ಗೋಲ್‍ಮಾಲ್ ಬೆಳೆವಿಮೆಗೆ ಎಲ್ಲೆಲ್ಲೂ ವಿರೋಧ


ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಎಂದು ಪ್ರಚಾರ ಮಾಡಲಾಗಿದ್ದ ಬೆಳೆವಿಮೆ ಯೋಜನೆ ವಿಫಲವಾಗಿರುವ ವಿದ್ಯಮಾನ ಗೋಚರಿಸತೊಡಗಿದೆ.
ಮೋದಿ ನೇತೃತ್ವದ ಹಿಂದಿನ ಎನ್.ಡಿ.ಎ. ಸರ್ಕಾರದ ಅವಧಿಯಲ್ಲಿ ವಿಪರೀತ ಪ್ರಚಾರದೊಂದಿಗೆ ಪ್ರಾರಂಭವಾದ ಫಸಲ್ ಭಿಮಾ ಮತ್ತು ಹವಾಮಾನ ಆಧಾರಿತ ಬೆಳೆವಿಮೆ ಗಳೆರಡೂ ವಿಫಲವಾಗಿವೆ. ಈ ಯೋಜನೆ ಬರೀ ಪ್ರಚಾರ, ಕೆಲವು ಉದ್ಯಮಿಗಳನ್ನು ಕೊಬ್ಬಿಸಿದ ಯೋಜನೆ ಎಂದು ರಾಜ್ಯ, ರಾಷ್ಟ್ರಮಟ್ಟದ ಮುಖಂಡರು ಬಹುಹಿಂದೇ ದೂರಿದ್ದರು. (ಲಕ್ಷಾಂತರ ಕೋಟಿ ಅವ್ಯವಹಾರ) ವಾಸ್ತವವೆಂದರೆ ಪ್ರಧಾನಿ ಮೋದಿ ಈ ಯೋಜನೆಯ ಬಹುತೇಕ ರಾಜ್ಯಗಳ ಜವಾಬ್ಧಾರಿಯನ್ನು ತಮ್ಮ ಸ್ನೇಹಿತರಾದ ಅಂಬಾನಿ ಸಹೋದರರಿಗೆ ನೀಡಿದ್ದರು.
ಅವರು ಬೆಳೆವಿಮೆಗೆಂದು ಕಟ್ಟಿಸಿಕೊಂಡ ಕಂತಿನ ಲಕ್ಷಾಂತರ ಕೋಟಿ ಮೊತ್ತದಲ್ಲಿ ಪ್ರತಿಶತ 15 ರಷ್ಟನ್ನೂ ಮರಳಿ ರೈತರಿಗೆ ನೀಡಿಲ್ಲದಿರುವುದು ಅಂಕಿಅಂಶಗಳ ಸತ್ಯ. ವಿಚಿತ್ರವೆಂದರೆ ಈ ಯೋಜನೆ ಜಾರಿಯಾಗಿ ಮೂರ್ನಾಲ್ಕು ವರ್ಷ ಕಳೆದ ನಂತರವೂ ಈ ಯೋಜನೆಯ ಗುಟ್ಟು, ರಹಸ್ಯಗಳು ಫಲಾನುಭವಿ ರೈತರಿಗೆ ದೊರೆಯುತ್ತಿಲ್ಲ. ಶಿರಸಿ-ಸಿದ್ಧಾಪುರ ಸೇರಿದಂತೆ ರಾಜ್ಯದಲ್ಲಿ ರೈತರ ಬೆಳೆ ವಿಮೆ ಕಂತು ಸಂಗ್ರಹಿಸುವ ಏಜೆನ್ಸಿ ಜವಾಬ್ಧಾರಿ ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ವಹಿಸುತ್ತದೆ. ಆದರೆ ಈ ಬಗೆಗಿನ ಎಳ್ಳಷ್ಟು ಮಾಹಿತಿಗಳು ಕೆ.ಡಿ.ಸಿ.ಸಿ. ಬ್ಯಾಂಕ್ ಮತ್ತು ಇದರ ಅಧೀನ ಪ್ರಾಥಮಿಕ ಸಹಕಾರಿ ಸಂಘಗಗಳಲ್ಲಿಲ್ಲ.
ಈ ತೊಂದರೆ ಬಗ್ಗೆ ಸಿದ್ಧಾಪುರ ತಾಲೂಕಾ ರೈತ ಸಂಘ ಆಕ್ಷೇಪ ಎತ್ತಿ ತಾಲೂಕಿನಲ್ಲಿ ಬೆಳೆವಿಮೆ ವ್ಯವಹಾರ ಅನುಮಾನಾಸ್ಫದವಾಗಿದೆ ಇದರಿಂದ ರೈತರಿಗೆ ಅನುಕೂಲದ ಬದಲು ತೊಂದರೆ ಆಗುತ್ತಿದೆ ಎಂದಿದ್ದಾರೆ.
ರವಿವಾರ ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆದ ಸರ್ವೋದಯ ಬ್ಯಾಂಕ್ ವಾರ್ಷಿಕ ಮಹಾಸಭೆಯಲ್ಲಿ ರೈತರು ಬೆಳೆವಿಮೆ ಬಗ್ಗೆ ಆಕ್ಷೇಪ ಎತ್ತಿ ಬೆಳೆವಿಮೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಾದರೆ ನೀವ್ಯಾಕೆ ಪ್ರೀಮಿಯಂ ಕಟ್ಟಿಸಿಕೊಳ್ಳುತ್ತೀರಿ ಎಂದು ಆಕ್ಷೇಪಿಸಿದರು.
ಈ ಪ್ರಶ್ನೆಗಳಿಗೆ ಉತ್ತರಿಸಿದ ಕೆ.ಡಿ.ಸಿ.ಸಿ.ಬ್ಯಾಂಕ್ ನಿರ್ಧೇಶಕ ಷಣ್ಮುಖಗೌಡರ್ ಇದು ಕೇಂದ್ರದ ಆದೇಶ, ರಾಜ್ಯ ಸರ್ಕಾರ ಕೇಂದ್ರದ ಆದೇಶಕ್ಕೆ ಒಪ್ಪಿ ಕೆ.ಡಿ.ಸಿ.ಸಿ. ಬ್ಯಾಂಕ್ ಗೆ ಜವಾಬ್ಧಾರಿ ವಹಿಸಿದ ಮೇಲೆ ಅನಿವಾರ್ಯವಾಗಿ ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ವಹಿಸಬೇಕು ಎಂದು ಸದಸ್ಯರನ್ನು ಸಮಜಾಯಿಸಿದರು.
ಇದೇ ಬೆಳೆವಿಮೆ ರಗಳೆ ಬಗ್ಗೆ ಸೋಮುವಾರ ನಡೆದ ಸಿದ್ಧಾಪುರ ತಾಲೂಕಾಪಂಚಾಯತ್ ಸಭೆ ಆಕ್ಷೇಪಿಸಿದೆ. ಸದಸ್ಯರು ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳನ್ನು ಪ್ರಶ್ನಿಸಿ ಬೆಳೆವಿಮೆ ಏನಾಯ್ತು, ಮಾಹಿತಿ ಕೊಡುವವರ್ಯಾರು? ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರೀಯಿಸಿದ ತೋಟಗಾರಿಕಾ ಸಹಾಯಕ ನಿರ್ಧೇಶಕ ಮಹಾಬಲೇಶ್ವರ ಪ್ರೀಮಿಯಂ ಕಟ್ಟಿಸಿಕೊಂಡು, ಕಮೀಷನ್ ಪಡೆಯುವ ಕೆ.ಡಿ.ಸಿ.ಸಿ. ಬ್ಯಾಂಕ್ ಅದಕ್ಕೆ ಉತ್ತರದಾಯಿ ಎಂದರು.
ಹೀಗೆ ಜನಪ್ರತಿನಿಧಿಗಳು, ರೈತರು, ಸಹಕಾರಿ ಸಂಘಗಳು ಎಲ್ಲೆಂದರಲ್ಲಿ ಬೆಳೆವಿಮೆ ತೊಂದರೆ, ರೈತರಿಗಾಗುತ್ತಿರುವ ಮೋಸದ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಜನಪ್ರತಿನಿಧಿಗಳಾದ ಸಂಸದರು, ಶಾಸಕರು, ಸಚಿವರು ತುಟಿಪಿಟಿಕ್ ಮಾಡುತ್ತಿಲ್ಲ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *