
ಯಾವ ಜನ್ಮದ
ನೆರಳು ನೀನು
ಕಾಯುವೆ ಯಾಕೆ
ನನ್ನ ಬೆನ್ನು..
ಯಾವ ದಾರಿಯ
ಹೊಂಗನಸಿನ ಹೊರಳು
ಬೆಳಗಿನ ಜಾವದ
ನಕ್ಷತ್ರವೇ ಮರುಳು..

ಬದುಕಿನ ಬವಣೆಗಳಲ್ಲಿ
ಕಳೆದೋಗುವ ಮೊದಲು
ಬಿಗಿದಪ್ಪಿದೆ ಬಾಚಿ
ಚೇತರಿಸಿಕೊಳ್ಳಲು ಅಳಿಲು..
ಆದರೆ ಮತ್ತೆಮತ್ತೆ
ಬೆರೆತೋದೆ ನಾ ನಿನ್ನಲ್ಲೂ
ಸಮಾಧಾನದ ಕೋಲ್ಮಿಂಚು
ಬದುಕುಳಿಯುವ ಭರವಸೆಯಲ್ಲೂ..
ಆಡದ ಮಾತುಗಳಲ್ಲಿ
ಶಬ್ದಗಳಾದವು ಮೌನ
ಕಣ್ಣಂಚಿನಲ್ಲಿ ತೊಟ್ಟಿಕ್ಕುವ
ಹನಿಗಳಾದವು ಮನನ..
ನಾನೆಲ್ಲಿ ಇರುವೆನೋ
ಕೈಗೂಡದ ತುಡಿತಗಳಲ್ಲೂ
ನೀ ನನ್ನೊಳಗಿರುವೆಯೋ
ಭೇಟಿಯಾಗದ ಭೇಟಿಗಳಲ್ಲೂ..
ಬೇರೆಯವಳೇ ಆದರೂ
ನೀ ಇಂದು
ನಿನ್ನವನಾಗಿಯೇ ಉಳಿಯುವೆ
ನಾ ಎಂದೂ..
ಹಾಗೆ ಹೋದರೂ
ಹೀಗೆ ಬಂದು
ಆಶ್ಚರ್ಯ ಒಲವಿಗೆ
ಎಂತಹ ಧನ್ಯತೆಯೆಂದು..
*ಬಸವರಾಜ ಕಾಸೆ*
7829141150
pradeepbasu68@gmail.com
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
