ಮಣ್ಣು ಕರಡದಿದ್ದರೆ ತೋಟ ನಾಶ. ಇದು ಮಲೆನಾಡ ಮಣ್ಣುಕರಡಿ ಕತೆ!

ಮಲೆನಾಡು ವೈಸಿಷ್ಟ್ಯಗಳ ತವರೂರು, ಮಲೆನಾಡಿಗೆ ಮಳೆಗಾಲವೆಂದರೆ.. ಹಬ್ಬ. ಮಳೆಪ್ರಾರಂಭವಾಗಿ ಇಳೆ ತೊಳೆದು ಸಂಬ್ರಮಿಸುವ ಕಾಲದಲ್ಲಿ ಭೂಮಿಯ ಆಳದಿಂದಲೂ ನೀರು ಸ್ರವಿಸತೊಡಗುತ್ತದೆ. ತನ್ನ ಒಡಲು ಸೇರಿದ ನೀರನ್ನು ಹೊರಹಾಕಲು ಶ್ರಮಿಸುವ ಭೂಮಿ ಕೊನೆಗೆ ಶರಣಾಗುವಾಗ ಶಿರೂರು, ವಯನಾಡ್‌ ನಂಥ ದುರಂತಗಳಾಗುತ್ತವೆ.
ಈ ದುರಂತ ತಪ್ಪಿಸಲೆಂದೇ ಸೃಷ್ಟಿಯಾಗಿರು ತೊರೆ,ಹೊಳೆಗಳು ಹರಿದು ಭೂಮಿಯನ್ನು ಬಚಾವು ಮಾಡುತ್ತವೆ.


ನೀವೀಗ ನೋಡುತ್ತಿರುವ ಧರೆ ನೈಸರ್ಗಿಕವಾಗಿ ಕುಸಿದದ್ದು. ಈ ಧರೆ ಜರಿದಾಗ ಏನೂ ಮಾಡದೆ ಸುಮ್ಮನಿದ್ದುಬಿಟ್ಟರೆ ಪಕ್ಕದ ತೋಟ ಪಟ್ಟಿ ತೊಳೆದುಹೋಗಿ  ಬಿಡುತ್ತದೆ. ಹಾಗಾಗಿ ಮಲೆನಾಡ ಜನ ಧರೆಯ ಕುಸಿತವನ್ನು ತೊಳೆದುಕೊಡಲು ಶ್ರಮಿಸುತ್ತಾರೆ. ಇದನ್ನೇ ಮಣ್ಣ ಕರಡಿ ಎನ್ನುವುದು. ಮಳೆಗಾಲದ ಜರಿಯುವ ಧರೆಯನ್ನು ತೆರವು ಮಾಡಿ ನೀರು ಹರಿಯಲು ಅನುವು ಮಾಡಿಕೊಡುವುದನ್ನೇ ಮಣ್ಣು ಕರಡಿ ಎನ್ನುತ್ತಾರೆ.
ಹೀಗೆ ಕರಡಿದ ಮಣ್ಣು ದೂರದ ನದಿ ಸಮುದ್ರ ಸೇರಿ ಅಲ್ಲಿ ಹೂಳು ಸೃಷ್ಟಿಸುತ್ತದೆ. ಆದರೆ ಇಲ್ಲಿ ತೊರೆಗೆ ದಾರಿ ಮಾಡಿಕೊಡದಿದ್ದರೆ ನೀರು ಮಣ್ಣು ಸೇರಿ ತೋಟವನ್ನುತೊಳೆದುಬಿಡುತ್ತವೆ. ಹಾಗಾಗಿ ಮಲೆನಾಡಿನ ಜನ ಭೀಕರ ಮಳೆಯಲ್ಲಿ ಧರೆ ತೊಳೆಯುವ ಈ ಕೆಲಸ ಮಾಡಿ ತೋಟ ಉಳಿಸಿಕೊಳ್ಳುತ್ತಾರೆ.


