ಕಾಯ್ಕಿಣಿ ಜಲಕ್ -02

ಮಾನವೀಯ ಸಂವೇದನೆಗೆ ಜಯಂತ್‍ರಿಗೆ (ಕಾಯ್ಕಿಣಿ) ಜಯಂತ್ ಮಾತ್ರ ಸಾಟಿ.
ಒಮ್ಮೆ ಹೀಗೊಂದು ತಮಾಸೆಯ ಉದಾಹರಣೆ ಹೇಳಿದರು.
ಬೆಂಗಳೂರಿನಲ್ಲಿ ಒಂದು ಮದುವೆಗೆ ಹೋಗಿದ್ದರಂತೆ ಆ ಮದುವೆಯ ವಧು- ವರರಿಬ್ಬರೂ ಜಯಂತ್ ಅಭಿಮಾನಿಗಳಂತೆ.
ಮದುವೆ ಮಂಟಪದ ಸಭಾಭವನದಲ್ಲಿ ಎರಡ್ನೂರು-ಮನ್ನೂರಕ್ಕೂ ಮಿಕ್ಕಿಜನರಿದ್ದರಂತೆ, ಬಹತೇಕರ್ಯಾರೂ ಪರಸ್ಪರ ಮಾತುಕತೆ, ಉಭಯ ಕುಶಲೋಪರಿಗಳ ಪರಿವೆಯೇ ಇಲ್ಲದೆ ಮ(ಮು)ಗುಮ್ಮಾ
ಗಿದ್ದರಂತೆ!
ಆಮೇಲೆ ತಿಳಿದ ಸತ್ಯವೇನೆಂದರೆ, ಆ ಮದುವೆಯ ಜೋಡಿ ಫೇಸ್‍ಬುಕ್ ಮೂಲಕ ಬುಕ್ ಆಗಿದ್ದಂತೆ! ಅಲ್ಲಿ ಸೇರಿರುವ ಬಹುತೇಕರೆಲ್ಲ ಫೇಸ್‍ಬುಕ್ ಸ್ನೇಹಿತರಂತೆ!
ಆಧುನಿಕ ಇಂಟರ್‍ನೆಟ್,ಫೇಸ್‍ಬುಕ್‍ಗಳೆಲ್ಲಾ ಸಂವೇದನೆರಹಿತ ಸ್ನೇಹ ಸಂಬಂಧಗಳನ್ನು ಸೃಷ್ಟಿಸುತ್ತಿವೆ ಎನ್ನುವುದು ಅವರ ಮಾತು !
ಅಂದಹಾಗೆ ಅವರು ಈಗಲೂಫೇಸ್ ಬುಕ್‍ನಲ್ಲಿಲ್ಲ.
ಎಲ್ಲರ ಮನೆ ದೋಸೆನೂ ತೂತೆ!
ಬಹಳಷ್ಟು ಪಾಲಕರು ತೊಂದರೆ, ಸಮಸ್ಯೆ ತಾಪತ್ರಯಗಳಲ್ಲೇ ಇರುತ್ತಾರೆ. ಆದರೆ ಅವರು ತಮ್ಮ ತೊಂದರೆ ಸಮಸ್ಯೆಗಳನ್ನು ಮಕ್ಕಳ ಎದುರಿಗೆ ತೋರಿಸಿಕೊಂಡರೆ ‘ಮಗುಮನಸು’ ಘಾಶಿಯಾಗುತ್ತದೆ. ವಿಶೇಷವೆಂದರೆ, ನನಗೆ ನನ್ನ 20-25ನೇ ವಯಸ್ಸಿನವರೆಗೂ ನಮ್ಮ ಮನೆಯಲ್ಲೂ ತೊಂದರೆ-ತಾಪತ್ರಯಗಳು ಇರಲೇ ಇಲ್ಲ ಎಂದುಕೊಂಡಿದ್ದೆ.
ಆ ನಂತರ ನನಗಾದ ದಿವ್ಯಾನುಭವವೇನೆಂದರೆ, ನಾವು ಚಿಕ್ಕವರಿರುವಾಗ ನಮ್ಮ ತಂದೆ ತಾಯಿ ಎಂದೂ ನಮ್ಮೆದುರು ಜಗಳವಾಡಿದ್ದೇ ಇಲ್ಲ. ಮಕ್ಕಳೆದುರು ನಮ್ಮ ಅಸಮಾಧಾನ, ಅತೃಪ್ತಿ, ರಾಗದ್ವೇಷಗಳನ್ನುತೋರಿಸಿಕೊಳ್ಳಬಾರದು ಎನ್ನುವ ವಿವೇಕ ನಮ್ಮ ಪಾಲಕರಿಗಿತ್ತು. ಹಾಗಾಗಿ ನಮಗೆ ಈ ಎಲ್ಲರ ಮನೆಯ ಸಮಸ್ಯೆ ನಮ್ಮನೆಯಲ್ಲೂ ಇರಹುದೆಂಬ ಅನುಮಾನವೂ ಇರಲಿಲ್ಲ. (ಎಂದರು)
ಲೋಕದ ಜಂಜಡಗಳನ್ನು ಸಣ್ಣ ವಯಸ್ಸಿನ ಮಕ್ಕಳ ಮೇಲೆ ಹೇರಬಾರದು ಎನ್ನುವ ಸಲಹೆ ಅವರದ್ದು.
ನಿಷ್ಠೂರತೆ
ಲೋಕದ ದೋಷಗಳನ್ನು ಬರೆಯುವವರು ಮಾತಿನಲ್ಲಿ ಖಂಡಿಸುವವರು ಅತಿವಿರಳ. ಜಯಂತ್ ಕಾಯ್ಕಿಣಿ ಕೂಡಾ ಸಾಧ್ಯವಾದಷ್ಟು ವಿವಾದಗಳಿಂದ ದೂರವಿರಲು ಪ್ರಯತ್ನಿಸುತ್ತಾರೆ.
ಆದರೆ 2009 ರಲ್ಲಿ ಲೋಕಸಭೆಗೆ ಚುನಾವಣೆ ನಡೆಯಿತು ನೋಡಿ, ಆ ಚುನಾವಣೆ ಮುನ್ನ ಉತ್ತರಕನ್ನಡ ಬಿ.ಜೆ.ಪಿ ಅಭ್ಯರ್ಥಿ ಅನಂತ್‍ಕುಮಾರ್ ಹೆಗಡೆ ತನ್ನ ಲಾಗಾಯ್ತಿನ ಕೊಳಕು ರಾಜಕಾರಣದ ಹೇಳಿಕೆಯಾದ ‘ನನಗೆ ಮುಸ್ಲಿಂರ ಮತಗಳು ಬೇಡ’ ಎಂಬ ವಿವೇಕ ಶೂನ್ಯನ ಕೃತ್ಯವನ್ನು ಮತ್ತೆ ಬಹಿರಂಗವಾಗಿ ಹೇಳಿ ಮುಗ್ದರು, ಮೂರ್ಖರು ಆದ ಜನಸಾಮಾನ್ಯರ ಮತಕಬಳಿಸುವ ರಾಜಕಾರಣ ಮಾಡಿದ್ದರು!
ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಅದನ್ನು ನೇರವಾಗಿ ಖಂಡಿಸಿದ ಜಯಂತ್, ಅನಂತಕುಮಾರರ ಈ ವಿಭಜಕ ಹೇಳಿಕೆ ಬಾಲಿಷವಷ್ಟೇ ಅಲ್ಲ ಅಸಹ್ಯ ಕೂಡಾ, ಯಾವ ರಾಜಕಾರಣಿ ಯಾರ ಮತವನ್ನೂ ಕೇಳಬಹುದು , ಆದರೆ ಒಂದು ಸಮುದಾಯದ ಮತ ನನಗೆ ಬೇಡ ಎನ್ನುವ ಹಿಂದೆ ದಾಷ್ಟ್ಯ, ಪ್ಯಾಸಿಸಮ್ ಕೆಲಸ ಮಾಡುತ್ತಿರುತ್ತದೆ. ಹಾಗಾಗಿ ನಮಗೆ ವಿಭಜಕ ರಾಜಕಾರಣ, ವಿಭಜಕ ರಾಜಕೀಯ ಬೇಡ ನಮಗೀಗ ಬೇಕಾಗಿರುವುದು ಬಂಧುತ್ವವೇ ಹೊರತು ಹಿಂದುತ್ವವಲ್ಲ ನಮಗಿಂದು ಮಮತೆ, ಸಮತೆಗಳು ಬೇಕಾಗಿವೆ. ರಾಜಕಾರಣಿಗಳು ನಮ್ಮ ಸಹಿಷ್ಣುತೆಯನ್ನು ಹಾಳುಮಾಡಬಾರದು ಎಂದು ಖಡಾಖಂಡಿತವಾಗಿ ಅನಂತಕುಮಾರರಹೇಳಿಕೆ,ವರ್ತನೆಯನ್ನು ಖಂಡಿಸಿದ್ದ(ರಂತೆ)ರು.
‘ರಾಜಕಾರಣಿಗಳಿಗೆ ಅಧಿಕಾರವಿರುತ್ತದೆ ಆದರೆ ಕನಸುಗಳಿರುವುದಿಲ್ಲ ಕವಿ, ಸಾಹಿತಿಗಳಿಗೆ ಕನಸುಗಳಿರುತ್ತವೆ ಆದರೆ ಅಧಿಕಾರವಿರುವುದಿಲ್ಲ’ಇದು ಡಾ.ಸರಜೂ ಕಾಟ್ಕರ್ ಹೇಳಿಕೆ. ಇಂಥದ್ಧೇ ಅಭಿಪ್ರಾಯದ ನಯವಾದ ಹೇಳಿಕೆಗಳನ್ನು ಅನೇಕ ಬಾರಿಜಯಂತ್ ನೀಡಿದ್ದಾರೆ. ಈ ವರ್ಷದ 18 ನೇ ಉತ್ತರಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಅಂಕೋಲಾದಲ್ಲಿ ನಡೆದಿದ್ದಾಗ ಸಮಾರೋಪ ಸಮಾರಂಭಕ್ಕೆ ಸಚಿವಆರ್.ವಿ.ದೇಶಪಾಂಡೆ ಸರಿಯಾದ ಸಮಯಕ್ಕೆ ಬಂದಿದ್ದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆತುರದಿಂದ ಸಭೆ ಮುಗಿಯುವ ಮೊದಲೇನಿರ್ಗಮಿಸಿದರು. ಸಚಿವರೊಂದಿಗೆ ಅವರೊಂದಿಗಿನ ಪಟಾಲಂ ಜಾಗಖಾಲಿ ಮಾಡಿತು. ಈ ಮಹಾ ನಿರ್ಗಮನದ ನಂತರ ಜಯಂತ್ ನಿರಾಳರಾದಂತೆ ಕಂಡರು. ದೇಶಪಾಂಡೆಯವರು ಅವರ ಪಟಾಲಂನ ವರ್ತನೆಯನ್ನು ಜಯಂತ್ ಅಭಿಮಾನಿ ಸಾಹಿತ್ಯಾಸಕ್ತರು ವಿರೋಧಿಸಿದರು.
ಆದರೆ ಜಯಂತ್ ಚುಟುಕಾಗಿ ದೇಶಪಾಂಡೆಯವರೂ ಕೊನೆಯವರೆಗೆ ಕುಳಿತಿದ್ದರೆ ಚೆನ್ನಾಗಿರುತ್ತಿತ್ತೇನೊ….. ಎನ್ನುವಂತೆ ಮಾತನಾಡಿದರು. ಆದರೆ ತಮ್ಮ ಮಾತನ್ನೂ ದೇಶಪಾಂಡೆ ಕೇಳಲೇಬೇಕೆಂಬ ಹಕ್ಕೊತ್ತಾಯ ಮಾಡಲಿಲ್ಲ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *