weekend tour- ತೆರೆಮರೆಯ ತಾಣ ಜನಾಕರ್ಷಣೆಯ ಕೇಂದ್ರ

ಶೀರಲಗದ್ದೆಗೆ ಬೇಕು ಸರ್ವಋತು ರಸ್ತೆ,

ತೆರೆಮರೆಯ ತಾಣ ಜನಾಕರ್ಷಣೆಯ ಕೇಂದ್ರ
ಜಲಪಾತಗಳ ಜಿಲ್ಲೆ ಉತ್ತರಕನ್ನಡದ ಸಿದ್ಧಾಪುರದ ಶೀರಲಗದ್ದೆ ಜಲಪಾತಕ್ಕೆ ಹೆಚ್ಚಿನ ಮಹತ್ವ, ಆಕರ್ಷಣೆ ಬರುತಿದ್ದು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗಳು ಈ ಜಲಪಾತಕ್ಕೆ ಭೇಟಿ ನೀಡುತ್ತಿರುವುದು ಸಾಕ್ಷಿಯಾಗಿದೆ.
ಶಿರಸಿ-ಸಿದ್ಧಾಪುರ ರಾಜ್ಯ ಹೆದ್ದಾರಿಯಲ್ಲಿ ಸಿದ್ಧಾಪುರದಿಂದ 16 ಕಿ,ಮೀ ದೂರ ಮತ್ತು ಶಿರಸಿಯಿಂದ 22 ಕಿ.ಮೀ ದೂರದ ಶೀರಲಗದ್ದೆ ಜಲಪಾತ ವೀಕ್ಷಣೆ ಸರಳ ಮತ್ತು ಸುಲಭ ಇರುವುದರಿಂದ ರಾಜ್ಯ ಪರರಾಜ್ಯಗಳ ಜನರು ಈ ಜಲಪಾತಕ್ಕೆ ಭೇಟಿ ನೀಡಿ ನೀರು,ನಿಸರ್ಗದ ಸೊಬಗನ್ನು ಸವಿಯುತ್ತಿದ್ದಾರೆ.
ರಾಜ್ಯಮುಖ್ಯರಸ್ತೆಯಿಂದ ಕೇವಲ 2 ಕಿ.ಮೀ ದೂರದ ಅರಣ್ಯದ ಮಧ್ಯೆ ಹರಿಯುತ್ತಿರುವ ಈ ಜಲಧಾರೆ ಇಷ್ಟುವರ್ಷ ಎಲೆಮರೆಯ ಕಾಯಿಯಂತಿದ್ದುದೇ ಆಶ್ಚರ್ಯದ ವಿಷಯ. ಚಂಡ ಸೇರಿದಂತೆ ಕೆಲವು ಕನ್ನಡ ಚಿತ್ರಗಳ ಚಿತ್ರೀಕರಣ ಈ ಜಲಪಾತದಲ್ಲಾದರೂ ಇದಕ್ಕೆ ಪ್ರಚಾರ,ಪ್ರಸಾರ ದೊರೆತದ್ದು ಕಡಿಮೆ.
ಸ್ಥಳಿಯ ನಾರಾಯಣ ನಾಯ್ಕ ಎನ್ನುವ ಯುವಕ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಈ ಜಲಪಾತದ ಪ್ರಚಾರ ಮಾಡಿದ ನಂತರ ಜನಾಕರ್ಷಣೆ ವೃದ್ಧಿಸಿತಾದರೂ ಸಮಾಜಮುಖಿ ಪತ್ರಿಕೆ ಮತ್ತು ನ್ಯೂಸ್ ಪೊರ್ಟಲ್ ಕೊಟ್ಟ ಪ್ರಚಾರದಿಂದ ಈ ಜಲಪಾತಕ್ಕೆ ಹೆಚ್ಚಿನ ಪ್ರಚಾರ,ಜನಪ್ರೀಯತೆ ದೊರೆತಿದೆ.
ಹೀಗೆ ಎಲೆಮರೆಯ ಕಾಯಿಯಂತಿದ್ದ ಶೀರಲಗದ್ದೆ ಜಲಪಾತ ಕಾಳೇನಳ್ಳಿಗೆ ಸಮೀಪ ಸುಲಭ ಪ್ರಯಾಣಕ್ಕೆ ಸಿಗುವ ಅಪರೂಪದ ನೈಸರ್ಗಿಕ ಸೌಂದರ್ಯವಾದರೂ ಇಲ್ಲಿಗೆ ತೆರಳಲು ಸೂಕ್ತ ಸರ್ವಋತು ರಸ್ತೆಯಿಲ್ಲ.
ಈ ಜಲಪಾತಕ್ಕೆ ವ್ಯವಸ್ಥಿತ ರಸ್ತೆಮಾಡಿ ಎಂದು ಈ ಭಾಗದ ಜನಪ್ರತಿನಿಧಿಗಳು ಸಾಮಾಜಿಕ ಮುಖಂಡರಾದ ನಾರಾಯಣ,ಅಶೋಕ ನಾಯ್ಕ,ಗೌರೀಶ್ ನಾಯ್ಕ, ವಸಂತ ಹೆಗಡೆ, ಸುಬ್ರಾಯ ಮತ್ತೀಹಳ್ಳಿ ಸೇರಿದ ಅನೇಕರು ಸ್ಥಳಿಯ ಶಾಸಕರು, ಸಂಸದರನ್ನು ಆಗ್ರಹಿಸಿದ್ದರೂ ಕಳೆದ ಕೆಲವು ವರ್ಷಗಳಿಂದ ಪ್ರವಾಸೋದ್ಯಮ ಇಲಾಖೆಯ ಕಡೆ ಬೊಟ್ಟುಮಾಡುತ್ತಿರುವ ಇಲ್ಲಿಯ ಸಂಸದರು, ಶಾಸಕರು ಈ ಜಲಪಾತಕ್ಕೆ ‘ಬೇಡ’ ದವರಾಗಿದ್ದಾರೆ.
ಇತ್ತೀಚೆಗೆ ಈ ಜಲಪಾತಕ್ಕೆ ಭೇಟಿ ನೀಡಿದ ಸಿದ್ಧಾಪುರ ಪತ್ರಕರ್ತರ ತಂಡ ಇಷ್ಟು ಸಮೀಪದ ಅದ್ಭುತ ಜಲಪಾತ ಪ್ರಚಾರ,ಅಭಿವೃದ್ಧಿಯ ವಿಷಯದಲ್ಲಿ ಕತ್ತಲೆಯಲ್ಲಿರುವುದರಿಂದ ಬೇಸರ ವ್ಯಕ್ತಪಡಿಸಿ ಈ ಜಲಪಾತದ ಅಭಿವೃದ್ಧಿ, ಮೂಲಭೂತ ಸೌಲಭ್ಯಗಳ ಪೂರೈಕೆಗೆ ಅಗತ್ಯ ಒತ್ತಡ, ಪ್ರಚಾರ ನೀಡುವುದಾಗಿ ತಿಳಿಸಿದ್ದಾರೆ.
ಪ್ರವಾಸೋದ್ಯಮ ಸಚಿವರಾಗಿದ್ದ ಹಿಂದಿನ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರ ಕಣ್ಣಿಗೆ ಬೀಳದೆ, ಗಮನ ಸೆಳೆಯದ ಈ ಪ್ರೇಕ್ಷಣೀಯ ಸ್ಥಳದ ಅಭಿವೃದ್ಧಿ ಬಗ್ಗೆ ಈಗಿನ ರಾಜ್ಯ, ಕೇಂದ್ರ ಸರ್ಕಾರಗಳು ಕಣ್ಣು ತರೆಯಬಹುದೆ ಎನ್ನುವ ನಿರೀಕ್ಷೆ ಸ್ಥಳೀಯರಲ್ಲಿದೆ.
ರಸ್ತೆ, ವೀಕ್ಷಣಾಗೋಪುರ, ಪಾರ್ಕಿಂಗ್, ಊಟೋಪಚಾರಕ್ಕೆ ಅಗತ್ಯವಾಗಿ ಬೇಕಾದ ಹೋಟೆಲ್ ನಿರ್ಮಾಣವಾದರೆ ಸಿದ್ಧಾಪುರದ ಈ ಜಲಪಾತ ಪ್ರಪಂಚದ ಪ್ರಕೃತಿಪ್ರೀಯರನ್ನು ಆಕರ್ಷಿಸುವಲ್ಲಿ ಅನುಮಾನಗಳಿಲ್ಲ. ಆಸಕ್ತ ಚಾರಣ ತಜ್ಞರು ಇಲ್ಲಿ ಜಲಕ್ರೀಡೆ,ಜಲಸಾಹಸ ಚಾರಣಗಳನ್ನು ಆಯೋಜಿಸುವಂತೆ ಮಾಡಿ ಸ್ಥಳಿಯರು, ಪ್ರವಾಸಿಗಳಿಗೆ ಅನುಕೂಲಮಾಡಿಕೊಡುವ ಹಿನ್ನೆಲೆಯಲ್ಲಿ ಸ್ಥಳಿಯ ಆಡಳಿತ ಪ್ರಯತ್ನಿಸಬೇಕಾಗಿದೆ. ವರ್ಷದ ಕನಿಷ್ಟ ಆರು ತಿಂಗಳು ತುಂಬಿಹರಿಯುವ ಕಾರಗೋಡು ಹೊಳೆಯ ಈ ಶೀರಲಗದ್ದೆ ಜಲಪಾತ ಸಿದ್ಧಾಪುರದ ಪ್ರಮುಖ ಕೆಲವು ಪ್ರವಾಸಿತಾಣಗಳಲ್ಲಿ ಒಂದಾಗುವ ಸಾಧ್ಯತೆಗಳಂತೂ ಇವೆ.
ನಿಸರ್ಗ ಸೌಂದರ್ಯದ ಈ ಜಲಪಾತ ತೆರೆಮರೆಯಲ್ಲಿರುವುದೇ ಆಶ್ಚರ್ಯ,ಸ್ಥಳಿಯ ಜವಾಬ್ಧಾರಿ ವ್ಯಕ್ತಿಗಳು,ಸಂಬಂಧಿಸಿದ ಇಲಾಖೆ, ಅಧಿಕಾರಿಗಳು ಆಸಕ್ತಿವಹಿಸಿದರೆ ತಾಲೂಕಿನ ಈ ಜಲಪಾತ ಒಂದು ಪ್ರವಾಸಿತಾಣವಾಗುವುದಂತೂ ನಿಶ್ಚಿತ.ಗುಣಮಟ್ಟದ ಸರ್ವಋತು ರಸ್ತೆ ಇಲ್ಲಿಯ ಮೊದಲ ಆದ್ಯತೆ.- ರವೀಂದ್ರಭಟ್,ಗಂಗಾಧರ ಕೊಳಗಿ, ಬರಹಗಾರರು,ಸಿದ್ಧಾಪುರ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *