ಗವಿನಸರಕ್ಕೆ ಬೇಕು ಸರ್ವಋತು ರಸ್ತೆ

ಗವಿನಸರಕ್ಕೆ ಬೇಕು ಸರ್ವಋತು ರಸ್ತೆ ಎನ್ನುತ್ತಿರುವವರು ಸಿದ್ಧಾಪುರದ ಅರೆಹಳ್ಳ ಮತ್ತು ಈ ಭಾಗದ ಸಾರ್ವಜನಿಕರು.
ಅಂದಹಾಗೆ ಸಿದ್ದಾಪುರ ತಾಲೂಕಿನ ಕಟ್ಟಕೊನೆಯ ಗ್ರಾಮ ಗವಿನಸರ, ಕಾನಸೂರು,ದೇವಿಸರ ಮಾರ್ಗದ ಗಿರಗಡ್ಡೆ ಶಾಲೆಯಿಂದ ಒಳನುಗ್ಗಿ ಹೋದರೆ ಗವಿನಸರ ತಲುಪುತಿದ್ದಂತೆ ಸಿದ್ಧಾಪುರ ತಾಲೂಕಾ ವ್ಯಾಪ್ತಿ ಮುಗಿಯುತ್ತದೆ.
ಅಲ್ಲಿಂದ ಕಾಡಿನಲ್ಲಿ ಪೂರ್ವಕ್ಕೆ ನಡೆದರೆ ಅರೆಹಳ್ಳ, ಅರೆಹಳ್ಳ ದಾಟಿದರೆ ಒಂದು ದಿಕ್ಕಿಗೆ ಶಿರಸಿ ತಾಲೂಕು ಇನ್ನೊಂದು ದಿಕ್ಕಿಗೆ ಸೊರಬ! ಹೀಗೆ ಸಿದ್ದಾಪುರದ ರಸ್ತೆ ಕೊನೆಗೆ ತಲುಪಿ ಮುಕ್ತಾಯವಾಗುವ ರಸ್ತೆ ಮತ್ತು ಸಿದ್ದಾಪುರ ತಾಲೂಕಿನ ಗಡಿಯಲ್ಲಿರುವುದೇ ಗವಿನಸರ. ಗವಿನಸರ ಕಾನಸೂರಿನಿಂದ ಬರೀ 8 ಕಿ.ಮೀ.ದೂರದಲ್ಲಿದೆ. ಆದರೆ ಈ ಮಾರ್ಗದಲ್ಲಿ 4 ಕಿ.ಮೀ. ಕೂಡಾ ಸರ್ವಋತು ರಸ್ತೆ ಇಲ್ಲ. ಬೇಸಿಗೆ ಚಳಿಕಾಲದಲ್ಲಿ ಬಸ್ಸಿಲ್ಲದ ಈ ರಸ್ತೆಯ ಮೂಲಕ ನಡೆದೇ ಜನರು ಕಾನಸೂರಿಗೆ ಬರಬೇಕು.
ಮಳೆಗಾಲದಲ್ಲಂತೂ ಈ ರಸ್ತೆ ಭಯಂಕರ. ಈ ವರ್ಷದ ಮಹಾಮಳೆ ಅವಧಿಯಲ್ಲಿ ಈ ರಸ್ತೆಯಲ್ಲಿ ಧರೆ ಕುಸಿದು ಮೂರು ತಿಂಗಳುಗಳ ಕಾಲ ಸೈಕಲ್, ದ್ವಿಚಕ್ರವಾಹನ ಬಿಟ್ಟರೆ ಬೇರೆ ಯಾವ ವಾಹನವೂ ಚಲಿಸುತ್ತಿರಲಿಲ್ಲ. ಈ ಗ್ರಾಮದ ಮಹಾಬಲೇಶ್ವರ ದೇವಾಡಿಗರ ಒತ್ತಾಯಕ್ಕೆ ಮಣಿದ ಕಾನಸೂರು ಪಂಚಾಯತ್ ದುರಸ್ತಿಗೆ ಅನುದಾನ ಒದಗಿಸುವ ಭರವಸೆ ನೀಡಿ ತಾತ್ಕಾಲಿಕ ಕೆಲಸವೂ ಆಗಿದೆ.
ಆದರೆ ಈ ತಿಂಗಳಲ್ಲಿ ಸುರಿದ ಮಳೆ ಮತ್ತೆ ಈ ರಸ್ತೆಯನ್ನು ಸಂಚಾರಕ್ಕೆ ಅಯೋಗ್ಯ ಮಾಡಿದೆ. ಹೀಗೆ ಆಗಾಗ ಹಾಳಾಗುತ್ತಾ, ವರ್ಷವಿಡೀ ಹೊಂಡಗಳಿಂದ ತುಂಬಿದ ರಸ್ತೆಯಲ್ಲಿ ಈ ಭಾಗದ ಕೆಲವು ಗ್ರಾಮಗಳ ಜನರು ಸಾಗಬೇಕು. ಈ ದುರ್ಗಮ ಪ್ರದೇಶಕ್ಕೆ ಬಸ್, ವಾಹನ ಸೌಲಭ್ಯಗಳಂತೂ ಇಲ್ಲ ಕನಿಷ್ಟ ರಸ್ತೆಯನ್ನಾದರೂ ಮಾಡಿಕೊಡಿ ಎನ್ನುವ ಅನಿವಾರ್ಯತೆ ಇಲ್ಲಿದೆ.
ಸ್ಥಳಿಯ ಜನಪ್ರತಿನಿಧಿಗಳು, ಈ ಕ್ಷೇತ್ರದ ಶಾಸಕರು, ಸಂಸದರು ನೋಡದ ಈ ಗ್ರಾಮಕ್ಕೆ ಸರ್ವಋಉತು ರಸ್ತೆಯಾದರೆ ಗವಿನಸರ ಮತ್ತು ಈ ಭಾಗದ ಜನರಿಗೆ ಅನುಕೂಲವಾಗುತ್ತದೆ. ಈಗ ಈ ಗ್ರಾಮಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು 8-10ಕಿ.ಮೀ ದೂರದ ಕಾನಸೂರಿಗೆ ಬರಬೇಕು ಇಲ್ಲಾ ಅಷ್ಟೇ ದೂರದ ಶಿರಸಿಗೆ ತೆರಳಬೇಕು. ಇಂಥ ದುರ್ಗಮ ಹಳ್ಳಿಗಳಲ್ಲಿ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸುವುದು ದುಸ್ಸಾಹಸ ಆದರೆ ಸರ್ವಋಉತು ರಸ್ತೆ ಮಾಡಿ ಈ ಭಾಗದ ಜನರ ಬವಣೆ ತಗ್ಗಿಸಬಹುದು.

7ಕ್ಕೆ ಕಲಗದ್ದೆಯಲ್ಲಿ ಲಂಕಾದಹನ
ಶರನ್ನವರಾತ್ರಿ ಉತ್ಸವದ ಹಿನ್ನಲೆಯಲ್ಲಿ ಶ್ರೀನಾಟ್ಯ ವಿನಾಯಕ ಸೇವಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರವಾರದ ಸಹಕಾರದಲ್ಲಿ ಲಂಕಾದಹನ ಉಚಿತ ಯಕ್ಷಗಾನ ಪ್ರದರ್ಶನ ಅ.7ರಂದು ಸಂಜೆ 4ರಿಂದ ಸಿದ್ದಾಪುರತಾಲೂಕಿನ ಇಟಗಿ ಕಲಗದ್ದೆಯ ಯಕ್ಷಗಾನ ನಾಟ್ಯ ವಿನಾಯಕ ದೇವಸ್ಥಾನದ ಆವಾರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಮೊಕ್ತೇಸರ ವಿನಾಯಕ ಹೆಗಡೆ ವಹಿಸಿಕೊಳ್ಳಲಿದ್ದು, ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತರಾದ ನಾರಾಯಣ ಮೂರ್ತಿ ಎಸ್.ಹೆಗಡೆ, ವಸಂತ ಹೆಗಡೆ ಶಶಿಗುಳಿ, ಸುಬ್ರಾಯ ಹೆಗಡೆ ಭವಂತಿಮನೆ ಆಲಳ್ಳಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು, ಅನಂತ ಪ್ರತಿಷ್ಠಾನದ ಕಾರ್ಯದರ್ಶಿ ಕೊಳಗಿ ಕೇಶವ ಹೆಗಡೆ ಪಾಲ್ಗೊಳ್ಳಲಿದ್ದಾರೆ.
ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಶರತ್ ಜಾನಕೈ, ಭಾರ್ಗವ ಹೆಗ್ಗೋಡು, ಮುಮ್ಮೇಳದಲ್ಲಿ ವಿನಾಯಕ ಹೆಗಡೆ ಕಲಗದ್ದೆ, ಅಶೋಕ ಭಟ್ಟ ಸಿದ್ದಾಪುರ, ನಾಗೇಂದ್ರ ಮೂರೂರು, ವೆಂಕಟೇಶ ಬೊಗ್ರಿಮಕ್ಕಿ, ಅವಿನಾಶ ಕೊಪ್ಪ ಸಹಕಾರ ನೀಡಲಿದ್ದು, ಪ್ರಸಾದನದಲ್ಲಿ ಎಂ.ಆರ್.ನಾಯ್ಕ ಕರಸೇಬೈಲ್ ಪಾಲ್ಗೊಳ್ಳಲಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *