ಅಭಾವವೇ ವ್ಯಕ್ತಿ, ವಸ್ತು ಪರಿಸ್ಥಿತಿಯ ಮಹತ್ವ ತಿಳಿಸುತ್ತದೆ

ಭಾರತದ ಅಮೇರಿಕಾ ರಾಯಭಾರಿ
ಕಛೇರಿ ಅಧಿಕಾರಿ ರಾಜೇಶ್ ಅಭಿಮತ
ಅಭಾವವೇ ವ್ಯಕ್ತಿ, ವಸ್ತು ಪರಿಸ್ಥಿತಿಯ ಮಹತ್ವ ತಿಳಿಸುತ್ತದೆ
ಶಾಂತಿ-ಸುವ್ಯವಸ್ಥೆಯ ಅಭಾವ ತಲೆದೋರಿದಾಗ ಶಾಂತಿ,ಸುವ್ಯವಸ್ಥೆ,ಸೌಹಾರ್ದತೆಯ ಮಹತ್ವದ ಅರಿವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿರುವ ನಿಯೋಜಿತ ಭಾರತದ ಅಮೇರಿಕಾ ರಾಯಭಾರಿ ಕಛೇರಿಯ ಅಧಿಕಾರಿ ರಾಜೇಶ್ ನಾಯ್ಕ ಎಲ್ಲರನ್ನೂ ಒಳಗೊಳ್ಳುವ ಭಾರತದ ಸಂವಿಧಾನದ ಸೊಬಗು ಮಹತ್ತರವಾದದ್ದು, ಅದರ ವೈಶಿಷ್ಟ್ಯದಿಂದಾಗಿಯೇ ಭಾರತಕ್ಕೆ ವಿಶ್ವಸಮೂದಾಯದಲ್ಲಿ ಮತ್ತು ಒಳಗಿನ ಎಲ್ಲಾ ಗುಂಪು, ಪ್ರಾಂತ್ಯಗಳಲ್ಲಿ ಶ್ರೇಷ್ಠತೆಯ ಗೌರವವಿದೆ ಎಂದರು.
ಸಿದ್ಧಾಪುರದ ರಾಘವೇಂದ್ರಮಠದ ಸಭಾಭವನದಲ್ಲಿ ನಡೆದ ಸಮ್ಮಿಳನ-ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಭಾರತದ ವೈವಿಧ್ಯತೆ, ವೈಶಿಷ್ಟ್ಯತೆಯ ಜೊತೆಗೆ ಸಮಾನತೆಯ ಆದರ್ಶ ಮುಂದುವರಿದ ದೇಶಗಳಲ್ಲಿಲ್ಲ, ಭಾರತ ಎಲ್ಲರ ಆಸೆ, ಆಶೋತ್ತರಗಳ ಸಾಕಾರಮೂರ್ತಿಯಾಗಿ ಜಗತ್ತಿಗೆ ಶಾಂತಿ-ಸೌಹಾರ್ದತೆ, ಸಮಾನತೆಯ ಸಂದೇಶವಾಹಕವಾಗಿರುವುದು ನಮ್ಮ ಹಿರಿಯರ ದೂರದೃಷ್ಟಿತ್ವ, ಉದಾರತೆಯ ಪ್ರಯತ್ನದಿಂದ ಎಂದರು.
ಸಾಮಾನ್ಯ ಅಸಾಮಾನ್ಯನಾಗಿ ಬೆಳೆಯುವುದು ವೈಯಕ್ತಿಕ ಶ್ರಮದಿಂದಾದರೂ ದೇಶದಲ್ಲಿ ಆ ವಾತಾವರಣ ಇರಬೇಕಾಗುತ್ತದೆ. ಪ್ರತಿಷ್ಠಿತ ಹಿನ್ನೆಲೆಯವರೊಂದಿಗೆ ಬುಡಕಟ್ಟುಗಳು, ಧಮನಿತ ಸಮೂದಾಯಗಳು ಸ್ಫರ್ಧೆಮಾಡುತ್ತಿರುವುದು ಭಾರತ ದೇಶ, ಸಂವಿಧಾನದ ಹೆಗ್ಗಳಿಕೆ. ಈ ವೈಶಿಷ್ಟ್ಯತೆಯ ರಕ್ಷಣೆಗಾಗಿ ಕೆಲಸಮಾಡಲು ಯುವಕರು ಮುಂದೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಹುಟ್ಟೂರ ಪ್ರೀತಿ, ಗೌರವ ಹತ್ತೂರ ಪ್ರೀತಿ, ಗೌರವಕ್ಕಿಂತ ಮಿಗಿಲು ಎಂದ ಅವರು ಹುಟ್ಟೂರಿನ ಅಭಿವೃದ್ಧಿ ಹೊಸಪೀಳಿಗೆಯ ಕನಸಿಗೆ ಶಕ್ತಿ ತುಂಬುವ ಜವಾಬ್ಧಾರಿಯಿಂದ ಇಂಥ ಕೆಲಸಗಳಾಗುತ್ತಿವೆ ಎಂದರು.
ಇದೇ ಸಂದರ್ಭದಲ್ಲಿ ಕ್ರೀಡೆಗೆ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಸಿದ್ದಾಪುರ ಹೊಸಮಂಜುವಿನ ಗಿರೀಶ್ ಪುಂಡಲೀಕ ನಾಯ್ಕ ಮತ್ತು ಅವರ ಮಾರ್ಗದರ್ಶಕ ಪಿ.ಟಿ. ವಾಲ್ಮಿಕಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮವನ್ನು ಸಿದ್ಧಾಪುರದ ಗುರು ಫೌಂಡೇಶನ್,ಬೆಂಗಳೂರಿನ ಗಗನಕುಸುಮ
ಫೌಂಡೇಶನ್,ಬೆಂಗಳೂರಿನ ನಿಭಾ ಫೌಂಡೇಶನ್ ಗಳು ಆಯೋಜಿಸಿದ್ದವು. ತಾಲೂಕಾ ನಾಮಧಾರಿ ನೌಕರರ ಸಂಘ ಮತ್ತು ವಕೀಲ ಎನ್.ಡಿ. ನಾಯ್ಕ ಕುಟುಂಬ ಸಹಕರಿಸಿತ್ತು.

ಕಾಡು ಹಂದಿ ಊರಿಗೆ ಬಂದಿತ್ತ…..ಮಲೆನಾಡಿನಲ್ಲಿ ಹೆಚ್ಚಿದ ಹಂದಿ ಕಾಟ
ಮಲೆನಾಡಿಗೂ ಕಾಡು ಹಂದಿಗೂ ನಂಟು.
ಮಲೆನಾಡಿನ ಪರಿಸರದಲ್ಲಿ ಕಾಡು ಹಂದಿ ವಾಸ್ತವ ಆಗಿರುವುದರಿಂದ ಮಲೆನಾಡಿನ ಸಾಹಿತ್ಯ ಸಂಗೀತ, ಸಿನೆಮಾಗಳಲ್ಲೂ ಕಾಡು ಹಂದಿ ಒಂದು ಪಾತ್ರ. ಯೋಗರಾಜ್ ಭಟ್ ರ ಗಾಳಿಪಟದಲ್ಲಿ ಕಾಡು ಹಂದಿ ಒಂದು ಪಾತ್ರವಾಗಿರುವುದನ್ನು ಮರೆಯುವಂತಿಲ್ಲ.
ತೇಜಸ್ವಿಯವರ ಸಾಹಿತ್ಯದಲ್ಲಂತೂ ಕಾಡು ಹಂದಿ ಪಾತ್ರ, ಮಾಂಸ, ರುಚಿ, ವಾಸನೆಯಾಗಿ ಅಲ್ಲಲ್ಲಿ ಕಂಡು ಬರುತ್ತದೆ. ಮಲೆನಾಡಿನ ಹಂದಿಗಳು ನಿರುಪದ್ರವಿಗಳು ಎನ್ನುತ್ತಾರೆ ಆದರೆ, ಹಂದಿಯ ಗಟ್ಟಿತನ, ಸಿಟ್ಟು, ಹುಂಬತನ ಅದನ್ನು ನೋಡಿದವರಿಗೇ ಗೊತ್ತು. ಮಲೆನಾಡಿನ ಹಂದಿ ಸೋಯಿಬೇಟೆ, ಬಲೆಬೇಟೆ ಹಿಂದೆ ಮರೆಯದ ಮನರಂಜನೆ ಈಗ ಇತಿಹಾಸ.
ಈಗ ಕಾಡು ಹಂದಿ ಸೇರಿದಂತೆ ವನ್ಯ ಮೃಗಗಳ ಬೇಟೆ ನಿಷಿದ್ಧ ಹಾಗಾಗಿ ಕಾಡು ಹಂದಿ ಈಗ ಉಪದ್ರವಿಯಾಗಿ ಬದಲಾಗಿದೆ.
ಚಿತ್ರನಟ ನೀರ್ನಳ್ಳಿ ಗಣಪತಿಯವರ ತೋಟದಲ್ಲಿ ತೆಂಗು-ಬಾಳೆ ಅಡಿಕೆ ನಾಶ ಮಾಡಿದ ಹಂದಿಯ ಉಪಟಳದ ಬಗ್ಗೆ ರಾಘವೇಂದ್ರ ಬೆಟ್ಟಕೊಪ್ಪ ತಮ್ಮ ಬರಹದಲ್ಲಿ ಪ್ರಸ್ಥಾಪಿಸಿದ್ದಾರೆ.
ಇಲ್ಲಿ ಸಿದ್ದಾಪುರದಲ್ಲಿ ರೈತರಿಗೆ ಹಂದಿಗಳು ನೀಡುತ್ತಿರುವ ಉಪಟಳದ ವರದಿಯಿದೆ. ಕಾಡುಹಂದಿ ವರ್ಷಪೂರ್ತಿ ರೈತರಿಗೆ ಕೊಡುವ ಉಪಟಳಕ್ಕೆ ರೈತರು ಕಂಗಾಲಾಗಿದ್ದಾರೆ. ಕಾಡುಹಂದಿ ಮತ್ತು ಕಾಡುಕೋಣಗಳು, ಕೋಡಗಗಳ ಉಪಟಳದಿಂದ ಬೇಸತ್ತು ಕೃಷಿ ಮಾಡುವುದೇ ಬೇಡ ಎನ್ನುವ ತೀರ್ಮಾನಕ್ಕೆ ಬಂದ ರೈತರೂ ಇದ್ದಾರೆ.
ಮಲೆನಾಡಿನ ಕೋತಿ, ಕಾಡುಹಂದಿ, ಕಾಡುಕೋಣಗಳಿಂದ ಮಲೆನಾಡು, ಕರಾವಳಿ ತಾಲೂಕುಗಳಲ್ಲಿ ಕೊಟ್ಯಂತರ ಹಾನಿ ಸಂಭವಿಸುತ್ತಿದ್ದರೂ ಅರಣ್ಯ ಇಲಾಖೆ ನೂರು, ಸಾವಿರ ಲೆಕ್ಕದಲ್ಲಿ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದೆ.
ನಾವೇ ಉತ್ತಮರು ಎಂದು ಒಂದು ಅವಧಿಗೆ ಎರಡ್ಮೂರು ಮುಖ್ಯಮಂತ್ರಿಗಳಾಗುವವರು, ಹೊಸ ಸಂಪುಟ, ಸಚಿವಾಲಯದ ಸದಸ್ಯರಾಗುವವರು ಮಲೆನಾಡಿನ ಈ ಸಮಸ್ಯೆ ಕೇಳಲೇಬೇಕಾದ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *