ಕಾಯ್ಕಿಣಿ ಜಲಕ್ -02

ಮಾನವೀಯ ಸಂವೇದನೆಗೆ ಜಯಂತ್‍ರಿಗೆ (ಕಾಯ್ಕಿಣಿ) ಜಯಂತ್ ಮಾತ್ರ ಸಾಟಿ.
ಒಮ್ಮೆ ಹೀಗೊಂದು ತಮಾಸೆಯ ಉದಾಹರಣೆ ಹೇಳಿದರು.
ಬೆಂಗಳೂರಿನಲ್ಲಿ ಒಂದು ಮದುವೆಗೆ ಹೋಗಿದ್ದರಂತೆ ಆ ಮದುವೆಯ ವಧು- ವರರಿಬ್ಬರೂ ಜಯಂತ್ ಅಭಿಮಾನಿಗಳಂತೆ.
ಮದುವೆ ಮಂಟಪದ ಸಭಾಭವನದಲ್ಲಿ ಎರಡ್ನೂರು-ಮನ್ನೂರಕ್ಕೂ ಮಿಕ್ಕಿಜನರಿದ್ದರಂತೆ, ಬಹತೇಕರ್ಯಾರೂ ಪರಸ್ಪರ ಮಾತುಕತೆ, ಉಭಯ ಕುಶಲೋಪರಿಗಳ ಪರಿವೆಯೇ ಇಲ್ಲದೆ ಮ(ಮು)ಗುಮ್ಮಾ
ಗಿದ್ದರಂತೆ!
ಆಮೇಲೆ ತಿಳಿದ ಸತ್ಯವೇನೆಂದರೆ, ಆ ಮದುವೆಯ ಜೋಡಿ ಫೇಸ್‍ಬುಕ್ ಮೂಲಕ ಬುಕ್ ಆಗಿದ್ದಂತೆ! ಅಲ್ಲಿ ಸೇರಿರುವ ಬಹುತೇಕರೆಲ್ಲ ಫೇಸ್‍ಬುಕ್ ಸ್ನೇಹಿತರಂತೆ!
ಆಧುನಿಕ ಇಂಟರ್‍ನೆಟ್,ಫೇಸ್‍ಬುಕ್‍ಗಳೆಲ್ಲಾ ಸಂವೇದನೆರಹಿತ ಸ್ನೇಹ ಸಂಬಂಧಗಳನ್ನು ಸೃಷ್ಟಿಸುತ್ತಿವೆ ಎನ್ನುವುದು ಅವರ ಮಾತು !
ಅಂದಹಾಗೆ ಅವರು ಈಗಲೂಫೇಸ್ ಬುಕ್‍ನಲ್ಲಿಲ್ಲ.
ಎಲ್ಲರ ಮನೆ ದೋಸೆನೂ ತೂತೆ!
ಬಹಳಷ್ಟು ಪಾಲಕರು ತೊಂದರೆ, ಸಮಸ್ಯೆ ತಾಪತ್ರಯಗಳಲ್ಲೇ ಇರುತ್ತಾರೆ. ಆದರೆ ಅವರು ತಮ್ಮ ತೊಂದರೆ ಸಮಸ್ಯೆಗಳನ್ನು ಮಕ್ಕಳ ಎದುರಿಗೆ ತೋರಿಸಿಕೊಂಡರೆ ‘ಮಗುಮನಸು’ ಘಾಶಿಯಾಗುತ್ತದೆ. ವಿಶೇಷವೆಂದರೆ, ನನಗೆ ನನ್ನ 20-25ನೇ ವಯಸ್ಸಿನವರೆಗೂ ನಮ್ಮ ಮನೆಯಲ್ಲೂ ತೊಂದರೆ-ತಾಪತ್ರಯಗಳು ಇರಲೇ ಇಲ್ಲ ಎಂದುಕೊಂಡಿದ್ದೆ.
ಆ ನಂತರ ನನಗಾದ ದಿವ್ಯಾನುಭವವೇನೆಂದರೆ, ನಾವು ಚಿಕ್ಕವರಿರುವಾಗ ನಮ್ಮ ತಂದೆ ತಾಯಿ ಎಂದೂ ನಮ್ಮೆದುರು ಜಗಳವಾಡಿದ್ದೇ ಇಲ್ಲ. ಮಕ್ಕಳೆದುರು ನಮ್ಮ ಅಸಮಾಧಾನ, ಅತೃಪ್ತಿ, ರಾಗದ್ವೇಷಗಳನ್ನುತೋರಿಸಿಕೊಳ್ಳಬಾರದು ಎನ್ನುವ ವಿವೇಕ ನಮ್ಮ ಪಾಲಕರಿಗಿತ್ತು. ಹಾಗಾಗಿ ನಮಗೆ ಈ ಎಲ್ಲರ ಮನೆಯ ಸಮಸ್ಯೆ ನಮ್ಮನೆಯಲ್ಲೂ ಇರಹುದೆಂಬ ಅನುಮಾನವೂ ಇರಲಿಲ್ಲ. (ಎಂದರು)
ಲೋಕದ ಜಂಜಡಗಳನ್ನು ಸಣ್ಣ ವಯಸ್ಸಿನ ಮಕ್ಕಳ ಮೇಲೆ ಹೇರಬಾರದು ಎನ್ನುವ ಸಲಹೆ ಅವರದ್ದು.
ನಿಷ್ಠೂರತೆ
ಲೋಕದ ದೋಷಗಳನ್ನು ಬರೆಯುವವರು ಮಾತಿನಲ್ಲಿ ಖಂಡಿಸುವವರು ಅತಿವಿರಳ. ಜಯಂತ್ ಕಾಯ್ಕಿಣಿ ಕೂಡಾ ಸಾಧ್ಯವಾದಷ್ಟು ವಿವಾದಗಳಿಂದ ದೂರವಿರಲು ಪ್ರಯತ್ನಿಸುತ್ತಾರೆ.
ಆದರೆ 2009 ರಲ್ಲಿ ಲೋಕಸಭೆಗೆ ಚುನಾವಣೆ ನಡೆಯಿತು ನೋಡಿ, ಆ ಚುನಾವಣೆ ಮುನ್ನ ಉತ್ತರಕನ್ನಡ ಬಿ.ಜೆ.ಪಿ ಅಭ್ಯರ್ಥಿ ಅನಂತ್‍ಕುಮಾರ್ ಹೆಗಡೆ ತನ್ನ ಲಾಗಾಯ್ತಿನ ಕೊಳಕು ರಾಜಕಾರಣದ ಹೇಳಿಕೆಯಾದ ‘ನನಗೆ ಮುಸ್ಲಿಂರ ಮತಗಳು ಬೇಡ’ ಎಂಬ ವಿವೇಕ ಶೂನ್ಯನ ಕೃತ್ಯವನ್ನು ಮತ್ತೆ ಬಹಿರಂಗವಾಗಿ ಹೇಳಿ ಮುಗ್ದರು, ಮೂರ್ಖರು ಆದ ಜನಸಾಮಾನ್ಯರ ಮತಕಬಳಿಸುವ ರಾಜಕಾರಣ ಮಾಡಿದ್ದರು!
ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಅದನ್ನು ನೇರವಾಗಿ ಖಂಡಿಸಿದ ಜಯಂತ್, ಅನಂತಕುಮಾರರ ಈ ವಿಭಜಕ ಹೇಳಿಕೆ ಬಾಲಿಷವಷ್ಟೇ ಅಲ್ಲ ಅಸಹ್ಯ ಕೂಡಾ, ಯಾವ ರಾಜಕಾರಣಿ ಯಾರ ಮತವನ್ನೂ ಕೇಳಬಹುದು , ಆದರೆ ಒಂದು ಸಮುದಾಯದ ಮತ ನನಗೆ ಬೇಡ ಎನ್ನುವ ಹಿಂದೆ ದಾಷ್ಟ್ಯ, ಪ್ಯಾಸಿಸಮ್ ಕೆಲಸ ಮಾಡುತ್ತಿರುತ್ತದೆ. ಹಾಗಾಗಿ ನಮಗೆ ವಿಭಜಕ ರಾಜಕಾರಣ, ವಿಭಜಕ ರಾಜಕೀಯ ಬೇಡ ನಮಗೀಗ ಬೇಕಾಗಿರುವುದು ಬಂಧುತ್ವವೇ ಹೊರತು ಹಿಂದುತ್ವವಲ್ಲ ನಮಗಿಂದು ಮಮತೆ, ಸಮತೆಗಳು ಬೇಕಾಗಿವೆ. ರಾಜಕಾರಣಿಗಳು ನಮ್ಮ ಸಹಿಷ್ಣುತೆಯನ್ನು ಹಾಳುಮಾಡಬಾರದು ಎಂದು ಖಡಾಖಂಡಿತವಾಗಿ ಅನಂತಕುಮಾರರಹೇಳಿಕೆ,ವರ್ತನೆಯನ್ನು ಖಂಡಿಸಿದ್ದ(ರಂತೆ)ರು.
‘ರಾಜಕಾರಣಿಗಳಿಗೆ ಅಧಿಕಾರವಿರುತ್ತದೆ ಆದರೆ ಕನಸುಗಳಿರುವುದಿಲ್ಲ ಕವಿ, ಸಾಹಿತಿಗಳಿಗೆ ಕನಸುಗಳಿರುತ್ತವೆ ಆದರೆ ಅಧಿಕಾರವಿರುವುದಿಲ್ಲ’ಇದು ಡಾ.ಸರಜೂ ಕಾಟ್ಕರ್ ಹೇಳಿಕೆ. ಇಂಥದ್ಧೇ ಅಭಿಪ್ರಾಯದ ನಯವಾದ ಹೇಳಿಕೆಗಳನ್ನು ಅನೇಕ ಬಾರಿಜಯಂತ್ ನೀಡಿದ್ದಾರೆ. ಈ ವರ್ಷದ 18 ನೇ ಉತ್ತರಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಅಂಕೋಲಾದಲ್ಲಿ ನಡೆದಿದ್ದಾಗ ಸಮಾರೋಪ ಸಮಾರಂಭಕ್ಕೆ ಸಚಿವಆರ್.ವಿ.ದೇಶಪಾಂಡೆ ಸರಿಯಾದ ಸಮಯಕ್ಕೆ ಬಂದಿದ್ದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆತುರದಿಂದ ಸಭೆ ಮುಗಿಯುವ ಮೊದಲೇನಿರ್ಗಮಿಸಿದರು. ಸಚಿವರೊಂದಿಗೆ ಅವರೊಂದಿಗಿನ ಪಟಾಲಂ ಜಾಗಖಾಲಿ ಮಾಡಿತು. ಈ ಮಹಾ ನಿರ್ಗಮನದ ನಂತರ ಜಯಂತ್ ನಿರಾಳರಾದಂತೆ ಕಂಡರು. ದೇಶಪಾಂಡೆಯವರು ಅವರ ಪಟಾಲಂನ ವರ್ತನೆಯನ್ನು ಜಯಂತ್ ಅಭಿಮಾನಿ ಸಾಹಿತ್ಯಾಸಕ್ತರು ವಿರೋಧಿಸಿದರು.
ಆದರೆ ಜಯಂತ್ ಚುಟುಕಾಗಿ ದೇಶಪಾಂಡೆಯವರೂ ಕೊನೆಯವರೆಗೆ ಕುಳಿತಿದ್ದರೆ ಚೆನ್ನಾಗಿರುತ್ತಿತ್ತೇನೊ….. ಎನ್ನುವಂತೆ ಮಾತನಾಡಿದರು. ಆದರೆ ತಮ್ಮ ಮಾತನ್ನೂ ದೇಶಪಾಂಡೆ ಕೇಳಲೇಬೇಕೆಂಬ ಹಕ್ಕೊತ್ತಾಯ ಮಾಡಲಿಲ್ಲ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *