ಕಾಲ ಮರೆತ ಹೊಸಗುಂದದ ಚರಿತ್ರೆ ನೆನಪಿಸಿದ ಗುರು-ಶಿಷ್ಯರ ಸಂಬಂಧ!

ಇತಿಹಾಸದ ಭೂಗರ್ಭದಲ್ಲಿ ಅದೆಷ್ಟು ದಾಖಲೆಗಳು ಹುದುಗಿ ಕೂತಿವೆಯೋ?

ಬನವಾಸಿ, ಬಿಳಗಿ, ಗೇರುಸೊಪ್ಪಾ, ಸದಾಶಿವಗಢ, ಮಿರ್ಜಾನ್,ಕಾಕನೂರು ಕೋಟೆ ಹೀಗೆ ಗೋವಾ ತುದಿಯಿಂದ ತಮಿಳುನಾಡಿನ ವರೆಗೆ…. ಅದೆಷ್ಟು ಪ್ರದೇಶಗಳನ್ನು ನೋಡಿಲ್ಲ.ಗೋವಾ ಗಡಿಯ ಮಾರ್ಕೆಪೂಣಂ ಜಾತ್ರೆಯ ವಿಶಿಷ್ಟ ದೇವಸ್ಥಾನದಿಂದ ಪ್ರಾರಂಭಿಸಿ ಬೇಲೂರು, ಹಳೆಬೀಡು, ಹಂಪಿ ಹೈದರಾಬಾದಿನ ಕೆಲವು ಪ್ರದೇಶಗಳು, ಹುಬ್ಬಳ್ಳಿ ದೆಹಲಿಯ ಸಮಾಧಿಗಳು! ಎಷ್ಟೊಂದು ಸತ್ಯ, ಚರಿತ್ರೆ ಹುದುಗಿದ ಪ್ರದೇಶಗಳನ್ನು ಸಂದರ್ಶಿಸಿಲ್ಲ. ಇಲ್ಲೆಲ್ಲಾ ಸಕಾರಣ, ನಿಗದಿತ ಸಮಯ ಮಿತಿಯಲ್ಲಿ ಅಡ್ಡಾಡಿ ಬಂದ ನಮಗೆ ಇದೇ ಶಿವಮೊಗ್ಗ -ಜೋಗ ರಸ್ತೆಯ ಅನಂತಪುರದ ಒಳಗೆ ಇಂಥದ್ದೊಂದು ಪ್ರದೇಶವಿದೆ ಎನ್ನುವ ಅಂದಾಜೂ ಇದ್ದಿರಲಿಲ್ಲ. ಕಿರಿಯ ಸ್ನೇಹಿತನಂಥ ರಾಜ್ ಗುರು ಇದೇ ತಿಂಗಳು ಮೂರ್ನಾಲ್ಕು ಪ್ರದೇಶಗಳಿಗೆ ಕರೆದಾಗ ಒಂದೆರಡು ಬಾರಿ ಹೋಗಿ ಬಂದಿದ್ದೆ. ಈ ಬಾರಿ ಗುರು ತುಸು ಹೆಚ್ಚೇ ಒತ್ತಾಯಿಸಿದ್ದ ಅವನ ಒರಾತ ಒಂದೇ ಹೊಸಗುಂದಕ್ಕೆ ಒಮ್ಮೆ ಬನ್ನಿ.

ಗುಂಜಗೋಡಿನ ಪ್ರವೀಣಾ ದಂಪತಿಗಳೊಂದಿಗೆ ನಮಗೆಂದೇ ಗುರು ವ್ಯವಸ್ಥೆ ಮಾಡಿದ್ದ ಬೆಂಗಳೂರಿನ ಕ್ವಾಲೀಸ್ ಕಾರ್ನಲ್ಲಿ ಸಿದ್ಧಾಪುರದಿಂದ ಬೆಳಿಗ್ಗೆ ಹೊರಟಾಗ ಸಾಗರ ದಾಟಿ, ಅನಂತಪುರಕ್ಕಿಂತ ಹಿಂದೆ 1-2 ಕಿ.ಮೀ ಒಳರಸ್ತೆಯಲ್ಲಿ ಹೊಸಗುಂದಕ್ಕೆ ಇಳಿದಾಗ ಹೊಸ ಲೋಕವೊಂದರ ಅನಾವರಣವಾದಂತಾಯಿತು. ಸ್ವಿಂಮ್ಮಿಂಗ್ಪೂಲ್ ಮಾದರಿಯ ಪುಷ್ಕರಣೆ, ಅದಕ್ಕೆ ತಾಗಿಕೊಂಡತ್ತಿದ್ದ ಶಿಲಾಶಾಸನಗಳು, ಅಲ್ಲಿಯ ಉಮಾಮಹೇಶ್ವರ ದೇವಸ್ಥಾನ, ಗೋಶಾಲೆ ಈ ಪ್ರದೇಶಕ್ಕೆ ತಾಕಿಕೊಂಡಂತಿರುವ 600 ಎಕರೆಗಳ ದೇವರಕಾಡು. ಈ ಪ್ರದೇಶದ ಜಲ. ಮರ, ವನ,ಜನ ನಮಗೆ ಹೇಳೀಮಾಡಿಸಿದಂತಿದ್ದ ಪ್ರದೇಶವದು.

ಶಿಷ್ಯ ಗುರು ಇದೇ ಪ್ರದೇಶದಲ್ಲಿ ವಿವಾಹವಾಗಲು ನಿಶ್ಚಯಿಸಿರುವುದು,ತನ್ನ ಮೊದಲ ನಿರ್ಮಾಣದ ಚಲನಚಿತ್ರವೊಂದರ ಚತ್ರೀಕರಣ ನಡೆಯುತ್ತಿರುವುದು ಇವುಗಳೊಂದಿಗೆ ಈ ಹೊಸಗುಂದದ ವೈಶಿಷ್ಟ್ಯದ ಕಾರಣಕ್ಕೆ ಗುರು ನಮ್ಮನ್ನು ಅಲ್ಲಿ ಬರಮಾಡಿಕೊಂಡಿದ್ದು.

ಈ ಹಿಂದೆ ಹೊಸಗುಂದ ಶಾಸನ ಎಂದು ಓದಿದ್ದು ನೆನಪಿತ್ತಷ್ಟೆ. ಡಾ,ಜ್ನಾನೇಶ್ ಹಿಂದೆ ಬಾರಂಗಿಯ ಅರಸರಿಗೂ ಹೊಸಗುಂದದ ದೊರೆಗಳಿಗೂ ಆಗಿದ್ದ ಯುದ್ಧಕ್ಕೆ ಸಂಬಂಧಿಸಿದ್ದ ಶಾಸನವೊಂದು ತಮ್ಮೂರು ಕೊಡಕಣಿಯಲ್ಲಿ ಇರುವುದಾಗಿ ಅಲ್ಲೇ ತಿಳಿಸಿದರು.

ಹೀಗೆ ಶಿಷ್ಯ ಗುರುವಿನ ಮೇಲ್ ಉಸ್ತುವಾರಿಯ ಸಿನೆಮಾ ಚಿತ್ರೀಕರಣದೊಂದಿಗೆ ಹೊಸಗುಂದದ ಶಾಂತರಸರು ಆಳಿ, ರಾಜ್ಯ, ದೇವಸ್ಥಾನ, ಕೋಟೆ, ಕಾಡು ಕಟ್ಟಿ ಬೆಳೆ ಸಿದ ಪ್ರದೇಶ ನವೀಕರಣಗೊಂಡದ್ದನ್ನು ನೋಡಿ ಖುಷಿ ಪಟ್ಟೆವು. ನಾರಾಯಣ ಶಾಸ್ತ್ರಿ ಎನ್ನುವವರು ಸುಮಾರು 800 ವರ್ಷಗಳ ಹಿಂದಿನ ವೈಭವದ ಹೊಸಗುಂದವನ್ನು 1970 ರ ನಂತರ ಸರ್ಕಾರ, ಸಾರ್ವಜನಿಕರು ಮರುಶೋಧಿಸಿದ್ದನ್ನು ಚರಿತ್ರೆಗೆ ಅಪಚಾರವಾಗದಂತೆ ಅಭಿವೃದ್ಧಿ ಪಡಿಸಿರುವ ರೀತಿ ಹಿಡಿಸಿತು.

ನಮ್ಮ ನೆಲದ ಹೊಸಗುಂದ ರಾಜರು ಮೆರೆದು ಮರೆತುಹೋಗಿದ್ದ ಸ್ಥಳವೊಂದು ಐವತ್ತು ವರ್ಷಗಳ ಹಿಂದೆ ಪತ್ತೆಯಾಗಿ, ಈಗ ನವೀಕರಣಗೊಂಡಿರುವುದು, ಒಂದೇ ಪ್ರದೇಶದಲ್ಲಿ ಗೋಶಾಲೆ, ದೇವರಕಾಡು, ಧಾರ್ಮಿಕ, ಐತಿಹಾಸಿಕ ಮಹತ್ವಗಳೆಲ್ಲಾ ಮೇಳೈಸಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವುದು ನಮ್ಮಲ್ಲೂ ಅಭಿಮಾನ ಮೂಡಿಸಿತು. ಇವೆಲ್ಲವನ್ನೂ ಪ್ರೀತಿಯಿಂದ ತೋರಿಸಿ, ಸಂಬ್ರಮಿಸಿದ ಗುರು ನಮಗೆ ಹೊಸಗುಂದವೆಂಬ ನೂತನ ಪ್ರವಾಸಿಕ್ಷೇತ್ರ ಪರಿಚಯಿಸಿದ. ಈ ಸಾಧ್ಯತೆಯ ಹಿಂದಿನ ಕಾರಣ, ಪ್ರೀತಿ- ಅಭಿಮಾನಗಳನ್ನು ಕೇವಲ ಗುರುಶಿಷ್ಯನ ಸಂಬಂಧಕ್ಕೆ ಮಿತಿಗೊಳಿಸಬಾರದಲ್ಲವೆ? ಹೊಸಗುಂದದ ಪರಿಚಯ, ವಿವರ, ಅಲ್ಲಿನ ವೈಶಿಷ್ಟ್ಯಗಳನ್ನು ನೀವು samaajamukhi ಯು ಟ್ಯೂಬ್ ಚಾನೆಲ್ ನಲ್ಲಿ ನೋಡಬಹುದು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *