ಪತ್ರಕರ್ತರು ಮತ್ತು ಪತ್ರಿಕೋದ್ಯಮ…..

ಪ್ರತಿಯೊಬ್ಬ ವರದಿಗಾರ (every one is reporter) ಕಲ್ಪನೆ ಈಗ ವಾಸ್ತವವಾಗಿದೆ. ಸಾಮಾಜಿಕ ಜಾಲತಾಣ ಬಂದ ಮೇಲೆ ಪ್ರತಿಯೊಬ್ಬ ವರದಿಗಾರ ಕನಸು ನನಸಾಗಿದೆ. ಹಾಗಾಗಿ ಸಾಹಿತ್ಯ ಬರವಣಿಗೆ ಸಾಮಾನ್ಯನಿಗಲ್ಲ ಎನ್ನುವ ವೈದಿಕ ಮಿಥ್ಯ ಅರ್ಥ ಕಳೆದುಕೊಂಡಿದೆ. ವರದಿಗಾರನಲ್ಲದ ಬರಹಗಾರ ಉತ್ತಮ ವರದಿಗಾರ, ಉತ್ತಮ ವರದಿಗಾರ ಸಾಮಾನ್ಯ ಬರಹಗಾರನಾಗಿ ಬದಲಾಗಿದ್ದಾನೆ.

ಹೀಗಾಗಲು ಪ್ರಮುಖ ಕಾರಣ ತಂತ್ರಜ್ಞಾನವಾದರೂ ಪತ್ರಿಕೋದ್ಯಮದಲ್ಲಿ ನುಸುಳಿಕೊಂಡ ಪಕ್ಷಪಾತ, ಜಾತೀವಾದ, ಧರ್ಮಾಂಧತೆಗಳೂ ಇದಕ್ಕೆ ಕೊಡುಗೆ ನೀಡಿವೆ. ಪತ್ರಕರ್ತರಾಗಲು ವಿದ್ಯಾರ್ಹತೆ ಅಗತ್ಯವಿಲ್ಲ,ವರದಿಗಾರನಾಗಲು ಕನಿಷ್ಟ ಶಿಕ್ಷಣ ಕಡ್ಡಾಯವಲ್ಲ. ಈ ಕಾರಣಕ್ಕೆ ಪತ್ರಿಕೋದ್ಯಮದೊಳಗೆ ನುಸುಳಿಕೊಂಡ ಅಡ್ಡ ಕಸುಬಿಗಳು ಸಂಘ- ಸಂಘಟನೆ ಕಟ್ಟಿಕೊಂಡು ರಾಜಕೀಯ ಮಾಡುವ ಪ್ರವೃತ್ತಿ ಈಗಿನ ಪತ್ರಿಕೋದ್ಯಮದ ಕೊಳಕಾಗಿ ಗೋಚರಿಸುತ್ತಿದೆ.

ಭಾಷೆ, ಸಂವಹನ, ಬರವಣಿಗೆ, ಸಂಹಿತೆ ಮರೆಯಾಗಿ ವೇಗ-ಓಲೈಕೆ ಹೆಚ್ಚುತ್ತಿರುವ ಮಾಧ್ಯಮದಲ್ಲಿ ಜಾತಿ ವಿಜೃಂಬಿಸುತ್ತಿರುವುದು ಮಾಧ್ಯಮದ ಹಾದಿತಪ್ಪುವಿಕೆಗೆ ಕಾರಣವಾಗುತ್ತಿದೆ. ಸಂಬಂಧ, ಜಾತಿ- ಪಕ್ಷಪಾತಗಳ ನೆರವಿನಿಂದ ಪತ್ರಕರ್ತರಾದವರ ಸಂಖ್ಯೆ ಶಿಕ್ಷಣ, ಅರ್ಹತೆ, ಯೋಗ್ಯತೆ ಇಂದ ಪತ್ರಕರ್ತರಾದವರ ಸಂಖ್ಯೆಗಿಂತ ಹೆಚ್ಚಿರುವುದು ಇಂದಿನ ದೋಷ- ಮತ್ತು ವಾಸ್ತವ.

ಉತ್ತರ ಕನ್ನಡ ಜಿಲ್ಲೆಯ ಜೊಯಡಾ ತಾಲೂಕಿಗೆ ಎರಡ್ಮೂರು ಪತ್ರಿಕೆಗಳನ್ನು ಬಿಟ್ಟು ಮತ್ಯಾವ ಕನ್ನಡ ಪತ್ರಿಕೆಗಳೂ ಬರುತ್ತಿಲ್ಲ. ಅದರೆ ಅಂಥ ಹಳ್ಳಿಯಂಥ ತಾಲೂಕು ಕೇಂದ್ರದಲ್ಲೂ ಮೇಲ್ವರ್ಗದ7 ಜನ ವ್ಯಕ್ತಿಗಳು ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು, ಅವರಲ್ಲಿ ಬಹುತೇಕರು ಒಂದೇ ಜಾತಿಯವರು! ಎಂದರೆ….. ತೀರ್ಮಾನ ನಿಮಗೆ ಬಿಟ್ಟದ್ದು.

(ಇದು ರಾಜ್ಯದ ಮೂಲೆಯ ಅತಿ ಹಿಂದುಳಿದ ತಾಲೂಕು)

ಇದೇ ರೀತಿ ಒಂದೆರಡು ದಶಕಗಳ ಹಿಂದೆ ಶಿರಸಿಯಿಂದ ಪ್ರಕಟವಾಗುತಿದ್ದ ಮೂರು ಸ್ಥಳಿಯ ಪತ್ರಿಕೆಗಳಿಂದ 2 ಪತ್ರಿಕೆಗಳ ಎರಡು ಡಜನ್ ಪತ್ರಕರ್ತರು! ಜಿಲ್ಲಾ ಕಾರ್ಯನಿರತ ಪತ್ರಕರ್ತರೂ ಅವರಲ್ಲೂ ಬಹುತೇಕರು ಒಂದೇ ಜಾತಿಯವರೂ ಆಗಿದ್ದರು. ಈ ಷಡ್ಯಂತ್ರ, ಕುತಂತ್ರದ ಹಿಂದಿನ ರೂವಾರಿ ಹಿಂದುತ್ವವಾದಿ ಬಿ.ಜೆ.ಪಿ. ಏಜೆಂಟ್ ಸಚ್ಚಿದಾನಂದ ಹೆಗಡೆ ಭತ್ತಗುತ್ತಿಗೆ ಆಗಿದ್ದುದು ಈಗ ಇತಿಹಾಸ.

ಹೀಗೆ ಜಿಲ್ಲಾ ಕೇಂದ್ರವಲ್ಲದ ಶಿರಸಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪ್ರತಿಷ್ಠಾಪಿಸಿಕೊಂಡು ಆ ಸಂಘಕ್ಕೆ ಸದಸ್ಯರಾಗಲು ಜನಿವಾರವೇ ಪ್ರಧಾನ ಅರ್ಹತೆ ಅದಿರದಿದ್ದರೆ ಜನಿವಾರ ತೊಳೆಯುವ, ಅದರ ರಕ್ಷಣೆ ಮಾಡುವ ಗುಲಾಮರನ್ನು ನಾಮಕಾವಸ್ಥೆ ಸದಸ್ಯರನ್ನಾಗಿಸಿಕೊಂಡು ಶಿರಸಿಯನ್ನು ಅಕ್ಷರ ಹಾದರದ ಅಡ್ಡೆಯನ್ನಾಗಿಸಿಕೊಳ್ಳುವಲ್ಲಿ ಕೆಲಸ ಮಾಡಿದ್ದು ರಾಜ್ಯದ ಪ್ರಮುಖ ಪತ್ರಕರ್ತರ ಜಾತಿಪ್ರೇಮ ಎನ್ನುವುದಕ್ಕೆ ವಿಫುಲ ದಾಖಲೆಗಳಿವೆ.

ಈ ಅವ್ಯವಸ್ಥೆ, ಅನಾಚಾರಗಳನ್ನೇ ತಮ್ಮ ಧ್ಯೇಯ- ನಿಷ್ಠೆಯನ್ನಾಗಿಸಿಕೊಂಡಿರುವ ಹೆಚ್ಚಿನ ಉತ್ತರ ಕನ್ನಡ ಜಿಲ್ಲೆಯ ಪರ್ತಕರ್ತರು ಕನಿಷ್ಟ ಪದವಿಧರ ರಲ್ಲದಿರುವುದು ಈ ಅವ್ಯವಸ್ಥೆಗೆ ಕಾರಣ. ಇಂಥ ಪತ್ರಕರ್ತರ ಸಂಘ, ಕೆಲವರಿಗೆ ಮಾಧ್ಯಮದ ಗುರುತಿನ ಚೀಟಿ ಇವುಗಳ ಸದಸ್ಯತ್ವ ಬಿಟ್ಟರೆ ಅವರಿಗೆ ಯೋಗ್ಯತೆ, ಅರ್ಹತೆಗಳೇನು ಎನ್ನುವುದು ತಿಳಿದಿರುವುದಿಲ್ಲ. ಇಂಥ ಜಾತ್ಯಾಂಧ- ಧರ್ಮಾಂಧ ಅವಿವೇಕಿಗಳ ಸಂಘವೇ ಬೇಡ ಎಂದು ಹೊರಗೆ ನಿಂತು ಕೆಲಸ ಮಾಡುತ್ತಿರುವ ಕೆಲವು ಅರ್ಹ ಪತ್ರಕರ್ತರು ಉತ್ತರ ಕನ್ನಡ ಜಿಲ್ಲೆಯ ಮಾನ ಉಳಿಸಿರುವ ದೃಷ್ಟಾಂತಗಳೇ ಹೆಚ್ಚು.

ಜಾತಿ, ಧರ್ಮ. ದೇವರು, ನಂಬಿಕೆ ಹೆಸರಲ್ಲಿ ಮೂರನೇ ದರ್ಜೆ ರಾಜಕಾರಣ ಮಾಡುವ ಮತಾಂಧರಿಗೂ, ಮಾಧ್ಯಮದ ಹೆಸರಿನಲ್ಲಿ ಬದುಕು,ಗುರುತು ಉಳಿಸಿಕೊಂಡಿರುವ ಪತ್ರಕರ್ತರ ವೇಷದ ಕೋಮುವಾದಗಳಿಗೂ ಯಾವ ವ್ಯತ್ಯಾಸವೂ ಇಲ್ಲ. ಇಂಥ ಕೊಳಕು ವ್ಯವಸ್ಥೆ ಪೋಶಿಸುವ ರಾಷ್ಟ್ರೀಯವಾದ, ಹಿಂದುತ್ವಗಳು ಬ್ರಾಹ್ಮಣ್ಯದ ಉದಾಹರಣೆಗಳಲ್ಲದೆ ಮತ್ತೇನು? ಇದನ್ನು ಬ್ರಾಹ್ಮಣ್ಯದ ಅತಿರೇಕ, ಅವಿವೇಕ, ಅನಾಚಾರ ಎಂದರೆ ಜಾತಿಯಿಂದ ಬ್ರಾಹ್ಮಣರಾದ ನಮ್ಮ ಸ್ನೇಹಿತರ್ಯಾರು ಅನ್ಯತಾ ಭಾವಿಸಬೇಕಿಲ್ಲ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *