ಕಲ್ಫವೃಕ್ಷಕ್ಕೂ ಬಂದ ಕೊಳೆರೋಗ


ಸುಳಿಕೊಳೆ ರೋಗಕ್ಕೆ ತೆಂಗುನಾಶ,
ಮರಕಡಿಯುವುದೆ ಪರಿಹಾರ
ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಮಲೆನಾಡು, ಕರಾವಳಿ ಭಾಗದಲ್ಲಿ ಈಗ ಅಡಿಕೆಗೆ ಕೊಳೆರೋಗ ಬರುವ ಸಮಯ, ಆದರೆ ಇದೇ ಸಮಯದಲ್ಲಿ ತೆಂಗಿನ ಕೊಳೆರೋಗ ತೆಂಗುಬೆಳೆಯನ್ನು ನಾಶ ಮಾಡಿರುವ ವಿದ್ಯಮಾನ ಬೆಳಕಿಗೆ ಬಂದಿದೆ.
ಸುಳಿಕೊಳೆರೋಗ ಎನ್ನಲಾಗುವ ತೆಂಗಿನ ಕೊಳೆರೋಗ ತೆಂಗಿಗೆ ಮಾರಕವಾಗಿ ಪರಿಣಮಿಸಿದೆ.
ತೆಂಗಿನ ಮರಕ್ಕೆ ದುಂಬಿಯ ಕಾಟ ಸಾಮಾನ್ಯ, ದುಂಬಿ ತೆಂಗಿನ ಸುಳಿಯೊಳಗೆ ಸೇರಿ ಮರಿಮಾಡಲು ಸುಳಿಯೊಳಗೆ ಹೊಂಡ ಮಾಡುತ್ತದೆ. ಹೀಗೆ ದುಂಬಿ ತನ್ನ ಪರಿವಾರಕ್ಕಾಗಿ ತಯಾರಾದ ರಂಧ್ರದಂಥ ಹೊಂಡದಲ್ಲಿ ನೀರು ಸೇರಿ ಮೊದಲು ತೆಂಗಿನ ಮರ,ಗಿಡದ ಸುಳಿ ಕಳಚಿ ಬೀಳುತ್ತದೆ.
ನಂತರ ಗಿಡ ಅಥವಾ ಮರ ನಿಧಾನವಾಗಿ ಸಾಯತೊಡಗುತ್ತದೆ.
ಹೀಗೆ ಸತ್ತ ತೆಂಗಿನ ಗಿಡ ಅಥವಾ ಮರವನ್ನು ಕಡಿದು ತೆಗೆಯದಿದ್ದರೆ ಅದು ಮುಂದೆ ಬೇರೆ ಮರಕ್ಕೆ ರೋಗವಾಹಕವಾಗಿ ಕೆಲಸಮಾಡುತ್ತದೆ.
ತೆಂಗಿಗೆ ಬರುವ ಈ ಕೊಳೆರೋಗ ಪಂಗಸ್ ರೋಗವಾಗಿದ್ದು ಅದರ ನಿಯಂತ್ರಣಕ್ಕೆ ಉಪ್ಪಿನ ಚಿಕಿತ್ಸೆ ಅಥವಾ ಬೋಡೋದ್ರಾವಣ ಅಥವಾ ಪೇಸ್ಟ್ ಸಿಂಪಡಣೆ ಪರಿಹಾರ ಎನ್ನಲಾಗುತ್ತಿದೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ತೆಂಗಿನ ಮರ ಸೋಸುವ ವಿಧಾನದಲ್ಲಿ ತೆಂಗಿನ ಮರದ ತ್ಯಾಜ್ಯವನ್ನು ತೆಗೆದು, ದುಂಬಿ ಗೂಡಿದ್ದರೆ ಅದನ್ನು ತೆಗೆದು ಮರಕ್ಕೆ ಉಪ್ಪು ಕಟ್ಟುವ ಸಾಂಪ್ರದಾಯಿಕ ವಿಧಾನ ಒಂದಿದೆ. ಈಗ ಈ ಪದ್ಧತಿ ನಶಿಸುತ್ತಿರುವುದರಿಂದ ತೆಂಗಿನ ಸುಳಿಗೆ ಬೋಡೋ (ತುತ್ತ-ಸುಣ್ಣ)ಪೇಸ್ಟ್ ಅಥವಾ ದ್ರಾವಣ ಸಿಂಪಡಿಸುವ ನೂತನ ವಿಧಾನ ಅನುಸರಿಸಲಾಗುತ್ತಿದೆ.
ಸಿದ್ಧಾಪುರದಲ್ಲಿ 254 ಹೆಕ್ಟೇರ್ ಅಂದರೆ 635 ಎಕರೆ ತೆಂಗು ಬೆಳೆಯುವ ಪ್ರದೇಶವಿದ್ದು, ಕೆಲವೆಡೆ ನುಶಿರೋಗ,ಸುಳಿಕೊಳೆರೋಗಗಳಿಂದ ತೆಂಗು ನಾಶವಾಗಿದೆ. ನುಶಿರೋಗಬಾಧಿತ ಮರದ ಇಳುವರಿ ಕಡಿಮೆಯಾದರೆ, ಸುಳಿಕೊಳೆರೋಗ ಮರವನ್ನೇ ಸಾಯಿಸುತ್ತದೆ.ಸುಳಿಕೊಳೆಯುವ ಪಂಗಸ್ ರೋಗಪೀಡಿತ ಮರವನ್ನು ಕಡಿಯದಿದ್ದರೆ ಅದು ಬೇರೆ ಮರಗಳಿಗೂ ವ್ಯಾಪಿಸುತ್ತದೆ. ಹಾಗಾಗಿ ಸುಳಿಕೊಳೆರೋಗ ಪೀಡಿತ ಮರಗಳಿಗೆ ಬೋಡೊ ಮಿಶ್ರಣದ ಚಿಕಿತ್ಸೆ ಮಾಡಬೇಕು. ಸುಳಿಕೊಳೆರೋಗದಿಂದ ಸತ್ತ ಮರಗಳನ್ನು ಕಡಿಯಬೇಕು ಎನ್ನುತ್ತಾರೆ ತೋಟಗಾರಿಕಾ ಉಪನಿರ್ಧೇಶಕ ಮಹಾಬಲೆಶ್ವರ ಹೆಗಡೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *