
ರೈತ ದೇಶದ ಬೆನ್ನೆಲುಬು ಎಂದು ಭಾಷಣ ಬೀಗಿದರೆ ಸಾಕೆ| ನೋವುಗಳೇ ಗುಡುಗಿ ರೈತನ ಕಣ್ಣೀರು ಮಳೆಯಾಗಿ ಹರಿಯುವುದು ಯಾಕೆ|| ಮೂರು ಹೊತ್ತು ಅನ್ನವೇ ಬೇಕು ಪ್ರತಿಯೊಬ್ಬರ ಬದುಕಿನ ನಾಳೆಗೆ| ಧಾವಿಸಿ ಬನ್ನಿರಿ ಎಲ್ಲರೂ ಒಗ್ಗಟ್ಟಾಗಿ ಭವಿಷ್ಯದ ಏಳ್ಗೆಗೆ|| ಮುಗಿಲು ಮುಟ್ಟುವವರೆಗೂ ಕಾವು ಹೋರಾಡಿ ಶ್ರಮದ ಗೆಲುವಿಗೆ| ಅನ್ಯಾಯ ದೌರ್ಜನ್ಯಗಳ ತಡೆಗೆ ನಿಲ್ಲಿ ನೇಗಿಲ ಯೋಗಿಯ ನೆರವಿಗೆ…ಒಪ್ಪತ್ತು ಗಂಜಿಗೆ ದಿನವಿಡೀ ದುಡಿದು ಬೆವರಲ್ಲಿ ಮೈ ಬಸಿಯುತ್ತಿರುವನು| ಕೇಳುವವರಿಲ್ಲದೆ ಇವನ ಪಾಡು ಹಾಡುಹಗಲೇ ಕುಸಿದು ಕುಳಿತಾನು|| ಕೀಟನಾಶಕ ರಸಗೊಬ್ಬರ ವಿದ್ಯುತ್ ನೀರು ದುಬಾರಿ ಪರಿಕರ| ಭರವಸೆ ನೀಡಿದ ಸರಕಾರ ಸಹಾಯಧನ ಕಡಿತಗೊಳಿಸಿ ಹರೋಹರ|| ಕಷ್ಟ ನಷ್ಟಗಳ ಆಗರ ಜೀವನವೇ ಇಲ್ಲಿ ಅತಿ ಭಾರ| ಪ್ರತಿಭಟಿಸಿ ಸಿಡಿದೆದ್ದು ನಿಂತರೆ ರೈತ ನಾಡಿಗೆ ನಾಡೇ ಹಾಹಾಕಾರ…ಅತಿವೃಷ್ಟಿ ಅನಾವೃಷ್ಟಿ| ಬಡತನವೇ ಇಲ್ಲಿ ಪಿತ್ರಾರ್ಜಿತ ಆಸ್ತಿ || ಅಸ್ಥಿರ ಮಾರುಕಟ್ಟೆಯ ವಸತಿ ವೈಜ್ಞಾನಿಕ ಸಂಸ್ಕರಣೆಯು ನಾಸ್ತಿ|| ಖರ್ಚು ವೆಚ್ಚವಾಗಿ ಅಗಣಿತ ಬೆಂಬಲ ಬೆಲೆಯಿಲ್ಲದೆ ಅತ್ತಿತ್ತ| ಮಧ್ಯವರ್ತಿಯ ಹಾವಳಿ ವಿಪರೀತ ರಾಜಕೀಯ ಇಚ್ಛಾಶಕ್ತಿಗಿದೆ ಕೊರೆತ|| ಬರಗಾಲದ ಬರೆ ತಾಳದ ಭಾದೆ ಸಾಲದ ಮೊರೆ| ದೀರ್ಘಕಾಲ ಕಿರುಕುಳದ ಹೊರೆ ಕೃಷಿ ಪ್ರಗತಿಗೆ ಓಗೊಡಲಿ ಈ ಕರೆ….*ಬಸವರಾಜ ಕಾಸೆ* ಮು| ಪೋ| ದೇವಾಪೂರ ತಾ| ಜಿ| ವಿಜಯಪುರ ಪಿನ್ ಕೋಡ್ 586125 ಮೊಬೈಲ್ ಸಂಖ್ಯೆ 7829141150 ಮಿಂಚಂಚೆ pradeepbasu40@gmail.comReplyForward |
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