ಹೀಗೆತೋಟದ ಧರೆ ಕರಡಲು ಹೋಗಿ ಶವವಾದವರ ನೆನಪುಗಳು ಮಲೆನಾಡಿನ ಸಾಹಿತ್ಯದಲ್ಲೂ ಕಂಡು ಬರುತ್ತವೆ.
ಮಳೆಗಾಲದ ಮಣ್ಣು ಕರಡಿ ನೋಡಲು ಸೊಗಸು, ಅದೆಷ್ಟೋ ದೂರದಿಂದ ಹರಿದು ಬರುವ ನೀರು ಬೋರ್ಗರೆಯುತ್ತಾ ಯಾರನ್ನೂ ಕೇಳದೆ ತನ್ನ ಪಾಡಿಗೆ ತಾನು ಗುಡ್ಡ-ಬೆಟ್ಟಗಳನ್ನು ತರಿದು ಮುಂದೆ ಹೋಗಿ ಬಿಡುತ್ತದೆ. ಹೀಗೆ ಓಡುವ ಮಳೆಯ ನೀರಿನ ರಭಸಕ್ಕೆ ತೋಟವೂ ತೊಳೆದುಹೋಗುವುದುಂಟು. ತೋಟ ತೊಳೆದು ಹಾನಿ ತಡೆಯಲು ಮನುಷ್ಯ ಮಾಡುವ ಪ್ರತಿರೋಧದ ಹೋರಾಟವೇ ಮಣ್ಣುಕರಡಿ. ಮಣ್ಣುಕರಡಿ ಜಾಗ ಮಾಡಿ ತೋಟ ಮಾಡುವ ಮಲೆನಾಡಿನ ಮಣ್ಣು ಕರಡಿ ಇಲ್ಲಿಯ ನೈಸರ್ಗಿಕ ಬದುಕಿನ ಸಾಸ್ಕೃತಿಕ ವೈಶಿಷ್ಟ್ಯವೂ ಹೌದು. ಮಳೆ, ಮಳೆ ನೀರಿನೊಂದಿಗೆ ತೇಲಿ ಬರುವ ಮರ, ಮರದ ದಿಮ್ಮಿ ಅಡ್ಡಹಾಕಿ ನೀರು ತಡೆಯುವುದೂ ಮಲೆನಾಡಿನ ಮಣ್ಣುಕರಡಿಯ ಒಂದು ಭಾಗ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ನಾನು ಗ್ಯಾರಂಟಿ ವಿರೋಧಿಯಲ್ಲ…- ಆರ್.ವಿ. ದೇಶಪಾಂಡೆ

ಐದು ಗ್ಯಾರಂಟಿಗಳಿಗೆ ೫೮ ಸಾವಿರ ಕೋಟಿ ವ್ಯಯವಾಗುತಿದ್ದು ಇದು ಸರ್ಕಾರಕ್ಕೆ ಹೊರೆಯಾಗುತ್ತಿರುವುದರಿಂದ ಅಭಿವೃದ್ಧಿಗೂ ತೊಡಕಾಗುತ್ತಿದೆ. ಅರ್ಹರಿಗೆ ಮಾತ್ರ ಈ ಯೋಜನೆಗಳ ಲಾಭ ತಲುಪುವಂತೆ ಮಾಡಿ...

ಕಾನಗೋಡು ಬಳಿ ಅಪಘಾತ, ಒಂದು ಸಾವು

ಶಿರಸಿ ತಾಲೂಕಿನ ಕಾನಗೋಡು ಬಳಿ ಇಂದು ಮಧ್ಯಾಹ್ನ ನಡೆದ ಭೀಕರ ಅಪಘಾತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು ಇನ್ನೊಬ್ಬರಿಗೆ ತೀವೃತರಹದ ಗಾಯಗಳಾದ ಬಗ್ಗೆ ವರದಿಯಾಗಿದೆ. ಕಾರು...

ತಾ.ಜಿ. ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆ……

ಬ್ಲಾಕ್, ಜಿಲ್ಲಾಧ್ಯಕ್ಷರ ಬದಲಾವಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸುಳಿವು ಸಂಘಟನಾತ್ಮಕ ಬದಲಾವಣೆ ಹಾಗೂ ಸಮಾಜಕ್ಕೆ ತಲುಪುವ ಉದ್ದೇಶದಿಂದ ಜಿಲ್ಲಾ ಮಟ್ಟದ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗುತ್ತದೆ ಎಂದು...

ಹುಲಕುತ್ರಿಯ ಶಿಕ್ಷಕ ದರ್ಶನ ಹರಿಕಾಂತ್‌ ಅಭಿನಂದಿಸುತ್ತಾ……

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶೈಕ್ಷಣಿಕ ಜಿಲ್ಲೆಯ ಕುಗ್ರಾಮ ಹುಲಕುತ್ರಿ. ಈ ಗ್ರಾಮದಲ್ಲಿ ಮುಖ್ಯ ಶಿಕ್ಷಕರಾಗಿ ಪ್ರಾಥಮಿಕ ಶಾಲೆಯನ್ನು ವಿಶ್ವಕ್ಕೆ ಪರಿಚಯಿಸಿದವರು ದರ್ಶನ ಹರಿಕಾಂತ....

wild news….! ಜಿಂಕೆ, ಚಿರತೆ ಸಾವು!

ಜಿಂಕೆ ಬೇಟೆಯಾಡಿ ಕೊಂದ ಅರೋಪದ ಮೇಲೆ ಅರಣ್ಯ ಇಲಾಖೆಯವರು ಯಲ್ಲಾಪುರ ತಾಲೂಕಿನ ಮದನೂರು ಗ್ರಾಮದ ಹುಲಗೋಡಿನ ರಮೇಶ ನಾಗೇಶ ಗಾಂವ್ಕರ ಎಂಬಾತನನ್ನು ಬಂಧಿಸಿ ಆತನಿಂದ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *