

ಸಿದ್ಧಾಪುರದ ಮುತ್ತಿಗೆ ಗೋಳಗೋಡಿನ ವಸಂತ ಶಾನಭಾಗರ ಕೊಲೆ ಪ್ರಕರಣದ ತನಿಖೆಯಲ್ಲಿ ಕರ್ತವ್ಯಲೋಪ ಎಸಗಿದ ಸಿದ್ದಾಪುರ ವೃತ್ತ ನಿರೀಕ್ಷಕ ಜೊಯ್ ಅಂತೋನಿಯವರನ್ನು ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತ್ತು ಮಾಡಿರುವುದು ಗೊತ್ತಾಗಿದೆ.
ಗೋಳಗೋಡು ಪಾಟಾಳಿ ವಸಂತ ಶಾನಭಾಗರನ್ನು ಅಪಹರಿಸಿ ಹತ್ಯೆ ಮಾಡಿದ ದಾಯಾದಿ ಅಪ್ಪ ಮಗ ಕೊಲೆಯ ನಂತರ ತಲೆಮರೆಸಿಕೊಂಡಿದ್ದರು. ಕಳೆದ ಏಫ್ರಿಲ್ 24 ರಂದು ವಸಂತರನ್ನು ಅಪಹರಿಸಿ ಕೊಲೆಮಾಡಿದ್ದರು.
ಏಫ್ರಿಲ್ 28 ರಂದು ನಾಪತ್ತೆ ದೂರು, ನಂತರ ಅಪಹರಣದ ದೂರು ಹೀಗೆ ಸ್ಥಳಿಯರು ಎರಡೆರಡು ಬಾರಿ ಮಾಹಿತಿ, ಕ್ಲೂ ನೀಡಿದ್ದಾಗ್ಯೂ ಜೊಯ್ ಈ ಪ್ರಕರಣವನ್ನು ಗಂಭೀರ ಪ್ರಕರಣವೆಂದು ಪರಿಗಣಿಸಿರಲಿಲ್ಲ. ನಂತರ ಸ್ಥಳಿಯರ ದೂರು, ಬೇನಾಮಿ ಮಾಹಿತಿ ಮೇರೆಗೆ ಉತ್ತರಕನ್ನಡ ಎಸ್.ಪಿ. ಈ ಪ್ರಕರಣವನ್ನು ಮುಂಡಗೋಡ್ ಪಿ.ಆಯ್. ರಿಗೆ ಹಸ್ತಾಂತರಿಸಿದ್ದರು. ನಂತರ ಬೆಂಗಳೂರು ಕನಕಪುರದ ಲೋಕಿ ಬಂಧನ ಆನಂತರ ವಿನಯ್ ಮತ್ತು ವಸಂತ ಶಾನಭಾಗರ ಬಂಧನ ಆಗಿತ್ತು.
ಈ ಪ್ರಕರಣದಲ್ಲಿ ರಾಜಕೀಯ ಲಾಭಿ(ಶಿರಸಿ ರಾಜಕಾರಣಿಗಳು? ಜಾತಿ ರಕ್ಷಣೆ!)ಗೆ ಮಣಿದು ಕೊಲೆಗಾರರನ್ನು ಬಚಾವು ಮಾಡದ್ದರು ಎನ್ನುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಜೊಯ್ ತಲೆದಂಡವಾಗಿದೆ ಎನ್ನಲಾಗುತ್ತಿದೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
