ನೆನಪಾಗುವೆ ಯಾಕೆ ನನಗೆ

ನೆನಪಾಗುವೆ ಯಾಕೆ ನನಗೆ

ಮಡುವುಗಟ್ಟುವ ಕಣ್ಣಿನಲ್ಲಿ
ಬಿಂಬವಾಗಿ ನಿಲ್ಲುವೆ ನೀನು
ತಲ್ಲೀನನಾಗಿ ನಾನಾಗ
ಮತ್ತೆ ಮರೆಯುವೆ ಮರೆಯುವುದನ್ನು..
ಅಷ್ಟಕ್ಕೂ ನೀನು
ನೆನಪಾಗುವೆ ಯಾಕೆ ನನಗೆ
ಇಷ್ಟಕ್ಕೂ ಏನು
ಪಿಸುಗುಡುವೆ ಹೇಳದೆ ಒಳಗೆ..

ಕೋಪ ತಾಪ ಚಡಪಡಿಕೆ
ಅಂಗಲಾಚುವ ಮನವರಿಕೆಗಳು
ಎಲ್ಲವೂ ನಿನ್ನ ಪ್ರೀತಿಯ
ನನ್ನ ಸಾವಿರ ಮುಖಗಳು..
ಸುಮ್ಮನೆ ಧ್ಯಾನಿಸುತ್ತಾ
ಕಣ್ಣು ಮುಚ್ಚಿ ಕುಳಿತರೂ
ಬಂದಂತೆ ಆಗುವುದು
ಸದಾ ನೀ ನನ್ನೆದುರು..

ನಿನ್ನ ಆವರಿಸಿದ
ಆ ಕೆಂಪು ಚೂಡಿ
ತೂಗುಯ್ಯಾಲೆ ಆಡುವ
ಕೆಂಚು ಮುಂಗುರುಳ ಮೋಡಿ..
ಈ ಒರಟು ಕೈಗಳಲ್ಲಿ
ನಿನ್ನ ಪುಟ್ಟ ಅಂಗೈ
ಹಿಡಿದರೂ ಸಾಕು ಒಂಚೂರು
ಕಚಗುಳಿ ಆಗುವುದು ಮೈ..

ನಾವಿಟ್ಟ ಹೆಜ್ಜೆಯ ಗುರುತು
ಮೂಡಲಿಲ್ಲ ಕಲ್ಲುಬಂಡೆಯ ಮೇಲೂ
ನೆರೆಯಾಗಿ ಕೊಚ್ಚಿ ಹೋದರೂ
ಒರೆಸಲಾಗಲಿಲ್ಲ ನೆನಪುಗಳ ಆಮೇಲೂ..
ನಡೆದುದರ ಪರಾಮರ್ಶೆ 
ಮುಂದೆ ನಡೆಯುವಂತೆ ಭಾಸ
ವಿನಾ ಕಾರಣ ಹಾಗೆ
ಸದ್ದಿಲ್ಲದೆ ಜೀವದ ಅಭ್ಯಾಸ..

*ಬಸವರಾಜ ಕಾಸೆ*
7829141150
pradeepbasu40@gmail.com

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಪೆಟ್ರೋಲ್‌ ಬಂಕ್‌ ಕೆಲಸಗಾರ ಗ್ರಾ.ಪಂ. ಅಧ್ಯಕ್ಷ…..! ಕಾಯಕವೇ ಕೈಲಾಸ ಎನ್ನುವುದೇ ಈತನ ಧ್ಯೇಯ.

ಭಾರತದ ಪ್ರಜಾಪ್ರಭುತ್ವ ಒಬ್ಬ ಚಾ ಮಾರುವ ಅಶಿಕ್ಷಿತನನ್ನು ಪ್ರಧಾನಿ ಮಾಡಿದೆ. ದಲಿತರೊಬ್ಬರನ್ನು ರಾಷ್ಟ್ರಪತಿಮಾಡಿದೆ, ಮಹಿಳೆಯರು ಪ್ರಧಾನಿ, ರಾಷ್ಟ್ರಪತಿಗಳಾಗಿ ವಿಜೃಂಬಿಸಿದ್ದಾರೆ. ಒಬ್ಬ ಬುಡಕಟ್ಟು ಮಹಿಳೆ ದೇಶದ...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *