
ಶಿಕ್ಷಕ-ಶಿಕ್ಷಕಿಯರ ಅಸಹಕಾರದ ನಡುವೆ ಮತಪಟ್ಟಿ ಸ್ಫೆಷಲ್ಡ್ರೈವ್ಗೆ ಅಡಚಣೆ
ರಾಜ್ಯದಲ್ಲಿ ಬೂತ್ ಮಟ್ಟದ ಅಧಿಕಾರಿಗಳಾಗಿ ಶಿಕ್ಷಕರು ಕೆಲಸಮಾಡಲು ನಿರಾಕರಿಸಿದವಿದ್ಯಮಾನದ ನಡುವೆ ಕೆಲವೆಡೆ ಶಿಕ್ಷಕ,ಶಿಕ್ಷಕಿಯರು ಕೆಲಸ ಪ್ರಾರಂಭಿಸಿದ್ದರೆ ಉತ್ತರಕನ್ನಡದಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಶಿಕ್ಷಕರು ಹಾಜರಾಗದೆ ಅಸಹಕಾರ ನಡೆದಿದೆ.
ಈಗ ರಾಜ್ಯದಲ್ಲಿ ಶೀಘ್ರಮತದಾರರ ಪಟ್ಟಿ ಪುನರ್ ರಚನೆಯ ಅಭಿಯಾನ ನಡೆಯುತ್ತಿದೆ. ಈ ಅಭಿಯಾನ ಸೇರಿದಂತೆ ರಾಜ್ಯದ ಮತದಾರರ ಪಟ್ಟಿ ಪರಿಷ್ಕರಣೆ,ಹೊಸಸೇರ್ಪಡೆಗಳಿಗೆ ಬೂತ್ ಮಟ್ಟದಲ್ಲಿ ಅಧಿಕಾರಿಗಳನ್ನಾಗಿ ಶಿಕ್ಷಕರು ಸೇರಿದಂತೆ ಸರ್ಕಾರಿ ಅಧಿಕಾರಿಗಳನ್ನು ನೇಮಿಸುತ್ತಾರೆ.
ಸಿದ್ಧಾಪುರದ ಉದಾಹರಣೆ ಗಮನಿಸುವುದಾದರೆ ತಾಲೂಕಿನಲ್ಲಿ 82 ಶಿಕ್ಷಕರನ್ನು ಬೂತ್(ಒಟ್ಟೂ 117 ಬೂತ್ ಗಳು) ಮಟ್ಟದ ಅಧಿಕಾರಿಗಳನ್ನಾಗಿ ಕಂದಾಯ ಇಲಾಖೆ ನೇಮಕ ಮಾಡಿದೆ. ಈ ಶಿಕ್ಷಕರಲ್ಲಿ 25 ಕ್ಕಿಂತ ಹೆಚ್ಚು ಶಿಕ್ಷಕಿಯರಿದ್ದಾರೆ.
ಮತದಾರರ ಪಟ್ಟಿ ಕೆಲಸ ದಿನದ ಸಮಯದಲ್ಲಿ ಮಾಡುವುದು ಕಷ್ಟ, ನಿಯಮದ ಪ್ರಕಾರ ಶಿಕ್ಷಕ,ಶಿಕ್ಷಕಿಯರು ಶಾಲಾ ಸಮಯದ ನಂತರ ಅಂದರೆ ಸಾಯಂಕಾಲ 4-30ರ ನಂತರ ಮತದಾರರ ಪಟ್ಟಿಗಾಗಿ ಬೂತ್ ಮಟ್ಟದ ಅಧಿಕಾರಿಗಳಾಗಿ ಅಲೆಯಬೇಕು. ಶಿಕ್ಷಕ,ಶಿಕ್ಷಕಿಯರನ್ನು ಇಂಥ ಕೆಲಸಕ್ಕೆ ನೇಮಿಸಬಾರದು ಎನ್ನುವ ಆದೇಶ, ನಿರ್ಧೇಶನಗಳಿವೆ. ಆದರೆ ಕಂದಾಯ ಇಲಾಖೆ ಈ ಕೆಲಸಕ್ಕೆ ಮತ್ತೆ ಶಿಕ್ಷಕ-ಶಿಕ್ಷಕಿಯರನ್ನೇ ನೇಮಕ ಮಾಡಿದೆ.
ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಶಿಕ್ಷಕರ ಸಂಘದಿಂದ ರಾಜ್ಯ ಮುಖ್ಯಕಾರ್ಯದರ್ಶಿಗಳಿಗೆ ಮನವಿ ಕೂಡಾ ನೀಡಲಾಗಿದೆ. ಶಿಕ್ಷಕ-ಶಿಕ್ಷಕಿಯರು ಒಬ್ಬೊಬ್ಬರೇ ಗ್ರಾಮೀಣ ಪ್ರದೇಶದ ದುರ್ಗಮ ಹಳ್ಳಿಗಳನ್ನು ಸುತ್ತುವುದು ಕಷ್ಟ,ಇದರಿಂದ ಶಿಕ್ಷಕರು ಮಾನಸಿಕ ನೆಮ್ಮದಿ ಕಳೆದುಕೊಂಡು ಪಠ್ಯ-ಪಠ್ಯೇತರ ಚಟುವಟಿಕೆಗಳನ್ನು ನಿರ್ಲಕ್ಷಿಸುವ ಅಪಾಯ ಎದುರಾಗಿದೆ. ರಾಜ್ಯ ಚುನಾವಣಾ ಆಯೋಗದ ನಿರ್ಧೇಶನ, ಸರ್ಕಾರದ ಆದೇಶದಂತೆ ಸರ್ಕಾರಿ ಅಧಿಕಾರಿಗಳು ಬೂತ್ ಮಟ್ಟದ ಅಧಿಕಾರಿಗಳಾಗಿ ಕೆಲಸಮಾಡುತಿದ್ದಾರೆ. ಈ ಬಗ್ಗೆ ಶಿಕ್ಷಕರ ವಲಯದಲ್ಲಿ ವಿರೋಧ ವ್ಯಕ್ತವಾಗಿದ್ದು ಈ ವಾರದ ಪ್ರಾರಂಭದಿಂದ ಆಗಬೇಕಿದ್ದ ಕೆಲಸವನ್ನು ಸಿದ್ಧಾಪುರದ ಶಿಕ್ಷಕ-ಶಿಕ್ಷಿಕಿಯರು ಈ ವರೆಗೂ ಶುರುಮಾಡಿಲ್ಲ. ಶಿಕ್ಷಕ-ಶಿಕ್ಷಕಿಯರ ಈ ಅಸಹಕಾರಕ್ಕೆ ತೇಪೆ ಹಚ್ಚಿ ಅಸಹಕಾರದ ಪ್ರತಿಭಟನೆಕಾರರನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮನಒಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಶಿಕ್ಷಣ ಇಲಾಖೆ, ಕಂದಾಯ ಇಲಾಖೆಗಳ ನಿರ್ಧೇಶನವನ್ನು ದಿಕ್ಕರಿಸಿ ಸೆ.18 ರ ಬುಧವಾರದ ವರೆಗೆ ಸಿದ್ಧಾಪುರದಲ್ಲಿ ಬೂತ್ ಮಟ್ಟದ ಚುನಾವಣೆ ಕೆಲಸ ಪ್ರಾರಂಭವಾಗಿಲ್ಲ. ಹೀಗೆ ಶಿಕ್ಷಕ-ಶಿಕ್ಷಕಿಯರಿಗೆ ನೀಡಲಾದ ಚುನಾವಣೆಯ ಹೆಚ್ಚುವರಿ ಕೆಲಸಕ್ಕೆ ಸಿದ್ಧಾಪುರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ವಿರೋಧ ವ್ಯಕ್ತವಾಗಿದೆ.
ಶಿಕ್ಷಕ ಶಿಕ್ಷಕಿಯರಿಗೆ ಕೆಲಸದ ಒತ್ತಡದ ನಡುವೆ ಚುನಾವಣೆಯ ಮತದಾರರ ಪಟ್ಟಿ ತಯಾರಿಕೆಯ ಹೆಚ್ಚುವರಿ ಕೆಲಸ ಅಪೇಕ್ಷಣೀಯವಲ್ಲ, ಭಾರತದಲ್ಲಿ ಗ್ರಾಮಗಳಲ್ಲಿ ಕೆಲಸವಿಲ್ಲದೆ ನಿರುದ್ಯೋಗಿಗಳಾಗಿರುವ ಯುವಕರ ಪಡೆಯೇ ಇದೆ. ಈ ವಿದ್ಯಾವಂತ ನಿರುದ್ಯೋಗಿಗಳನ್ನು ಬಳಸಿಕೊಂಡು ಮತದಾರರ ಪಟ್ಟಿ ತಯಾರಿಸಬಹುದು. ಸಿದ್ಧಾಪುರ, ಶಿರಸಿ-ಸಾಗರ ಸೇರಿದಂತೆ ಬಹುತೇಕ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮತದಾರರ ಪಟ್ಟಿಗಾಗಿ ಶಿಕ್ಷಕ,ಶಿಕ್ಷಕಿಯರು ಅಲೆಯುವುದು ಕಷ್ಟ, ಹಾಗಾಗಿ ಶಿಕ್ಷಕ-ಶಿಕ್ಷಕಿಯರ ಈ ಹೆಚ್ಚುವರಿ ಕೆಲಸ ನಿಲ್ಲಿಸಬೇಕು.

- ಎಂ.ಕೆ.ನಾಯ್ಕ ಕಡಕೇರಿ, ಪ್ರಾ.ಶಾ.ಶಿ.ಸಂಘದ
ತಾಲೂಕಾ ಅಧ್ಯಕ್ಷ

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
