
ಆ ನಿನ್ನ ಸವಿ ಧ್ವನಿ ತಾಗಿದಾಗ ನನ್ನ ಎದೆಗೆ ತುಂಬಿ ಹರಿಯುವ ಸಂಭ್ರಮ ಸಾವಿರ ನದಿಗಳಿಗೆ… ಸೇರಲು ಸಾಗರ ಧುಮ್ಮಿಕ್ಕುವ ನಡಿಗೆ ಹಾದು ಹೋಗುವ ದಾರಿಗೂ ಕೂಡಿ ಬಂತು ಅಮೃತ ಘಳಿಗೆ.. ಎಲೆ ಹೂಗಳಿಗೆ ಎಂತಹ ಸ್ಪರ್ಶ ಸುಮಧುರ ಸ್ವರವಾಲಿಸಲು ಹಚ್ಚಿಕೊಂಡವು ಪರಾಗಸ್ಪರ್ಶ.. ಶಿಶಿರ ಋತುವಿಗೆ ಹಾವಭಾವಗಳ ಅಭಿಷೇಕವೇ ಮೊದಲ ಮಂಜಿನ ಹನಿಗಳು ಕದ್ದಾಲಿಸಲು ಸುಂಯ್ ಎಂದಿವೆ..ಚುಮುಚುಮು ಚಳಿಯು ಆವರಿಸಲು ಮೆಲ್ಲಮೆಲ್ಲನೆ ಕೇಳಿದೆ ಕಾರಣ ಏನೆನ್ನಲು ಉಸಿರಿದವು ಕಿವಿಯಲ್ಲಿ ಥಟ್ಟನೆ.. ಹೊಸ ಕನಸು ಅವುಗಳಿಗೂ ತಂಗಾಳಿಯ ಮೆಚ್ಚಿಸಲು ನಿನ್ನ ರಾಗವ ನಕಲಿಸಿ ಹೊರಡುವುದಂತೆ ಬೆಚ್ಚಗಾಗಿಸಲು..ಪಕ್ಕದ ಮುಳ್ಳ ಬೇಲಿಯಲ್ಲೂ ಅರಳಿ ನಗುವವು ಹೂಗಳು ಸುಗಂಧ ಸೂಸುವವು ಹೆಚ್ಚೆಚ್ಚು ಕೇಳಿ ಖುಷಿಯಾಗಿ ನಿನ್ನ ಮಾತುಗಳು.. ಮಾಧುರ್ಯದ ತುಣುಕುಗಳಿಗೆ ಜಲಪಾತದ ಧುಮುಕು ತೋಯಿದು ಮಿಂದೆದ್ದು ಧನ್ಯತೆ ಅನುಭವಿಸುವುದೇ ಬದುಕು..*ಬಸವರಾಜ ಕಾಸೆ* pradeepbasu40@gmail.com 7829141150ReplyForward |
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
