

ಟ್ರೀಪಾರ್ಕ್ ಸಿದ್ಧಾಪುರ-ಕುಮಟಾ (ಉ.ಕ.) ರಸ್ತೆಯ ಶಂಕರಮಠದ ಬಳಿ ಇದ್ದು ಅದು ನಗರಕ್ಕೆ ಹೊಂದಿಕೊಂಡಿದ್ದರೂ ಅದರ ವ್ಯಾಪ್ತಿ 75 ಎಕರೆ, ಹೊಸೂರು ಮತ್ತು ತ್ಯಾರ್ಸಿ ಗ್ರಾಮಕ್ಕೆ ಸೇರಿಕೊಂಡಿದೆ. ವೈವಿಧ್ಯಮಯ ಸಸ್ಯಸಂಕುಲ,ಮಾನವ ನಿರ್ಮಿತ ಆಟೋಪಕರಣಗಳು, ವಿಶ್ರಾಂತಿ ಗೃಹ ಇಲ್ಲಿಯ ವಿಶೇಶ.
ಒಂದು ಕೋಟಿಗಿಂತ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಟ್ರೀಪಾರ್ಕ್ ಅಭಿವೃದ್ಧಿಯಿಂದ ಪ್ರವಾಸಿಗರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ರಾಕ್ಗಾರ್ಡನ್, ಕಬ್ಬನ್ ಪಾರ್ಕ್ ಮಾದರಿಯಲ್ಲಿ ಈ ಉದ್ಯಾನವನ ಉದ್ಧಾರವಾದರೆ ಚಂದ್ರಗುತ್ತಿ,ಜೋಗ ಕ್ಕೆ ಬರುವ ಪ್ರವಾಸಿಗರಿಗೆ ವಿಶ್ರಾಂತಿ, ವಿಹಾರದ ತಾಣವಾಗಿಯೂ ಅನುಕೂಲವಾಗುತ್ತದೆ.
ನಿಸರ್ಗ,ವೈವಿಧ್ಯತೆ, ಹೋರಾಟದ ಮನೋಭಾವದ ಸಿದ್ಧಾಪುರದಲ್ಲಿ ಈ ತಾಲೂಕಿನ ಸಾಧಕರ ಕತೆ ಹೇಳುವ ಒಂದೇ ಒಂದು ವಿಶಿಷ್ಟ ದಾಖಲಾತಿಯ ವ್ಯವಸ್ಥೆ ಇಲ್ಲ. ಆದರೆ, ಈ ಭಾಗದ ಅಪರೂಪದ ಸಸ್ಯಪ್ರಭೇದಗಳ ವಿಶೇಷತೆ ಪರಿಚಯಿಸುವ ವೃಕ್ಷ ಉದ್ಯಾನವನ ಸಿದ್ದಾಪುರ ನಗರದಲ್ಲೇ ನಿಂತಿದೆ.
ಉದ್ಯಾನವನ, ಬಿದಿರಿನ ಪ್ಲಾಂಟೇಶನ್ ಸೇರಿ 75 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಟ್ರೀಪಾರ್ಕ್ನಲ್ಲಿ ನೂರಕ್ಕೂ ಹೆಚ್ಚು ಸಸ್ಯವೈವಿಧ್ಯವಿದೆ.
ಅವಸರದ ಕಾಲದಲ್ಲಿ ನಿರ್ಮಾಣವಾದ ಈ ಟ್ರೀಪಾರ್ಕ್ ಮಕ್ಕಳಿಗೆ ಆಟಕ್ಕೆ, ಹಿರಿಯರಿಗೆ ವಿಹಾರಕ್ಕೆ ಅನುಕೂಲವಾಗುತ್ತಿದೆ.
ಈ ವಿಶಿಷ್ಟ ವೃಕ್ಷ ಉದ್ಯಾನವನ್ನು ನಿರ್ಮಾಣ ಮಾಡಿ 10 ವರ್ಷ ಕಳೆದರೂ ಈ ಉದ್ಯಾನವನದ ಬಗ್ಗೆ ಪ್ರಚಾರವಿಲ್ಲ. ಉತ್ತಮ ಉದ್ದೇಶದಿಂದ ಅರಣ್ಯ ಇಲಾಖೆ ಪ್ರಾರಂಭಿಸಿದ ಈ ಉದ್ಯಾನವನ ಸ್ಥಳಿಯ ವಿಶೇಶದಂತೆ ನಿರ್ಮಾಣವಾಗಿದೆ.
ಇದರ ನಿರ್ವಹಣೆ ಆ ಉದ್ಯಾವನದ ಉತ್ಫನ್ನದಲ್ಲೇ ನಡೆಯಬೇಕು ಎಂಬುದು ಸರ್ಕಾರದ ನೀತಿ-ನಿಯಮ.
ಆದರೆ ಈಗ ಈ ಉದ್ಯಾನವನದ ವೃಕ್ಷ ಸಂಕುಲ ಫಲ ನೀಡುವಷ್ಟು ಬೆಳೆದಿಲ್ಲ, ಪ್ರವಾಸಿಗರು, ಭೇಟಿ ನೀಡುವವರಿಗೆ ಪ್ರವೇಶ ಶುಲ್ಕ ಹಾಕಿದರೆ ಈಗ ಬರುವವರೂ ಬರಲಾರರೇನೋ ಎನ್ನುವ ಅನುಮಾನ ಅರಣ್ಯ ಇಲಾಖೆಗೆ. ಹಾಗಾಗಿ ಪಟ್ಟಣದ ಸಮೀಪ, ಜೋಗ ರಸ್ತೆಗೂ ಹತ್ತಿರ, ಜನಸಂಪರ್ಕದ ಕುಮಟಾ ರಸ್ತೆಗೆ ತಾಕಿಕೊಂಡಿದ್ದರೂ ಈ ಟ್ರೀಪಾರ್ಕ್ ಬಗ್ಗೆ ಜನರಿಗೆ ತಿಳಿದಿಲ್ಲ.
ಕೃತಕ ಕೆರೆಗಳು, ಕೃತಕ ಉದ್ಯಾನ ಜೊತೆಗೆ ನೂರಾರು ಜಾತಿಯ ಸಸ್ಯ ವೈವಿಧ್ಯ ಈ ಟ್ರೀಪಾರ್ಕ್ ನ ವಿಶೇಶ.
ಟ್ರೀಪಾರ್ಕ್ ಕಲ್ಫನೆಯಂತೆ ಅದನ್ನು ಅಭಿವೃದ್ಧಿಪಡಿಸಲು ಈಗ ಸಕಾಲ.
ಈ ಬಗ್ಗೆ ಸರ್ಕಾರಕ್ಕೆ ಹೊಸ ಪ್ರಸ್ತಾಪ ಒಂದನ್ನು ಕಳುಹಿಸುತ್ತೇವೆ. ಇಲಾಖೆ,ಸರ್ಕಾರದ ನಿರ್ದೇಶನ,ನಿಯಮದಂತೆ ಅದನ್ನು ಅಭಿವೃದ್ಧಿಪಡಿಸಿ ಪ್ರಚಾರ ನೀಡಿದರೆ ಅನುಕೂಲ.

