ವೈಯಕ್ತಿಕ ಆರೋಗ್ಯ ಕಾರ್ಡೋ? ಕುಟುಂಬದ ಆರೋಗ್ಯ ಕಾರ್ಡೋ-


ಆರೋಗ್ಯಕಾರ್ಡ್ ಕಡ್ಡಾಯ, ಸರಳೀಕೃತವಾಗುವವರೆಗೆ ಆಧಾರ್, ಪಡಿತರ ಚೀಟಿಗಳಿಂದಲೂ ಪ್ರಯೋಜನ ಪಡೆಯಬಹುದು!
ಆರೋಗ್ಯ ಕರ್ನಾಟಕ ಚೀಟಿ ವ್ಯವಸ್ಥೆ ಸರಳೀಕರಣಗೊಳ್ಳಲಿದ್ದು ಈ ಕಾರ್ಡ್ ಕಡ್ಡಾಯವಾಗಿ ಪಡೆಯಬೇಕು ಈ ಕಾರ್ಡ್ ಇಲ್ಲದವರು ಆಧಾರ್ ಚೀಟಿ ಮತ್ತು ಪಡಿತರ ಚೀಟಿಗಳಿಂದ ಆರೋಗ್ಯ ಕರ್ನಾಟಕದ 5 ಲಕ್ಷ ರಿಯಾಯತಿ ಪಡೆಯಬಹುದು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಇಂದು ಇಲ್ಲಿಯ (ಸಿದ್ಧಾಪುರ) ತಾ.ಪಂ. ಸಭಾಭವನದಲ್ಲಿ ನಡೆದ ಗ್ರಾಮೀಣ ರಸ್ತೆಟಾಸ್ಕ್ ಫೋರ್ಸ್ (ನಿರ್ವಹಣಾ ಸಭೆ) ಸಭೆಯಲ್ಲಿ ಮಾತನಾಡಿದ ಅವರು ಆರೋಗ್ಯ ಕಾರ್ಡ್ ಗೊಂದಲ ತಿಳಿಗೊಳ್ಳಲಿದೆ.ಒಂದು ದಿವಸಕ್ಕೆ 30 ಜನರಿಗೆ ನೀಡಬಹುದಾದ ಈ ಕಾರ್ಡ್ ತಾಲೂಕಿನ ಎಲ್ಲಾ ಜನರಿಗೆ ಸಿಗುವುದು ಯಾವಾಗ? ಎಂದು ಪ್ರಶ್ನಿಸಿದರು.
ಮಳೆ ಮತ್ತು ಪ್ರವಾಹ ಹಾನಿಯ ವಿವರ ಕೇಳಿದ ಕಾಗೇರಿ ತಾಲೂಕಿನಲ್ಲಿ ವಾಡಿಕೆಗಿಂತ 63% ಮಳೆ ಹೆಚ್ಚಾಗಿದ್ದು ಕೆಲವೆಡೆ ನೂರು ಪ್ರತಿಶತ ಮಳೆ ಹೆಚ್ಚು ಬಿದ್ದಿದೆ ಇದರಿಂದ ಭಾದಿತರಾದ 14 ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ದೊರೆಯಲಿದೆ. ಉಳಿದ ಕೆಲವರು ಸರ್ಕಾರ ತೋರಿಸುವ ಕಂದಾಯ ಭೂಮಿಯಲ್ಲಿ ಮನೆ ಕಟ್ಟಿಕೊಳ್ಳುವುದಾದರೆ ಅವರಿಗೂ 5 ಲಕ್ಷ ನೆರವು ನೀಡುತ್ತೇವೆ. ಅರಣ್ಯ ಅತಿಕ್ರಮಣ ಮಾಡಿ ಮನೆ ಮಾಡಿಕೊಂಡವರ ಮನೆಗೆ ತೊಂದರೆಯಾದರೆ ಅವರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ಧನ ದೊರೆಯಲಿದೆ ಎಂದರು.
ಕೆ.ಡಿ.ಪಿ. ಸಭೆಯಂತಾದ ಶಾಸಕರ ಗ್ರಾಮೀಣ ರಸ್ತೆ ಟಾಸ್ಕ್ ಫೋರ್ಸ್ ಸಭೆ-
ವಿಧಾನಸಭಾ ಅಧ್ಯಕ್ಷ, ಶಾಸಕ ವಿಶ್ವೇಶ್ವರ ಹೆಗಡೆ ಅಧ್ಯಕ್ಷತೆಯ ಗ್ರಾಮೀಣ ರಸ್ತೆ ಟಾಸ್ಕ್ ಫೋರ್ಸ್ ಸಭೆ ಪ್ರಾರಂಭದಲ್ಲಿ ಸಾಮಾನ್ಯ ಕೆ.ಡಿ.ಪಿ. ಸಭೆಯಂತೆನಿಸಿತು. ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು ಅದಕ್ಕೆ ಪರಿಹಾರ, ಅನುದಾನದ ಮಾತು ಆಡಬೇಕು ಆದರೆ, ಇಂದು ನಡೆದ ಅಧ್ಯಕ್ಷರ ಸಭೆ ಸಾಮಾನ್ಯ ಕೆ.ಡಿ.ಪಿ. ಸಭೆಯಂತೆನಿಸಿತು.
ಈ ಹಿಂದೆ ಇಂಥ ಹಲವಾರು ಟಾಸ್ಕ ಫೊರ್ಸ್ ಸಭೆಗಳೂ ಹೀಗೆ ನಾಮಕಾವಸ್ಥೆ ಆಗಿ ಅವುಗಳ ಪರಿಣಾಮ ಶೂನ್ಯ ಆಗಿದ್ದು ಇತಿಹಾಸ.

ವೈಯಕ್ತಿಕ ಆರೋಗ್ಯ ಕಾರ್ಡೋ? ಕುಟುಂಬದ ಆರೋಗ್ಯ ಕಾರ್ಡೋ-
ಆರೋಗ್ಯ ಕರ್ನಾಟಕ ಚೀಟಿ ಪಡೆಯುವ ಪ್ರಕ್ರೀಯೆ, ಪ್ರಗತಿ ಬಗ್ಗೆ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ವಿವರ ಪಡೆಯುತಿದ್ದಾಗ ಪ್ರತಿಕ್ರೀಯಿಸಿದ ಶ್ರೀಧರ ಹೆಗಡೆ ಬೈಲಳ್ಳಿ ಬೇರೆ ರಾಜ್ಯಗಳಲ್ಲಿ ಇಡೀ ಕುಟುಂಬಕ್ಕೆ ಒಂದೇ ಆರೋಗ್ಯ ಕಾರ್ಡ್ ಮಾಡಿಸಲಾಗುತ್ತಿದೆ, ಆದರೆ ಇಲ್ಲಿ ಪ್ರತಿ ಸದಸ್ಯನಿಗೆ ಯಾಕೆ ಪ್ರತ್ಯೇಕ ಕಾರ್ಡ್ ಎಂದು ಪ್ರಶ್ನಿಸಿದರು. ಅದಕ್ಕೆ ಸಮರ್ಪಕ ಉತ್ತರ ನೀಡದ ಕಾಗೇರಿ ಇನ್ನೂ ಸರಳವಾಗಲಿದೆ ಎಂದಷ್ಟೇ ಹೇಳಬಲ್ಲೆ ಎಂದು ನುಣುಚಿಕೊಂಡರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *