

ಸಿದ್ಧಾಪುರದ ಮನೆಮಗಳಾಗಿ ಶಿರಸಿಯಲ್ಲಿ ನೆಲೆಸಿ,ಕಾವ್ಯದ ಮೂಲಕ ಹಿರೇಕೈ, ಕಂಡ್ರಾಜಿ ಮತ್ತು ಉತ್ತರಕನ್ನಡವನ್ನು ಪರಿಚಯಿಸಿರುವ ಉದಯೋನ್ಮುಖ ಕವಿಯತ್ರಿ ಶೋಭಾ ಹಿರೇಕೈ ಯವರ ಕವನ ಸಂಕಲ ಅವ್ವ ಮತ್ತು ಅಬ್ಬಲಿಗೆ ರವಿವಾರ ಶಿರಸಿ ಟಿ.ಎಸ್.ಎಸ್. ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ.
ನಾಡಿನ ಗಣ್ಯರು, ಬರಹಗಾರರು ಸೇರುವ ವೇದಿಕೆಯಲ್ಲಿ ಬಿಡುಗಡೆಯಾಗಲಿರುವ ಈ ಕವನ ಸಂಕಲನ ತನ್ನ ವಿಶಿಷ್ಟತೆ,ನಾವಿನ್ಯತೆಯಿಂದ ಹೆಸರು ಮಾಡಿದೆ. ಕಳೆದ ಒಂದು ದಶಕದ ಅವಧಿಗಿಂತಲೂ ಹಿಂದಿನಿಂದ ಕವನ ರಚನೆ ಮೂಲಕ ಹೆಸರು ಮಾಡಿರುವ ಶೋಭಾ ಕವನಗಳಲ್ಲಿ ನಮ್ಮತನ, ದೇಶಿಯತೆ, ಬಂಡಾಯ, ಕೊಡಚಿಕೊಳ್ಳುವಿಕೆ ಎಲ್ಲವೂ ಮೇಳೈಸಿವೆ.
ವಿಭಿನ್ನತೆ, ವೈಶಿಷ್ಟತೆ,ನೆಲಮೂಲದ ಸೊಬಗು-ಸೊಗಡುಗಳನ್ನು ಪ್ರತಿಬಿಂಬಿಸುತ್ತಾ ಪ್ರೇಮಧರ್ಮಕ್ಕಾಗಿ ಕಾತರಿಸುವ ಈ ಕವಿತೆಗಳ ಗುಚ್ಛ ಒಂಥರಾ ಚೇತೋಹಾರಿಯಾದ ಅನುಭವ ನೀಡಿ ಚಿತ್ತಾಕರ್ಷಣೆಮಾಡುವಂತಿದೆ.
ಮರ,ಸಸ್ಯ,ನದಿ ಸಂಹಿತೆ ಅಮೃತವರ್ಷಗರೆದಿರುವ ಈ ಸಂಕಲನದಿಂದ ಶೋಭಾ ಕಾವ್ಯಲೋಕದಲ್ಲಿ ಶೋಭಾಯಮಾನಳಾಗುವ ಎಲ್ಲಾ ಭರವಸೆ ಮೂಡಿಸಿದ್ದಾಳೆ. ಕವನಗಳೊಂದಿಗೆ ಚಂದದ ಮುನ್ನುಡಿ, ಬೆನ್ನುಡಿಗಳು ಸಂಕಲನದ ಸೊಬಗು ಹೆಚ್ಚಿಸಿವೆ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
