ನನ್ನವ್ವ-ನನ್ನಮಗಳು

ನನ್ನವ್ವ-ನನ್ನಮಗಳು

ಧೋಗುಡುವ ಶ್ರಾವಣದ ಮಳೆ
ಮನೆ ಮುಂದಿನ ಮೊಣಕಾಲಿನ ನೀರಲಿ
ಕುಪ್ಪೆ ಹಾರುತ್ತಿರುವ ಮಗಳು ಕಾಲು ಕೆಸರು
ಚುರುಕು ಕಾಲಿನ ಮಗಳ ಜತೆ ನೆನಪಾಗಿ
ಬಂದವಳು ಅಮ್ಮ
ಹೀಗೆಯೇ ಚುರುಕು ಆಕೆ
ಕಂಬಳಿಕೊಪ್ಪೆಯ ಹೊದ್ದು ಮೊಣಕಾಲಿನ ಮೇಲೆಕಟ್ಟಿದ ಸೀರೆ
ಕೆಸರಿನಲ್ಲಿ ಎತ್ತಲಾಗದ ಕಾಲನ್ನು ಎತ್ತಿಡುತ್ತ
ನೀರನ್ನು ಚಿಮ್ಮುತ್ತ ಸಸಿ ನೆಡುತ್ತ
ನಡೆಯುವ ನನ್ನವ್ವ ಕುಂಟೆಬಿಲ್ಲೆ ಚಿಮ್ಮವ ಬಾಲೆಯಾಗುತ್ತಾಳೆ.
ಇವಳ ಚುರುಕು ನೋಡಿ ಪುಟಬಾಲ್
ಆಟಗಾರರೂ ನಾಚಬೇಕು
ನನ್ನಪ್ಪನ ಸಿಟ್ಟು ಸೆಡವುಗಳ ನಡುವೆ
ಕೈ ಊರದೇ ಹೊಯ್‍ಗೆ ಗದ್ದೆಯಲ್ಲಿ ಸಸಿನೆಟ್ಟು ಮುಗಿಯುವುದರೊಳಗೆ ಕೈಕಾಲುಗಳಲ್ಲಿ
ಎರೆ ಮಣ್ಣು ತಿಂದು ಚಿತ್ರ-ವಿಚಿತ್ರ ಚಿತ್ತಾರ. .
ರಾತ್ರಿಯಿಡೀ ನಿದ್ದೆ ಬಾರದ ಅಮ್ಮನ
ದನಿಯಲಿ ಸಣ್ಣನೆಯ ನರಳಾಟ
ಗದ್ದೆಯಲಿ ಅಪ್ಪನಿಗೆ ಸರಿಸಮನಾಗಿ ದುಡಿದು
ದನಕರುಗಳಿಗೆ ಹಸಿರುಹುಲ್ಲು ಕೊಯ್ದು… ನಮಗಾಗಿ
ಕಳಲೆ, ಅಣಬೆ, ಏಡಿ, ಮೀನು; ಕೆಸುವಿನ ಸೊಪ್ಪು ತಂದು
ಬಡಿಸುತ್ತಿದ್ದವು ಅವ್ವನ ದಣಿವರಿಯದ ಚಿತ್ತಾರದ ಕೈಗಳು
ನಗರದ ಕಾಂಕ್ರೆಟ್ ಕಾಡಿನಲ್ಲಿ ಕಳಲೆ ಅಣಬೆ ಕೆಸುವಿನ ಸೊಪ್ಪು ಏಡಿ ಮೀನುಗಳನ್ನು ಅರಸಿ ಆರಿಸಿ ತಿನ್ನವಾಗ
ಒಗರಾಗಿ ರುಚಿಯಾಗಿ ಊಟದ ತಟ್ಟೆಯ
ಜತೆ ಅಮ್ಮ ಆಗಾಗ ಹಸಿರು
ಈಗ ನನ್ನ ಮಗಳು ಮಳೆಯಲ್ಲಿ ತೊಯ್ದು ತೊಪ್ಪೆಯಾಗಿಕೆಸರಲಿ ದಣಿವರಿಯದೇ.
.ಆಟವಾಡಿ. .ಬಂದವಳಿಗೆಸ್ನಾನ ಮಾಡಿಸಿ ಮೈ ಒರೆಸಿ ನೋಡುತ್ತೇನೆ..ಉಗುರು ..ಕಾಲುಗಳ ಬಾತಿನಲ್ಲಿ
ಅಲ್ಲಲ್ಲಿ ಎರೆಹುಳುಗಳು ಚಿತ್ತಾರ ಬಿಡಿಸಿವೆ.

*ಎಂ.ಎಚ್. ನಾಯ್ಕ ಕಾನಗೋಡ್
9886253409

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *