ಮಾನ್ಯ ವಿಧಾನಸಭಾ ಅಧ್ಯಕ್ಷರಿಗೊಂದು ಪತ್ರ


ಭಾಗ-1
ಮಾನ್ಯರೆ,
ನೀವು ಮೊದಲು ಅಂಕೋಲಾ ಶಾಸಕರಾಗಿ ನಂತರ ಐತಿಹಾಸಿಕ ಬನವಾಸಿ ಹೋಬಳಿಯನ್ನು ಯಲ್ಲಾಪುರ ಕ್ಷೇತ್ರಕ್ಕೆ ಉದ್ದೇಶಪೂರ್ವಕವಾಗಿ ಬಿಟ್ಟುಕೊಟ್ಟ ಪರಿವರ್ತಿತ ಶಿರಸಿ ಕ್ಷೇತ್ರದ ಶಾಸಕರಾಗಿ ಒಟ್ಟೂಐದು ಅವಧಿಗಳನ್ನು ಮುಗಿಸಿ, ಹಿರಿಯ ಶಾಸಕರಾಗಿ ಗೌರವಾನ್ವಿತ ಸಭಾಧ್ಯಕ್ಷರ ಸ್ಥಾನ ಅಲಂಕರಿಸಿದ್ದೀರಿ.
ಸಿದ್ಧಾಪುರ ಶಿರಸಿ ಸೇರಿದಂತೆ ನೀವು ಮತ್ತು ನಿಮ್ಮ ಪಕ್ಷದ ವ್ಯಕ್ತಿಯೇ ಪ್ರತಿನಿಧಿಸುವ ಉತ್ತರ ಕನ್ನಡದ ಜನಪ್ರತಿನಿಧಿತ್ವವನ್ನು ಕಾಲು ಶತಮಾನಕ್ಕಿಂತ ಹೆಚ್ಚು ಅವಧಿಯಿಂದ ಅನುಭವಿಸುತಿದ್ದೀರಿ. ಹಿಂದಿನ ಅವಧಿಯಲ್ಲಿ ನಾವು ವಿರೋಧಪಕ್ಷದಲ್ಲಿದ್ದೇವೆ ಆಡಳಿತ ಪಕ್ಷದವರು ನಮಗೆ ಕೆಲಸಮಾಡಲು ಬಿಡುತ್ತಿಲ್ಲ ಎಂದು ಗೋಳಾಡಿದ್ದನ್ನು ಜಿಲ್ಲೆಯ ಜನ ನೋಡಿದ್ದಾರೆ, ಕೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ವಿಶಾಲ, ವ್ಯಾಪಕ ಭೌಗೋಳಿಕ, ವಿಭಿನ್ನ ಪರಿಸರದ ಜಿಲ್ಲೆ. ಈ ಜಿಲ್ಲೆಯನ್ನು ಎರಡು ಅಥವಾ ಮೂರಾಗಿ ವಿಭಾಗಿಸುವ ಭೌಗೋಳಿಕ ಅನುಕೂಲಗಳಿವೆ. ಆದರೆ ನೀವು ಉ.ಕ. ಉಸ್ತುವಾರಿ, ಶಿಕ್ಷಣ ಸಚಿವರಾಗಿದ್ದಾಗ ಪ್ರಯಾಸದಿಂದ ಶಿರಸಿ ಶೈಕ್ಷಣಿಕ ಜಿಲ್ಲೆ ಮಾಡುವಲ್ಲಿ ಯಶಸ್ವಿಯಾಗಿದ್ದೀರಿ ಆದರೆ ನಿಮ್ಮ ಅವಧಿಯಲ್ಲಿ ಶಿರಸಿ ಪ್ರತ್ಯೇಕ ಜಿಲ್ಲೆ ಮಾಡಲು ಸಾಧ್ಯವಾಗಲಿಲ್ಲ.
ನಿಮ್ಮ ಅನುಕೂಲದ ಪರಿವರ್ತಿತ ಶಿರಸಿ ವಿಧಾನಸಭಾ ಕ್ಷೇತ್ರ, ಶಿರಸಿ ಶೈಕ್ಷಣಿಕ ಜಿಲ್ಲೆ, ಸೇರಿದ ಇತರ ಕೆಲಸಗಳನ್ನು ಮಾಡಿಕೊಳ್ಳಲು ನಿಮಗೆ ಕಷ್ಟವಾಗಲಿಲ್ಲ. ಈಗ ನಮ್ಮ ಜಿಲ್ಲೆಯ ಐತಿಹಾಸಿಕ ಸ್ಥಳ ನೀವು ಉದ್ಧೇಶಪೂರ್ವಕವಾಗಿ ಯಲ್ಲಾಪುರಕ್ಕೆ ಸೇರಿಸಿದ ಬನವಾಸಿ ಹೋಬಳಿಯನ್ನು ನೆರೆಯ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉದ್ದೇಶಿತ ಆನವಟ್ಟಿ ತಾಲೂಕಿಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಇದೇ ಸಮಯದಲ್ಲಿ ಬನವಾಸಿ, ಸಿದ್ಧಾಪುರಗಳನ್ನು ಉತ್ತರಕನ್ನಡಜಿಲ್ಲೆಯಿಂದ ಪ್ರತ್ಯೇಕಿಸಿ ನಿಮ್ಮ ನಾಯಕರ ಶಿಕಾರಿಪುರ ಜಿಲ್ಲೆಗೆ ಜನಸಂಖ್ಯೆ, ಭೌಗೋಲಿಕ ವ್ಯಾಪ್ತಿ ಮಾಡಿಕೊಳ್ಳುವ ಪ್ರಯತ್ನ ನಡೆದಿದೆಯಂತೆ.
ನಮಗೆ ದೂರದ ಕಾರವಾರಕ್ಕಿಂತ ಸಮೀಪದ ಶಿಕಾರಿಪುರ ಜಿಲ್ಲಾ ಕೇಂದ್ರವಾದರೆ ಅನುಕೂಲವೇ. ಆದರೆ ಉತ್ತರ ಕನ್ನಡದೊಂದಿಗೆ ನಮ್ಮ ಕರುಳು ಬಳ್ಳಿ ಸಂಬಂಧವಿದೆ. ನಮ್ಮ ಶಿರಸಿ-ಸಿದ್ಧಾಪುರದ ಜನರಿಗೆ ಶಿರಸಿಕೇಂದ್ರಿತ ಪ್ರತ್ಯೇಕ ಜಿಲ್ಲೆ ಬೇಕೋ ಕಾರವಾರವೇ ಉಳಿಯಬೇಕೋ ಎಂದರೆ,ಶಿರಸಿ ಪ್ರತ್ಯೇಕ ಜಿಲ್ಲೆ ಬೇಕು ಎನ್ನುತ್ತಾರೆ. ಹಾಗೆಯೇ ನಿಮಗೆ ಕಾರವಾರವೇ ಜಿಲ್ಲಾ ಕೇಂದ್ರವಾಗಿ ಉಳಿಯಬೇಕೋ ಶಿಕಾರಿಪುರ ಜಿಲ್ಲೆಗೆ ನೀವು ಸೇರಲು ಸಿದ್ಧರಿದ್ದೀರಾ? ಎಂದರೆ ಶಿಕಾರಿಪುರ ಓ.ಕೆ. ಕಾರವಾರ ಯಾಕೆ ಎನ್ನುತ್ತಾರೆ?
ಹೀಗೆ ನಮ್ಮ ಕ್ಷೇತ್ರದ ಜನರ ಆದ್ಯತೆ ಶಿರಸಿ ಪ್ರತ್ಯೇಕ ಜಿಲ್ಲೆ ಅಥವಾ ಶಿಕಾರಿಪುರದ ಹೊಸ ಜಿಲ್ಲೆಗೆ ಎನ್ನುವಂತಿದೆ. ಸರ್ಕಾರದ ಸಚಿವರು, ಮಂತ್ರಿಮಂಡಲ ನಿಯಂತ್ರಿಸುವ ನೀವು ನಿಮ್ಮ ಕ್ಷೇತ್ರದ ಜನರ ಭಾವನೆಗೆ ಸ್ಫಂದಿಸುವಂತೆ ಸರ್ಕಾರಕ್ಕೆ ನಿರ್ಧೇಶಿಸಲು ಸಾಧ್ಯವೆ?
ಶಿರಸಿ ಉಪವಿಭಾಗ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ರಸ್ತೆಗಳ ಸ್ಥಿತಿ ಮೂರಾಬಟ್ಟೆಯಾಗಿದೆ. ನೀರಾವರಿ ಅನುಕೂಲಕ್ಕಾಗಿ ಇರುವ ಚಿಕ್ಕ ನೀರಾವರಿ ಇಲಾಖೆ ಶಿರಸಿ ಸಿದ್ಧಾಪುರಗಳು ಸೇರಿದಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ನೂರಾರು ಕೋಟಿ ಕಾಮಗಾರಿ ನಿರ್ವಹಿಸಿದ್ದಾರೆ. ಈ ಕಾಮಗಾರಿಗಳ ಗುಣಮಟ್ಟ ನೋಡಬೇಕಾದರೆ ಸಿದ್ಧಾಪುರದ ಪುಟ್ಟಪ್ಪನ ಕೆರೆ, ಶಿರಸಿಯ ದೇವಿಕೆರೆ ಕಾಮಗಾರಿ ನೋಡಿದರೆ ಸಾಕು ವಾಸ್ತವ ತಿಳಿಯುತ್ತದೆ.
ಚಿಕ್ಕ ನೀರಾವರಿ ಇಲಾಖೆ ಸೆಟಲೈಟ್ ಸರ್ವೇ ಮೂಲಕ ಮಾಡಿದ ಅನೇಕ ಕಾಮಗಾರಿಗಳು ನಿಷ್ಫ್ರಯೋಜಕವೂ, ಅವೈಜ್ಞಾನಿಕವೂ. ಕಳಪೆ ಕೆಲಸಗಳೂ ಆಗಿವೆ. ಈ ಕೆಲಸಗಳ ಬಗ್ಗೆ ನೀವು ವಿಧಾನಸಭೆಯಲ್ಲಿ ತನಿಖೆಗೆ ಒತ್ತಾಯಿಸಲು ಸಾಧ್ಯವೆ?
ಇದೇ ಇಲಾಖೆ ಅರೆಂದೂರು, ಮುಗುದೂರು, ಇಳ್ಳಿಮನೆ ಗಳಲ್ಲಿ ನಿರ್ಮಿಸಿದ ಬಾಂದಾರುಗಳ ನೀರಿನ ಬಾಗಿಲುಗಳನ್ನು ತೆರೆಯದೆ ಪ್ರವಾಹ, ನೆರೆ ಸಂದರ್ಭದಲ್ಲಿ ಆದ ಹಾನಿ ನಿಮ್ಮ ಗಮನಕ್ಕಿರಬಹುದು, ಘನತೆವೆತ್ತ ವಿಧಾನಸಭಾ ಅಧ್ಯಕ್ಷರಾಗಿ ಈ ತೊಂದರೆ, ಕಳಪೆ ಕೆಲಸ, ಜನದ್ರೋಹಿತನದ ಇಲಾಖೆ, ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಸಾಧ್ಯವೆ?
ಒಂದೆರಡು ವಾರಗಳ ಕೆಳಗೆ ನೀವು ಬೇಡ್ಕಣಿಯ ಸ.ಪ್ರ.ದರ್ಜೆ ಕಾಲೇಜಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆ ಕಾಲೇಜಿನ ಸಮಸ್ಯೆ,ವಿದ್ಯಾರ್ಥಿಗಳ ಬೇಡಿಕೆ ಬಗ್ಗೆ ಪ್ರತಿಕ್ರೀಯಿಸಿ ಎಲ್ಲವೂ ಸಹಜ,ಸರಳ ಎನ್ನುವ ರೀತಿ ಮಾತನಾಡಿದ್ದೀರಿ? ಹಿಂದೆ ಆ ಸರ್ಕಾರಿ ಪದವಿ ಕಾಲೇಜಿನ ಕಟ್ಟಡವನ್ನು ದೂರದ ತ್ಯಾರಸಿ ಬಳಿ ನಿರ್ಮಿಸಲು ಅನುಮತಿ, ಅವಕಾಶ ಕೊಟ್ಟವರು ನೀವಲ್ಲವೆ? ಅಲ್ಲಿಯ ಕೆಲಸಗಳು, ಅನಿವಾರ್ಯತೆಯ ಬಗ್ಗೆ ರಾಜಕೀಯ ಮಾಡಬಾರದೆಂದು ಫರ್ಮಾನು ಹೊರಡಿಸಿದ್ದೀರಿ. ಅಲ್ಲಿ ಕಟ್ಟಡದ ವಿಷಯ, ಆಪ್ತರು, ಉಪನ್ಯಾಸಕರ ನೇಮಕಾತಿ(ವರ್ಗಾವಣೆ) ವಿಷಯಗಳಲ್ಲಿ ರಾಜಕೀಯ ಮಾಡಿದವರು ನೀವೋ ಅಥವಾ ಬೇರೆ ಕಾಣದ ಕೈಗಳೋ?
ನಿಮಗೆ ಬೇಕಾದ ಉಪನ್ಯಾಸಕರು ಆ ಸರ್ಕಾರಿ ಕಾಲೇಜಿಗೆ ಬೇಕು ಎಂದು ಕರೆಸಿಕೊಳ್ಳುವ ನಿಮಗೆ ವಿದ್ಯಾರ್ಥಿಗಳ ಬಸ್ ಬೇಡಿಕೆ, ಬಸ್ ನಿಲ್ಧಾಣದ ಬೇಡಿಕೆ, ರಸ್ತೆ, ಮೈದಾನಗಳಂಥ ಉಪಯುಕ್ತ ವಿಷಯಗಳ ಆಯ್ಕೆಗೆ ಅವಕಾಶ ಮಾಡಿಕೊಡಬೇಕೆಂದು ನಿಮಗೇಕೆ ಅನಿಸುತ್ತಿಲ್ಲ. ಈ ವಿಚಾರಗಳಲ್ಲಿ ರಾಜಕೀಯವನ್ನೇ ಬಳಸಿಕೊಂಡು ಕೆಲಸ ಮಾಡಲು ಸಾಧ್ಯವಿಲ್ಲದಿದ್ದರೆ ನಿಮಗ್ಯಾಕೆ ಅಂಥ ಜವಾಬ್ಧಾರಿಯ ಶಾಸಕತ್ವ, ವಿಧಾನಸಭಾಧ್ಯಕ್ಷತೆ?…….

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *