ಕೊಟ್ಟ ಕುದುರೆ ಏರಲಾರದವರಿಂದ ಬೇರೆ ಏನನ್ನು ನಿರೀಕ್ಷಿಸಬಹುದು?

ಉತ್ತರಕನ್ನಡದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಉತ್ತಮ ಕೆಲಸಗಾರರು, ಬನವಾಸಿ ಹೋಬಳಿಗೆ ಸ್ವತಂತ್ರ ಭಾರತದಲ್ಲಿ ಶಿವರಾಮ ಹೆಬ್ಬಾರ 5-6 ವರ್ಷಗಳಲ್ಲಿ ಮಾಡಿದ ಕೆಲಸಯಾರೂ ಮಾಡಿಲ್ಲ ಎನ್ನುತ್ತಾರೆ. ರಸ್ತೆ, ನೀರಾವರಿ ಯಂಥ ಅವಶ್ಯ ಕೆಲಸಗಳ ವಿಚಾರದಲ್ಲಿ ಶಿವರಾಮ ಹೆಬ್ಬಾರ್ ಸ್ಫಂದಿಸಿದ್ದಾರೆ ಎನ್ನುವ ಮೆಚ್ಚುಗೆ ಅವರ ಕ್ಷೇತ್ರದಲ್ಲಿ ಕೇಳಿ ಬರುತಿತ್ತು.
ಆದರೆ ಈಗ ಶಿವರಾಮ ಹೆಬ್ಬಾರ್ ರಾಜೀನಾಮೆ, ಪಕ್ಷಾಂತರದಿಂದ ಹಿಂದೆ ಶಿವರಾಮ ಹೆಬ್ಬಾರರನ್ನು ಹೊಗಳಿದವರೇ ಈಗ ತೆಗಳುವಂತಾಗಿದೆ.
ಶಿವರಾಮ ಹೆಬ್ಬಾರ ಬಹುಹಿಂದೆ ಲಾರಿ ಮೇಲೆ ಪ್ರಯಾಣಿಕರಾಗಿ ಓಡಾಡುತಿದ್ದ ಸಮಯದಲ್ಲಿ ಬಿ.ಜೆ.ಪಿ. ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿದ್ದರು. ಆಗಿನಿಂದಲೂ ಸಂಘದ ಕಾರ್ಯಕರ್ತರೂ, ಜಾತಿವಾದಿಗಳಾದ ಕಾಗೇರಿ, ಅನಂತ ಜೊತೆಗೆ ಹೆಬ್ಬಾರರ ಆಂತರಿಕ ಸಂಘರ್ಷ ನಡೆದೆ ಇತ್ತು.
ಈ ಯುಗ ಕಳೆಯುತಿದ್ದಂತೆ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಸೇರಿ ಕಾಂಗ್ರೆಸ್ ನಿಂದ ಎರಡುಬಾರಿ ಶಾಸಕರಾಗಿದ್ದು ಈಗ ಚರಿತ್ರೆ.
ಈ ಬಾರಿ ಹೆಬ್ಬಾರ್ ಅಲ್ಪಂಅತರದಿಂದಲಾದರೂ ಗೆಲ್ಲಲು ಕಾರಣ ಅವರ ಜಾತಿ, ಮತ್ತು ಧರ್ಮಸ್ಥಳ ಸಂಘ!
ಹಿಂದೂ ಹೆಸರಲ್ಲಿ ಭಕ್ತರ ತಲೆಗೆ ಎಣ್ಣೆ ಸವರುತ್ತಿರುವ ಧರ್ಮಸ್ಥಳದ ಜೈನ ಹೆಗ್ಗಡೆಯ ಹಣಕಾಸಿನ ಧರ್ಮಸ್ಥಳ ಸಂಘ ಕಳೆದ ಚುನಾವಣೆಗಳಲ್ಲಿ ಬ್ರಾಹ್ಮಣರು ಮತ್ತು ಬಿ.ಜೆ.ಪಿ.ಗಳ ಆಯ್ಕೆಗೆ ತೆರೆಮರೆಯಲ್ಲಿ ನಡೆಸಿರುವ ಕಸರತ್ತು ಈಗ ಬಹಿರಂಗಗೊಂಡ ಸತ್ಯ.
ಈ ಲಾಭಪಡೆದ ಹೆಬ್ಬಾರ್ ಜಾತಿ, ಸಂಘ,ಹಣ ಬಳಸಿ ಗೆದ್ದದ್ದು ಬರೀ 4-5 ಸಾವಿರ ಮತಗಳ ಅಂತರದಿಂದ. ಇಂಥ ಹೆಬ್ಬಾರ್ ಈ ಬಾರಿ ಶಾಸಕರಾಗುತ್ತಲೇ ಸಚಿವನಾಗಬೇಕು ಎಂದು ಯತ್ನಿಸತೊಡಗಿದರು. ಆಗ ಅಡ್ಡ ಬಂದದ್ದು ಇದೇ ದೇಶಪಾಂಡೆ!
ಸಚಿವ ದೇಶಪಾಂಡೆ,ಎಸ್.ಎಂ. ಹೆಬ್ಬಾರ್ ವೈರತ್ವಕ್ಕೆ ಇತಿಹಾಸವಿದೆ. ದೇಶಪಾಂಡೆ ಮಾರ್ಗರೇಟ್ ಆಳ್ವ ಕುಟುಂಬದೊಂದಿಗೆ ಆಂತರಿಕ ಕಲಹ ಮಾಡುತಿದ್ದಾಗ ಆಳ್ವ ಹಿಂದೆ ನಿಂತ ಹೆಬ್ಬಾರ್ ಯಲ್ಲಾಪುರ ಟಿಕೇಟ್ ಗಿಟ್ಟಿಸಿದ್ದು ಈಗ ಹಳೆ ಕತೆ.
ಈಹೆಬ್ಬಾರ್ ಹಿಂದೆ ಬಿ.ಜೆ.ಪಿ. ಸಂಘದ ತೆಕ್ಕೆಯಲ್ಲಿದ್ದವರು. ಜೊತೆಗೆ ಜಾತಿ,ಸ್ವಾಮೀಜಿಗಳ ನೆರವು. ಇವುಗಳ ಸಹಾಯದಿಂದ ಅದಿರಿನಲ್ಲಿ ದುಡಿದ ಹೆಬ್ಬಾರ್ ರಿಗೆ ವಾಯವ್ಯ ಕರ್ನಾಟಕ ರಸ್ತೆ ನಿಗಮದ ಅಧ್ಯಕ್ಷತೆ ದೊರೆತಿದ್ದೂ ಲಾಭಿಯಿಂದಲೇ.
ಹೀಗೆ ನಾನಾ ಕಾರಣ ಪ್ರಯತ್ನಗಳಿಂದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿರುವ ಹೆಬ್ಬಾರ್ ಅವಧಿಯಲ್ಲಿ ಭಟ್ಕಳದ ಕುಸಿದು ಬೀಳುತ್ತಿರುವ ಬಸ್ ನಿಲ್ದಾಣದ ರಿಪೇರಿಯಾಗಲಿಲ್ಲ. ಒಂದೆಡೆ ನಿರ್ಮಾಣ ಹಂತದ ಕಾಮಗಾರಿಯ ಕಟ್ಟಡ ಹಿಂದೆ ಅವಿತಿರುವಂಥ ಸಿದ್ದಾಪುರದ ಬಸ್ ನಿಲ್ಧಾಣ ಕೊಚ್ಚೆಗುಂಡಿಯಂತಾಗಿದೆ. ಉತ್ತರಕನ್ನಡ ಜಿಲ್ಲೆಯ ಒಂದೆರಡು ಬಸ್ ನಿಲ್ದಾಣಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲ 8-10 ಬಸ್ ನಿಲ್ಧಾಣಗಳ ಸ್ಥಿತಿ ಕೇಳುವುದೇ ಬೇಡ.
ಈ ಸಂದರ್ಭದಲ್ಲಿ ವಾಯವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿರುವ ಹೆಬ್ಬಾರ್ ಕನಿಷ್ಟಜಿಲ್ಲೆಯ ಬಸ್ ನಿಲ್ಧಾಣಗಳ ನಿರ್ಮಾಣ ಮಾಡಿ ಉತ್ತಮ ಹೆಸರು ಗಳಿಸಬಹುದಿತ್ತು. ಆದರೆ ಹೆಬ್ಬಾರ ಎಷ್ಟು ಅಧಿಕಾರ, ಅವಕಾಶ, ಹಣ ಅಂತಸ್ತಿನ ಹಿಂಎ ಬಿದ್ದಿದ್ದಾರೆಂದರೆ…… ಯಲ್ಲಾಪುರ ಶಾಸಕರಾಗಿರುವ ಅವರಿಗೆ ಅವರ ಕ್ಷೇತ್ರದ ಯಲ್ಲಾಪುರ,ಮುಂಡಗೋಡ ಬಸ್ ನಿಲ್ಧಾಣ, ಸಾರಿಗೆ ತೊಂದರೆ ಸರಿಪಡಿಸಲೇ ಸಮಯ, ಆಸಕ್ತಿ ಇಲ್ಲ.
ಇಂಥ ಹೆಬ್ಬಾರರ ತವರೂರು ಯಲ್ಲಾಪುರ ಬಸ್ ನಿಲ್ಧಾಣದಲ್ಲಿ ನಾಟಿ ಮಾಡಬೇಕೆಂದರೆ ಹೂಡಿ,ಹೊಡೆಯುವ ಅಗತ್ಯವೂ ಇಲ್ಲ. ಅಂಥ ಕೆಸರುಗುಂಡಿಯಾಗಿರುವ ಬಸ್ ನಿಲ್ಧಾಣದಲ್ಲಿ ಓಡಾಡುವುದು,ವಿಶ್ರಾಂತಿ ಪಡೆಯುವುದು ಕನಸಿನ ಮಾತು.
ಮಗ ವಿವೇಕ ಹೆಬ್ಬಾರ್ ರಕ್ಷಣೆಗಾಗಿ ಶಿವರಾಮ ಬಿ.ಜೆ.ಪಿ. ಸೇರುವ ಅನಿವಾರ್ಯತೆಯಲ್ಲಿದ್ದಾರೆ ಎಂದು ಕೆಲವರು ಅಭಿಪ್ರಾಯ ಪಟ್ಟರೆ, ಅವರಿಗೆ ದೇಶಪಾಂಡೆ, ಅನಂತ ಹೆಗಡೆ, ಕಾಗೇರಿಯಂಥವರಿಂದ ಕಿರುಕುಳ ಹಾಗಾಗಿ ಅವರು ಸ್ವಾತಂತ್ರ್ಯ ಬಯಸಿ ಬಿ.ಜೆ.ಪಿ.ಕಡೆ ಹೊರಟಿದ್ದಾರೆ ಎನ್ನುವವರಿದ್ದಾರೆ. ಕಾಂಗ್ರೆಸ್ ಮತ್ತು ಹೆಬ್ಬಾರ್ ಹಿಂಬಾಲಕರಲ್ಲಿ ಬೆರಳೆಣಿಕೆಯ ಮುಖಂಡರನ್ನು ಹೊರತುಪಡಿಸಿದರೆ ಬಹುತೇಕ ಎಲ್ಲರೂ ಹೆಬ್ಬಾರ್ ಬಿ.ಜೆ.ಪಿ. ಹೆದರಿಕೆ,ಆಮಿಷಕ್ಕೆ ಬಲಿಯಾಗಿರುವುದನ್ನು ವಿರೋಧಿಸುವವರೇ ಹೆಚ್ಚು.
ಕೆಲವರಂತೂ ಕೊಟ್ಟ ಕುದುರೆ ಏರಲು ಬಾರದ ಹೆಬ್ಬಾರ್ ರಾಜಕಾರಣ ತ್ಯಜಿಸುವುದೇ ಒಳ್ಳೆಯದು ಎನ್ನುತಿದ್ದಾರೆ. ನಿವೃತ್ತಿ ಅಥವಾ ತ್ಯಾಗ ಅವರ ಆಯ್ಕೆ. ಆದರೆ ಮಧ್ಯಂತರದಲ್ಲಿ ಕೈ ಕೊಟ್ಟ ಹೆಬ್ಬಾರ್ ರನ್ನು ಜನತೆ ನಿವೃತ್ತಿ ಗೊಳಿಸಲು ಕಾಯುತ್ತಿರುವುದಂತೂ ಸತ್ಯ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *