ಕಾಗೇರಿಗೆ ಕ್ಯಾರೆ ಎನ್ನದೆ ಮನೆ ಕಿತ್ತೆಸೆದ ಅಧಿಕಾರಿಗಳು

ಅನಧೀಕೃತ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಿದ್ದಾರೆ ಎನ್ನಲಾದ ರೈತರೊಬ್ಬರ ಮನೆ ಅಡಿಪಾಯವನ್ನು ಕಿತ್ತೆಸೆದ ಪ್ರಕರಣ ಸಿದ್ಧಾಪುರದ ಬಿಳಗಿ ಕಳೂರು ಮುಂಡಗೆಮನೆಯಲ್ಲಿ ನಡೆದಿದ್ದು,ಅರಣ್ಯ ಇಲಾಖೆಯ ಈ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಕಳೂರು ಮುಂಡಗೆಮನೆಯ ಪುಟ್ಟಾ ಗಿರಿಯಾ ನಾಯ್ಕ ಜಿ.ಪಿ.ಎಸ್. ಆದ ಪ್ರದೇಶ ಬಿಟ್ಟು ಬೇರೆ ಪ್ರದೇಶದಲ್ಲಿ ಮನೆ ನಿರ್ಮಾಣ ಪ್ರಾರಂಭಿಸಿದ್ದರು ಈ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ವಿರೋಧವ್ಯಕ್ತಪಡಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಇಂದು ಅಡಿಪಾಯ ಉರುಳಿಸುವ ಮೂಲಕ ಸಾರ್ವಜನಿಕರ ಅಕ್ರೋಶಕ್ಕೆ ಗುರಿಯಾಗಿದ್ದಾರೆ.
ಜಿ.ಪಿ.ಎಸ್. ಆದ ಪ್ರದೇಶ ನದಿ ದಂಡೆಯ ಮುಳುಗಡೆ ಪ್ರದೇಶವಾಗಿದ್ದರಿಂದ ಪುಟ್ಟಾ ನಾಯ್ಕ ಜಾಗ ಬದಲಿಸಿ ಮನೆ ನಿರ್ಮಾಣ ಪ್ರಾರಂಭಿಸಿದ್ದರು. ಈ ಬಗ್ಗೆ ರಾಜ್ಯ ವಿಧಾನಸಭಾ ಅಧ್ಯಕ್ಷರ ಕಛೇರಿಯಿಂದ ಬಂದ ಕರೆಯನ್ನು ಧಿಕ್ಕರಿಸಿ ಅಧಿಕಾರಿಗಳು ನಿರ್ಮಾಣ ಹಂತದ ಮನೆ ಕಾಮಗಾರಿ ಹಾಳುಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಲಾಭದಾಯಕ ವಾಗುತ್ತಾ, ಕಾಡಿಂದ ನಾಡಿಗೆ ಬರುತ್ತಿದೆ ಮಾಡ ಹಾಗಲ
ಮಲೆನಾಡು ಭಾಗದ ಕಾಡ ಬೆಳೆ ಕಾಡ ಹಾಗಲ ಅಥವಾ ಮಾಡಹಾಗಲ ಈಗ ಲಾಭದಾಯಕ ಬೆಳೆಯಾಗಿ ನಾಡಿಗೆ ಬರುತ್ತಿದೆ. ಕೆಲವೇ ವರ್ಷಗಳ ಹಿಂದೆ ಹೆಚ್ಚಿನ ಔಷಧಿಗುಣ, ಪೌಷ್ಠಿಕಾಂಶಗಳ ಆಗರ ಎನ್ನಲಾಗುತ್ತಿದ್ದ ಮಾಡ ಹಾಗಲವನ್ನು ಕಾಡಿಂದ ಕೊಯ್ದು ತರಕಾರಿ, ಆಹಾರವಾಗಿ ಬಳಸುತಿದ್ದರು. ಆದರೆ ಇದೇ ಕಾಡ ಹಾಗಲ ಈಗ ರೈತನ ಕೃಷಿಭೂಮಿಯ ಬೆಳೆ, ಮಾರುಕಟ್ಟೆಯ ದುಬಾರಿ ತರಕಾರಿಯಾಗಿ ಗಮನ ಸೆಳೆಯುತ್ತಿದೆ.
ಕೆಲವೇ ವರ್ಷಗಳ ಹಿಂದೆ ಮಾರುಕಟ್ಟೆಮೌಲ್ಯವಿಲ್ಲದ ಈ ಮಾಡ ಹಾಗಲವನ್ನು ಕಾಡಿನಲ್ಲಿ ಹುಡುಕಿ ತಂದು ಬಳಸಿ ಖುಷಿಪಡುತ್ತಿದ್ದ ಮಲೆನಾಡಿನ ಜನತೆ ಈಗ ಈ ತರಕಾರಿಗೆ 200-300 ಬೆಲೆ ನೀಡಬೇಕಾಗಿ ಬಂದಿರುವುದು ಅದಕ್ಕೆ ಬಂದಿರುವ ಮಾರುಕಟ್ಟೆ ಮೌಲ್ಯಕ್ಕೆ ಸಾಕ್ಷಿ. ಅಡಿಗೆಯಲ್ಲಿ ಚಟ್ನಿ, ಪಲ್ಲೆ,ಗೊಜ್ಜಾಗಿ ಬಳಕೆಯಾಗುತಿದ್ದ ಈ ಕಾಡ ಹಾಗಲ ಈಗ ಇನ್ನಷ್ಟು ವಿಭಿನ್ನ ಖಾದ್ಯವಾಗಿ ಗಮನ ಸೆಳೆಯುತ್ತಿದೆ.
ಮನೆಯಂಗಳ, ಬಯಲುಪ್ರದೇಶ, ತಾರಸಿಗಳಲ್ಲಿ ನೆಟ್ಟು ಬೆಳೆಸಬಹುದಾದ ಈ ಬಹುಉಪಯೋಗಿ ತರಕಾರಿ60 ರಿಂದ 70 ದಿವಸಗಳ ಬೆಳೆಯಾಗಿದ್ದು ವರ್ಷಕ್ಕೆ ಮೂರ್ನಾಲ್ಕಕ್ಕೂ ಹೆಚ್ಚುಬಾರಿ ನಿರಂತರವಾಗಿ 5-6 ವರ್ಷಗಳ ವರೆಗೆ ಒಂದೇ ಬಳ್ಳಿಯಲ್ಲಿ ಕಾಯಿಕೊಡುವ ಕಾಮಧೇನು. ಈ ಮಾಡ ಹಾಗಲ ಈಗ ರೈತರಿಗೆ ಲಾಭದಾಯಕ ಬೆಳೆಯಾಗಿ ಮಾರ್ಪಟ್ಟಿದೆ ಎನ್ನುತ್ತಾರೆ ಕೃಷಿ ತಜ್ಞರು.
ಟೀಸಲ್ಗೌಡ್ ವೈಜ್ಞಾನಿಕ ಹೆಸರಿನ ಮಾಡಹಾಗಲ ಮೂಲತ: ಬರ್ಮಾ ದೇಶದ್ದು, ಮಲೆನಾಡಿನ ಬಯಲಲ್ಲಿ ಮಳೆಗಾಲದಲ್ಲಿ ಕಾಣಿಸಿಕೊಂಡು ಹೂ,ಕಾಯಿ ಬಿಟ್ಟು ಮರೆಯಾಗುವ ಸಸ್ಯ ಪಶ್ಚಿಮಬಂಗಾಲ, ಓರಿಸ್ಸಾ, ತ್ರಿಪುರಾ, ಅಂಡಮಾನ್‍ಗಳ ವಾಣಿಜ್ಯ ಬೆಳೆ.
ಆರೋಗ್ಯಕಾರಿ ಪೌಷ್ಠಿಕಾಂಶ ಗಳ ವಿಶೇಶತೆಯ ಈ ಕಾಡಹಾಗಲದ ಬಗ್ಗೆ ಮಡಿಕೇರಿಯ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲೂ ಅಧ್ಯಯನ, ಪ್ರಾಯೋಗಿಕತೆ ನಡೆದಿದೆ. ಮಾಡಹಾಗಲದ ವಿಶೇಶ, ಮಾರುಕಟ್ಟೆ, ಬೆಳೆಯುವ ರೀತಿಗಳ ಮಾಹಿತಿಗಾಗಿ 7483282402,9449636569 ಸಂಖ್ಯೆಗಳನ್ನು ಸಂಪರ್ಕಿಸಬಹುದು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

ಪೂಜೆ, ಪುನಸ್ಕಾರ ಅಂಬೇಡ್ಕರ್‌ ಸಿದ್ಧಾಂತಕ್ಕೆ ವಿರುದ್ಧ…!

ದೇವರಿಗಿಂತ ಹೆಚ್ಚಾಗಿ ಕೆಲಸ,ಮಾನವೀಯತೆ ನಂಬುತಿದ್ದ ಡಾ. ಬಿ.ಆರ್.‌ ಅಂಬೇಡ್ಕರ್‌ ವೈದಿಕ ಪೂಜೆ, ಪುನಸ್ಕಾರಗಳಂಥ ಕಂದಾಚಾರಗಳನ್ನು ವಿರೋಧಿಸುತಿದ್ದರು. ಅಂಥ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *