ಗಾಂಧಿ ಜತೆಗೆ ಬಂದ ಗಣಪ….ಸರ್ಕಾರ ಸಾವರ್ಕರ್‌ ಎಂದರೆ ಜನ ಗಾಂಧಿ,ಪುನೀತ್‌ ಎಂದರು!

ಕುವೆಂಪು ವಿ. ವಿ ಯಲ್ಲಿ ಇಪ್ಪತ್ತು ವರ್ಷದ ಹಿಂದೆ ಎಂ ಎ ಓದಲು ಹೋದಾಗ ನಮ್ಮ ಒಳಗೆ ಇದ್ದ ಪರಕೀಯ ಒಂಟಿತನ ಭಾವ ವನ್ನ ಮೀರಲು ಕಾರಣ ಆಗಿದ್ದು ತೀರ್ಥಹಳ್ಳಿಯ ಹಳ್ಳಿ ಬಿದರಗೊಡಿನ ನಾಗೇಶ್ ರವರು. ನಮಗಿಂತ ಸೀನಿಯರ್ ಆಗಿದ್ದ ಅವರು ಎಂ ಎ ಮುಗಿಸಿ ಅಲ್ಲೇ ಸಂಶೋಧನೆಯಲ್ಲಿ ತೊಡಗಿಕೊಂಡು ಪುಟ್ಟ ರೂಮಿನಿಂದ ಭದ್ರಾವತಿ ಗೆ ಕನ್ನಡ ಅಥಿತಿ ಉಪನ್ಯಾಸಕ ಕೆಲಸಕ್ಕೆ ಹೋಗುತ್ತಿದ್ದರು.

ಅವರು ರಾಜೇಂದ್ರ ಜತೆಯಾಗಿ ಹಾಡುತ್ತಾ ಇದ್ದ ಭಾವಗೀತೆ ಆಗ ಯುನಿವರ್ಸಿಟಿಯಲ್ಲಿ ಗುಂಗು ಹಚ್ಚುತ್ತಿತ್ತು. ಯಬಡ ತಬಡ ಇದ್ದ ನನಗೆ ಪರಮೇಶಿ ಗೆ ಬೈದು ಬುದ್ದಿ ಹೇಳುತ್ತಾ ಅಪಾರ ಪ್ರೀತಿ ಮತ್ತು ಕಾಳಜಿ ತೋರುತ್ತಾ ಹಲವು ಸಾಮಾಜಿಕ ರಾಜಕೀಯ ವಿಚಾರವನ್ನ ಅರಿವಿಗೆ ತರುತ್ತಾ ಇದ್ದರು. ನಮ್ಮ ಪ್ರತಿಭೆ ಬಗ್ಗೆ ಬಹಳ ಮೆಚ್ಚುಗೆ ಕೊಟ್ಟವರು ಅವರು. ನೀವು ಏನೋ ಮಾಡ್ತೀರಿ ಕಣ್ರೋ ಅನ್ನುವ ಮಾತು ಆಗಾಗ ನೆನಪಿಗೆ ಬರುತ್ತದೆ ಈಗಲೂ.

ಇದೇ ಕಾರಣ ಅವರ ಹಳ್ಳಿ ಬಿದರಗೋಡು ಮನೆಗೆ ಹೋಗಿದ್ದೆ. ಅಲ್ಲಿನ ಆರ್ಥಿಕ ಸಾಮಾಜಿಕ ಚಿತ್ರಣಗಳನ್ನ ನಾಗೇಶ್ ಮತ್ತೆ ಕಟ್ಟಿ ಕೊಟ್ಟಿದ್ದರು. ಓದು ಅರಿವು ಆಗುವ ಬಗ್ಗೆ ಮಾತಾಡಿದ್ದರು. ಆ ಮನೆಯಲ್ಲಿ ಅವರ ಅಪ್ಪಯ್ಯ ನನ್ನ ಅಪ್ಪಯ್ಯ ನ ಪಾತ್ರವೇ ಆಗಿದ್ದರು. ಖಚಿತ ಮಾತು ನಿಲುವು ದೃಷ್ಟಿ ಎಲ್ಲವೂ. ಅಪ್ಪನೊಬ್ಬ ಮಗನ ಮೇಲೆ ಬೀರುವ ಪ್ರಭಾವ ನಾಗೇಶ್ ಮೊದಲು ನೋಡಿ ಆಮೇಲೆ ಅವರ ತಂದೆ ಭೇಟಿ ಮಾಡಿದಾಗ ಆಗಿತ್ತು.

ಕಾಲ ಮುಂದಕ್ಕೆ ಸಾಗಿ ಬಂತು

ನಾಗೇಶ್ ಲಂಕೇಶ್ ರ ಸಣ್ಣ ಕತೆ ಕಾದಂಬರಿ ಮೇಲೆ ಡಾಕ್ಟರೇಟ್ ಪಡೆದರು. ಪಿಯು ಕಾಲೇಜ್ ಉಪನ್ಯಾಸಕರಾದರು. ಈಗ ಶೆಟ್ಟಿ ಹಳ್ಳಿಯಲ್ಲಿ ವಿದ್ಯಾರ್ಥಿ ನೆಚ್ಚಿನ ಮೇಸ್ಟ್ರು ಆಗಿದ್ದಾರೆ. ಅವರ ಹೆಂಡತಿ ಪೋಲಿಸ್ ಹುದ್ದೆಯಲ್ಲಿದ್ದಾರೆ.

ಬಿದರಗೋಡಿನ ಅವರ ಮನೆಯಿಂದ ಈಗಷ್ಟೇ ಈ ಚಿತ್ರಗಳು ಬಂದವು. ಕುವೆಂಪು ನೆಲದ ಹಳ್ಳಿಯ ಮನೆಯಲ್ಲಿ ಗಣಪ ಗಾಂಧಿ ಜತೆ ಬಂದಿದ್ದಾನೆ. ವಿಶೇಷ ಎಂದರೆ ಗಣಪನನ್ನು ಅವರ ಮನೆಯ ಮಕ್ಕಳೆ ಮಾಡಿದ ಮೇಲೆ ಓರೆ ಕೋರೆ ಅವರ ಅಣ್ಣ ತಿದ್ದಿದ್ದಾರೆ. ಮನೆಯ ಗಣಪನನ್ನ ಗಾಂಧಿ ಜತೆಗೆ ಕರೆ ತಂದಿದ್ದಾರೆ. ಗಾಂಧಿಯ ಬದುಕಿನ ಹಲವು ಹಂತದ ಚಿತ್ರಗಳು ಹಿಂಭಾಗದಲ್ಲಿ ದರ್ಶನಕೆ ಸಿಕ್ಕಲಿವೆ.

ಗಾಂಧಿ ಆದರ್ಶಗಳು ಮೌಲ್ಯಗಳು ತಲೆಮಾರಿನಿಂದ ತಲೆಮಾರಿಗೆ ಇನ್ನಷ್ಟು ಬಲಗೊಳ್ಳಲೀ ಎನ್ನುವ ಆಶಯದೊಂದಿಗೆ dr ನಾಗೇಶ್ ಜೀ ಮೇಸ್ಟ್ರು ಮನೆಯ ಈ ಹೆಜ್ಜೆ ಮಾದರಿ ಅನ್ನಿಸಿತು.

ಮನೆ ಮನಕೆ ಗಾಂಧಿ
ಗಾಂಧಿ ಇನ್ನಷ್ಟು ಹತ್ತಿರವಾಗಲಿ…..

ಜಿ. ಟಿ ತುಮರಿ.
31-08-2022

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *