breaking news- ಉ.ಕ. ಜಿಲ್ಲಾಡಳಿತದ ಸೂಚನೆ-

ವಿಪರೀತ ಮಳೆ-ಗಾಳಿ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಹೊರ ಊರುಗಳಿಂದ ಉತ್ತರ ಕನ್ನಡಕ್ಕೆ ಬರುವ ಬಸ್‍ಗಳನ್ನು ಸ್ಥಗಿತಗೊಳಿಸಲಾಗಿದೆ.ಹೊರ ಜಿಲ್ಲೆಗಳ ಪ್ರವಾಸಿಗಳು ಈ ವಾರ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸ, ಪ್ರಯಾಣ ಮಾಡದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಪರೀತ ಮಳೆ ಮತ್ತು ಜಲಾಶಯಗಳಿಂದ ನೀರು ಬಿಡುವ ಹಿನ್ನೆಲೆಯಲ್ಲಿ ತಗ್ಗು ಪ್ರದೇಶದ ಜನರು ಎಚ್ಚರದಿಂದಿದ್ದು ಅನಿವಾರ್ಯವಾದರೆ ಸ್ಥಳಾಂತರವಾಗಲು ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.

ಜಲಪ್ರಳಯ ಕೆರೆಕಟ್ಟೆಒಡೆದುಬೆಳೆಹಾನಿ.ರಸ್ತೆ,ಸಂವಹನ,ಸಂಪರ್ಕಸ್ಥಗಿತ,
ಜಿಲ್ಲಾಡಳಿತದ ಸಮರೋಪಾದಿಯ ಕ್ರಮ
ನಿರಂತರ ಗಾಳಿ ಮಳೆ ಪರಿಣಾಮ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ರಸ್ತೆ ಸಂಪರ್ಕ ಅಸ್ತವ್ಯಸ್ತಗೊಂಡಿದ್ದು ಪ್ರಮುಖ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ವಾಹನ ಸಾಗಾಟ ಸ್ಥಗಿತಗೊಂಡಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿದ್ದು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಪ್ರಮುಖ ಕದ್ರಾ ಮತ್ತು ಕೊಡಸಳ್ಳಿ ಜಲಾಶಯಗಳಿಂದ ನೀರು ಹೊರಬಿಡುತಿದ್ದು ನಿರಾಶ್ರಿತರ ಸಂಖ್ಯೆ ವೃದ್ಧಿಯಾಗುತ್ತಿದೆ. ಶಿರಸಿ ಬನವಾಸಿ ಬಳಿಯ ಮೊಗಳ್ಳಿಯಲ್ಲಿ ವರದಾ ಪ್ರವಾಹದಿಂದಾಗಿ ಇಡೀ ಗ್ರಾಮವೇ ಸ್ಥಳಾಂತರವಾಗಿದೆ. ಶಿವಮೊಗ್ಗ ಜಿಲ್ಲೆಯ ಜೋಳದಗುಡ್ಡೆ, ಕತವಾಯಿ ನಡುವಿನ ಗದ್ದೆ ಬಯಲು ವರದಾ ನೀರಿನಿಂದ ತುಂಬಿದ್ದು ಬೆಳೆ ನಾಶವಾಗುವ ಸಾಧ್ಯತೆ ಹೆಚ್ಚಿದೆ.
ಸಿದ್ಧಾಪುರದಲ್ಲಿ ಅಘನಾಶಿನಿ ನದಿ, ಉಪನದಿಗಳೆಲ್ಲಾ ತುಂಬಿ ಹರಿಯುತಿದ್ದು ಹೆಮ್ಮನಬೈಲಿನ ಆರು ಕುಟುಂಬಗಳಿಗೆ ಸೋವಿನಕೊಪ್ಪ ಶಾಲೆಯಲ್ಲಿ ಪುನರ್ ವಸತಿ ಕಲ್ಫಸಲಾಗಿದೆ. ಸಿದ್ಧಾಪುರ ಕಲ್ಯಾಣಪುರದಲ್ಲೂ ನೆರೆ ಇಳಿಯದ ಪರಿಣಾಮ ಗಂಜಿಕೇಂದ್ರ ಮುಂದುವರಿದಿದೆ.
ರಸ್ತೆ ಸಂಪರ್ಕ, ದೂರವಾಣಿ, ಮೊಬೈಲ್ ಸಂಪರ್ಕಗಳೆಲ್ಲಾ ಸ್ಥಗಿತಗೊಂಡಿದ್ದು ಸಂವಹನ, ಸಂಪರ್ಕ ಕಷ್ಟಸಾಧ್ಯವಾಗಿದೆ. ಕರಾವಳಿ,ಮಲೆನಾಡು ಬೆಸೆಯುವ ಪ್ರಮುಖ ರಸ್ತೆಗಳ ಮೇಲೆಲ್ಲಾ ನೀರು ಹರಿದು, ಮರಬಿದ್ದು ಸಂಪರ್ಕ ಅಸ್ಯವ್ಯಸ್ತವಾಗಿದೆ. ಈ ತೊಂದರೆಗಳ ಹಿನ್ನೆಲೆಯಲ್ಲಿ ಗುರುವಾರ ಕೂಡಾ ಉತ್ತರ ಕನ್ನಡ ಜಿಲ್ಲೆಯ ಶಾಲಾ, ಕಾಲೇಜು ಅಂಗನವಾಡಿಗಳಿಗೆ ರಜೆ ಮುಂದುವರಿಸಲಾಗಿದೆ.
ಸಿದ್ಧಾಪುರದ ಸುದ್ದಿ- ಕಳೆದ 48 ಗಂಟೆಗಳಲ್ಲಿ ಸಿದ್ಧಾಪುರ ತಾಲೂಕಿನಲ್ಲಿ ರಾಜ್ಯದಲ್ಲೇ ಗರಿಷ್ಟ 300 ಮಿ.ಮೀ. ಮಳೆ ಸುರಿದಿದೆ. ಈ ಮಹಾಮಳೆಯ ಪರಿಣಾಮ ಕಾನಗೋಡಿನ ಕೆರೆಯ ಕೋಡಿ ಮುರಿದು ನೀರು ಗದ್ದೆ, ತೋಟಗಳ ಮೇಲೆ ಹರಿಯುತ್ತಿದೆ.
ನಿನ್ನೆ ರಾತ್ರಿಯ ವಿಪರೀತ ಮಳೆಗೆ ಅವರಗುಪ್ಪಾ ಕೆರೆಯ ಕೋಡಿಯ ಕೆಳಗಿನ ಜಾಗ ಕುಸಿದಿದ್ದು, ಇದರಲ್ಲಿ ನೀರು ನುಗ್ಗಿದರೆ ನೂರಾರು ಎಕರೆ ಅಡಿಕೆ, ಭತ್ತದಗದ್ದೆ ಬೆಳೆ ನಾಶವಾಗುವ ಅಪಾಯ ಎದುರಾಗಿದೆ. ತಾಲೂಕಿನಾದ್ಯಂತ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು ಪುನರ್‍ರ್ವಸತಿ,ತುರ್ತು ಕೆಲಸ ಭರದಿಂದ ನಡೆಯುತ್ತಿದೆ. ಈ ಮಳೆಯ ಪರಿಣಾಮ ತಾಲೂಕಿನ ಹಣಜಿಬೈಲ್ ನಲ್ಲಿ ಒಂದು ಜೀವಹಾನಿ ಮತ್ತು ಇನ್ನೊಂದು ಕಡೆ ಜಾನುವಾರು ತೇಲಿಹೋದ ವರದಿಯಾಗಿದೆ. ಐಸೂರು,ಚಪ್ಪರಮನೆ,ಹಳದೋಟ ಸೇರಿದಂತೆ ಅನೇಕ ಕಡೆ ಜರಿ ಕುಸಿದಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.
ತಾಲೂಕಿನಲ್ಲಿ 344 ಎಕರೆ ಬೆಳೆಗೆ ಹಾನಿಯಾಗಿದೆ. 67 ಜನರನ್ನು ಸಂತ್ರಸ್ತರೆಂದು ಗುರುತಿಸಿದ್ದು ಅವರಿಗೆ ಎರಡು ಕಡೆ ಪುನರ್ ವಸತಿ ಕಲ್ಫಿಸಲಾಗಿದೆ. ಕೆರೆ ಹಾನಿ ಮತ್ತು ಬೆಳೆ ಹಾನಿ ಸಂಭವನೀಯತೆ ಹಿನ್ನೆಲೆಯಲ್ಲಿ ಅವರಗುಪ್ಪಾ ಮತ್ತು ಕಾನಗೋಡಿನ ಜನರು ಸೂಕ್ತ ವ್ಯವಸ್ಥೆಗಾಗಿ ತಹಸಿಲ್ಧಾರರಿಗೆ ಮನವಿ ಮಾಡಿದ್ದಾರೆ. ತಾಲೂಕಿನ ಸೋವಿನಕೊಪ್ಪಾ ಹೆಮ್ಮನಬೈಲಿನ ಪುನರ್ವಸತಿ ಕೇಂದ್ರಕ್ಕೆ ಇಂದು ಭೇಟಿ ನೀಡಿದ ತಾಲೂಕಾ ಪಂಚಾತ್ ಅಧ್ಯಕ್ಷರು ಸದಸ್ಯರು ವ್ಯವಸ್ಥೆ ಪರಿಶೀಲಿಸಿದರು. ಜನಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂತೃಸ್ತರು ತಮಗೆ ಅಪಾಯವಿಲ್ಲದ ಪ್ರದೇಶದಲ್ಲಿ ಶಾಶ್ವತ ವಸತಿ ವ್ಯವಸ್ಥೆಗೆ ಆಗ್ರಹಿಸಿದರು. ಪುನರರ್ವಸತಿ ಕೇಂದ್ರದಲ್ಲಿ ಆರೋಗ್ಯ, ಆಹಾರ, ರಕ್ಷಣೆ, ಭದ್ರತೆ ವ್ಯವಸ್ಥೆಗಳು ಸಮರ್ಪಕವಾಗಿರುವುದು ಕಂಡು ಬಂತು.ಸರ್ಕಾರಿವ್ಯವಸ್ಥೆಯೊಂದಿಗೆ ಸ್ಥಳಿಯರು ಅಲ್ಲಲ್ಲಿ ಸಂತ್ರಸ್ತರ ನೆರವಿಗೆ ಬಂದಿದ್ದು ಗಮನಕ್ಕೆ ಬಂತು. ಹೆಮ್ಮನಬೈಲಿನಲ್ಲಿ ಪ್ರವಾಹ ಪರಿಸ್ಥಿತಿ ಕುಗ್ಗಿದ ಪರಿಣಾಮ ಹಾನಿಗೊಳಗಾದ ಪ್ರದೇಶ, ಮನೆಗಳ ಪರಿಸ್ಥಿತಿ ಅವಲೋಕನಕ್ಕೆ ಅವಕಾಶವಾಯಿತು. ನೂರಾರು ವರ್ಷಗಳಿಂದ ವಾಸ್ತವ್ಯ ಹೂಡಿದ್ದ ಜನತೆ ಜನಜಾನುವಾರುಗಳೊಂದಿಗೆ ಸ್ಥಳಾಂತರವಾಗಿದ್ದು ವಸ್ತು, ಪರಿಸ್ಥಿತಿ ವಸ್ತುಸ್ಥಿತಿ ಅವಲೋಕಿಸಲು ಅವಕಾಶವಾಯಿತು. ಸಂಪೂರ್ಣ ಹಾನಿ ಸಮೀಕ್ಷೆ ಈವರೆಗೆ ಸಾಧ್ಯವಾಗಿಲ್ಲ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *