ಈ ಮರ ಸುತ್ತಿ ಬಂಜೆತನದಿಂದ ಮುಕ್ತರಾಗಿ!

ಸಸ್ಯಪಾಲಕ ಸುರೇಶ್ ನಾಯ್ಕ ಸಂಪಗೋಡರಿಗೆ ಸನ್ಮಾನ ಪಂಚವೃಕ್ಷಗಳ ಮಹತ್ವ ವಿವರಿಸಿದ ಗಣ್ಯರು
ಕಾರ್ಯಕ್ರಮದ ಆಯ್ದ ವಿಚಾರಗಳು ಹೀಗಿವೆ-
ಶರಾವತಿ ನೀರು ಕೊಂಡೊಯ್ಯುವುದು,ಶರಾವತಿ ಅಭಯಾರಣ್ಯದ ವ್ಯಾಪ್ತಿ ಹಿಗ್ಗಿಸುವ ಯೋಜನೆಗಳು ಜನವಿರೋಧಿ ಯೋಜನೆಗಳು. ಈ ಯೋಜನೆಗಳ ಬದಲು ಶರಾವತಿ ಬಳಸಿಕೊಂಡು ಸ್ಥಳಿಯರಿಗೆ ಅನುಕೂಲಮಾಡುವ ಉಪಯುಕ್ತ ಯೋಜನೆಗಳ ಪರವಾಗಿ ಜಿಲ್ಲೆಯ ಜನ ಹೋರಾಟ ಮಾಡಬೇಕಿದೆ.

  • ಗಣೇಶ್ ಭಟ್, ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ
    ಪಂಚವೃಕ್ಷ ಸಂಕುಲದ 8 ಗಿಡಗಳನ್ನು ವಾರ್ಷಿಕವಾಗಿ ನೆಡುವುದರಿಂದ ಫಲ ನಿಶ್ಚಿತ
  • ಶೇಷಗಿರಿಭಟ್ ಗುಂಜಗೋಡು.
    ಪರಸ್ಫರ ವಿರೋಧಿ ಲಕ್ಷಣಗಳ, ಗಿಡಮೂಲಿಕೆಗಳ ಮಹತ್ವದ ಪಂಚವೃಕ್ಷಗಳು ಆಯುರ್ವೇದದ ಬಹುಉಪಯೋಗಿ ಸಸ್ಯಗಳು – ಡಾ.ರೂಪಾ ಭಟ್
    ರೈತರಿಂದ ಆಗುತ್ತಿರುವ ಅರಣ್ಯನಾಶ ತಪ್ಪಿಸಲು ಸರ್ಕಾರ ಅನೂಕೂಲ ಕಲ್ಪಿಸಬೇಕು, ಸಂತಾನಭಾಗ್ಯಕ್ಕಾಗಿ ಅಶ್ವಥಕ್ಕೆ 45 ದಿವಸ ಪ್ರತಿದಿನ 108 ಪ್ರದಕ್ಷಿಣೆ ಮಾಡುವ ನಂಬಿಕೆ ವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ.
  • ರಾಮಚಂದ್ರ ಭಟ್ ಕಲ್ಲಾಳ.
    ಪರಿಸರ ಉಳಿಸಿ, ಬೆಳೆಸುವ ಕೆಲಸಕ್ಕೆ ಜನಸಹಕಾರ ಮುಖ್ಯ
  • ಗಣಪತಿ ಹೆಗಡೆ ವಡ್ಡಿನಗದ್ದೆ. ಜಾಗತಿಕ ತಾಪಮಾನದ ಹೆಚ್ಚಳ, ಪ್ರಾಕೃತಿಕ ಬದಲಾವಣೆಗಳಿಂದ ವಿಪ್ಲವ ಸಂಭವಿಸುವ ಮೊದಲೇ ಜಾಗರೂಕರಾಗಲು ಸಾಹಿತಿ ಸುಬ್ರಾಯ ಮತ್ತೀಹಳ್ಳಿ ಕರೆ ನೀಡಿದ್ದಾರೆ. ಇಂದು ಇಲ್ಲಿಯ ಶಂಕರಮಠದಲ್ಲಿ ನಡೆದ ವೇದ ಮತ್ತು ಆಯುರ್ವೇದ ಗಳಲ್ಲಿ ಪಂಚವೃಕ್ಷಗಳ ಮಹತ್ವ ಎನ್ನುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಾತಾವರಣದ ಬಿಸಿ ಏರಿಕೆಯಿಂದ ಮಲೆನಾಡಿನ ಏಲಕ್ಕಿ ಸೇರಿದಂತೆ ಅನೇಕ ಸಸ್ಯ ಪ್ರಭೇದ ಈಗ ಬೆಳೆಯುತ್ತಿಲ್ಲ.
    ಇತ್ತೀಚೆಗೆ ಟಿಬೇಟ್ ನಲ್ಲಿ ಗರಿಷ್ಠ ತಾಪಮಾನ ದಾಖಲಾಗಿರುವುದರಿಂದ ಅದು ಪರಿಸರದ ಮೇಲೆ ಬೀರುವ ದುಷ್ಟ ಪರಿಣಾಮಗಳ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.
    30 ಸೆಂಟಿಗ್ರೇಡ್ ಗಿಂತ ಹೆಚ್ಚಿನ ವಾತಾವರಣದಲ್ಲಿ ಏಲಕ್ಕಿ ಬೆಳೆಯುವುದಿಲ್ಲ ಎಂದರೆ, ಕಾಶ್ಮೀರದ ಕೇಸರಿ ಕೂಡಾ ಮುಂದೆ ಮರೀಚಿಕೆಯಾಗಬಹುದು ಹಾಗಾಗಿ ವಾತಾವರಣದ ಬಿಸಿ ನಿಯಂತ್ರಿಸುವ ಕೆಲಸ ಈಗಲೇ ಸಮರೋಪಾದಿಯಲ್ಲಿ ನಡೆಯಬೇಕು ಎಂದು ಅವರು ವಿವರಿಸಿದರು.
    ಭಾರತೀ ಸಂಪದ,
    ಸಂಸ್ಕøತಿ ಸಂಪದ ಮತ್ತು ಪ್ರಯೋಗ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ವೇದಮೂರ್ತಿ ರಾಮಚಂದ್ರ ಭಟ್ಟ ಕಲ್ಲಾಳ ವೇದಗಳಲ್ಲಿ ಪಂಚವೃಕ್ಷಗಳ ಉಪಯೋಗದ ಉಲ್ಲೇಖಗಳಿರುವುದನ್ನು ಗುರುತಿಸಿ,ವಿವರಿಸಿದರು.
    ಮಳೆ ನೀರು ಕೊಯ್ಲು ಮಾಡುವ ವಿಧಾನಗಳನ್ನು ಮಲೆನಾಡಿನ ಜನತೆ ಅನುಷ್ಠಾನಕ್ಕೆ ತರುವ ಉಪಾಯಗಳನ್ನು ಸೂಚಿಸಿದರು.
    ಇದೇ ವೇದಿಕೆಯಲ್ಲಿ ಮಾತನಾಡಿದ ವೇದಮೂರ್ತಿ ಶೇಷಗಿರಿ ಭಟ್ ಗುಂಜಗೋಡು ಆಲ, ಅಶ್ವಥ, ಮಾವು ಸೇರಿದಂತೆ ಪಂಚವೃಕ್ಷಗಳ ಉಪಯೋಗ, ಮಹತ್ವಗಳನ್ನು ತಿಳಿಸಿದರು.
    ಆಯುರ್ವೇದದಲ್ಲಿ ಪಂಚವೃಕ್ಷಗಳ ಬಳಕೆ ಚರ್ಮರೋಗ, ಮತ್ತು ಬಂಜೆತನ ಹೋಗಲಾಡಿಸುವ ಉಪಾಯಗಳನ್ನು ತಿಳಿಸಿದೆ, ಎಂದ ಡಾ.ರೂಪಾಭಟ್ ಗಣಪತಿ ಹೆಗಡೆ ವಡ್ಡಿನಗದ್ದೆ ಬಹುಮುಖಿ ವ್ಯಕ್ತಿಯಾಗಿದ್ದು, ಎಂ.ಬಿ.ನಾಯ್ಕ, ಗಣಪತಿ ಸೇರಿದಂತೆ ಇಲ್ಲಿ ಸ್ಥಳಿಯ ಅನೇಕರ ಜ್ಞಾನ ಪ್ರಚಾರ ಪಡೆಯದಿದ್ದುದು ಒಳ್ಳೆಯ ಲಕ್ಷಣವಲ್ಲ ಎಂದರು.
    ಸಸ್ಯಪಾಲಕ ಸಂಪಗೋಡಿನ ಸುರೇಶ್ ನಾಯ್ಕರನ್ನು ಸನ್ಮಾನಿಸಲಾಯಿತು.
    ಸನ್ಮಾನ ಸ್ವೀಕರಿಸಿದ ಸುರೇಶ್ ನಾಯ್ಕ ತನಗೆ ಸಂದ ಗೌರವ ಇಲಾಖೆ ಮತ್ತು ಅಧಿಕಾರಿಗಳಿಗೆ ಸಮರ್ಪಣೆ ಎಂದರು.
    ಸಭೆಯಲ್ಲಿ ಮಾತನಾಡಿದ ವಿಜಯ ಹೆಗಡೆ ದೊಡ್ಮನೆ ಮತ್ತು ವಲಯ ಅರಣ್ಯಾಧಿಕಾರಿ ಕಿರಣಕುಮಾರ ಸಿದ್ಧಾಪುರದ ವೈಶಿಷ್ಟ್ಯಗಳನ್ನು ಶ್ಲಾಘಿಸಿದರು.
    ಸಭೆಯ ಮೊದಲು ಪಂಚವೃಕ್ಷಗಳ ಆರೋಪಣ ನಡೆಯಿತು. ಮುರಗೇಶ್, ಗಣಪತಿ ಹಿತ್ತಲಕೈ ಸೇರಿದಂತೆ ಅನೇಕರು ಕಾರ್ಯಕ್ರಮಕ್ಕೆ ಸಹಕರಿಸಿದರು. ಗಣಪತಿ ವಡ್ಡಿನಗದ್ದೆ ಕಾರ್ಯಕ್ರಮದ ಪ್ರಾಸ್ಥಾವಿಕ ನುಡಿಗಳನ್ನಾಡಿ ತನ್ನ ಸೇವೆಯ ಪರಿಚಯ ಮಾಡಿದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *