ಭೂಮಿಯ ಮೇಲಿನ ಗೋಸ್ವರ್ಗ

ಭೂಮಿಯ ಮೇಲಿನ ಗೋಸ್ವರ್ಗ ನೋಡಿದಾಗ ಅತ್ಯಂತ ಸಂತಸವಾಗುತ್ತದೆ. ಗೋಸ್ವರ್ಗದ ಉತ್ತಮ ಪರಿಸರ, ವಾತಾವರಣ ಮನಕ್ಕೆ ಮುದನೀಡುತ್ತದೆ ಎಂದು ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ ಹೇಳಿದ್ದಾರೆ.
ಅವರು ಸಿದ್ಧಾಪುರ ಭಾನ್ಕುಳಿ ಶ್ರೀರಾಮದೇವಮಠ ಆವಾರದ ಸಹಸ್ರಗೋವುಗಳ ಸ್ವಚ್ಛಂದ ಸಾಮ್ರಾಜ್ಯ ಗೋಸ್ವರ್ಗಕ್ಕೆ ಭೇಟಿ ನೀಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಗೋಸ್ವರ್ಗದಲ್ಲಿಯ ವ್ಯವಸ್ಥೆ, ಸ್ವಚ್ಛತೆ, ಗೋವುಗಳನ್ನು ಸಾಕುವ ರೀತಿಯನ್ನು ಯಾರೂ ಮೆಚ್ಚುವಂತಿದೆ. ಯಾವುದೇ ಬಂಧನವಿಲ್ಲದೆ ಗೋಮಾತೆಯರು ಸರ್ವತಂತ್ರ ಸ್ವತಂತ್ರವಾಗಿ ಇಲ್ಲಿ ವಿಹರಿಸುವುದನ್ನು ಕಂಡಲ್ಲಿ ಮೈಮನಗಳು ಪುಳಕಿತವಾಗುತ್ತವೆ. ಶ್ರೀರಾಮಚಂದ್ರಾಪುರಮಠ ಮಹಾಸಂಸ್ಥಾನದ ಶ್ರೀರಾಘವೇಶ್ವರಭಾರತೀ ಶ್ರೀ ಇಂತಹ ಒಂದು ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದು ಸ್ವಾಗತಾರ್ಹ.
ಕನ್ನಡ ಸೇನೆಯ ವತಿಯಿಂದ ಮಹಾಗೋಗ್ರಾಸ ಸೇವೆಯನ್ನು ಅವರು ಈ ಸಂದರ್ಭದಲ್ಲಿ ಸಮರ್ಪಿಸಿದರು. ಕನ್ನಡ ಸೇನೆಯ ಪ್ರಧಾನ ಕಾರ್ಯದರ್ಶಿ ಮುನಿರಾಜ ಗೌಡ, ಕನ್ನಡ ಸೇನೆಯ ಗೋವಾ ರಾಜ್ಯದ ಪ್ರತಿನಿಧಿ ರತ್ನಾಕರ ಪೂಜಾರಿ, ಸಂಘಟನೆಯ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಯಕ್ಷಗಾನ ಪ್ರದರ್ಶನ
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ದಂಟಕಲ್‍ನ ಯಕ್ಷಚಂದನ ಸಂಯೋಜನೆಯಲ್ಲಿ ಯಕ್ಷಸಂಜೆ ಕಾರ್ಯಕ್ರಮ ಜೂ.22ರ ಸಂಜೆ 7ಕ್ಕೆ ಗಾಳಿಜಡ್ಡಿಯ ಉಮಾಪತಿ ಹೆಗಡೆ ರಂಗಮಂದಿರದಲ್ಲಿ ನಡೆಯಲಿದೆ.
ಗಧಾಯುದ್ಧ ಎನ್ನುವ ಆಖ್ಯಾನದಲ್ಲಿ ಸತೀಶ ಹೆಗಡೆ ದಂಟ್ಕಲ್, ನಂದನ ಹೆಗಡೆ(ಭಾಗವತಿಕೆ), ಶಂಕರ ಭಾಗ್ವತ ಯಲ್ಲಾಪುರ, ಶರತ್ ಜಾನಕೈ(ಮದ್ದಳೆ), ಪ್ರಸನ್ನ ಹೆಗ್ಗಾರ(ಚಂಡೆ), ಪಾತ್ರವರ್ಗದಲ್ಲಿ ಸುಹಾಸಿನಿ ಹೆಗಡೆ, ಶುಭಾ ರಮೇಶ ಭಟ್ಟ,ಎಂ.ಆರ್.ಹೆಗಡೆ, ಕಾರ್ತಿಕ ಹೆಗಡೆ ದಂಟ್ಕಲ್,ಸಿತಿನ್ ಹೆಗಡೆ ದಂಟ್ಕಲ್,ಮೈತ್ರಿ ಸಂಪೇಸರ, ಸಹನಾ ಹೆಗಡೆ ಹೂಡೇಹದ್ದ, ಸುನೀಲ ಹೂಡೇಹದ್ದ,ಅಭಯ ಹೊಸಗದ್ದೆ, ರಕ್ಷಿತಾ ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಎಂ.ಜಿ.ಹೆಗಡೆ ಗೆಜ್ಜೆ, ತಾಪಂ ಅಧ್ಯಕ್ಷ ಸುಧೀರ್ ಗೌಡರ್, ರವೀಂದ್ರ ಹೆಗಡೆ ಹಿರೇಕೈ, ಅಶೋಕ ಹೆಗಡೆ ಹಿರೇಕೈ ಪಾಲ್ಗೊಳ್ಳುವರು.

ಇಲ್ಲಿವೆ ಪಶ್ಚಿಮಘಟ್ಟದ ನೂರಾರು ಪ್ರಭೇದ
ನಿಸರ್ಗ,ವೈವಿಧ್ಯತೆ, ಹೋರಾಟದ ಮನೋಭಾವದ ಸಿದ್ಧಾಪುರದಲ್ಲಿ ಈ ತಾಲೂಕಿನ ಸಾಧಕರ ಕತೆ ಹೇಳುವ ಒಂದೇ ಒಂದು ವಿಶಿಷ್ಟ ದಾಖಲಾತಿಯ ವ್ಯವಸ್ಥೆ ಇಲ್ಲ. ಆದರೆ, ಈ ಭಾಗದ ಅಪರೂಪದ ಸಸ್ಯಪ್ರಭೇದಗಳ ವಿಶೇಷತೆ ಪರಿಚಯಿಸುವ ವೃಕ್ಷ ಉದ್ಯಾನವನ ಸಿದ್ದಾಪುರ ನಗರದಲ್ಲೇ ನಿಂತಿದೆ.
ಉದ್ಯಾನವನ, ಬಿದಿರಿನ ಪ್ಲಾಂಟೇಶನ್ ಸೇರಿ 75 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಟ್ರೀಪಾರ್ಕ್‍ನಲ್ಲಿ ನೂರಕ್ಕೂ ಹೆಚ್ಚು ಸಸ್ಯವೈವಿಧ್ಯವಿದೆ.
ಅವಸರದ ಕಾಲದಲ್ಲಿ ನಿರ್ಮಾಣವಾದ ಈ ಟ್ರೀಪಾರ್ಕ್ ಮಕ್ಕಳಿಗೆ ಆಟಕ್ಕೆ, ಹಿರಿಯರಿಗೆ ವಿಹಾರಕ್ಕೆ ಅನುಕೂಲವಾಗುತ್ತಿದೆ.
ಈ ವಿಶಿಷ್ಟ ವೃಕ್ಷ ಉದ್ಯಾನವನ್ನು ನಿರ್ಮಾಣ ಮಾಡಿ 10 ವರ್ಷ ಕಳೆದರೂ ಈ ಉದ್ಯಾನವನದ ಬಗ್ಗೆ ಪ್ರಚಾರವಿಲ್ಲ. ಉತ್ತಮ ಉದ್ದೇಶದಿಂದ ಅರಣ್ಯ ಇಲಾಖೆ ಪ್ರಾರಂಭಿಸಿದ ಈ ಉದ್ಯಾನವನ ಸ್ಥಳಿಯ ವಿಶೇಶದಂತೆ ನಿರ್ಮಾಣವಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *