ಶಾಶ್ವತ ಪರಿಹಾರಕ್ಕೆ ಮುಖ್ಯಮಂತ್ರಿಗಳಿಗೆ ಜೆ.ಡಿ.ಎಸ್. ಮನವಿ


(ಸಿದ್ಧಾಪುರ,ಆ.19-)ರಾಜ್ಯದ ಮಹಾಮಳೆ ಮತ್ತು ಪ್ರವಾಹದಿಂದ ಸಂತೃಸ್ತರಾದವರಿಗೆ ಶೀಘ್ರ ಪರಿಹಾರ ನೀಡಲು ಉತ್ತರ ಕನ್ನಡ ಜಿಲ್ಲಾ ಜೆ.ಡಿ.ಎಸ್. ಘಟಕ ಆಗ್ರಹಿಸಿದೆ.
ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರಿಗೆ ಪತ್ರದ ಮೂಲಕ ಮನವಿ ಮಾಡಿರುವ ಉ.ಕ. ಜೆ.ಡಿ.ಎಸ್. ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಲಿಯಾಸ್ ಶೇಖ್ ರಾಜ್ಯದಲ್ಲಿ ಲಕ್ಷಾಂತರ ಜನರ ಬೆಳೆ, ಮನೆ,ಭರವಸೆಗಳಿಗೆ ಹಾನಿಯಾಗಿದೆ. ಬೆಳೆ ನಾಶಕ್ಕೆ ವೈಜ್ಞಾನಿಕ ಪರಿಹಾರ ಮತ್ತು ಮನೆ ಕಳೆದುಕೊಂಡವರಿಗೆ ಪರ್ಯಾಯ ಶಾಶ್ವತ ವಸತಿ ವ್ಯವಸ್ಥೆ ಮಾಡುವಂತೆ ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಮಹಾಮಳೆ!-ಭಾಗ-01
ಮನೆ,ಬೆಳೆ,ಭದ್ರತೆ, ರಕ್ಷಣೆಯ
ಅಪಾಯದಲ್ಲಿ ಹೆಗಡೆಮನೆ
ಈ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆಸಾಧ್ಯವೆ?

  • ಸಿದ್ಧಾಪುರ ತಾಲೂಕು ಬೇಡ್ಕಣಿ ಗ್ರಾಮದ ಹೆಗಡೆಮನೆ,
  • 5 ಮನೆಗಳಲ್ಲಿ 2 ಮನೆಗಳ ಅಡಿಯಿಂದ ಮುಡಿಯವರೆಗೆ ಬಿರುಕು,
  • ಹಿಂದಿನ ಬೆಟ್ಟ, ಮುಂದಿನ ತೋಟದ ತೊರೆ, ಕೆಳಗಿನ ಅಡಿಪಾಯ ಕುಸಿಯುವ ಭೀತಿ,
  • 2017 ರಲ್ಲಿ ವಾಸಕ್ಕೆ ಅಯೋಗ್ಯವೆಂದು ವರದಿ ನೀಡಿದ್ದರೂ ಸಿಗದ ಸರ್ಕಾರದ ಅನುಕೂಲ
    (ಸಿದ್ಧಾಪುರ,ಆ.19-) ಕಾರ್ಯಕ್ರಮಕ್ಕೆಂದು ಬಂದ ಅಣ್ಣ-ತಂಗಿ ಸಂಜೆವೇಳೆಗೆ ಹೊರಟು ನಿಂತಿದ್ದರು. ಅವರೊಂದಿಗಿದ್ದ ಮಕ್ಕಳು ಏನೋ ಹಿರಿಯರ ಕಸಿವಿಸಿ ಅರ್ಥವಾಗದೆ ಗೊಂದಲದಲ್ಲಿದ್ದರು.
    ಪ್ರತಿಬಾರಿ ಹೊರಡಲು ಸಿದ್ಧರಾಗುತಿದ್ದಾಗ, ಹೊರಡಲನುವಾದಾಗ ನಾಳೆ, ನಾಡಿದ್ದು ಹೋದರಾಯಿತು ಎನ್ನುವ ಬೇಡಿಕೆ ಈ ಬಾರಿ ಬಾಯಿಗೆ ಬರಲಿಲ್ಲ. ಯಾಕೆಂದರೆ,
    ಮನೆ ಹಿಂದಿನ ಗುಡ್ಡದ ಪಕ್ಕದ ಕಾಲುವೆಯಿಂದ ಬರುತಿದ್ದ ನೀರು ಮನೆಯೊಳಗೆ ನುಗ್ಗಿ ಏನಾಗುವುದೋ ಎನ್ನುವ ಆತಂಕ. ನಮಗೆ ಅವರನ್ನು ಕಳುಹಿಸುವ ಧಾವಂತ, ಅವರಿಗೆ ಇಂಥ ಸ್ಥಿತಿಯಲ್ಲಿ ನಮ್ಮನ್ನು ಬಿಟ್ಟು ಹೋಗದ ಭಯ, ಅಣ್ಣ ದೇವರಿಗೆ ಹೂವು ಹಾಕಿ ಎಂಥಾ ಸ್ಥಿತಿಗೆ ನಮ್ಮನ್ನು ದೂಡಿಬಿಟ್ಟೆ ಎಂದು ಕಣ್ಣೀರು ಹಾಕುತಿದ್ದ, ನಮ್ಮೆಲ್ಲರ ಕಣ್ಣೀರ ಕಟ್ಟೆ ಒಡೆದು ನೀರು ದಳ,ದಳ…
    ಒಂದು ವಾರ ನಾವು ನಿದ್ರೆ ಮಾಡಲಿಲ್ಲ.ಅಂತೂ ಮಳೆನಿಂತು ಭಯ ಕಡಿಮೆಯಾದ ಸುಖ ಈಗ. ಹೀಗೆಂದು ತಮ್ಮ ಅನುಭವ ಹಂಚಿಕೊಳ್ಳುತ್ತಲೇ ಭಾವುಕರಾದವರು ಕೃಷಿಕ ಸದಾನಂದ ಹೆಗಡೆ,
    2017 ರಲ್ಲಿ ಸ್ವಲ್ಫ ಬಿರುಕು ಕಾಣಿಸಿಕೊಂಡಿತ್ತು. ಈ ಜರಿ-ಧರೆ ಕುಸಿದರೆ ಮನೆಯೂ ಜಾರುತ್ತದೆ,ತೋಟ,ಬೆಳೆ ತೊಳೆಯುತ್ತದೆ ಎಂದು ಸಾಲಮಾಡಿ ಮೂರುಲಕ್ಷರೂಪಾಯಿ ವೆಚ್ಚದ ತಡೆಗೋಡೆ ಕಟ್ಟಿಸಿ ಸರಿಯಾಗಿ ಆರು ತಿಂಗಳು ಕಳೆದಿಲ್ಲ,ಕರ್ಚುಮಾಡಿದ ಹಣ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಯಿತು. ಮನೆ ಹಿಂದಿನ ಧರೆ ಕುಸಿಯಿತು, ಮನೆಯ ಅಡಿಪಾಯ, ಅಂಗಳ ಬಿರುಕು ಬಿಟ್ಟಿತು. ನೋಡಲು ಬಂದವರು ಮನೆ ಖಾಲಿ ಮಾಡಿ ಎಂದು ಗೋಗರೆಯತೊಡಗಿದರು.
    ನನ್ನ ಮನಸ್ಸು ಒಪ್ಪಲಿಲ್ಲ, ಬದುಕಿದ್ದರೂ ಇಲ್ಲೇ ಸತ್ತರೂ ಇಲ್ಲೇ ಎಂದು ನಿರ್ಧರಿಸಿ ಕುಸಿದು ಕೂತು ಬಿಟ್ಟೆ, ಸಂಬಂಧಿಗಳು, ಹಿತೈಶಿಗಳ ಒತ್ತಾಯದ ಎದುರು ನನ್ನ ಹಠ ಸೊರಗಿತು. ದುಖ:ದಿಂದ ಮನೆ ಬಿಟೆ,್ಟ ಹಲಗೇರಿ ಗಣಪತಿ ಹೆಗಡೆ ನಮ್ಮ ಸ್ಥಿತಿ ನೋಡಿ ಮರುಗಿದವರು ನಮ್ಮ ಮನೆಗೇ ಬನ್ನಿ, ನೆರೆ-ಮಳೆ ರಗಳೆ ಮುಗಿದ ನಂತರ ನೋಡಿದರಾಯಿತು ಎಂದು ಎಳೆದೊಯ್ದಂತೆ ನಮ್ಮನ್ನು ಸ್ಥಳಾಂತರಿಸಿದರು,ತಮ್ಮ ಮನೆಯಲ್ಲೇ ವಾಸಕ್ಕೆ ಜಾಗ ಕೊಟ್ಟು ಮನವೀಯತೆ ಮೆರೆದರು.
    ಈಗ ಬೆಳೆ ನಾಶವಾಗಿದೆ, ಮನೆ ವಾಸಕ್ಕೆ ಅಯೋಗ್ಯವಾಗಿದೆ.ಸರ್ಕಾರ ನಮ್ಮ ಕೈ ಹಿಡಿಯದಿದ್ದರೆ ನಮಗೆ ಭವಿಷ್ಯವಿಲ್ಲ ಹೀಗೆ ತಮ್ಮ ನೋವು, ಅನಿವಾರ್ಯತೆ ಹೇಳಿಕೊಂಡವರು ಶ್ರೀಕಾಂತ್ ಹೆಗಡೆ, ಇದು ಬೇಡ್ಕಣಿ ಪಂಚಾಯತ್ ಹೆಗಡೆಮನೆಯ ಕುಟುಂಬಗಳ ಪ್ರವಾಹದ ನಂತರದ ಗೋಳಿನ ಕತೆ.
    ಕಳೆದ ಒಂದು ವಾರದಿಂದ ತಾಲೂಕಿನಾದ್ಯಂತ ಹಾನಿ, ಗೋಳು,ತೊಂದರೆಗಳ ಕತೆ ಕೇಳಿ ಘಾಸಿಗೊಂಡಿದ್ದ ನನಗೆ ಒಂದರ್ಧದಿನ ಇಂಥದ್ದಕ್ಕಾಗಿ ಹಾಳು ಮಾಡುವ ಮನಸ್ಸಿರಲಿಲ್ಲ, ಆದರೆ ರಮೇಶ್, ದಿವಾಕರರ ಒತ್ತಾಯಕ್ಕೆ ಮಣಿದು ಹೋದರೆ ಬೇಡ್ಕಣಿಯ ಹೆಗಡೆಮನೆ ಕೇರಿಯಲ್ಲಿ ಇಂಥ ಧಾರುಣ ವಾತಾವರಣವಿದೆ ಎಂಬುದನ್ನು ಕೇಳಿ ನಂಬಲು ಸಿದ್ಧನಿಲ್ಲದ ಮನಸ್ಥಿತಿಯಲ್ಲಿ ಅಲ್ಲಿಯ ಸಾಕ್ಷಾತ್ ದರ್ಶನ ನೋಡಿ ಬರದಿದ್ದರೆ ಇವರ ವಸ್ತುಸ್ಥಿತಿ ಅರ್ಥವಾಗುತ್ತಿರಲಿಲ್ಲ ಎನಿಸಿತು.
    ಅನೇಕ ವರ್ಷಗಳ ಹಿಂದೆ ನೆಲೆಸಿರುವ ಇಲ್ಲಿಯ ಐದು ಮನೆಗಳ, ಮೂಲತ: ಒಂದೇ ಕುಟುಂಬ ಬೆಟ್ಟದ ಬೆನ್ನಿನ ಕೆಳಗೆ ತೋಟದ ಏರಿಮೇಲೆ ನೆಲೆಸಿವೆ. ಈ ಸಾಲುಮನೆಗಳ ಕೊನೆಯ ತುದಿಯ ಶ್ರೀಕಾಂತ್ ಹೆಗಡೆಯವರ ಮನೆಯ ಅಡಿಪಾಯ,ತೋಟದ ಏರಿ ಕುಸಿದು ಮನೆ ನೆಲಕ್ಕೊರಗುವ ಅಪಾಯದ ಹಂತ ತಲುಪಿದೆ.ಅದಕ್ಕೇ ತಾಕಿಕೊಂಡಿರುವ ಇನ್ನೊಂದು ಮನೆ ಸದಾನಂದ ಹೆಗಡೆಯವರದ್ದು, ಅಲ್ಲಿ ದೇವರ ವಾಸಸ್ಥಾನವಂತೆ! ಜಗಲಿ ಬಿರುಕು ಬಿಟ್ಟರೆ, ಮನೆಯ ಕಾಡುಮರಗಳ ಭದ್ರ ಅಂಕಣದ ಮನೆಯ ಮೇಲ್ಮಹಡಿ ಒರಗಿದೆ. ಇದೇ ಮನೆಗೆ ತಾಕಿಕೊಂಡೇ ಮತ್ತೆರಡು ಮನೆಗಳಿವೆ. ಮಲೆನಾಡಿನ ಹಳೆಯ ಶೈಲಿಯ ಮೂಲಮನೆಗೆ ಅಕ್ಕಪಕ್ಕಗಳಲ್ಲೇ ಆಧುನಿಕ ವಿನ್ಯಾಸಗಳ ಮನೆಗಳೂ, ವ್ಯವಸ್ಥೆಗಳೂ ಇವೆ. ಆದರೆ ತಳಪಾಯ ಮನೆಹಿಂದಿನ ಬೆಟ್ಟ, ಮನೆಮುಂದಿನ ತೋಟ ಎಲ್ಲವೂ ಮಹಾಮಳೆಯ ರಭಸಕ್ಕೆ ಮುನ್ನುಗ್ಗಿ ಮನೆಯನ್ನೇ ಅಲುಗಾಡಿಸುತ್ತಿವೆ.
    ಯಾವುದೇ ವ್ಯಕ್ತಿ, ಅಧಿಕಾರಿ, ಮನುಷ್ಯ ಈ ಕುಟುಂಬಗಳನ್ನು ಅದೇ ಮನೆಯಲ್ಲಿ ಉಳಿಯಿರಿ ಎಂದು ಹೇಳಲಾರದ ಸ್ಥಿತಿ ಇದೆ. ಆದರೆ ಒಮ್ಮೆಲೇ ಹೊರಡಿ ಎಂದರೆ ಹೋಗುವುದೆಲ್ಲಿಗೆ?
    ಆಶ್ರಯಕ್ಕೆ ಮನೆ, ದೈನಂದಿನ ಕರ್ಚು ಎಲ್ಲವನ್ನೂ ವ್ಯವಸ್ಥೆ ಮಾಡಿಕೊಳ್ಳುವುದ್ಹ್ಯಾಗೆ? ಎರಡು ವರ್ಷಗಳ ಹಿಂದೆಯೇ ಇಲ್ಲಿಯ ಶ್ರೀಕಾಂತ್ ಹೆಗಡೆಯವರ ಮನೆ ವಾಸ್ತವ್ಯಕ್ಕೆ ಅಯೋಗ್ಯ ಎಂದು ತಹಸಿಲ್ಧಾರರೇ ಶರಾ ಬರೆದಿದ್ದಾರೆ, ಆದರೆ ಪರ್ಯಾಯ ವ್ಯವಸ್ಥೆ ಮಾಡುವ ಸಂಪೂರ್ಣ ಅನುಕೂಲ, ಅವಕಾಶ ತಹಸಿಲ್ದಾರರಿಗಿದೆಯೇ?
    ಸಣ್ಣ ಜನಪ್ರತಿನಿಧಿಗಳಿಂದ ರಾಜ್ಯ ವಿಧಾನಸಭಾ ಅಧ್ಯಕ್ಷರು, ಲೋಕಸಭೆ ಸದಸ್ಯರು, ಕೇಂದ್ರದ ಮಾಜಿ ಮಂತ್ರಿ, ರಾಜ್ಯದ ಮಾಜಿ ಮಂತ್ರಿಗಳು ಯಾರಿಗಿದೆ ಸಾಮಥ್ರ್ಯ, ಅಧಿಕಾರ.
    ಸತ್ತಮೇಲೆ ಸಾಂತ್ವನ ಹೇಳಲು ಸಾವಿರಾರು ಬಾಯಿ ಸಿಕ್ಕಾವು? ಏನುಪಯೋಗ? ಜಿ.ಪಂ. ಸದಸ್ಯ ನಾಗರಾಜ್ ನಾಯ್ಕ ಎರಡೆರಡು ಬಾರಿ ಬಂದು ವಿಚಾರಿಸಿದ್ದಾರೆ, ಗ್ರಾಮಪಂಚಾಯತ್ ಆಡಳಿತ, ಅಧಿಕಾರಿ ವರ್ಗ ನೋಡಿ, ಭರವಸೆಯ ಮಾತನಾಡಿ ಹೋಗಿದೆ. ವಾಸ್ತವ್ಯ ಸ್ಥಳಾಂತರ ಮಾಡಿ, ಮನೆ ಕಟ್ಟಿಕೊಳ್ಳಲು ಸಹಕರಿಸಲು, ನೆರವಾಗಲು ಸರ್ಕಾರದ ಬಳಿ ಪರಿಹಾರ,ಯೋಜನೆಗಳಿಲ್ಲ ಎಂದರೆ ಅಲ್ಲೇ ಉಳಿದು ಸಾಯಬೇಕೆ?
    ಸರ್ಕಾರ, ಸರ್ಕಾರದ ಕಾನೂನು, ರೀತಿ-ನೀತಿಗಳು ಬದಲಾಗಬೇಕು. ಯಾಕೆಂದರೆ ಅಪಾಯ, ಆಕಸ್ಮಿಕಗಳಲ್ಲಿ ಈ ಜನರನ್ನು ಕೊಲ್ಲಲು, ಯಾವುದೇ ಅನುಕೂಲ, ಪರ್ಯಾಯಗಳಿಲ್ಲದೆ ಇವರನ್ನು ನಿರಂತರ ಜೀವಂತ ಕೊಲ್ಲಲು ಸರ್ಕಾರ, ವ್ಯವಸ್ಥೆಗೂ ಅಧಿಕಾರವಿಲ್ಲ.
    ನೆನಪಿಡಿ, ಇಂಥವರು ಬದುಕು ಮೂರಾಬಟ್ಟೆಯಾದಾಗ ಯಾವುದೇ ದೇವರು, ಧರ್ಮ, ರಾಜಕೀಯ ಪ್ರೇರಿತ ಧರ್ಮರಕ್ಷಕರು ಬರುವುದಿಲ್ಲ, ಅವರಿಗೆ ಯಾವ ಯೋಗ್ಯತೆ, ಸಾಧ್ಯತೆಗಳೂ ಇರುವುದಿಲ್ಲ. ಇಂಥವರ ಬದುಕು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಈಗ ಆಗಬೇಕಾದುದೇನೆಂದರೆ ಈ ಐದೂ ಕುಟುಂಬಗಳೂ ಎತ್ತರದ ತಮ್ಮದೇ ಜಾಗದಲ್ಲಿ ಮನೆ ಕಟ್ಟಿಕೊಂಡು ಈ ಹಳೆಯ ಮನೆ, ವಾತಾವರಣ ಬಿಟ್ಟು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಅದಕ್ಕೆ ಸರ್ಕಾರ, ವ್ಯವಸ್ಥೆ ತನ್ನ ಮಿತಿಯಲ್ಲಿ ಅವಕಾಶ, ಅನುಕೂಲ ಮಾಡಿಕೊಡಬೇಕು. ಮತ್ತೆ ಮಳೆಗಾಲ ಬರುವ ಮೊದಲೇ ಈ ವ್ಯವಸ್ಥೆ ಆಗಿ ಅವರಿಗೆ ಸರ್ಕಾರ, ವ್ಯವಸ್ಥೆಯ ಬಗ್ಗೆ ಭರವಸೆಮೂಡುವಂತಾಗಬೇಕು, ಅದರ ಜವಾಬ್ಧಾರಿ ಜನಪ್ರತಿನಿಧಿಗಳೇ ಹೊರಬೇಕು.
    -ಕನ್ನೇಶ್, ಕೋಲಶಿರ್ಸಿ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *