ಪ್ರವಾದಿಗಳ ಕೃಪೆಯಿಂದ ಮಳೆ ನಿಲ್ಲಲಿ ಸಂತ್ರಸ್ತರ ಬದುಕು ಹಸನಾಗಲಿ

ಅಲ್ಲಾಹ್ ಪ್ರವಾದಿಗಳ ಕೃಪೆಯಿಂದ ಮಳೆ ನಿಲ್ಲಲಿ ಸಂತ್ರಸ್ತರ ಬದುಕು ಹಸನಾಗಲಿ
-ಮೆಹಮೂದ್ ರಝಾ
ಸಿದ್ದಾಪುರ : ಆ,12-
ತ್ಯಾಗ ಬಲಿದಾನ ಸಾರುವ ಈದ್-ಉಲ್-ಅಝಾಹ್ (ಬಕ್ರೀದ್) ಹಬ್ಬವನ್ನು ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಶೃದ್ಧಾ ಭಕ್ತಿಯೊಂದಿಗೆ ಸಡಗರದಿಂದ ಆಚರಿಸಿದರು. ತಾಲೂಕಿನ ಬೇಡ್ಕಣಿ, ಬಿಳಗಿ, ಇಟಗಿ, ನೆಜ್ಜೂರು, ಅರೆಂದೂರು, ಹಾರ್ಸಿಕಟ್ಟಾ, ಹೆಗ್ಗರಣಿ, ಹೇರೂರು, ಐಗೋಡ ಹಾಗೂ ಸಿದ್ದಾಪುರ ಪಟ್ಟಣದಲ್ಲಿ ಮುಸ್ಲೀಮರು ತಮ್ಮ ಊರಿನ ಮಸೀದಿಗಳಲ್ಲಿ ಹಬ್ಬದ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸಿದ್ದಾಪುರ ಬದ್ರಿಯಾ ಜಾಮಿಯಾ ಮಸೀದಿಯ ಪ್ರಧಾನ ಗುರುಗಳಾದ ಮೆಹಮೂದ್ ರಝಾ ಮುಸ್ಲೀಮರನ್ನು ಉದ್ದೇಶಿಸಿ ಮಾತನಾಡಿ ಅಲ್ಲಾಹ್‍ನು ಆಜ್ಞಾಪಿಸಿದ ತ್ಯಾಗ ಬಲಿದಾನದೋತ್ಯಕವಾದ ಬಕ್ರೀದ ಹಬ್ಬದ ಹಿಂದಿರುವ ಆಶಯವನ್ನು ಎಲ್ಲರೂ ಅರಿತುಕೊಂಡು ಪ್ರವಾದಿ ಮಹಮದ್ (ಸ,ಅ,ಸ) ರು ಭೋದಿಸಿರುವ ಆದರ್ಶ ಸದ್ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಂತ್ರಸ್ತರಿಗೆ ಸಹಾಯ ಹಸ್ತ ನೀಡಿ ಅಲ್ಲಾಹ್‍ನ ಪ್ರೀತಿಗೆ ಪಾತ್ರರಾಗಿ ಎಂದು ಕರೆ ನೀಡಿ ಅಲ್ಲಾಹ್ ಪ್ರವಾದಿಗಳ ಕೃಪೆಯಿಂದ ಮಳೆ ನಿಲ್ಲಲಿ ಸಂತ್ರಸ್ತರ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿದರು. ಮಸೀದಿ ಕಮಿಟಿ ಕಾರ್ಯದರ್ಶಿ ಮಾಜಿ ಪ.ಪಂ ಸದಸ್ಯ ಮುನಾವರ ಎ. ಗುರಕಾರ್ ಎಲ್ಲರಿಗೂ ಈದ್ ಶುಭಾಶಯ ಕೋರಿ ಮುಂದೆ ಕೈಗೊಳ್ಳಲಾಗುವ ಮಸೀದಿ ಅಭ್ಯುದಯಕ್ಕಾಗಿ ಎಲ್ಲರ ಸಹಾಯ ಸಹಕಾರಕ್ಕಾಗಿ ವಿನಂತಿಸಿಕೊಂಡು ಹಜ್ ಯಾತ್ರಿಕರಿಗಾಗಿ ಪ್ರಾರ್ಥಿಸಿದರು. ಪ್ರಾರ್ಥನೆ ನಂತರ ಮುಸ್ಲಿಂ ಬಾಂಧವರು ಪರಸ್ಪರ ಆಲಂಗಿಸಿಕೊಂಡು ಈದ್ ಮುಬಾರಕ್ ಹೇಳುವ ಮೂಲಕ ಹಬ್ಬವನ್ನು ಸಂಭ್ರಮಿಸಿದರು.
ನಂತರ ಎಲ್ಲರೂ ಜೊತೆಗೂಡಿ ಮೆರವಣಿಗೆ ಮೂಲಕ ಷರ್‍ಮದ್‍ಷಾವಲ್ಲಿಅಲ್ಲಾಹ್ ದರ್ಗಾಹ್ ಗೆ ತೆರಳಿ ವಿಶ್ವಶಾಂತಿ ಹಾಗೂ ನೆರೆಸಂತ್ರಸ್ಥರ ಒಳಿತಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಸೀದಿ ಕಮಿಟಿಯ ಪದಾಧಿಕಾರಿಗಳು ಸದಸ್ಯರು, ಜೆಡಿಎಸ್ ಜಿಲ್ಲಾಧ್ಯಕ್ಷ(ಮೈನಾರಿಟಿ) ಇಲಿಯಾಸ ಇಬ್ರಾಹಿಂ ಸಾಬ್, ಮಾಜಿ ಪ.ಪಂ. ಸದಸ್ಯರಾದ ಬಾವಾಫಕೀ ಎಂ. ಗುರ್ಕಾರ್ ತಾಮೀರ್ ಸೊಸೈಟಿಯ ಮ್ಯಾನೇಜರ್ ಮಹಮ್ಮದ್ ಅಜೀಮ ಶೇಖ್, ಕಂಟ್ರ್ಯಾಕ್ಟರ್ ರಫೀಕ್ ಸಾಬ್ (ಭಯ್ಯಾ) ಮೊದಲಾದವರು ಉಪಸ್ಥಿತರಿದ್ದರು. ಪಿ.ಎಸ್.ಐ ಮಂಜುನಾಥ ಬಾರ್ಕಿ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು. ಮುಸ್ಲೀಂ ಬಾಂಧವರ ಮನೆಗಳಲ್ಲಿ ಈದ್(ಹಬ್ಬ)ನ ವಿಶೇಷವಾದ ಕುರಿ ಬಲಿದಾನ (ಕುರ್ಭಾನಿ) ಮಾಡಿ ಅಲ್ಲಾಹ್‍ನ ಆದೇಶವನ್ನು ಪರಿಪಾಲಿಸಿದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *