ಅಕ್ಕುಂಜಿಯಲ್ಲಿ ನಿಲ್ಲದ ಬಸ್ ಗಳಿಂದ ಸ್ಥಳಿಯರಿಗೆ ತೊಂದರೆ ಪ್ರತಿಭಟನೆಯ ಎಚ್ಚರಿಕೆ


ಸಿದ್ಧಾಪುರ ತಾಲೂಕಿನ ಅಕ್ಕುಂಜಿಯಲ್ಲಿ ಸಾರಿಗೆ ಸಂಸ್ಥೆ ಬಸ್ ನಿಲುಗಡೆಗೆ ಸ್ಥಳಿಯರು ಆಗ್ರಹಿಸಿದ್ದಾರೆ. ಸಾಗರ,ಶಿರಸಿ ಮಾರ್ಗದ ಸಿದ್ಧಾಪುರ ಕಾವಂಚೂರು ಗ್ರಾಮ ಪಂಚಾಯತ್‍ನ ಅಕ್ಕುಂಜಿ ಗ್ರಾಮಸ್ಥರು ಮತ್ತು ಅಲ್ಲಿಗೆ ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಕಣ್ಣೆದುರೇ ನೂರಾರು ಬಸ್ ಗಳು ಓಡಾಡಿದರೂ ಆ ಬಸ್ ಗಳಲ್ಲಿ ಸಂಚರಿಸುವ ಭಾಗ್ಯವಿಲ್ಲ.
ತಡೆರಹಿತ ಬಸ್ ಗಳು ಸೇರಿದಂತೆ ಸಿಟಿ. ಇಂಟರ್ ಸಿಟಿಬಸ್ ಗಳು ಇಲ್ಲಿ ನಿಲ್ಲುವುದಿಲ್ಲ. ಹಾಗಾಗಿ ಈ ಗ್ರಾಮದ ಜನರು ದೂರದ ಕಾಂವಚೂರಿಗೆ ನಡೆದು ತೆರಳಬೇಕು. ಜನಸಾಮಾನ್ಯರೊಂದಿಗೆ, ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಎದುರಿಗೆ ಬಸ್ ಹೋದರೂ ದೂರದ ಬಸ್ ನಿಲ್ದಾಣಗಳ ವರೆಗೆ ನಡೆದು ಹೋಗಿ ಅಥವಾ ಖಾಸಗಿ ವಾಹನಗಳ ಮೂಲಕ ಸಂಚರಿಸಬೇಕಾದ ಅನಿವಾರ್ಯತೆ ಈ ಭಾಗಕ್ಕಿದೆ. ಹಾಗಾಗಿ ಶಿರಸಿ ಮತ್ತು ಸಾಗರ ಡಿಪೊಗಳಿಂದ ಬರುವ ಬಸ್ ಗಳು ಕಡ್ಡಾಯವಾಗಿ ಇಲ್ಲಿ ನಿಲುಗಡೆ ಮಾಡುವಂತೆ ವ್ಯವಸ್ಥೆ ಮಾಡಬೇಕು ಎಂದು ಅಲ್ಲಿಯ ಸ್ಥಳಿಯರು ಸಂಬಂಧಿಸಿದವರನ್ನು ಆಗ್ರಹಿಸಿದ್ದಾರೆ.
ಇದೇ ತಿಂಗಳಲ್ಲಿ ತಡೆರಹಿತ ಮತ್ತು ತಡೆಸಹಿತ ಸಾರಿಗೆ ವಾಹನಗಳು ಈ ಬಸ್ ನಿಲ್ಧಾಣದಲ್ಲಿ ನಿಲುಗಡೆಆಗದಿದ್ದರೆ ಶಾಲಾ-ಕಾಲೇಜು ವಿದ್ಯಾರ್ಥಿಗಳೊಂದಿಗೆ ಸ್ಥಳಿಯರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅಲ್ಲಿಯ ಗ್ರಾಮಸಮಿತಿ ಎಚ್ಚರಿಸಿದೆ.
ಶಿರಸಿ ಡಿಪೋ ಬಸ್ ಗಳು ಅಲ್ಲಿ ನಿಲ್ಲುತ್ತವೆ. ತಡೆರಹಿತ ಬಸ್ ಗಳು ಮತ್ತು ಸಾಗರ ಡಿಪೋ ಬಸ್ ಗಳು ಅಲ್ಲಿ ನಿಂತು ತೆರಳುತ್ತಿಲ್ಲ ಎಂದು ಸಾರಿಗೆ ಸಂಸ್ಥೆ ಮೂಲಗಳು ಮಾಹಿತಿ ನೀಡಿವೆ.

ಸಾರ್ವಜನಿಕರಿಗೆ ದೂರಸ್ಥ ಶಿಕ್ಷಣದ ಮೂಲಕ ಸಂಸ್ಕೃತ

ರಾಷ್ಟ್ರಿಯ ಸಂಸ್ಕೃತ ಸಂಸ್ಥಾನಮ್ ಮಾನಿತ ವಿಶ್ವವಿದ್ಯಾಲಯದ ರಾಜೀವಗಾಂಧೀ ಪರಿಸರ, ಸ್ವಾಧ್ಯಾಯಕೇಂದ್ರಮ್, ಮುಕ್ತಸ್ವಾಧ್ಯಾಯಪೀಠಮ್, ಶೃಂಗೇರಿ ವತಿಯಿಂದ 2019-2020 ನೇ ಸಾಲಿನಲ್ಲಿ ದೂರಸ್ಥ ಶಿಕ್ಷಣದ ಮೂಲಕ ಸಂಸ್ಕøತ ಕಲಿಯಬಯಸುವವರಿಗೆ ಆರು ತಿಂಗಳ ಅವಧಿಯ ಪ್ರಾಕ್‍ಶಾಸ್ತ್ರಿಸೇತು (ಸಂಸ್ಕøತಾವತರಣೀ) ಹಾಗೂ ಒಂದು ವರ್ಷದ ಅವಧಿಯ ಶಾಸ್ತ್ರಿಸೇತು (ಸಂಸ್ಕøತಾವಗಾಹನೀ) ಪಾಠ್ಯಕ್ರಮದ ವ್ಯವಸ್ಥೆ ಕಲ್ಪಿಸಲಾಗಿದ್ದು ಯಾವುದೇ ಉದ್ಯೋಗದಲ್ಲಿರುವವರು, ಗೃಹಸ್ಥರು, ಗೃಹಿಣಿಯರು ತಾಂತ್ರಿಕ/ವೈದ್ಯಕೀಯ/ಆಯರ್ವೇದ ವಿದ್ಯಾರ್ಥಿಗಳು ಅಥವಾ ಯಾರೇ ಆಸಕ್ತರು ಕೂಡ ಈ ಶಿಕ್ಷಣವನ್ನು ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಇದೇ ತಿಂಗಳು 31 ರ ಒಳಗಾಗಿ 9968403772 ದೂರವಾಣಿಗೆ ಕರೆ ಮಾಡಿ ವಿವರವನ್ನು ತಿಳಿದುಕೊಳ್ಳಬೇಕಾಗಿ ಕೋರಲಾಗಿದೆ.
ಅಂತರ್ಜಾಲದ ಮೂಲಕ ತಮ್ಮ ಹೆಸರನ್ನು ನೋಂದಾಯಿಸುವವರು ತಿತಿತಿ.msಠಿ.ಡಿsಞs.iಟಿ ಸಂಪಕಿರ್Àಸಬಹುದು ಎಂದು ಸ್ವಾಧ್ಯಾಯಕೇಂದ್ರದ ಸಂಯೋಜಕ ವೆಂಕಟೇಶಮೂರ್ತಿಯವರು ತಿಳಿಸಿರುತ್ತಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *