ಕೆರೆಮನೆಯವರ ಬರಹ- ಕಾಡುವ ಗರ್ಭ…

ಶ್ರೀದೇವಿ ಕೆರೆಮನೆಯವರ ಬರಹ-
ಕಾಡುವ ಗರ್ಭ…
“ಏಯ್, ಸರ್‍ಕಣೇ….
ರಸ್ತಿ ಮ್ಯಾನ್ ನಿಂತ್ಕುಂಡೆ ಸಾಯುಕ್ ಮಾಡಿ?”
ಹಿಂದಿನಿಂದ ಒಂದು ಕರ್ಕಶ ಧ್ವನಿ ಕೇಳಿ ಬೆಚ್ಚಿ ಬಿದ್ದಿದ್ದೆ.
ಹಿಂತಿರುಗಿದರೆ ಮಾನಸಿಕ ಅಸ್ವಸ್ಥೆಯಂತೆ ಕಾಣುವ ಹೆಂಗಸೊಬ್ಬಳು ದುರುಗುಟ್ಟುತ್ತಾ ನಿಂತಿದ್ದಳು.
ಆಕೆ ಏನು ಮಾಡುತ್ತಾಳೋ ಬಿಡುತ್ತಾಳೋ… ನನಗಂತೂ ಒಂದುಕ್ಷಣ ಮೈ ನಡುಗಿ ಹೋಯ್ತು.
ಹಾಗೆ ನೋಡಿದರೆ ಆಕೆ ಹೇಳಿದ್ದರಲ್ಲಿ ತಪ್ಪೇನೂ ಇರಲಿಲ್ಲ. ನಾನು ರಸ್ತೆಯ ಮೇಲೇ ನಿಂತು ಬಸ್‍ಗಾಗಿ ಕಾಯುತ್ತಿದ್ದೆ. ನಾನು ನೋಡುತ್ತಿರುವ ವಿರುದ್ಧ ದಿಕ್ಕಿನಿಂದೇನಾದgೂ ಬಸ್ ಬಂದರೆ, ಅಥವಾ ಯಾವುದಾದರೂ ಗಾಡಿ ಓವರ್ ಟೇಕ್ ಮಾಡಲೆತ್ನಿಸಿದರೆ ನಾನು ಖಂಡಿತಾ ಅಪಘಾತಕ್ಕೆ ಒಳಗಾಗುತ್ತಿದ್ದೆ. ಆದರೂ ಯಾಕೋ ಮುಜುಗರವೆನ್ನಿಸಿ ಸುತ್ತ ಮುತ್ತ ನೋಡಿದರೆ ಅಲ್ಲಿರುವ ಯಾರೆಂದರೆ ಯಾರೂ ನಮ್ಮತ್ತ ಲಕ್ಷಕೊಟ್ಟಿರಲಿಲ್ಲ.
ಆಕೆಯ ಮಾತನ್ನು ಸಹಜ ಎಂಬಂತೆ ಎಲ್ಲರೂ ಸ್ವೀಕರಿಸಿದ್ದರು. ಒಬ್ಬಳು ಮಾನಸಿಕ ಅಸ್ವಸ್ಥಳು ಯಾರ ಮೇಲಾದರೂ ರೇಗಿದರೆ ಸುತ್ತ ನಿಂತು ತಮಾಶೆ ನೋಡುವವರೇ ಅಧಿಕವಾಗಿರುವಾಗ ಯಾರೂ ಕೂಡ ಕುತೂಹಲಕ್ಕೆಂದೂ ನಮ್ಮತ್ತ ನೋಡದಿರುವುದು ನನಗೇ ಅಚ್ಚರಿಯೆನಿಸಿತು.
ಆ ದಿನ ಶಾಲೆಗೆ ಹೋದವಳೇ ನನಗಾದ ಅನುಭವ ತಿಳಿಸಿದೆ.
“ಪ್ರೇಮಾ ಮಳ್ಳಿ ಇರಬೇಕು… ಅವಳು ಹಾಗೇನೇ..” ನನ್ನ ಸಹೋದ್ಯೋಗಿಗಳೂ ನಿರ್ಲಿಪ್ತವಾಗಿ ಹೇಳಿದರು.
ಆ ಊರಿಗೆ ಅಲ್ಲಿ ಪರಿಸರಕ್ಕೆ ಹೊಸಬಳಾದ ನನಗೆ ಯಾಕೋ ಪ್ರೇಮಾಮಳ್ಳಿ ಕುತೂಹಲ ಹುಟ್ಟಿಸಿದ್ದಳು.
ಅದೆಲ್ಲಕ್ಕಿಂತ ಹೆಚ್ಚಾಗಿ ಹಿರಿಯ ಶಿಕ್ಷಕರೊಬ್ಬರು “ಎಲ್ಲಾದ್ರೂ ಅವಳೆದುರಿಗೆ ಈ ಊರಿನ ಹೆಸರು ಹೇಳಿ ಬಿಟ್ಟೀಯಾ…ಅಲ್ಲಿಗೆ £ನ್ನ ಕತೆ ಮುಗಿತು” ಎಂದೂ ಸೇರಿಸಿ ನನ್ನ ಕುತೂಹಲಕ್ಕೆ ಮತ್ತಷ್ಟು ರೆಕ್ಕೆ ಸೇರಿಸಿದ್ದರು. ಹಾಗೆಂದು ಅವಳ ಬಗ್ಗೆ ಕೇಳಿದರೆ ಮಾತ್ರ ‘ಪಾಪ ಬಿಡು, ಅವಳ ಬಗ್ಗೆ ಏನು ಹೇಳೋದು” ಎಂಬ ಕನಿಕರ, ಮರುಕದಲ್ಲಿಯೇ ಉತ್ತರ ಮುಗಿದು ಹೋಗುತ್ತಿತ್ತು.
ದಿನ ಕಳೆದಂತೆ ಹೊಸ ಊರು ಪರಿಚಿತವಾಯಿತು. ಊರಿನ ಜನ ಆತ್ಮೀಯರಾದರು. ಶಾಲಾ ವಾತಾವರಣ ಆಪ್ತವಾಯಿತು. ಸುತ್ತಲಿನ ಜನ ಹೆಚ್ಚಿನ ಸಂಪರ್ಕಕ್ಕೆ ಬಂದರು. ಬೆಳಿಗ್ಗೆ ನಾನು ಶಾಲೆಗೆ ಹೋಗುವ ಹೊತ್ತಲ್ಲಿ ಒಂದಲ್ಲ ಒಂದು ಅಂಗಡಿ ಬಾಗಿಲಲ್ಲಿ ಏನಾದರೂ ಗೊಣಗುತ್ತ ತಲೆತಗ್ಗಿಸಿ ಕಸಗುಡಿಸುತ್ತಿದ್ದ ಆಕೆ ಕೂಡ ಮೊದಲ ದಿನ ಕಂಡಂತೆ ಹೆದರಿಕೆ ಹುಟ್ಟಿಸುತ್ತಿಲ್ಲ.
ಎಲ್ಲೋ ಒಮ್ಮೊಮ್ಮೆ “ಶಾಲೆಗೆ ಹೋತೀ” ಎಂದು ರಾಗವಾಗಿ ಕೇಳಿ, ಕೊನೆಗೆ ಕೇಳಿದ್ದಕ್ಕೆ ಉತ್ತರಿಸುವ ಮುನ್ನವೇ ಅಲ್ಲಿಂದ ಹೊರಟು ಬಿಡುತ್ತಿದ್ದ ಆಕೆಯ ನಡೆ ಎಷ್ಟೋ ಸಲ ಅಚ್ಚರಿ ಎನ್ನಿಸುತ್ತಿತ್ತು, ಕೆಲವು ಸಲ ನಾರ್ಮಲ್ ಎಂದರೆ ಅಗದೀ ನಾರ್ಮಲ್ ಆಗಿರುತ್ತಿದ್ದವಳು ಎಷ್ಟೋ ಸಲ ಯಾರನ್ನೋ ದೊಡ್ಡ ಧ್ವನಿ ತೆಗೆದು ಬೈಯ್ಯುತ್ತ ಕ್ಯಾಕರಿಸಿ ಉಗಿಯುತ್ತ ಇಡಿ ವಾತಾವರಣವನ್ನೇ ರಾಣಾರಂಪ ಮಾಡಿ ಬಿಟ್ಟಿರುತ್ತಿದ್ದಳು.
ಅಷ್ಟಾದರೂ ಸುತ್ತಲಿನ ಜನ ಅದೊಂದು ಸಾಮಾನ್ಯ ಸಂಗತಿ ಎಂಬಂತೆ ಆಕೆಗೆ, ಆಕೆಯ ಬೈಗುಳಕ್ಕೆ ಹೊಂದಿಕೊಂಡು ಬಿಟ್ಟಿದ್ದರು. ಬೆಳಗಿನ ಹೊತ್ತು ತುಂಬಾ ಸ್ವಾಭಾವಿಕವಾಗಿ ವರ್ತಿಸುತ್ತಿದ್ದ ಆಕೆ ಮಧ್ಯದಲ್ಲಿ ಎಲ್ಲೋ ನೆತ್ತಿಗೇರಿದಂತೆ ಕೂಗಾಡುವುದು ದಿನನಿತ್ಯದಷ್ಟೇ ಸಹಜವಾಗಿ ಬಿಟ್ಟಿತ್ತು. ಆ ಊರಿನ ಬಸ್‍ಸ್ಟಾಂಡಿನಲ್ಲಿ ತನ್ನದೊಂದಿಷ್ಟು ಹರಕು ಬಟ್ಟೆಯೊಂದಿಗೆ ಬಿಡಾರ ಹೂಡಿದ್ದಳು.
ದಿನ ಕಳೆದಂತೆ ಆಕೆಯ ವಿಚಾರ ಗೊತ್ತಾಗತೊಡಗಿತು. ಒಂದು ಕಾಲದಲ್ಲಿ ಸುಂದರ ಹೆಂಗಸಾಕೆ.
ಯಾವುದೋ ಕಾರಣÀದಿಂದಾಗಿ ಒಂಟಿಯಾದವಳು. ಬಹುಶಃ ಅಷ್ಟರಲ್ಲಾಗಲೇ ಮನಸ್ಸು ನಿಧಾನಕ್ಕೆ ಸ್ಥಿಮಿತ ಕಳೆದುಕೊಳ್ಳತೊಡಗಿತ್ತು. ಅದನ್ನು ತಮ್ಮ ಲಾಭಕ್ಕಾಗಿ ¨ಳಸಿಕೊಂಡ ಡಾಕ್ಟರ್ ಎಂದು ಹೇಳಿಕೊಂಡ ಕಂಪೌಂಡರ್ ಒಬ್ಬರು ಆಕೆಯನ್ನು ಯದ್ವಾತದ್ವಾ ಬಳಸಿಕೊಂಡರು ಎನ್ನುವ ಮಾತಿದೆ. ವರ್ಷಕ್ಕೊಂದರಂತೆ ಆಕೆ ಹೆರುತ್ತಿದ್ದ ಮಕ್ಕಳನ್ನು ಮುಂಬೈ, ಗೋವಾ ಮುಂತಾದ ದೂರದೂರದ ಊರಿಗೆ ದತ್ತು ಕೊಡುವ ಲೆಕ್ಕದಲ್ಲಿ ಮಾರಿ ಕೈ ತುಂಬ ಹಣ ಮಾಡಿಕೊಂಡ.ಎಲ್ಲೋ ಒಂದು ಎರಡು ಸಾವಿರ ಆಕೆಯ ಕೈಲಿಟ್ಟರೆ ಮುಗಿಯಿತು.
ನನ್ನ ಶಾಲೆ ಇದ್ದ ಊರಿಗೂ ಆಕೆಯ ಯಾವುದೋ ಮಗುವನ್ನು ಕೊಡಲಾಗಿತ್ತಂತೆ. ಅದು ಹೇಗೋ ಆಕೆಗೆ ಗೊತ್ತಾಗಿ ಆ ಊರಿನ ಹೆಸರು ಕೇಳಿದ ಕೂಡಲೇ ಕೆರಳಿದಂತೆ ವರ್ತಿಸುತ್ತಿದ್ದಳಂತೆ. ಆದರೆ ವಯಸ್ಸು ಯಾರಪ್ಪನ ಗಂಟೂ ಅಲ್ಲ. ಆಕೆಗೆ ವಯಸ್ಸಾದ ಹಾಗೆ ಆಕೆ ಮತ್ತೆ ಬೀದಿಗೆ ಬೀಳಬೇಕಾಯಿತು. ಅದೂ ಅಲ್ಲದೆ ಪ್ರತೀ ವರ್µ ಹೊರು,ಹಡೆ ಹಾಗೂ ಕಳೆದುಕೊಳ್ಳು ಎನ್ನುವುದು ಆಕೆಯ ಮನಸ್ಥಿತಿಯನ್ನು ಸಾಕಷ್ಟು ಹಾಳು ಮಾಡಿತ್ತು.
ಕಳೆದುಕೊಂಡ ಮಕ್ಕಳ ನೆನಪು ಆಕೆಯ ಮನಸ್ಸನ್ನು ಆಗಾಗ ಹಾಳು ಮಾಡುತ್ತಿತ್ತು. ಎಲ್ಲಾದರೂ ತನ್ನ ಯೌವನ ಕಾಲದಲ್ಲಿ ತನ್ನನ್ನು ಬಳಸಿಕೊಂಡ ಆ ಊರಿನ ಹಲವಾರು ಹಿರಿತಲೆಗಳನ್ನು ಕಂಡಾಕ್ಷಣ ಭಾವನೆಗಳು ಉದ್ರೇಕಗೊಂಡು ಕೆರಳುತ್ತಿದ್ದಳು. ಆದರೆ ಆಕೆಯ ತಾಯಿಯಂತಹ ಮನಸ್ಸು ಮಾತ್ರ ಹಾಗೇ ಇದೆ. ತನಗೇ ಹೊಟ್ಟೆಗಿಲ್ಲದ ಹೊತ್ತಲ್ಲೂ ಕೈಲಿದ್ದ ತುತ್ತನ್ನು ಬೀದಿ ನಾಯಿಗೆ ಹಾಕಿ ತಾನು ಉಪವಾಸ ಕುಳಿತಿದ್ದನ್ನು ನಾನು ಹಲವಾರು ಸಲ ಕಂಡಿದ್ದೇನೆ. ಇಂದಿಗೂ ಆಕೆ ಯಾರ ಎದುರೂ ಕೈಚಾಚುವುದಿಲ್ಲ. ಅಂಗಡಿಗಳ ಎದುರು ಕಸಗುಡಿಸುತ್ತಾಳೆ. ಅವರು ಕೊಟ್ಟ ಹಣದಿಂದ ಏನನ್ನಾದರೂ ಕೊಂಡು ತಿನ್ನುತ್ತಾಳೆ. ತನಗೆ ಊಟ ಹಾಕುವ ಎರಡು ಮೂರು ಹೋಟೆಲ್‍ಗಳ ಎದುರು ಬೆಳಿಗ್ಗೆ ಬೆಳಿಗ್ಗೆನೇ ಕಸಗುಡಿಸಿ ಸ್ವಚ್ಛ ಮಾಡುತ್ತಾಳೆ. ಅವಶ್ಯಕತೆ ಬಿದ್ದರೆ ಮೀನನ್ನು ಕೊಯ್ದು ಕೊಡುತ್ತಾಳೆ, ಅಂತಹ ಅನಿವಾರ್ಯತೆ ಇದ್ದರೆ ಪಾತ್ರೆಗಳನ್ನೂ ತೊಳೆದಿಡುತ್ತಾಳೆ. ‘ಪ್ರೇಮಾಮಳ್ಳಿ ಪಾತ್ರೆ ತೊಳೆದರೆ ಅದು ಹೊಸದರಂತೆ ಕಾಣುತ್ತದೆ’ ಎಂದು ಹೋಟೆಲ್ ಮಾಲಿಕರುಗಳೆ ಅಭಿಪ್ರಾಯ ಪಡುತ್ತಾರೆ. ಒಂದೆರಡು ದಿನ ಆರೋಗ್ಯ ಸರಿ ಇಲ್ಲದೇ ಮಲಗಿದರೂ ‘ಪ್ರೇಮಾ ಮಲ್ಳಿ ಎಲ್ಲೋದ್ಲು? ಕಾಣುದೇ ಇಲ್ಲ’ ಎಂದು ಊರಿನ ಯಾರಾದರೊಬ್ಬರು ಹುಡುಕಿ ಬರುತ್ತಾರೆ.
ಮತ್ಯಾರಾದರೂ ಊಟ ತಂದಿಡುತ್ತಾರೆ. ಹಾಗಂತ ಆಕೆ ಅವರ ಋಣ ಇಟ್ಟುಕೊಳ್ಳುವುದಿಲ್ಲ. ಅವರ ಮನೆಯ ಅಂಗಳವನ್ನು ಸಗಣಿ ಹಾಕಿ ಸಾರಿಸಿಕೊಟ್ಟು ಒಪ್ಪ ಮಾಡಿಕೊಟ್ಟು ಬರುವವಳೇ. ಹೀಗಾಗಿ ಆಕೆ ಯಾರ ಮನೆಗೆ ಹೋದರೂ ಯಾರೂ ಆಕೆಯನ್ನು ‘ಹೋಗು’ ಎನ್ನುವುದಿಲ್ಲ. ಆಕೆ ರಸ್ತೆಯಲ್ಲಿ ನಿಂತು ಕೂಗಾಡಿದರೂ ಯಾರೂ ಒಂದು ಮಾತೂ ಹೇಳುವುದಿಲ್ಲ. ಎಲ್ಲೋ ಆಕೆ ಹೆಚ್ಚು ಕೆರಳಿದರೆ ಯಾರಾದರೊಬ್ಬರ ಮನೆಯ ಹೆಂಗಸು ಬಂದು ಮನೆಗೆ ಕರೆದೊಯ್ದು ಸಮಾಧಾನ ಮಾಡುತ್ತಾರೆ. ಆದರೂ ಯೌವನದ ದಿನಗಳಲ್ಲಿ ಹೇಗೆ ಹೇಗೋ ಬಳಸಲ್ಪಟ್ಟು, ಹೆಣ್ಣು ಎಂಬ ಕಾರಣಕ್ಕೆ, ಆಕೆಯೊಳಗಿರುವ ಗರ್ಭದ ಕಾರಣಕ್ಕೆ ದೌರ್ಜನ್ಯಕ್ಕೆ ಒಳಗಾಗಿ, ಕೊನೆಗೆ ಬೀದಿ ಪಾಲಾದ ಪ್ರೇಮಾ ಮಳ್ಳಿ ಆ ಊರು ಬಿಟ್ಟು ಬಂದರೂ ಎಷ್ಟೋ ಸಲ ನೆನಪಿನಲ್ಲಿ ನುಸುಳಿ ನಿಟ್ಟುಸಿರುಡುವಂತೆ ಮಾಡುತ್ತಾಳೆ. ‘ಶಾಲೆಗೆ ಹೋತಿ’ ಎಂಬ ಆಕೆಯ ಪ್ರಶ್ನೆ ಮತ್ತು ಉತ್ತರಕ್ಕೆ ಕಾಯದೆ ಹೊರಟು ಬಿಡುವ ಆಕೆಯ ದಿವ್ಯ ನಿರ್ಲಕ್ಷ ನನ್ನನ್ನು ಕಾಡುತ್ತಲೇ ಇರುತ್ತದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ‌ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆಗಳಲ್ಲಿ ನಿರಂತರ ಮಳೆಯಾಗಿದೆ. ಇದರ ಪರಿಣಾಮ ಶಿರಸಿ-ಅಂಕೋಲಾ ಮಾರ್ಗದ ಮಧ್ಯೆ ಗುಡ್ಡ...

Recommended For You

About the Author: Kanneshwar Naik

Leave a Reply

Your email address will not be published. Required fields are marked *