

ಅವ್ವ&ಅಬ್ಬಲಿಗೆ ಬಿಡುಗಡೆ-
ಕರುಣೆ ಇರುವ ಮನುಷ್ಯನನ್ನು ಸೃಷ್ಟಿಸುವುದು ಕಾವ್ಯದ ಕೆಲಸ
ಕಾವ್ಯ ಬರೆಯುವುದೆಂದರೆ ಮನುಷ್ಯನಾಗುವುದು ಎಂದು ಪ್ರತಿಪಾದಿಸಿರುವ ವಿಮರ್ಶಕ ಸುಬ್ರಾಯ ಮತ್ತೀಹಳ್ಳಿ ಕರುಣೆ ಇರುವ ಮನುಷ್ಯನನ್ನು ಸೃಷ್ಟಿಸುವುದು ಕಾವ್ಯದ ಕೆಲಸ ಎಂದಿದ್ದಾರೆ.
ಶಿರಸಿಯ ಟಿ.ಎಸ್.ಎಸ್.ಸಭಾಭವನದಲ್ಲಿ ನಡೆದ ಅವ್ವ ಮತ್ತು ಅಬ್ಬಲಿಗೆ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಾವ್ಯ ಸಾಹಿತ್ಯದ ಉದ್ದೇಶದಂತೆ ನೆಲಮೂಲದ ಸೊಗಡನ್ನು ಹೇಳುತ್ತಾ ನಮ್ಮತನ ಉಳಿಸುವ ಕವಿಯಾಗಿ ಶೋಭಾ ಅವತರಿಸಿದ್ದಾರೆ ಎಂದರು.
ಹಿರಿಯ ಸಾಹಿತಿ ವಿಷ್ಣುನಾಯ್ಕ ಕೃತಿ ಬಿಡುಗಡೆ ಮಾಡಿದರು. ನಾಗರೇಖಾ ಗಾಂವಕರ ಕೃತಿ ಪರಿಚಯ ಮಾಡಿದರು. ಮುಖ್ಯ ಅತಿಥಿಯಾಗಿದ್ದ ಪ್ರಾಂಶುಪಾಲ ಎಂ.ಕೆ.ನಾಯ್ಕ ಹೊಸಳ್ಳಿ ಮಾತನಾಡಿ ಪ್ರಾದೇಶಿಕ ಭಾಷೆ,ಅನುಭವಗಳ ದಟ್ಟ ಸಂವೇದನೆಯ ಅವ್ವ ಮತ್ತು ಅಬ್ಬಲಿಗೆ ಓದಿಸಿಕೊಂಡು ಹೋಗುವ ಸರಳತೆ,ನಾವಿನ್ಯತೆಯಿಂದ ವಿಶಿಷ್ಟವಾಗಿದೆ ಎಂದು ಪ್ರಶಂಸಿಸಿದರು. ಪ್ರಾಸ್ಥಾವಿಕವಾಗಿ ಮಾತನಾಡಿದ ಶೋಭಾ ಹಿರೇಕೈ ತಮ್ಮ ಕವನಗಳು ದಟ್ಟ ಕಾಡು, ಗುಡ್ಡ-ಬೆಟ್ಟಗಳ ಮೇಲಿಂದ ನದಿಯಂತೆ ಸರಳವಾಗಿ ಒಡಮೂಡಿದ ಅನುಭವ ಹಂಚಿಕೊಂಡರು.
ಪತ್ರಕರ್ತ ಕೋಲಶಿರ್ಸಿ ಕನ್ನೇಶ್ ಸ್ವಾಗತಿಸಿದರು,ಕೆ.ಬಿ.ವೀರಲಿಂಗನಗೌಡ ವಂದಿಸಿದರು. ದೊಡ್ಡ ಪ್ರಮಾಣದ ಶ್ರೋತ್ರುಗಳ ನಡುವೆ ಕವಿಯತ್ರಿ ಶೋಭಾ ಹಿರೇಕೈರನ್ನು ನೇಕಾರ ಪ್ರಕಾಶನ ಮತ್ತು ಪೌರ್ಣಿಮಾ ವೇದಿಕೆಗಳಿಂದ ಸನ್ಮಾನಿಸಿ, ಅಭಿನಂದಿಸಲಾಯಿತು.



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