- ಅಬ್ದುಲ್ಅಜೀಜ್,
-ಉಪ ಅರಣ್ಯ ಸಂರಕ್ಷಣಾಧಿಕಾರಿ
ಸಿದ್ಧಾಪುರ ಒಂದು ಮಿನಿ ಇಂಡಿಯಾ. ಇಲ್ಲಿ ಸಾಧಕರು, ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ರಾಜಕಾರಣಿಗಳೆಲ್ಲಾ ಆಗಿ ಹೋಗಿದ್ದಾರೆ.
ಇತಿಹಾಸ, ಚರಿತ್ರೆ ಇಲ್ಲಿಯ ವೈಶಿಷ್ಟ್ಯ, ಜೀವವೈವಿಧ್ಯಗಳ ಒಟ್ಟಂದದ ಒಕ್ಕೂಟ ಆದರೆ ಹೊರಗಿನವರೊಂದಿಗೆ ಒಳಗಿನವರಿಗೆ ನಮ್ಮ ವಿಶೇಶ, ಅನನ್ಯತೆ, ಅಸ್ಮಿತೆಗಳನ್ನು ಪರಿಚಯಿಸಬಹುದು. ಇಲ್ಲಿಯ ಮುಂದಾಳುಗಳು ಇವೆಲ್ಲವನ್ನೂ ಒಂದೇ ಆವರಣದಲ್ಲಿ ತರುವ ಐತಿಹಾಸಿಕ ಮಹತ್ವದ ಕೆಲಸ ಮಾಡಬೇಕಿದೆ. ಅದಕ್ಕೆ ಸಾರ್ವಜನಿಕ ಸಹಕಾರವೂ ದೊರೆಯಬೇಕಿದೆ.
-ಸುಬ್ರಾಯ ಮತ್ತೀಹಳ್ಳಿ, ಸಾಹಿತಿಗಳು

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
