ಗಾಂಧಿ ಜತೆಗೆ ಬಂದ ಗಣಪ….ಸರ್ಕಾರ ಸಾವರ್ಕರ್‌ ಎಂದರೆ ಜನ ಗಾಂಧಿ,ಪುನೀತ್‌ ಎಂದರು!

ಕುವೆಂಪು ವಿ. ವಿ ಯಲ್ಲಿ ಇಪ್ಪತ್ತು ವರ್ಷದ ಹಿಂದೆ ಎಂ ಎ ಓದಲು ಹೋದಾಗ ನಮ್ಮ ಒಳಗೆ ಇದ್ದ ಪರಕೀಯ ಒಂಟಿತನ ಭಾವ ವನ್ನ ಮೀರಲು ಕಾರಣ ಆಗಿದ್ದು ತೀರ್ಥಹಳ್ಳಿಯ ಹಳ್ಳಿ ಬಿದರಗೊಡಿನ ನಾಗೇಶ್ ರವರು. ನಮಗಿಂತ ಸೀನಿಯರ್ ಆಗಿದ್ದ ಅವರು ಎಂ ಎ ಮುಗಿಸಿ ಅಲ್ಲೇ ಸಂಶೋಧನೆಯಲ್ಲಿ ತೊಡಗಿಕೊಂಡು ಪುಟ್ಟ ರೂಮಿನಿಂದ ಭದ್ರಾವತಿ ಗೆ ಕನ್ನಡ ಅಥಿತಿ ಉಪನ್ಯಾಸಕ ಕೆಲಸಕ್ಕೆ ಹೋಗುತ್ತಿದ್ದರು.

ಅವರು ರಾಜೇಂದ್ರ ಜತೆಯಾಗಿ ಹಾಡುತ್ತಾ ಇದ್ದ ಭಾವಗೀತೆ ಆಗ ಯುನಿವರ್ಸಿಟಿಯಲ್ಲಿ ಗುಂಗು ಹಚ್ಚುತ್ತಿತ್ತು. ಯಬಡ ತಬಡ ಇದ್ದ ನನಗೆ ಪರಮೇಶಿ ಗೆ ಬೈದು ಬುದ್ದಿ ಹೇಳುತ್ತಾ ಅಪಾರ ಪ್ರೀತಿ ಮತ್ತು ಕಾಳಜಿ ತೋರುತ್ತಾ ಹಲವು ಸಾಮಾಜಿಕ ರಾಜಕೀಯ ವಿಚಾರವನ್ನ ಅರಿವಿಗೆ ತರುತ್ತಾ ಇದ್ದರು. ನಮ್ಮ ಪ್ರತಿಭೆ ಬಗ್ಗೆ ಬಹಳ ಮೆಚ್ಚುಗೆ ಕೊಟ್ಟವರು ಅವರು. ನೀವು ಏನೋ ಮಾಡ್ತೀರಿ ಕಣ್ರೋ ಅನ್ನುವ ಮಾತು ಆಗಾಗ ನೆನಪಿಗೆ ಬರುತ್ತದೆ ಈಗಲೂ.

ಇದೇ ಕಾರಣ ಅವರ ಹಳ್ಳಿ ಬಿದರಗೋಡು ಮನೆಗೆ ಹೋಗಿದ್ದೆ. ಅಲ್ಲಿನ ಆರ್ಥಿಕ ಸಾಮಾಜಿಕ ಚಿತ್ರಣಗಳನ್ನ ನಾಗೇಶ್ ಮತ್ತೆ ಕಟ್ಟಿ ಕೊಟ್ಟಿದ್ದರು. ಓದು ಅರಿವು ಆಗುವ ಬಗ್ಗೆ ಮಾತಾಡಿದ್ದರು. ಆ ಮನೆಯಲ್ಲಿ ಅವರ ಅಪ್ಪಯ್ಯ ನನ್ನ ಅಪ್ಪಯ್ಯ ನ ಪಾತ್ರವೇ ಆಗಿದ್ದರು. ಖಚಿತ ಮಾತು ನಿಲುವು ದೃಷ್ಟಿ ಎಲ್ಲವೂ. ಅಪ್ಪನೊಬ್ಬ ಮಗನ ಮೇಲೆ ಬೀರುವ ಪ್ರಭಾವ ನಾಗೇಶ್ ಮೊದಲು ನೋಡಿ ಆಮೇಲೆ ಅವರ ತಂದೆ ಭೇಟಿ ಮಾಡಿದಾಗ ಆಗಿತ್ತು.

ಕಾಲ ಮುಂದಕ್ಕೆ ಸಾಗಿ ಬಂತು

ನಾಗೇಶ್ ಲಂಕೇಶ್ ರ ಸಣ್ಣ ಕತೆ ಕಾದಂಬರಿ ಮೇಲೆ ಡಾಕ್ಟರೇಟ್ ಪಡೆದರು. ಪಿಯು ಕಾಲೇಜ್ ಉಪನ್ಯಾಸಕರಾದರು. ಈಗ ಶೆಟ್ಟಿ ಹಳ್ಳಿಯಲ್ಲಿ ವಿದ್ಯಾರ್ಥಿ ನೆಚ್ಚಿನ ಮೇಸ್ಟ್ರು ಆಗಿದ್ದಾರೆ. ಅವರ ಹೆಂಡತಿ ಪೋಲಿಸ್ ಹುದ್ದೆಯಲ್ಲಿದ್ದಾರೆ.

ಬಿದರಗೋಡಿನ ಅವರ ಮನೆಯಿಂದ ಈಗಷ್ಟೇ ಈ ಚಿತ್ರಗಳು ಬಂದವು. ಕುವೆಂಪು ನೆಲದ ಹಳ್ಳಿಯ ಮನೆಯಲ್ಲಿ ಗಣಪ ಗಾಂಧಿ ಜತೆ ಬಂದಿದ್ದಾನೆ. ವಿಶೇಷ ಎಂದರೆ ಗಣಪನನ್ನು ಅವರ ಮನೆಯ ಮಕ್ಕಳೆ ಮಾಡಿದ ಮೇಲೆ ಓರೆ ಕೋರೆ ಅವರ ಅಣ್ಣ ತಿದ್ದಿದ್ದಾರೆ. ಮನೆಯ ಗಣಪನನ್ನ ಗಾಂಧಿ ಜತೆಗೆ ಕರೆ ತಂದಿದ್ದಾರೆ. ಗಾಂಧಿಯ ಬದುಕಿನ ಹಲವು ಹಂತದ ಚಿತ್ರಗಳು ಹಿಂಭಾಗದಲ್ಲಿ ದರ್ಶನಕೆ ಸಿಕ್ಕಲಿವೆ.

ಗಾಂಧಿ ಆದರ್ಶಗಳು ಮೌಲ್ಯಗಳು ತಲೆಮಾರಿನಿಂದ ತಲೆಮಾರಿಗೆ ಇನ್ನಷ್ಟು ಬಲಗೊಳ್ಳಲೀ ಎನ್ನುವ ಆಶಯದೊಂದಿಗೆ dr ನಾಗೇಶ್ ಜೀ ಮೇಸ್ಟ್ರು ಮನೆಯ ಈ ಹೆಜ್ಜೆ ಮಾದರಿ ಅನ್ನಿಸಿತು.

ಮನೆ ಮನಕೆ ಗಾಂಧಿ
ಗಾಂಧಿ ಇನ್ನಷ್ಟು ಹತ್ತಿರವಾಗಲಿ…..

ಜಿ. ಟಿ ತುಮರಿ.
31-08-2022

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *