

ಸಿದ್ಧಾಪುರದ ಬಿಯರ್ ಬಾಂಡರಿ ಚಳ್ಳೆವಟ್ಟಿ ಕ್ರೀಡಾಂಗಣದ ಬಗ್ಗೆ
ನಿಮಗೆ ಗೊತ್ತಾ?
ಈ ವರ್ಷ, ಈ ಚುನಾವಣೆಯ ಸಮಯದಲ್ಲಿ ದೇಶದಾದ್ಯಂತ ಮದ್ಯ ಮಾರಾಟದ ಪ್ರಮಾಣ ಮಹಾಜಿಗಿತ ದಾಖಲಿಸಿದೆಯಂತೆ!
ಈ ಚುನಾವಣೆಯಲ್ಲಿ ಸುಳ್ಳು ಹೇಳಿದವರಾರು? ದುಡ್ಡು ಹಂಚಿ ಮತ, ಸೇನೆ, ಮಾಧ್ಯಮ,ಉಧ್ಯಮಿಗಳ ನೆರವಿನಿಂದ ಜನಾಭಿಪ್ರಾಯ ಖರೀದಿಸಿದವರ್ಯಾರು? ಎನ್ನುವುದು ಎಲ್ಲರಿಗಿಂತಲೂ ಹೆಚ್ಚಾಗಿ ಸ್ವಯಂಘೋಷಿತ ದೇಶಭಕ್ತರಿಗಂತೂ ಸಂಪೂರ್ಣ ವಾಸ್ತವ,ಸತ್ಯದ ಅರಿವಿದೆ.
ಅದಕ್ಕೂ ಸಿದ್ಧಾಪುರ ತಾಲೂಕಿನ ತ್ಯಾರಸಿ-ಬೇಡ್ಕಣಿಯ ಚಳ್ಳೆವಟ್ಟಿ ಬಿಯರ್ ಬಾಂಡರಿಗೂ ಬಾದರಾಯಣ ಸಂಬಂಧವಿರಬಹುದು! ಅದರ ಕತೆ ಬಿಡಿ. ಇಲ್ಲಿಯ ವಿಶೇಶವೆಂದರೆ…….
ಬೇಡ್ಕಣಿ ಗ್ರಾಮಪಂಚಾಯತ್ ತ್ಯಾರಸಿ ಚಳ್ಳೆವಟ್ಟಿ ಮೈದಾನ ಬಹುವರ್ಷಗಳಿಂದ ಸ್ಥಳಿಯ ಯುವಕರ ನೆಚ್ಚಿನ ಕ್ರಿಕೆಟ್ ಮೈದಾನ.
ಇಲ್ಲಿ ಪ್ರತಿದಿನ, ವಾರ ಎನ್ನುವಂತೆ ಯುವಕರ ಕ್ರಿಕೆಟ್ ಮ್ಯಾಚ್ ನಡೆಯುತ್ತವೆ.
ಇಲ್ಲಿ ಆಡುವ ಕ್ರಿಕೆಟ್ಟಿಗರು ಬಿಯರ್ (ಕುಡಿಯುತ್ತಾರೋ?) ಬಾಟಲ್ ಮುಟ್ಟುತ್ತಾರೊ? ಇಲ್ಲವೋ ತಿಳಿದಿಲ್ಲ.
ಆದರೆ, ಈ ಕ್ರಿಕೆಟ್ ಮೈದಾನದ ಬಾಂಡರಿ ಲೈನ್ ಬಿಯರ್ ಬಾಟಲಿಗಳ ಬೇಲಿ, ಇಲ್ಲಿ ಸಿಕ್ಸ್ ಹೊಡೆಯುವವನು ಬಿಯರ್ ಬಾಂಡ್ರಿ ದಾಟಲೇಬೇಕು. 4 ಹೊಡೆಯುವವನು ಬಿಯರ್ ಬಾಂಡ್ರಿ ಮುಟ್ಟಲೇಬೇಕು.
ಹಗಲು ಕ್ರಿಕೆಟಿಗರು ಇಲ್ಲಿ ಬಿಯರ್ ಬಾಂಡ್ರಿ ವ್ಯಾಪ್ತಿಯೊಳಗೆ ಆಡುತ್ತಾರೆ. ಆದರೆ ರಾತ್ರಿ ಈ ಮೈದಾನದ ಎದುರಿನ ರಸ್ತೆಯಿಂದ ಸಾರ್ವಜನಿಕರು ಸಾಗುವುದು ಕಷ್ಟ. ಅಷ್ಟುಜನ ಗುಂಡೋಪಂಥರು ಇಲ್ಲಿ ಠಳಾಯಿಸುತ್ತಾರೆ.
ಇದು ಪಾವಗಡ ರಾಜ್ಯ ಹೆದ್ದಾರಿ, ಈ ಮೈದಾನದ ಕೂಗಳತೆಯಲ್ಲೆ ಸಿದ್ಧಾಪುರದ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯವಿದೆ.
ಮೈದಾನದಲ್ಲಿ ಆಡುವವರು ಬಿಯರ್ ಬೇಲಿ ದಾಟಲೇಬೇಕು, ದಾಟುತ್ತಾರೆ. ಆದರೆ ಇಲ್ಲಿಯ ಕಾಲೇಜು ವಿದ್ಯಾರ್ಥಿಗಳು,ಸಾರ್ವಜನಿಕರು, ಪ್ರಯಾಣಿಕರದ್ದ್ಯಾವ ಕರ್ಮ!
ಈ ಬಿಯರ್ ಬಾಂಡರಿ ದಾಟುವುದು ಎನ್ನುತ್ತಾರೆ ರಕ್ಷಣಾ ವೇದಿಕೆಯ ಯುವ ನಾಯಕ ಸಂಪಕಂಡದ ದಿವಾಕರ ನಾಯ.್ಕ
ಹಾಗಾಗಿ ಈ ಮೈದಾನದಲ್ಲಿ ಆಡುವವರು, ಈ ಕಾಲೇಜಿಗೆ ಹೋಗುವವರು, ಹಾಗೂ ರಾತ್ರಿ ಸಮಯದಲ್ಲಿ ಬಿಯರ್ ಸಮಾರಾಧನೆ ಮಾಡುವವರು ಯಾರ ಮಕ್ಕಳು ಎಂಬುದರ ಬಗ್ಗೆ ಸ್ಥಳಿಯರು ಗಮನಹರಿಸಬೇಕು. ಮತ್ತು ಬಿಯರ್ ಬಾಂಡರಿ ಮಾಡುವಷ್ಟು ಬಾಟಲ್ ಒಗೆದಿರುವ ಕುಡುಕರ ಬಗ್ಗೆಯೂ ಸ್ಪಲ್ಫಸಹಾನುಭೂತಿಯಿಂದಲೇ ಕಾನೂನು ಕ್ರಮದ ಎಚ್ಚರಿಕೆ ಕೊಡಿ ಎನ್ನುವುದು ಸಾರ್ವಜನಿಕರ ಆಗ್ರಹ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________

ಇದು ಸತ್ಯಾನಾ?