ಹೊಸ ಪೀಳಿಗೆಗೆ ತುಳಸಿಯಾದ ಝಾಕಿರ್ ಸಮರ್ಪಣೆ!

ಜೋಗ ನೋಡಲು ನಿರಬಂಧ ವಿಧಿಸಲಾಗಿದೆ. ಜೋಗ ಜಲಪಾತ ಜಗತ್ತಿನ ಬೆರಗು,ಅದ್ಭುತ,ಕನಸು, ಕಲ್ಪನೆ ಅಗಾಧತೆ ಕೂಡಾ. ಇದೇ ಜೋಗದ ಝರಿಯನ್ನು ಶಿರಸಿಯ ಎಂ.ಇ.ಎಸ್.‌ ಕಾಲೇಜಿನ ಮೈದಾನದಲ್ಲಿ ವೇದಿಕೆಗೆ ಇಳಿಸಿದ್ದರು ಝಾಕಿರ್‌ ಹುಸೇನ್!‌

ಝಾಕಿರ್‌ ಹುಸೇನ್‌ ಇರಲಿ, ತಬಲಾ ಇರಲಿ, ತಬಲಾ ಶಾಸ್ರ್ತೀಯ ಸಂಗೀತಗಳಿರಲಿ ಇವುಗಳ ಗಂಧ-ಗಾಳಿ ಗೊತ್ತಿರದ ನಮ್ಮಂಥ ಅನೇಕರು ನಮ್ಮ ಬದುಕಿನಲ್ಲಿ ಮೊದಲ ಬಾರಿ ಙಾಕೀರ್‌ ಹುಸೇನ್‌ ತಮಲಾ ಕ್ಕೆ ಮೈ ಮರೆತು ಕುರಿತಿದ್ದೆವು.

ಜಾಕಿರ್‌ ಬೆಂಕಿ ಹೊತ್ತಿಸಿದರು,ಮಳೆ ಸುರಿಸಿದರು. ಜೋಗದ ಝರಿ ಹೀಗೆ ಧುಮುಕುತ್ತದೆ ನೋಡಿ ಎಂದು, ಕಾಡಿನ ಬೆಂಕಿ ವಿಸ್ತರಿಸುತ್ತಿದೆ ನೋಡಿ ಎಂದು ಹೀಗೆ ಬಿರುಗಾಳಿ, ಮಳೆ, ಹಿಮಾಲಯದ ಥಂಡಿ ಎಲ್ಲವನ್ನೂ ಕೂತಲ್ಲೇ ಅನುಭವಿಸಲು ಅನುಗ್ರಹಿಸಿದರು. ಇವೆಲ್ಲವನ್ನೂ ಸಾಧ್ಯ ಮಾಡಿದ್ದವು ಝಾಕಿರ್‌ ರ ಮಾಂತ್ರಿಕ ಬೆರಳುಗಳು!

ನಮ್ಮಂಥವರು ಅಲ್ಲೇ ಶರಣಾಗಿದ್ದೆವು. ಇವರೇ ಝಾಕಿರ್‌ ಹುಸೇನ್.‌ ಜಾಕಿರ್‌ ಹುಸೇನ್‌ ಅಲ್ಲಾ ರಖಾ ರ ಮಗನಾಗಿ ಹುಟ್ಟುತ್ತಲೇ ತಬಲಾ ಮುಟ್ಟುತ್ತಾ ಬೆಳೆದಿದ್ದರು. ಮೂರು ವರ್ಷದ ಮಗು ಝಾಕಿರ್‌ ತಬಲಾ ಮೇಲೆ ಕಣ್ಣಾಡಿಸತೊಡಗಿದ್ದರು. ಕೈಯಾಡಿಸಿ ತಬಲಾಕ್ಕೆ ಸಂಗಾತಿಯಾಗಿದ್ದರು. ಏಳನೇ ವರ್ಷಕ್ಕೆ ತಬಲಾ ನುಡಿಸತೊಡಗಿದ್ದರು ೧೧ ನೇ ವಯಸ್ಸಿಗೆ ತಬಲಾ ಕಾರ್ಯಕ್ರಮ ನೀಡಿದ್ದರು ಆ ನಂತರದ್ದು ಅವರ ಚರಿತ್ರೆಯಾದರೆ. ಅದು ಭಾರತದ ತಬಲಾ ಇತಿಹಾಸ!

ಇಂಥ ತಬಲಾ ಮಾಂತ್ರಿ ಕನಿಂದ ತಬಲಾ ಬಗ್ಗೆ ಆಸಕ್ತಿ ತಾಳಿದ ನನ್ನಂಥವರ ಸಂಖ್ಯೆ ಲಕ್ಷಾಂತರ.

ಸಾಧಕನೊಬ್ಬ ತಮ್ಮ ವೃತ್ತಿ- ಪ್ರಚೃತ್ತಿಗಳನ್ನು ನೂರಾರು ಜನ ಅನುಸರಿಸುವಂತೆ ಮಾಡಿದರೆ ಅದು ಆತನ ಸಾಧನೆ.

ಝಾಕಿರ ಭಯ್ಯಾ ಸಾಧಿಸಿ ತೋರಿಸಿದ್ದು ಹೀಗೆ.

ಇವರ ಅಂತ್ಯದ ದಿನವೇ ಅಂಕೋಲಾದ ತುಳಸಿ ಗೌಡ ನಿಧನರಾಗಿದ್ದಾರೆ. ತುಳಸಿ ಅನಿವಾರ್ಯತೆಯಿಂದ ಗುತ್ತಿಗೆ ಆಧಾರದ ಕೆಲಸ ಸೇರಿ ನಂತರ ಖಾಯಂ ನೌಕರರಾಗಿ ಆಮೇಲೆ ವಯೋ ನಿವೃತ್ತಿ ಹೊಂದಿ ಮರಣ ಹೊಂದಿದ್ದರೆ ಅವರ ಸಾವು ಆತ್ಮೀಯರ ಅಶ್ರುತರ್ಪಣ ದೊಂದಿಗೆ ಮುಕ್ತಾಯವಾಗುತಿತ್ತು. ಆದರೆ ತುಳಸಿ ವೃತ್ತಿಯನ್ನು ಪ್ರವೃತ್ತಿಯಾಗಿ ಸಮರ್ಪಿಸಿಕೊಂಡಿದ್ದರು. ಗಿಡ ಬೆಳೆಸುತ್ತಾ, ಮರ ಸಾಕುತ್ತಾ ವೃತ್ತಿ-ಪ್ರವೃತ್ತಿ ಎಲ್ಲವನ್ನೂ ವೃಕ್ಷ ಸಂರಕ್ಷಣೆಗೆ ಮೀಸಲಿಟ್ಟರು.

ಪ್ರಕೃತಿಯ ಮಕ್ಕಳಾದ ಹಾಲಕ್ಕಿಗಳು ಮುಗ್ಧರು, ವನವಾಸಿಗಳಾದರೂ ಅವರಲ್ಲಿ ಕ್ರೌರ್ಯ ಕಡಿಮೆ. ಇಂಥ ವಿಶಿಷ್ಟ ಜನಾಂಗ ಪ್ರತಿನಿಧಿಸಿದ್ದ ತುಳಸಿ ಗೌಡರ ಪ್ರಕೃತಿ ಪ್ರೀತಿ ಸಹಜ ಆದರೆ ಅದನ್ನು ಧ್ಯೇಯ- ನಿಷ್ಠೆಗಳನ್ನಾಗಿಸಿಕೊಂಡ ತುಳಸಿ ಪ್ರಕೃತಿಯನ್ನೇ ತನ್ನ ಕುಟುಂಬವೆಂದೇ ಪ್ರೀತಿಸಿದ್ದರು. ಅವರ ವನ ಪ್ರೀತಿ ಅವರಿಗೆ ಪದ್ಮಶ್ರೀ ಜೊತೆ ಖ್ಯಾತಿ-ಪ್ರೀತಿಯನ್ನು ದಯಪಾಲಿಸಿತು. ನಮ್ಮನ್ನೇ ನಾವು ವೈಶಿಷ್ಟ್ಯತೆಗೆ ಸಮರ್ಪಿಸಿಕೊಂಡರೆ ಸಮಾಜ ನಮ್ಮನ್ನು ಹೇಗೆ ಗೌರವಿಸುತ್ತದೆಂಬುದಕ್ಕೆ ಝಾಕಿರ್‌ ಹುಸೇನ್‌ ಮತ್ತು ತುಳಸಿ ಗೌಡ ದೃಷ್ಟಾಂತ ಇಂಥವರು ಮಾತ್ರ ಹೊಸ ಪೀಳಿಗೆಗೆ ಮಾದರಿಯಾಗಬಲ್ಲರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ‌ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆಗಳಲ್ಲಿ ನಿರಂತರ ಮಳೆಯಾಗಿದೆ. ಇದರ ಪರಿಣಾಮ ಶಿರಸಿ-ಅಂಕೋಲಾ ಮಾರ್ಗದ ಮಧ್ಯೆ ಗುಡ್ಡ...

Recommended For You

About the Author: Kanneshwar Naik

Leave a Reply

Your email address will not be published. Required fields are marked *