ನದಿ ತಿರುವು… ಮೂವರು ಹೀರೋಗಳು & ಜೀರೋಗಳು!!!

ನದಿತಿರುವು ಯೋಜನೆಗಳು ಉತ್ತರ ಕನ್ನಡ ಜಿಲ್ಲೆಯ ಬೇಡತಿ, ಅಘನಾಶಿನಿ, ಶರಾವತಿ ನದಿಗಳನ್ನು ತಿರುಗಿಸಲಿವೆ. ಈ ಯೋಜನೆಗಳ ಬಗ್ಗೆ ಹಿಂದಿನ ಶತಮಾನದಲ್ಲಿ ಪರಮಶಿವಯ್ಯ ಸಮೀತಿ ಸೂಚಿಸಿತ್ತು. ೯೦ ರಿಂದ ಈ ನಾಲ್ಕು ದಶಕಗಳಲ್ಲಿ ಎನೆಲ್ಲಾ ಬದಲಾವಣೆಗಳೂ ಆಗಿ ಹೋಗಿವೆ. ಆದರೆ, ಆದರೆ ನದಿ ತಿರುಗಿಸುವ ಬೃಹತ್‌ ಯೋಜನೆಗಳ ವಿಚಾರ ಬದಲಾಗಿಲ್ಲ!

ಶಾಲ್ಮಲಾ, ಅಘನಾಶಿನಿ, ಬೇಡ್ತಿ, ಶರಾವತಿಗಳು ಉತ್ತರಕನ್ನಡದ ಮೂಲಕ ಹರಿದು ಅರಬ್ಬೀ ಸಮುದ್ರ ಸೇರುತ್ತವೆ. ಇವುಗಳ ಹರಿಯುವಿಕೆ ಸರಿಸುಮಾರು ನೂರು ಕಿಲೋಮೀಟರ್ಗಳ ವ್ಯಾಪ್ತಿ. ಈ ನದಿಗಳ ಸ್ವರೂಪ ಬದಲಾಗಬಾರದು ಇವುಗಳಿಗೂ ಮೂಲಭೂತ ಹಕ್ಕುಗಳುಂಟು! ಎಂದು ಪ್ರತಿಪಾದಿಸಬಹುದಿತ್ತು!

ಆದರೆ ಆಗಿದ್ದು ಬೇರೆ…. ನದಿ- ನೀರು- ನಾಗರಿಕತೆಗಳ ಕಾರ್ಯಕಾರಿಣಿ ಸಂಬಂಧಗಳ ಹಿನ್ನೆಲೆಯಲ್ಲಿ ಯಾವ ನದಿಗಳನ್ನೂ ತಿರುಗಿಸಬಾರದು… ಆದರೆ ಬೊಮ್ಮಾಯಿ- ಮೋದಿ ಸಾಹೇಬರು ಹಾಗೆ ಹೇಳುತ್ತಿಲ್ಲ!

ಜೋಗದ ವಿಚಾರದಲ್ಲಿ ನೆಹರೂ ಪುಟವೊಂದರ ತುದಿ ಹರಿದು ಇಷ್ಟು ಹರಿದು ಹೋದರೆ… ಅಂದ ಕೆಡಬಹುದು ಆದರೆ ಆಕಾರ, ಚಂಧ! ಕೆಡಲ್ಲ ಈ ೫ ಪ್ರತಿಶತ ಮೂಲೆ ಕಳೆದುಕೊಂಡು ೯೫% ಜನರಿಗೆ ನೆರವಾಗುತ್ತೇವೆ ಎಂದಿದ್ದರು. ಈಗಲೂ ಹಾಗೆ ಮಲೆನಾಡಿನ ೨೦ ಸಾವಿರ ಜನರಿಗೆ ತೊಂದರೆ ಕೊಟ್ಟು ಬಯಲುಸೀಮೆಯ ೨೦ ಲಕ್ಷ ಜನರಿಗೆ ಜೀವಜಲ ಕೊಡುವ ನಿರ್ಧಾರವನ್ನು ಸರ್ಕಾರಗಳು ಮಾಡಿವೆ!

ಜನಪ್ರತಿನಿಧಿಗಳಲ್ಲಿ ಸಚಿವ ವೈದ್ಯ, ಶಾಸಕ ಭೀಮಣ್ಣ ನದಿ ತಿರುವಿಗೆ ವಿರೋಧವಾಗಿ, ಸಂಸದ ಬಸವರಾಜ್‌ ಬೊಮ್ಮಾಯಿ ನದಿ ತಿರುವು ಪರವಾಗಿ ಹೀರೋಗಳಾಗುತಿದ್ದಾರೆ. ವೈದ್ಯ ಕಾಗೇರಿಯವರಿಗೆ ನೀವು ಮೂವತ್ತು ವರ್ಷಗಳಿಂದ ಜನಪ್ರತಿನಿಧಿಯಾಗಿ ಏನು ಮಾಡುತಿದ್ದೀರಿ…? ಎಂದು ಪ್ರಶ್ನಿಸಿದರೆ… ಭೀಮಣ್ಣ ಸಂಸದ ಬೊಮ್ಮಾಯಿಗೆ ಹುಷಾರ್‌ ಎಂದು ಹೆದರಿಸಿದ್ದಾರೆ. ಬೊಮ್ಮಾಯಿ ನಾನೇನೂ ಕೇರ್‌ ಮಾಡಲ್ಲ ಎನ್ನುತ್ತಾ ತನ್ನ ಪ್ರಯತ್ನ ಮುಂದುವರಿಸುತ್ತೇನೆ ಎಂದಿದ್ದಾರೆ.

ಉತ್ತರ ಕನ್ನಡವನ್ನು ೩೦ ವರ್ಷಗಳಿಂದ ಗುತ್ತಿಗೆ ಪಡೆದಿದ್ದ ಅನಂತಕುಮಾರ ಹೆಗಡೆ ತಲೆಮರೆಸಿಕೊಂಡಿದ್ದಾರೆ. ದೇಶಪಾಂಡೆ ನಾಘರ್‌ ಕಾ…. ಎನಿಸಿಕೊಂಡಿದ್ದಾರೆ. ಉಪಾಯಗಾರ ಸಂಸದ ವಿಶ್ವೇಶ್ವರ ಹೆಗಡೆ ಬಾಲಸಿಕ್ಕ ಬೆಕ್ಕಿನಂತಾಗಿದ್ದಾರೆ!. ಪರ ವಿರೋಧವೇನೇ ಇರಲಿ ನದಿತಿರುವು ಯೋಜನೆಯಲ್ಲಿ ನಿಶ್ಚಿತವಾಗಿ ಬೊಮ್ಮಾಯಿ, ಮಂಕಾಳು ವೈದ್ಯ, ಭೀಮಣ್ಣ ಹೀರೋಗಳಾದರೆ…

ಮೂವತ್ತು ವರ್ಷಗಳಿಂದ ಉತ್ತರ ಕನ್ನಡ ಆಳಿದ ಅವಳೀ ಹೆಗಡೆಗಳು, ಹಿರಿಯ ಅಣ್ಣ ದೇಶಪಾಂಡೆ ಜೀರೋಗಳಾಗಿ ಕಾಣುತಿದ್ದಾರೆ… ನೀವೇನಂತೀರಾ…!?

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *