ಎಲ್ಲರನ್ನೂ ಆಕರ್ಷಿಸುವ ಹೊಸೂರು ಟ್ರೀಪಾರ್ಕ್

ಪಶ್ಚಿಮಘಟ್ಟ ಪ್ರಪಂಚದ ವಿಶಿಷ್ಟ ಜೀವಜಾಲಗಳ ತಾಣ. ಪಶ್ಚಿಮಘಟ್ಟವನ್ನು ವಿಶ್ವ ಪಾರಂಪರಿಕ ಜೀವವೈವಿಧ್ಯದ ಪ್ರದೇಶ ಎಂದು ಯುನೆಸ್ಕೋ ಘೋಶಿಸಿದೆ.ಇಂಥ ಜೀವವೈವಿಧ್ಯದ ಪಶ್ಚಿಮಘಟ್ಟದ ವಿಶೇಶಗಳನ್ನು ಒಂದೇ ಪ್ರದೇಶದಲ್ಲಿ ನೋಡುವ ಅವಕಾಶವಿದ್ದರೆ ಹೇಗೆ ಇಂಥದ್ದೊಂದು ಯೋಚನೆ ಸಾಕಾರವಾಗಿರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಸಿದ್ಧಾಪುರದ ಹೊಸೂರಿನಲ್ಲಿರುವ ಅರಣ್ಯ ಇಲಾಖೆಯ ಟ್ರೀಪಾರ್ಕ್‌ ನಲ್ಲಿ
 ಟ್ರೀ ಪಾರ್ಕ್‌ ಎಂದು ಪ್ರಸಿದ್ಧವಾಗಿರುವ ವೃಕ್ಷೋದ್ಯಾನ ಈಗ ವೈಶಿಷ್ಟ್ಯಗಳ ಪ್ರದೇಶವಾಗಿ ಗುರುತಿಸಿಕೊಂಡಿದೆ. ಸಿದ್ಧಾಪುರ ಕುಮಟಾ ರಸ್ತೆಯ ಹೊಸೂರು ಟ್ರೀಪಾರ್ಕ್‌ ಈಗ ಜೋಗಕ್ಕೆ ಬರುವ ಪ್ರವಾಸಿಗರಿಗೆ ವಿಶೇಶ ಆಕರ್ಷಣೆಯಾಗಿದೆ. ೫೦ ಎಕರೆಗಳ ವಿಶಾಲ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಸಸ್ಯೋದ್ಯಾನದಲ್ಲಿ ೨೨೦ ಪ್ರಬೇಧಗಳ ಸಸ್ಯಗಳಿವೆ.ಪಶ್ಚಿಮಘಟ್ಟದ ಬಹುತೇಕ ಎಲ್ಲಾ ಸಸ್ಯ ಪ್ರಭೇದಗಳೊಂದಿಗೆ ಹೊರಪ್ರದೇಶದ ಸಸ್ಯಸಂಪತ್ತನ್ನು ಒಂದೆಡೆ ಬೆಳೆಸಿರುವ ಅರಣ್ಯ ಇಲಾಖೆ ಇವುಗಳ ಮಾಹಿತಿ ನೀಡಲು ವ್ಯವಸ್ಥೆಯನ್ನೂ ಮಾಡಿದೆ.
ವಾಯುವಿಹಾರಕ್ಕೆ ಬರುವವರಿಗೆ, ಅರಣ್ಯ ವನ್ಯ ಸಂಪತ್ತಿನ ಅಭಿರುಚಿಯುಳ್ಳವರಿಗೆ ಉತ್ತಮ ಸ್ಥಳವಾಗಿರುವ ಈ ಸಸ್ಯೋದ್ಯಾನ ಈಗ ಎಲ್ಲರ ಆಸಕ್ತಿಯ ಕೇಂದ್ರ ಆಗಿದೆ. ಪ್ರತಿವರ್ಷ ವಿಭಿನ್ನ ಸಸ್ಯಗಳನ್ನು ಆರೋಹಣ ಮಾಡುವ ಇಲಾಖೆ ಚಿಣ್ಣರ ಅನುಕೂಲ, ಆಸಕ್ತಿಗೆ ಪೂರಕವಾಗಿ ಆಟದ ಅವಕಾಶವನ್ನೂ ಮಾಡಿಕೊಟ್ಟಿ ದೆ.

ಹಿರಿಯರು ಈ ಟ್ರೀಪಾರ್ಕ್‌ ನಲ್ಲಿ ಪರಿಸರ, ಅರಣ್ಯ, ಜೀವವೈವಿಧ್ಯಗಳ ಬಗ್ಗೆ ಅರಿತರೆ ಮಕ್ಕಳು ಇಲ್ಲಿ ಆಡುತ್ತಾ ಹಕ್ಕಿಗಳ ಚಿಲಿಪಿಲಿ ಗಾನಕ್ಕೆ ಮರುಳಾಗುತ್ತಾರೆ.
ವಿಶಿಷ್ಟ ತಳಿಯ ಹಲಸು, ನೇರಳೆ, ಬಿದಿರಿನ ಸೌಂದರ್ಯ, ಸೊಬಗಿನೊಂದಿಗೆ ಪ್ರಕೃತಿಯಲ್ಲಿ ಕಳೆದುಹೋಗುವವರಿಗೆ ಅನುಕೂಲ ವಾಗಲಿ ಎಂದು ವೀಕ್ಷಣಾ ಕುಟೀರಗಳನ್ನೂ ನಿರ್ಮಿಸಲಾಗಿದೆ.
ಸರ್ಕಾರಮನಸ್ಸು ಮಾಡಿದರೆ ಪರಿಸರ ಪೂರಕ ಜನೋಪಯೋಗಿ ಕೆಲಸವನ್ನು ಹೀಗೂ ಮಾಡಬಹುದೆನ್ನುವ ವಾಸ್ತವಕ್ಕೆ ದೃಷ್ಟಾಂತವಾಗಿರುವ ಟ್ರೀಪಾರ್ಕ್‌ ಪ್ರವಾಸಿಗರು, ಮಕ್ಕಳ ಆಕರ್ಷಣೆಯ ಕೇಂದ್ರವಾಗಿದೆ.ಈ ಟ್ರೀಪಾರ್ಕ್‌ ನೋಡಲು ಬರುವವರಿಗೆ ಚಾರಣದ ಅನುಭವವಾಗುವಂತೆ ವಾಕ್‌ ಮಾಡಲು ಅವಕಾಶವಿರುವುದು ಈ ಸಸ್ಯೋದ್ಯಾನದ ಹೆಚ್ಚುವರಿ ಅನುಕೂಲ.

50 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿರುವ ವೃಕ್ಷೋಧ್ಯಾನ ಪ್ರಕೃತಿ ಪ್ರೀಯರು, ಪರಿಸರಾಸಕ್ತರಿಗೆ ಪ್ರೀತಿಯ ಕೇಂದ್ರ ಪ್ರತಿವರ್ಷ ನೂರಾರು ಗಿಡಗಳನ್ನು ನೆಡುವ ಇಲ್ಲಿ ಕಳೆದ ವರ್ಷ ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ.ಪ್ರವಾಸಿಗರು,ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಇಲಾಖೆಯ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಾರೆ.ವರ್ಷದಿಂದ ವರ್ಷಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಿದೆ.- ಶಿವಾನಂದ ನಿಂಗಾನಿ (ವಲಯ ಅರಣ್ಯಾಧಿಕಾರಿ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

ಪೂಜೆ, ಪುನಸ್ಕಾರ ಅಂಬೇಡ್ಕರ್‌ ಸಿದ್ಧಾಂತಕ್ಕೆ ವಿರುದ್ಧ…!

ದೇವರಿಗಿಂತ ಹೆಚ್ಚಾಗಿ ಕೆಲಸ,ಮಾನವೀಯತೆ ನಂಬುತಿದ್ದ ಡಾ. ಬಿ.ಆರ್.‌ ಅಂಬೇಡ್ಕರ್‌ ವೈದಿಕ ಪೂಜೆ, ಪುನಸ್ಕಾರಗಳಂಥ ಕಂದಾಚಾರಗಳನ್ನು ವಿರೋಧಿಸುತಿದ್ದರು. ಅಂಥ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *