ಗೃಹ ಉದ್ಯಮದಲ್ಲಿ ಯಶಸ್ಸು ಕಾಣುತ್ತಿರುವ ಶಿವಕುಮಾರ

ಹೆಸರು-ಶಿವಕುಮಾರ ಗೋವಿಂದ
ವಯಸ್ಸು-25
ವೃತ್ತಿ-ಅಗರಬತ್ತಿ ತಯಾರಿಕೆ.
ಹೀಗೆ ಪರಿಚಯಿಸಬಹುದಾದ ಯುವಕ ಶಿವಕುಮಾರ ಗೋವಿಂದ ನಾಯ್ಕ ಕಡಕೇರಿಯವರು.
ಈಗಿನ ಟ್ರೆಂಡ್‍ನಂತೆ ಮೂರು ವರ್ಷ ಡಿಪ್ಲೊಮಾ ಓದಿದ ಶಿವಕುಮಾರ ಮಹಾನಗರಕ್ಕೆ ಓಡಲು ಮುಂದಾಗಲಿಲ್ಲ. ಕೆಲವು ವರ್ಷ ಆಯ್.ಟಿ.ಆಯ್. ವಿದ್ಯಾರ್ಥಿಗಳಿಗೆ ಪಾಠ ಮಾಡಿದ. ನಂತರ ಸ್ವಂತ ಉದ್ದಿಮೆ ಶ್ರೇಷ್ಠ ಎಂದು ಬಗೆದು, ಅಗರಬತ್ತಿ ತಯಾರಿಸಲು ಪ್ರಾರಂಭಿಸಿದ. ಈಗ ತಿಂಗಳೊಂದಕ್ಕೆ ಕನಿಷ್ಠ ಮೂರು ಟನ್ ಊದುಬತ್ತಿ ತಯಾರಿಸುವ ಶಿವಕುಮಾರ ಮೂರ್ನಾಲ್ಕು ಜನ ಕೆಲಸಗಾರರಿಗೆ ವೇತನ ಕೊಟ್ಟು ದಿನಕ್ಕೆ ಸಾವಿರ ಮಿಕ್ಕಿ ಉಳಿಸುತ್ತಾರೆ.
ಇದು ಶಿವಕುಮಾರ ನಾಯ್ಕ ಗೃಹ ಉದ್ದಿಮೆ ಮೂಲಕ ಕಂಡುಕೊಂಡ ಉದ್ಯೋಗ ಮತ್ತು ಆತ್ಮವಿಶ್ವಾಸ.
ಅಗರಬತ್ತಿಗೆ ಬೇಕಾಗುವ ಎಲ್ಲಾ ಕಚ್ಚಾ ವಸ್ತುಗಳನ್ನು ಖರೀದಿಸಿ ತರುವ ಇವರಿಗೆ ಹೊರಗಿನಿಂದ ಪ್ರೀಮಿಕ್ಸ್ ಖರೀದಿಸಿ, ದೊಡ್ಡ ಕಂಪನಿಗಳಿಗೆ ಅಗರಬತ್ತಿ ಪೂರೈಸುವುದರಿಂದ ತೊಂದರೆ, ರಗಳೆ ಕಡಿಮೆ ಎನ್ನುವ ಸತ್ಯ ಕಂಡುಕೊಂಡಿದ್ದಾರೆ.
ಮನೆಮಂದಿಯೆಲ್ಲಾ ನಿರಂತರ ಮಾಡಬಹುದಾದ ಈ ಕೆಲಸ ಹೆಚ್ಚಿನ ಬಂಡವಾಳ ಬಯಸದ ಸ್ವತಂತ್ರ ವೃತ್ತಿ. ಸರ್ಕಾರ, ಕೈಗಾರಿಕಾ ಕೇಂದ್ರಗಳ ನೆರವು ದೊರೆತರೆ ಈ ಉದ್ಯಮವನ್ನು ವಿಸ್ತರಿಸಬಹುದು ಎನ್ನುವ ಶಿವಕುಮಾರ ಈಗಾಗಲೇ ಕೆಲವು ಪ್ರಯೋಗದಿಂದಲೂ ಯಶಸ್ಸು ಕಂಡಿದ್ದಾರೆ. ಜಾನುವಾರುಗಳ ಸೆಗಣಿಯಿಂದ ತಯಾರಿಸುವ ಅಗರಬತ್ತಿಗೆ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಮಠ ಒಂದರ ಬೇಡಿಕೆ ಪೂರೈಸಿ ಆತ್ಮವಿಶ್ವಾಸ ಗಳಿಸಿಕೊಂಡಿರುವ ಶಿವಕುಮಾರ ಸ್ಥಳಿಯ ಲಭ್ಯತೆ, ಬೇಡಿಕೆ ಹಿನ್ನೆಲೆಯಲ್ಲಿ ಸ್ಥಳಿಯ ಬ್ರಾಂಡ್ ಕೂಡಾ ತಯಾರಿಸಬಹುದು ಎನ್ನುತ್ತಾರೆ. ಹೊರ ಊರು, ದೊಡ್ಡ ಕಂಪನಿಗಳಲ್ಲಿ ಬೇರೆಯವರಿಗೆ ದುಡಿಯುವ ಬದಲು ನಮ್ಮೂರಲ್ಲಿ ನಮಗೆ ಸುಲಭದ ಉದ್ಯೋಗ, ಆದಾಯ ಸಿಕ್ಕರೆ ಒಳ್ಳೆಯದು ಎನ್ನುವ ಯೋಚನೆಯಿಂದ ಪ್ರಾರಂಭಿಸಿರುವ ಈ ಗೃಹ ಉದ್ಯಮ ಅವರ ಕನಸಿಗೆ ರೆಕ್ಕೆ ಹಚ್ಚಿದೆ.
ನಾಟಿವೈದ್ಯ ತಂದೆ ಗೋವಿಂದ ನಾಯ್ಕ, ಪ್ರೋತ್ಸಾಹಿಸುವ ತಾಯಿ, ಸಹೋದರಿಯರ ಹಾರೈಕೆ,ಪ್ರಯತ್ನದಿಂದ ನವ ಉದ್ಯಮಿಯಾಗಿ ಬೆಳೆಯುತ್ತಿರುವ ಕಡಕೇರಿಯ ಈ ಯುವಕ ವಿದ್ಯಾವಂತ ನಿರುದ್ಯೋಗಿಗಳಿಗೆ ಸ್ಫೂರ್ತಿ ಮತ್ತು ಮಾದರಿ. ದಾಖಲೆ,ಬರೀ ವರದಿ, ಯೋಜನಾವರದಿಗಳಿಂದ ಸರ್ಕಾರದ ನೆರವು ಪಡೆಯುವ ಬುದ್ಧಿವಂತರ ನಡುವೆ.ಕೆಲಸ ಮಾಡುತ್ತಾ ದಾಖಲೆ ಇಡದೆ ದಾಖಲೆ ಮಾಡಬಹುದಾದ ಈ ಯುವಕನನ್ನು ಸರ್ಕಾರ, ಸ್ಥಳಿಯ ನಾಯಕತ್ವಗಳು ಗುರುತಿಸಿದರೆ ಇವರ ಉದ್ದಿಮೆಗೆ ಉತ್ತೇಜಿಸಿದಂತಾಗಬಹುದು.

ಮಹಿಳಾ ಶಿಕ್ಷಣದ ಮನ್ವಂತರೆ ಸಾವಿತ್ರಿಭಾಯಿ ಫುಲೆ
ನೈಗಾಂವ್ ಮಹಾರಾಷ್ಟ್ರದ ಒಂದು ಪುಟ್ಟ ಹಳ್ಳಿ. ಶಿಕ್ಷಕಿಯೊಬ್ಬರು ಕೈಚೀಲವೊಂದನ್ನು ಹೆಗಲಿಗೇರಿಸಿ ಮುನ್ನಡೆಯುತ್ತಿದ್ದರು. ‘ಇವಳೊಬ್ಬಳು ಗುರುವಂತೆ ಗುರು! ರೊಟ್ಟಿ ತಟ್ಟಕೊಂಡು ಮನೇಲಿ ಬಿದ್ದಿರೋದು ಬಿಟ್ಟು ಊರವರಿಗೆಲ್ಲಾ ಶಾಲೆ ಕಲಿಸ್ತಾಳಂತೆ’ ಎಂದು ಚುಚ್ಚು ನುಡಿಯುತ್ತಿದ್ದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *