
- ಸೂರ್ಯನ ತೇಜದಲ್ಲಿ ಆಗದ ಕೆಲಸ ಸುವರ್ಣ ನಾಣ್ಯಗಳ ಪ್ರತಿಬಿಂಬದ ಕಾಂತಿಯಲ್ಲಾಗುತ್ತದೆ.(ಪುರುವಿಗೆ ಯಯಾತಿ ಹೇಳುವ ಮಾತು)
- ಬೆಳಕಿಲ್ಲದ ದಾರಿಯಲ್ಲಿ ಹೋಗಬಹುದು,ಕನಸುಗಳಿಲ್ಲದ ದಾರಿಯಲ್ಲಿಹೇಗೆ ಹೋಗುವುದು?
- ಕಾರಣವಿಲ್ಲದೆ ಬಲಿದಾನ ಮಾಡುವುದು ವಿಕೃತಿಯ ಲಕ್ಷಣ
- ನಾನು ಕಲ್ಲನ್ನು ಮಾತ್ರ ಒಗೆಯಬಲ್ಲೆ ಅದೆಬ್ಬಿಸಿದ ಅಲೆಗಳ ಮೇಲೆ ನನಗೆ ಅಧಿಕಾರವಿಲ್ಲ.
- ತ್ಯಾಗದ ಅತಿರೇಕವೂ ಒಂದು ಮೋಹ
- ನೀತಿಯೆಂದರೆ ಸಾಮಾನ್ಯ ಜನತೆ ತನ್ನ ರಕ್ಷಣೆಗಾಗಿ ಕಟ್ಟಿಕೊಂಡ ಬಂಧನ
ಇಂಥ ಸತ್ಯದ, ಸತ್ವಗಳ ಸಾಲುಗಳ ನಡುವಿನ ಮೌನ, ವಿವೇಕಗಳಲ್ಲಿ ಕಾರ್ನಾಡ್ ನಿತ್ಯ ನಮ್ಮೊಂದಿಗೆ ಬದುಕಿರುತ್ತಾರೆ.
ಮತೀಯವಾದಿಗಳ ಅಧಿಕಾರಲಾಲಸೆಯ ದುರಾಸೆಯ ಮೂಲಭೂತವಾದಿ ದುಷ್ಟ ಚಿಂತನೆಗಳ ಅವಾಂತರಕಾರಿ ದುಷ್ಟಪರಿವಾರಕ್ಕೆ ದುಸ್ವಪ್ನವಾಗಿ ಬದುಕಿನ ಕೊನೆಉಸಿರಿರುವವ ವರೆಗೂ ಸಾಹಿತ್ಯ, ಸಾಂಸ್ಕøತಿಕ ಲೋಕದ ಐಕಾನ್ ಆಗೇ ಮೆರೆದ ಕಾರ್ನಾಡ್ ರ ಮೌಲ್ಯಯುತ ಬದುಕಿಗೆ, ಅವರ ದಿವ್ಯ ನೆನಪಿಗೆ ಅವರದೇ ಅಕ್ಷರಗಳು ಸಮರ್ಪಿತ
-ಕನ್ನೇಶ್,
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
