

ಅವನಂದರೆ ಹಾಗೆ….
ಸುಡು ಬಿಸಿಲಿನ ಝಳದಲ್ಲೂ
ಮಬ್ಬಿನ ಮುಂಜಾನೆಯಂತೆ…
ಮಂಜಿನ ಹನಿ ಸುರಿಸಿ
ತಂಗಾಳಿಯಾ ತಂಪ ಕರೆಸಿ
ಮಲ್ಲಿಗೆಯ ಘಮಲು ಸೂಸಿ
ಮನಸ್ಸಿಗೆ ಮುದ ನೀಡುವ
ಕಲಾವಿದ ಅವನು..!

ಅವನೆಂದರೆ ಹಾಗೆ…
ಆಸೆಗಳ ಬೇಲಿ ಕಸಿದು
ಕನಸುಗಳಿಗೆ ಕರಗದ
ಭಾವ ತುಂಬಿ…
ಬಣ್ಣದ ಗೆಜ್ಜೆ ಕಟ್ಟಿ ಮೆರೆಸುವ
ಕನಸುಗಾರ ಅವನು..!
ಅವನೆಂದರೆ ಹಾಗೆ..
ಒರಟು ಬಂಡೆಯ
ಕಲ್ಲಿನ ಹೃದಯದೊಳಗೆ
ಉಸಿರೆ’ನ್ನುವ ಪ್ರೀತಿಯ
ಹೂ ಅರಳಿಸಿ…
ಕಳ್ಳ ಗೋಪಿ ಕೃಷ್ಣನಂತೆ
ಒಲವಿನ ಬಲೆಯೊಳಗೆ ಬಂಧಿಸುವ
ಮುದ್ದು ಚೆಲುವ ಅವನು..!


ಅವನೆಂದರೆ ಹಾಗೆ..
ಕರಿ ನೆರಳಲೂ ಚಿತ್ರವ ಬಿಡಿಸಿ
ನವರಸಗಳಿಗೂ ರಸಿಕ’ತೆ ತುಂಬಿಸಿ
ರಂಜಿಸಿ ರಮಿಸಿ ತನ್ನೆಡೆಗೆ ಸೆಳೆದು
ಮನವ ಗೆದ್ದ ಚೋರನಂತೆ ಅವನು..!!
.ರೇಖಾ.ಡಿ
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






