ಗ್ರಾಮೀಣ ಮಹಿಳೆಯರಿಗೆ ಇಂಗ್ಲೀಷ್ ಕಲಿಸುವ ಶಿಕ್ಷಕಿ ಸಂಶಿಯಾಗೆ ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿ


ಸಿದ್ದಾಪುರ.
ತಾಲೂಕಿನ ಅಣಲೇಬೈಲ್ ಗ್ರಾಪಂ ವ್ಯಾಪ್ತಿಯ ಹೂಡ್ಲಮನೆ ಹಿ.ಪ್ರಾ.ಶಾಲೆಯ ಶಿಕ್ಷಕಿ ಸಂಶಿಯಾರಿಗೆ ಈ ವರ್ಷದ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭ್ಯವಾಗಿದೆ.
ಕಳೆದ 12 ವರ್ಷಗಳಿಂದ ಹೂಡ್ಲಮನೆ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನೂ, ನಲಿ-ಕಲಿ, ಕಲಿಕೋತ್ಸವ ಮುಂತಾದ ಶೈಕ್ಷಣಿಕವಾದ ಯೋಜನೆಗಳಲ್ಲಿ ಹಾಗೂ ಇಂಗ್ಲೀಷ್ ಸಂಪನ್ಮೂಲ ವ್ಯಕ್ತಿಯಾಗಿ ಉತ್ತಮ ಕಾರ್ಯನಿರ್ವಹಿಸಿದ್ದಕ್ಕೆ ವಿಭಾಗಮಟ್ಟದಲ್ಲೂ ಪುರಸ್ಕಾರ ಪಡೆದಿದ್ದರು.
ಶಾಲೆಯಲ್ಲಿನ ಗ್ರಾಮೋತ್ಸವ, ಗ್ರಂಥಾಲಯ ಅಭಿವೃದ್ಧಿ ಮುಂತಾದವುಗಳಲ್ಲಿ ಉಳಿದ ಶಿಕ್ಷಕರ ಜೊತೆ ಹೆಚ್ಚಿನ ಶ್ರಮ ವಹಿಸಿದ್ದಾರೆ. ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್ ತರಗತಿಗಳ ಮೂಲಕ ಅವರಲ್ಲಿ ಕಲಿಕಾ ಸಾಮಥ್ರ್ಯ ಹೆಚ್ಚಿಸಿರುವದಲ್ಲದೇ ಹೂಡ್ಲಮನೆ ವ್ಯಾಪ್ತಿಯ ಮಹಿಳಾ ಪಾಲಕರಿಗೆ ಹಾಗೂ ಆಸಕ್ತ ಮಹಿಳೆಯರಿಗೆ ಲೇಡಿಸ್ ಕ್ಲಬ್ ರೂಪಿಸಿ ವಾರಕ್ಕೊಮ್ಮೆ ಇಂಗ್ಲೀಷ್ ಭಾಷೆ ಕಲಿಸುತ್ತಿರುವುದು ಅವರ ಹೆಗ್ಗಳಿಕೆ.
ಸಮಾಜಮುಖಿಯೊಂದಿಗೆ ಮಾತನಾಡಿದ ಶ್ರೀಮತಿ ಸಂಶಿಯಾ ನನಗೆ ದೊರೆತಿರುವ ಪುರಸ್ಕಾರ ನನ್ನ ಶಾಲೆಗೆ ಸಲ್ಲಬೇಕು. ಅಲ್ಲಿನ ಶಾಲಾಭಿವೃದ್ಧಿ ಸಮಿತಿ, ಶಿಕ್ಷಣ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳ, ಸಹ ಶಿಕ್ಷಕರ, ಪಾಲಕರ,ಪೋಷಕರ ಸಹಕಾರದಿಂದ ಇಂಥ ಪುರಸ್ಕಾರ ಪಡೆಯಲು ಸಾಧ್ಯವಾಗಿದೆ. ಶಾಲೆಗೆ ಇನ್ನೂ ಹೆಚ್ಚಿನ ಪ್ರಗತಿಯಾಗಲು ಈ ಪುರಸ್ಕಾರ ಕಾರಣವಾಗಲಿ ಎಂದರು.

ಮೊಹರೊತ್ತಲು ಮೇಲೊಬ್ಬ ಮಹಾರಾಯನಿದ್ದಾನೆ…
ಇವರ ಒಂದು ಕಲಾಕೃತಿ ಹೀಗೆ ಹೇಳುತ್ತದೆ
“ಬಂಧುಗಳೇ.. ನನಗೆ ಯಾವುದೇ ಪಕ್ಷ ಪಂಥ ಜಾತಿ ಧರ್ಮ ಲಿಂಗಗಳ ಮೊಹರೊತ್ತಬೇಡಿ, ದಯವಿಟ್ಟು ನನ್ನನ್ನು ಮನುಷ್ಯನ್ನನ್ನಾಗಿ ನೋಡಿ, ಹೃದಯದ ಪ್ರೀತಿಕೊಡಿ, ಮೋಹರೊತ್ತಲು ಮೇಲೊಬ್ಬ ಮಹಾರಾಯನಿದ್ದಾನೆ.”

ವಿಜಯ ಕಿರೇಸೂರ ಅವರು ಪ್ರಗತಿಪರ ಆಲೋಚನೆಯ ಚಿತ್ರಕಲಾ ಶಿಕ್ಷಕರು. ಗದಗ ಹತ್ತಿರದ ನಿರಲಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ತುಂಬಾ ವಿಶಿಷ್ಟ ಕನಸಿನೊಂದಿಗೆ ಕಾವ್ಯದಂತಹ ಚಿತ್ರಗಳನ್ನು ಬರೆಯುತ್ತಿದ್ದಾರೆ. ನಾಡಿನ ದಾರ್ಶನಿಕರ ಪುಟ್ಟ ಪುಟ್ಟ ಸಂದೇಶಗಳಿಗೆ ಕಲೆಯ ಸ್ಪರ್ಶ ನೀಡಿ ‘ಮಾತುಗಳು ಮಾರಾಟಕ್ಕಿವೆ’ ಶಿರ್ಷಿಕೆಡಿಯಲ್ಲಿ ಮಾತುಮಾರಿ ಜನಜಾಗೃತಿ ಮೂಡಿಸಿದ್ದಾರೆ.
ಚಿತ್ರಕಲಾ ಪದವಿಯಲ್ಲಿ ಚಿನ್ನದ ಪದಕದೊಂದಿಗೆ ವಿಜೇತರಾಗಿರುವ ಇವರು ನಾಡಿನ ಹಲವಡೆ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ, ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಚಿತ್ರ ಬರೆಯುವುದರ ಜೊತೆಜೊತೆಗೆ ಮಕ್ಕಳಲ್ಲಿ ವೈಚಾರಿಕ ಹೊಳಹುಗಳನ್ನು, ಚಿತ್ರದಾಚೆಗಿರುವ ಚಿಂತನೆಗಳನ್ನು ಬಿತ್ತುವ ಕೃಷಿಕರು. ಇವರ ರೇಖಾಚಿತ್ರಗಳು, ಕಲಾಕೃತಿಗಳು ತಕ್ಷಣ ನೋಡುಗರ ಮನಸೆಳೆಯುತ್ತವೆ.
ತಮ್ಮದೇ ಆದ ಒಂದು ಪುಟ್ಟ ಕಲಾಗ್ಯಾಲರಿಯ ಕನವರಿಕೆಯೊಂದಿಗೆ, ಜನಸಾಮಾನ್ಯರಿಗೂ ಕಲಾಕೃತಿಗಳನ್ನು ಅರ್ಥೈಸಬೇಕೆಂಬ ಸದಾಶಯದೊಂದಿಗೆ ಶ್ರಮಿಸುತ್ತಿದ್ದಾರೆ. ಕಲೆಯೊಳಗಡಗಿರುವ ಸಂಪ್ರದಾಯ ಮೌಢ್ಯದ ಚೌಕಟ್ಟನ್ನು ಮುರಿದು ಕಟ್ಟುವ ಕಾಯಕದಲಿ ತಲ್ಲೀನರಾಗಿದ್ದಾರೆ. ವೈಚಾರಿಕ ಚಿಂತನೆಯುಳ್ಳ ಕಿರೇಸೂರಂತಹ ಶಿಕ್ಷಕರ ಸಂಖ್ಯೆ ಹೆಚ್ಚೆಚ್ಚು ಹಿರಿದಾಗಬೇಕಿದೆ.
ಇವರ ಒಂದು ಕಲಾಕೃತಿ ಹೀಗೆ ಹೇಳುತ್ತದೆ
“ಬಂಧುಗಳೇ.. ನನಗೆ ಯಾವುದೇ ಪಕ್ಷ ಪಂಥ ಜಾತಿ ಧರ್ಮ ಲಿಂಗಗಳ ಮೊಹರೊತ್ತಬೇಡಿ, ದಯವಿಟ್ಟು ನನ್ನನ್ನು ಮನುಷ್ಯನ್ನನ್ನಾಗಿ ನೋಡಿ, ಹೃದಯದ ಪ್ರೀತಿಕೊಡಿ, ಮೋಹರೊತ್ತಲು ಮೇಲೊಬ್ಬ ಮಹಾರಾಯನಿದ್ದಾನೆ.” ಅಪ್ಪಟ ಜೀವಪರ ಕಾಳಜಿಯುಳ್ಳ ವಿಜಯ ಕಿರೇಸೂರವರ ಕಲಾಪಯಣ ಯಶಸ್ವಿಯಾಗಲಿ.
ಕೆ.ಬಿ.ವೀರಲಿಂಗನಗೌಡ್ರ.
ಎಸ್.ಆರ್.ಜಿ.ಹೆಚ್.ಎಂ ಪ್ರೌಢಶಾಲೆ, ಸಿದ್ದಾಪುರ-581355. ಉ.ಕ ಜಿಲ್ಲೆ. ದೂ-9448186099.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *