

ನುಡಿ ಕನ್ನಡ, ನಡೆ ಕನ್ನಡ, ಕನ್ನಡವೇ ನಮ್ಮ ಉಸಿರು ಎಂದು ಹೇಳುವ ನವೆಂಬರ್ ಒಂದರ ರಾಜ್ಯೋತ್ಸವ ದಿನ ಕನ್ನಡವೇ ಉಸಿರು ಕನ್ನಡವೇ ಹೆಸರು ಎನ್ನುವಂತೆ ಸಮುದ್ರದಾಳದಲ್ಲಿ ಕನ್ನಡಧ್ವಜವನ್ನು ಹಾರಿಸಿ ಕೀರ್ತಿ ಪತಾಕೆ ಏರಿಸಿದ ಸಾಹಸ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಭಟ್ಕಳದ ನೇತ್ರಾಣಿ ಎಡವೆನ್ಚರ್ಸ್ ಮುರಡೇಶ್ವರ ಸ್ಕೂಬಾ ಡೈವಿಂಗ್ ತಂಡ ಇಂದು ೨೦ ಅಡಿ ಉದ್ದದ ಹಳದಿ-ಕೆಂಪು ಕನ್ನಡಧ್ವಜವನ್ನು ೧೦ ಮೀಟರ್ ಆಳದ ಸಮುದ್ರದಲ್ಲಿ ಹಾರಾಡಿಸುವ ಮೂಲಕ ಕನ್ನಡಪ್ರೇಮ ಮೆರೆಯಿತು.
ಬೆಂಗಳೂರಿನ ನಾಲ್ಕುಜನ ಅತಿಥಿಗಳ ಜೊತೆ ಸೇರಿದ ಇಲ್ಲಿಯ ಡೈವಿಂಗ್ ಮಾಸ್ಟರ್ ಗಣೇಶ್ ಹರಿಕಂತ್ರ ತಮ್ಮ ಡೈವಿಂಗ್ ಪರಿಣತರ ತಂಡದ ಅನೀಶ್,ನವೀನ್,ಮೊಯಿನ್ ಜೊತೆ ಸೇರಿ ಈ ಸಾಹಸ ಮಾಡಿದರು.
ಬಲುಅಪರೂಪದ ಈ ಸಾಹಸ ಮಾಡಿದ ನೇತ್ರಾಣಿ ಎಡವೆಂನ್ಚರ್ಸ ನ ಈ ಸಾಹಸಕ್ಕೆ ಕನ್ನಡಿಗರು ಭೇಷ್ ಎಂದಿದ್ದು ಸಮುದ್ರದಾಳದಲ್ಲಿ ಹಾರಾಡಿ, ತೇಲಾಡಿ ಕನ್ನಡ ಪ್ರೇಮ ಮೆರೆದ ವಿಡಿಯೋ ಈಗ ವೈರಲ್ ವಿಡಿಯೋ ಆಗಿ ಪ್ರಸಿದ್ಧವಾಗಿದೆ. ಆಕಾಶ,ಮುಗಿಲು,ಸಮುದ್ರ ಎಲ್ಲೆಲ್ಲೂ ಹಾರಾಡಿದ ಕನ್ನಡ ಧ್ವಜ ಕನ್ನಡಿಗರ ರೋಮಾಂಚನಕ್ಕೆ ಕಾರಣವಾಗಿರುವುದು ಇಂದಿನ ರಾಜ್ಯೋತ್ಸವದ ವಿಶೇಶ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
