ಬೀಳುವ ಮರಗಳಿವೆ ಎಚ್ಚರಿಕೆ!

ಸಿದ್ಧಾಪುರದಲ್ಲಿ
ಭಯಹುಟ್ಟಿಸುತ್ತಿರುವ ಮರಗಳು
ಸಿದ್ದಾಪುರ ತಾಲೂಕಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯೇ ಹಳೆ ಮರ ಬಿದ್ದು ಮೃತರಾದ ನಂತರ ತಾಲೂಕಿನೆಲ್ಲೆಡೆ ಅಪಾಯದ ಮರಗಳ ಬಗ್ಗೆ ಮಾತು, ಚರ್ಚೆ ಪ್ರಾರಂಭವಾಗಿದೆ. ಕಾಡು,ಜಮೀನು, ಮನೆಗಳ ಸಮೀಪದ ಮರಗಳ ಅಪಾಯಕ್ಕೆ ಆಯಾ ಪ್ರದೇಶ, ಜವಾಬ್ದಾರಿಯ ಜನರೇ ಕಾರಣ. ಆದರೆ, ರಸ್ತೆ ಅಕ್ಕಪಕ್ಕದ ಮರಗಳು, ಶಾಲಾ-ಕಾಲೇಜುಗಳು, ಸಾರ್ವಜನಿಕ ಪ್ರದೇಶ,ಸರ್ಕಾರಿ ಕಛೇರಿಗಳ ವ್ಯಾಪ್ತಿಯ ಮರಗಳ ಬಗ್ಗೆ ಸಂಬಂಧಿಸಿದವರೇ ಜವಾಬ್ಧಾರರಾಗಬೇಕಾಗುತ್ತದೆ.
ನಗರದ ನಿರ್ಮಾಣ ಹಂತದ ಮಿನಿವಿಧಾನ ಸೌಧದ ಆವರಣದ ಒಂದು ಮರ, ಹಾಳದಕಟ್ಟಾದ ಅಂಧರಶಾಲೆ ಬಳಿಯ ಹೆಸ್ಕಾಂ ಟಿ.ಸಿ. ಮೇಲೇ ಚಾಚಿರುವ ಮರ. ಹೀಗೆ ನಗರದಲ್ಲಿ ಅನೇಕ ಕಡೆ ಅಪಾಯದ ಮರಗಳಿವೆ ಎಂದು ಸಾರ್ವಜನಿಕ ಚರ್ಚೆ ನಡೆಯುತ್ತಿದೆ. ಆದರೆ ಅವುಗಳನ್ನು ತೆಗೆಯುವವರ್ಯಾರು? ಈ ಮಳೆಗಾಲದ ಮೊದಲು ಕಂದಾಯ ಇಲಾಖೆ ನೀಡಿದ ಪಟ್ಟಿಯಂತೆ ನಗರದ ಅಪಾಯದ ಮರಗಳನ್ನು ಅರಣ್ಯ ಇಲಾಖೆ ಕಡಿದು ತೆಗೆದಿದೆ. ಆದರೆ ಸರ್ಕಾರಿ ಇಲಾಖೆಗಳ ಆವರಣ, ಪ.ಪಂ. ವ್ಯಾಪ್ತಿಯ ಒಳಗಿರುವ ಅಪಾಯದ ಮರಗಳನ್ನು ತೆಗೆಯಲು ಅರಣ್ಯ ಇಲಾಖೆಗೆ ಅನುಮತಿ ಕೇಳಿದರೆ ಕೊಡಬಹುದು ಆದರೆ ಅರಣ್ಯ ಇಲಾಖೆಯೇ ಅವುಗಳನ್ನು ತೆಗೆಯುವುದು ಕಷ್ಟ ಎನ್ನುವುದು ಇಲಾಖೆಯ ಅಭಿಪ್ರಾಯ.
ಸೊರಬ ರಸ್ತೆಯಲ್ಲಿ ಟಿ.ಸಿ. ಮೇಲೆರಗಬಹುದಾದ ಅಂಧರ ಶಾಲೆಯ ಆವರಣದ ಮರ, ಅದಕ್ಕೆ ತಾಕಿಕೊಂಡಿರುವ ವಿದ್ಯುತ್ ಮಾರ್ಗ ಅಲ್ಲಿಯ ವಿದ್ಯಾರ್ಥಿಗಳು, ನೆರೆಹೊರೆಯವರಿಗೆ ಅಪಾಯ ತರುವ ಸಾಧ್ಯತೆ ಹೆಚು.್ಚ ಅದೇ ರಸ್ತೆಯಲ್ಲಿ ಕೆಲವು ಮರಗಳು ರಸ್ತೆಗೆ ವಾಲಿಕೊಂಡಿರುವುದರಿಂದ ಸಾಯಂಕಾಲ ಬೀದಿ ದೀಪ ಕಾಣದ ಸಮಸ್ಯೆ ಇದೆ ಎನ್ನುವುದು ಈ ಭಾಗದ ಸಾಮಾಜಿಕ ಕಾರ್ಯಕರ್ತ ಇಲಿಯಾಸ್ ಶೇಖ್ ಅಭಿಪ್ರಾಯ.
ಹೀಗೆ ನಗರದಲ್ಲಿ ಮತ್ತು ತಾಲೂಕಿನಾದ್ಯಂತ ಅರಣ್ಯ ಇಲಾಖೆ ಮತ್ತು ಹೆಸ್ಕಾಂ ನ ವ್ಯಾಪ್ತಿಯಲ್ಲಿ ಅನೇಕ ಮರಗಳು ಸಾರ್ವಜನಿಕರ ಪ್ರಾಣಕ್ಕೆ ಅಪಾಯ ತರುವಂತಿವೆ ಎನ್ನುವ ಸಾರ್ವಜನಿಕರು ಅವುಗಳನ್ನು ಕಡಿಯಲು ಅರಣ್ಯ ಇಲಾಖೆಗೆ ಹೇಳದೆ ಸಂಬಂಧಿಸಿದವರು ಪರವಾನಗಿ ಪಡೆದು ಮರಗಳನ್ನು ತೆರವು ಮಾಡುವ ಅಗತ್ಯವಂತೂ ಈಗ ಅನಿವಾರ್ಯತೆಯಾಗಿದೆ.
ಮಳೆಗಾಲಪೂರ್ವ ಕಂದಾಯ ಇಲಾಖೆಯ ಮನವಿಯಂತೆ ಅಪಾಯದ ಮರಗಳನ್ನು ಕತ್ತರಿಸಿ ತೆಗೆದಿದ್ದೇವೆ. ಈಗಲೂ ಇಲಾಖೆಯ ಹಿರಿಯ ಅಧಿಕಾರಿಗಳು ತಾಲೂಕಿನಲ್ಲಿರುವ ಅಪಾಯದ ಮರಗಳ ಬಗ್ಗೆ ವರದಿ ಕೇಳಿದ್ದಾರೆ. ನಾನಾ ಇಲಾಖೆಗಳು ತಮ್ಮ ವ್ಯಾಪ್ತಿಯ ಅಪಾಯದ ಮರಗಳ ತೆರವಿಗೆ ಅನುಮತಿ ಪಡೆದು ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.
– ಅಜೀಜ್ ಅಹಮದ್
ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ಧಾಪುರ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *