವದು! ಅಲ್ಲಿಯ ಕಾಳಿ ಸೇತುವೆ ಮುರಿದು ಬಿತ್ತು ಎಂದರೆ ಸುಂದರ ಸ್ವಪ್ನವೊಂದು ಅರ್ಧದಲ್ಲೆ ನಿಂತುಹೋದಂತೆ. ಮರೆಯದ ನೆನಪೊಂದು ತಣ್ಣನೆ ಜಾರಿ ಹೋದಂತೆ.

kaali bridge collaps- ಮತ್ತೆ ಗೋವಾ ಕರ್ನಾಟಕ ಸಂಪರ್ಕ ತುಂಡರಿಸಿದ ಸೇತುವೆ ದುರಂತ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶಿರಸಿ – ಹಣಕಾಸಿನ ವಿಚಾರ ಒಂದು ಸಾವು, ಮಹಿಳೆಯ ಬಂಧನ!

ಶಿರಸಿ ಪೊಲೀಸ್ರಿಂದ ಕಾರ್ಯಚರಣೆ. ಎಟಿಎಂ ನಿಂದ ಹಣ ತೆಗೆಯಲು ಮುಗ್ದ ಹೆಣ್ಣು ಮಕ್ಕಳಿಗೆ ನೆರವಾಗುವ ನಾಟಕಮಾಡಿ ಅವರ ಎಟಿಎಂ ನಿಂದಲೇ ಹಣ ತೆಗೆದು ಪರಾರಿಯಾಗುತ್ತಿದ್ದ...

ನಾನು ಗ್ಯಾರಂಟಿ ವಿರೋಧಿಯಲ್ಲ…- ಆರ್.ವಿ. ದೇಶಪಾಂಡೆ

ಐದು ಗ್ಯಾರಂಟಿಗಳಿಗೆ ೫೮ ಸಾವಿರ ಕೋಟಿ ವ್ಯಯವಾಗುತಿದ್ದು ಇದು ಸರ್ಕಾರಕ್ಕೆ ಹೊರೆಯಾಗುತ್ತಿರುವುದರಿಂದ ಅಭಿವೃದ್ಧಿಗೂ ತೊಡಕಾಗುತ್ತಿದೆ. ಅರ್ಹರಿಗೆ ಮಾತ್ರ ಈ ಯೋಜನೆಗಳ ಲಾಭ ತಲುಪುವಂತೆ ಮಾಡಿ...

ಕಾನಗೋಡು ಬಳಿ ಅಪಘಾತ, ಒಂದು ಸಾವು

ಶಿರಸಿ ತಾಲೂಕಿನ ಕಾನಗೋಡು ಬಳಿ ಇಂದು ಮಧ್ಯಾಹ್ನ ನಡೆದ ಭೀಕರ ಅಪಘಾತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು ಇನ್ನೊಬ್ಬರಿಗೆ ತೀವೃತರಹದ ಗಾಯಗಳಾದ ಬಗ್ಗೆ ವರದಿಯಾಗಿದೆ. ಕಾರು...

ತಾ.ಜಿ. ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆ……

ಬ್ಲಾಕ್, ಜಿಲ್ಲಾಧ್ಯಕ್ಷರ ಬದಲಾವಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸುಳಿವು ಸಂಘಟನಾತ್ಮಕ ಬದಲಾವಣೆ ಹಾಗೂ ಸಮಾಜಕ್ಕೆ ತಲುಪುವ ಉದ್ದೇಶದಿಂದ ಜಿಲ್ಲಾ ಮಟ್ಟದ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗುತ್ತದೆ ಎಂದು...

ಹುಲಕುತ್ರಿಯ ಶಿಕ್ಷಕ ದರ್ಶನ ಹರಿಕಾಂತ್‌ ಅಭಿನಂದಿಸುತ್ತಾ……

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶೈಕ್ಷಣಿಕ ಜಿಲ್ಲೆಯ ಕುಗ್ರಾಮ ಹುಲಕುತ್ರಿ. ಈ ಗ್ರಾಮದಲ್ಲಿ ಮುಖ್ಯ ಶಿಕ್ಷಕರಾಗಿ ಪ್ರಾಥಮಿಕ ಶಾಲೆಯನ್ನು ವಿಶ್ವಕ್ಕೆ ಪರಿಚಯಿಸಿದವರು ದರ್ಶನ ಹರಿಕಾಂತ....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *