ಸ್ವರ್ಗ ಸಂಗೀತಕ್ಕೆ ತೆರೆದುಕೊಂಡ ವೇದಿಕೆ

ಗೋಸ್ವರ್ಗದಲ್ಲಿ ಸ್ವರ್ಗ ಸಂಗೀತಕ್ಕೆ ತೆರೆದುಕೊಂಡ ವೇದಿಕೆ
ಅಲ್ಲಿ ನಿಮ್ಮ ಸಂಗೀತ ಸುಧೆಯನ್ನು ಹರಿಸಲು ವಿಫುಲ ಅವಕಾಶ ಕಲ್ಪಿಸಲಾಗಿದೆ.
ಆದರೆ ವಾಹ್-ಭೇಷ್ ಎನ್ನುವ, ಆಗಾಗ ತಲೆದೂಗುವ, ಚಪ್ಪಾಳೆಯ ಸುರಿಮಳೆಗರೆವ, ತಮ್ಮಗಾಯನ ವೈಖರಿಯನ್ನು ವಿಮರ್ಶೆಗೆ ಹಚ್ಚುವ, ಕಾರ್ಯಕ್ರಮದ ನಂತರ ತಮ್ಮ ಬಳಿಬಂದು ಅಭಿನಂದನೆಯ ಮಾತುಗಳನ್ನಾಡುವ ಪ್ರೇಕ್ಷಕವರ್ಗವನ್ನು ತಮ್ಮ ಕಾರ್ಯಕ್ರಮದಲ್ಲಿ ನಿರೀಕ್ಷಿಸುವಂತಿಲ್ಲ.
ಗೌರವ ಧನವನ್ನಂತೂ ಮೊದಲೇ ಬಯಸುವಂತಿಲ್ಲ. ತಮ್ಮ ಆತ್ಮ ತೃಪ್ತಿಗೆ ತಾವು ಹಾಡಬಹುದು. ಅಲ್ಲಿ ತಮ್ಮ ಕಾರ್ಯಕ್ರಮಗಳಿಗೆ ಮೂಲಭೂತವಾದ ಅವಶ್ಯಕ ಪರಿಕರಗಳನ್ನಷ್ಟೇ ಪೂರೈಸಲಾಗುತ್ತದೆ. ಊಟೋಪಚಾರದ ವ್ಯವಸ್ಥೆಯೂ ಯಥಾಪ್ರಕಾರ ಇರುತ್ತದೆ. ಇಂತಹ ವಿನೂತನ ಪದ್ಧತಿಯಲ್ಲಿ ಕಾರ್ಯಕ್ರಮಗಳಿಗೆ ವೇದಿಕೆ ಒದಗಿಸುತ್ತಿರುವುದು ಗೋಸ್ವರ್ಗದಲ್ಲಿ.
ಸಿದ್ದಾಪುರ ತಾಲೂಕಿನ ಭಾನ್ಕುಳಿಯ ಶ್ರೀರಾಮದೇವಮಠದ ಪರಿಸರದಲ್ಲಿ. ಸ್ವರ್ಗ ಸಂಗೀತ ಶಿರೋನಾಮೆಯಲ್ಲಿ.
ಹೌದು! ಅಲ್ಲಿ ನಿಮಗೆ ನಿಮ್ಮ ಸಂಗೀತವನ್ನು ಆಸ್ವಾದಿಸುವ ಕೇಳುಗರಾದ ಮಾನವರು ಕಣ್ಣಿಗೆ ಕಾಣದಿರಬಹುದು. ಆದರೆ ನಿಮ್ಮ ಸಂಗೀತದ ಆಲಾಪನೆಗೆ ಸ್ಪಂದಿಸುವ ಸಾವಿರ ಗೋಮಾತೆಯರಿದ್ದಾರೆ.
ತಮ್ಮ ಎರಡುಸಾವಿರ ಕಿವಿಗಳನ್ನು ನಿಮಿರಿಸಿಕೊಂಡು ಅವುಗಳೂ ತಮ್ಮ ಸಂಗೀತ ಸುಧೆಯನ್ನು ಖಂಡಿತ ಸವಿಯುತ್ತವೆ. ಆಗಾಗ ಕರು-ಕಂದಮ್ಮಗಳು ತಮ್ಮ ಹಾಡಿಗೆ ಅಂಬಾ…ದನಿಗರೆಯುತ್ತಾ ನೆರವಲು ನೀಡಲೂಬಹುದು.
ಅಂತಹ ಪವಿತ್ರ ತಾಣದಲ್ಲಿ, ಗೋಮಾತೆಯ ಶುದ್ಧವಾದ ಉಸಿರಿನ ವಾತಾವರಣದಲ್ಲಿ, ಗೋವಿನ ಪದತಲದಲ್ಲಿ ಗಾಯಕರಾದ ತಾವೂ ಸಹ ತಮ್ಮ ಅಂತರಂಗ ತೃಪ್ತಿಗಾಗಿ, ಗೋವುಗಳ ಸಂತೋಷಕ್ಕಾಗಿ ಹಾಡುವ ಮನಸ್ಸಿದ್ದರೆ ತಡ ಮಾಡಬೇಡಿ. ಗೋಸ್ವರ್ಗದಲ್ಲಿಯ ಈ ಕುರಿತ ವ್ಯವಸ್ಥಾಪಕರನ್ನು(9480073956) ಸಂಪರ್ಕಿಸಿ. ತಮಗೂ ಅಲ್ಲಿ ಅವಕಾಶ ಒದಗಲಿದೆ.

ಶುಭಾರಂಭಗೊಂಡ ಸ್ವರ್ಗ ಸಂಗೀತ:
ಗೋಸ್ವರ್ಗದ ಪುಣ್ಯ ಪರಿಸರದಲ್ಲಿನ ಗೋಪದ ವೇದಿಕೆಯಲ್ಲಿ ಸ್ವರ್ಗ ಸಂಗೀತ ವಿಶಿಷ್ಟ ಕಾರ್ಯಕ್ರಮವು ವಿಜಯದಶಮಿಯ ಪರ್ವ ಕಾಲದಲ್ಲಿ ಶುಭಾರಂಭಗೊಂಡಿತು.
ಪ್ರಥಮ ಕಾರ್ಯಕ್ರಮದಲ್ಲಿ ಹಿಂದೂಸ್ಥಾನೀ ಗಾಯಕ ರಾಜೇಂದ್ರ ಬಾಳೇಹಳ್ಳಿ ತಮ್ಮ ಸುಮಧುರ ಕಂಠದಿಂದ ಗಾನಸುಧೆ ಹರಿಸಿ ಸಂಗೀತ ಸೇವೆ ನಡೆಸಿಕೊಟ್ಟರು. ಅವರಿಗೆ ತಬಲಾ ಸಾತ್ ನೀಡಿದವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶ್ರೀಕಾಂತ ಕಾಳಮಂಜಿ . ಹಾರ್ಮೊನಿಯಂ ನುಡಿಸಿ ಸಹಕರಿಸಿದವರು ಸಂಗೀತ ಶಿಕ್ಷಕ ರಾಜೇಂದ್ರ ಕೊಳಗಿಯವರು. ಪ್ರಥಮ ಸ್ವರ್ಗ ಸಂಗೀತ ಕಾರ್ಯಕ್ರಮವು ಹಲವು ತಾಸುಗಳ ಕಾಲ ನಡೆದು ಸಂಧ್ಯಾಕಾಲದ ಗೋಗಂಗಾರತಿಯೊಂದಿಗೆ ಮಂಗಲವಾಗಿದ್ದೂ ವಿಶೇಷವಾಗಿತ್ತು.

      ಇದು ಯುವಕರು,ನಿವೃತ್ತರು ಕಡ್ಡಾಯವಾಗಿ ಓದಲೇಬೇಕಾದ ಸ್ಟೋರಿ!

ಮಾರುತಿ
ಮಧುವನದ ಕತೆ
ಸಿದ್ಧಾಪುರ ತಾಲೂಕಿನ ಕಾನಗೋಡಿನ ನಿವೃತ್ತ ನೌಕರರೊಬ್ಬರು ಶ್ರೇಷ್ಠ ಜೇನು ಕೃಷಿಕರಾಗಿ ಜಿಲ್ಲೆಗೆ ಜೇನಿನ ಸವಿ ಉಣಿಸಿದ್ದಾರೆ.
ಮಾರುತಿ ಬೋರ್ಕರ್ ರಾಜ್ಯ ಸಾರಿಗೆ ಸಂಸ್ಥೆಯಮಾಜಿ ನೌಕರರು, ಕೃಷಿ ಪರಿಸರದ ಈ ನಿವೃತ್ತ ನೌಕರರಿಗೆ ಬಹಳ ಹಿಂದಿನಿಂದ ಜೇನು ತುಪ್ಪ, ಕೃಷಿಯ ಬಗ್ಗೆ ಆಸಕ್ತಿ ಇತ್ತಂತೆ. ನಿವೃತ್ತಿ ನಂತರ ಸಮಾನಮನಸ್ಕ ಜೇನು ಕೃಷಿಕರ ಸ್ನೇಹ ಮಾಡಿದ ಈ ಮಾರುತಿ ಈಗ ಮಾರುತಿ ಮಧುವನ ಎಂದೇ ಖ್ಯಾತರಾಗಿದ್ದಾರೆ.
ತಮ್ಮ ಹೆಸರಿನ ಬರೀ 5 ಗುಂಟೆ ಜಾಗದ ಜೊತೆಗೆ ಸಹೋದರರು, ಸ್ನೇಹಿತರು ಪರಿಚಿತರ ಮನೆಯಲ್ಲೆಲ್ಲಾ ಜೇನು ಗೂಡು ಇಡುವ ಇವರು ಕ್ವಿಂಟಾಲ್ ಲೆಕ್ಕದಲ್ಲಿ ಜೇನುಬೆಳೆಯುತ್ತಾರೆ. ಮಡದಿ ಮನೆ-ಮಂದಿಯನ್ನೆಲ್ಲಾ ಈ ಜೇನು ಕೃಷಿಗೆ ಬಳಸಿಕೊಳ್ಳುವ ಮಾರುತಿ ಬಿ.ಪಿ. ಶುಗರ್ ಸೇರಿದಂತೆ ನಾನಾ ಕಾಯಿಲೆಗಳಿರುವವರು ಈ ಜೇನಿನ ಸಂಘ ಮಾಡಿ ಆಗೀಗ ಕಚ್ಚಿಸಿಕೊಂಡರೆ ಔಷಧಿಯಂತೆ ಕೆಲಸಮಾಡುತ್ತದೆ ಎನ್ನುವ ಇವರು ಇಂಥ ಪ್ರಯೋಗಗಳಿಂದ ಹೆಸರು ಮಾಡಿದ್ದಾರೆ.
ಪ್ರಾಕೃತಿಕವಾಗಿ ಜೇನು, ನಸರಿ ಜೇನು ಬೆಳೆಯುವ ವಿಭಿನ್ನ ಪ್ರಯೋಗಗಳಲ್ಲಿ ಯಶಸ್ವಿಯಾಗಿರುವ ಇವರಿಗೆ ಜೇನು, ಜೇನುಕೃಷಿ ಬರಹಗಳೆಂದರೆ ಎಲ್ಲಿಲ್ಲದ ಪ್ರೀತಿ. ನೂರಾರು ಗೂಡುಗಳನ್ನು ಇಟ್ಟು ಜೇನು ತೆಗೆಯುತ್ತಾ ಫಲಕಂಡಿರುವ ಮಾರುತಿ ಕುಟುಂಬ ಮರದ ಪೊಟರೆಯಲ್ಲೇ ಔಷಧಿಗುಣಗಳ ಜೇನಿನ ಬೆಳೆ ಬೆಳೆದು ಖುಷಿ ಕಂಡಿದ್ದಾರೆ.
ಇವರು ಕ್ವಿಂಟಾಲ್ ಲೆಕ್ಕದಲ್ಲಿ ಬೆಳೆಯುವ ಜೇನಿನ ಸಾದಾ ಜೇನುತುಪ್ಪಕ್ಕೆ 250 ರಿಂದ ಕೇಜಿ.ಗೆ 300 ರೂಪಾಯಿ ಬೆಲೆಯಾದರೆ, ನಸ್ರಿ ತುಪ್ಪಕ್ಕೆ ಕನಿಷ್ಠ 2.5 ಸಾವಿರ ಒಂದು ಕೇಜಿ ತುಪ್ಪಕ್ಕೆ!. ಅಭ್ಯಾಸ, ಹವ್ಯಾಸಗಳಾಗಿ ಜೇನು ಕೃಷಿ ರೂಢಿಸಿಕೊಂಡಿರುವ ಮಾರುತಿ ಜೇನು ಕೃಷಿಯ ಆಸಕ್ತಿ-ಅಭಿರುಚಿ ವೃದ್ಧಿಸಿದ್ದು ಮಧುಕರ ಹೆಗಡೆಯವರ ಸ್ನೇಹ-ಸಹವಾಸದಿಂದ ಎನ್ನುವ ಇವರ ಮನೆಯಲ್ಲಿ ನಿತ್ಯ ಜೇನು ಉತ್ಫಾದನಾ ಪ್ರಾತ್ಯಕ್ಷಿಕೆ ನಡೆಯುತ್ತದೆ. ಜೇನು ಗೂಡು (ಪೆಟ್ಟಿಗೆ)ತಯಾರಿಕೆ, ಜೇನುಸಂಗ್ರಹ, ಜೇನು ಪಾಲನೆ, ಜೇನು ತುಪ್ಪ ಸಂಸ್ಕರಣೆ ಹೀಗೆ ಜೇನು ಉತ್ಫಾದನೆಯ ನಾನಾ ಹಂತಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸುವ ಇವರ ಸಾಧನೆ, ಸೇವೆಗೆ ತಾಲೂಕಿನ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ಶ್ರೇಷ್ಠ ಜೇನು ಕೃಷಿಕ ಎಂದು ಗುರುತಿಸಿ, ಅಭಿನಂದಿಸಿವೆ.
ತಾಲೂಕಿನ ರೈತರಿಗೆ ಜೇನುಪೆಟ್ಟಿಗೆ, ಜೇನು, ಜೇನು ಪಾಲನಾ ವಿಧಾನಗಳೆಲ್ಲವನ್ನೂ ನೀಡುವ ಮಾರುತಿಬೋರ್ಕರ್ ಈಗ ಮಾರುತಿ ಮಧುವನ ಎಂದು ಅನ್ವರ್ಥಕನಾಮದಿಂದ ಕರೆಸಿಕೊಳ್ಳುತಿದ್ದಾರೆ.
ಆಸಕ್ತಿ-ಅಭಿರುಚಿ ಇದ್ದರೆ ವಯಸ್ಸು, ಹೆಚ್ಚಿನ ಅನುಕೂಲತೆಗಳ ಬೆಂಬಲವಿಲ್ಲದೆಯೂ ಸಾಧನೆ ಮಾಡಬಹುದು ಎಂಬುದಕ್ಕೆ ಮಾರುತಿ ಬೋರ್ಕರ್ ದೃಷ್ಟಾಂತ. ನಿವೃತ್ತ ನೌಕರರು ಸೇರಿದಂತೆ ಎಲ್ಲಾ ಕ್ಷೇತ್ರ, ವಯೋಮಾನದವರೂ ಕಿವಿ ಅರಳಿಸಿ, ಕಣ್ಣು ಅಗಲಿಸಿ ನೋಡುವಂತಹ ಸಾಧನೆ ಮಾಡಿರುವ ಈ ನಿವೃತ್ತ ನೌಕರ ಜೀವನೋತ್ಸಾಹ ಮತ್ತು ಜೀವಂತಿಕೆಗೆ ಸಾಕ್ಷಿ.
ವಿಶಿಷ್ಟ ಪೆಟ್ಟಿಗೆಗಳು-
ಜೇನು ಸಾಕಾಣಿಕೆಯಲ್ಲಿ ಜೇನು ಸಂಗ್ರಹಿಸುವ ಪೆಟ್ಟಿಗೆಗಳಿಗೂ ಮಹತ್ವವಿದೆ. ಕಾಡು ಹುಳುಗಳು ಜೇನು ಪೆಟ್ಟಿಗೆಗೆ ನುಗ್ಗಿದಾಗ ರಕ್ಷಣೆ ಮಾಡಿಕೊಳ್ಳುವ ವಿನ್ಯಾಸ,ನಸ್ರಿ ಜೇನನ್ನು ಉಪಾಯದಿಂದ ಪ್ಲಾಸ್ಟಿಕ್ ಬಾಟಲಿಯಲ್ಲಿ ಜೇನು ಪೆಟ್ಟಿಗೆಯಲ್ಲೇ ಉಪಾಯದಿಂದ ಸಂಗ್ರಹಿಸುವುದು ಹೀಗೆ ಜೇನು ಕೃಷಿ, ಜೇನು ತಯಾರಿಕೆಯ ಪೆಟ್ಟಿಗೆ ರಚನೆಯಲ್ಲೂ ವಿಶಿಷ್ಟ ವಿಧಾನ ಅನುಸರಿಸುವ ಮಾರುತಿ ಮಧುವನ ಈಗ ಜೇನು ಪೆಟ್ಟಿಗೆ ತಯಾರಿಸುವ ಸಣ್ಣ ಉದ್ಯಮಿಯಾಗಿಯೂ ಹೆಸರುಮಾಡುತಿದ್ದಾರೆ.
ಕೆಲಸ ಇಲ್ಲ ಎನ್ನುವ ಎಳೆಯರು ಮತ್ತು ನಿವೃತ್ತರಿಗೆಲ್ಲಾ ಜೇನು ಕೆಲಸಮಾಡಿ ನಾವು,ನೀವು, ಪರಿಸರ ಎಲ್ಲವೂ ಉಳಿಯೋಣ, ಉಳಿಸೋಣ ಎನ್ನುವ ಸಂದೇಶವೇ ಅವರು ಈ ಜಗತ್ತಿಗೆ ಕೊಡುವ ವಿವೇಕ,ಸಂದೇಶ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ...

ಕಾಗೇರಿ ವ್ಯಂಗ್ಯಕ್ಕೆ ಕಾಂಗ್ರೆಸ್‌ ಉತ್ತರ……! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-04-

ಬಿ.ಜೆ.ಪಿ. ಮಟ್ಟಿಗೆ ಉತ್ತರ ಕನ್ನಡದ ವರಿಷ್ಠರಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮಗೋಷ್ಠಿ ನಡೆಸುವುದರಲ್ಲಿ ಮಾಧ್ಯಮಗಳಿಗೆ ಬೇಕಾದಷ್ಟೇ ಚುಟುಕಾಗಿ ಉತ್ತರಿಸುವುದರಲ್ಲಿ ನಿ಼ಷ್ಣಾತರು. ಆಗಾಗ ಮಾಧ್ಯಮಗೋಷ್ಠಿ...

ನಾಯಕರಿಗೆ ಇಂಬು, ಕಾರ್ಯಕರ್ತರಿಗೆ ಚೊಂಬು!!! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-03-

ಬಿ.ಜೆ.ಪಿ. ಸೋಲಿಸಲು ಸಾಧ್ಯವಿಲ್ಲ, ಕಾಂಗ್ರೆಸ್‌ ಗೆ ಅಧಿಕಾರವಿಲ್ಲದೆ ಅಲ್ಲಿಯ ಕಾರ್ಯಕರ್ತರು ಅನಿವಾರ್ಯವಾಗಿ ಬಿ.ಜೆ.ಪಿ. ಸೇರುತ್ತಾರೆ. ಹೀಗಾದರೆ ನೀವೆಲ್ಲಾ ಕಾಂಗ್ರೆಸ್‌ ನಲ್ಲಿದ್ದು ಏನು ಪ್ರಯೋಜನ? ಎಂದು...

ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! part-02- ವೀಶ್ವೇಶ್ವರ ಹೆಗಡೆಗೆ ಮೃಧುವಾಗೇ ತಿವಿಯುತ್ತಿರುವ ಗ್ಯಾರಂಟಿಯಣ್ಣ!

ಮೇಲ್ವರ್ಗದ ಓಲೈಕೆ, ವೈದಿಕ ತುಷ್ಟೀಕರಣಗಳ ಬಿ.ಜೆ.ಪಿ. ಅನಿವಾರ್ಯವಾದಾಗ, ಮೇಲ್ನೋಟಕ್ಕೆ ಪ್ರದರ್ಶನಕ್ಕೆ ಅಹಿಂದ್‌ ಗಳನ್ನು ಬಳಸುವುದನ್ನು ಬಿಟ್ಟರೆ ಅದು ತನ್ನ ಅಜೆಂಡಾ ಉಳ್ಳವರ ಪರ ನೀತಿಯನ್ನು...

don,t do it- ಮಗುವಿನೊಂದಿಗೆ ಪೋಷಕರ ಅಪಾಯಕಾರಿ ಸೆಲ್ಫಿ; ಸ್ಮಾರ್ಟ್ ಸಿಸಿಟಿವಿಯಿಂದ ತಪ್ಪಿದ ಸಂಭಾವ್ಯ ದುರಂತ!

ಗೋಕರ್ಣ: ಪೊಲೀಸರ ಈ ಮುನ್ನೆಚ್ಚರಿಕಾ ಕ್ರಮ ಗೋಕರ್ಣದಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರು ತಮ್ಮನ್ನು ಕ್ಯಾಮರಾ ಮೂಲಕ ನೋಡುತ್ತಿದ್ದಾರೆ ಎಂದು ದಂಪತಿಗೆ ತಿಳಿದಿರಲಿಲ್ಲ. ಮಗುವಿನೊಂದಿಗೆ ಪೋಷಕರ...

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ ಮಾತು….. ಬೆoಗಳೂರಿನ ಚಿನ್ನಸ್ವಾಮಿ ಕ್ರೀಡಾoಗಣ ದಲ್ಲಿ ಕಲ್ತುಳಿತಕ್ಕೆ ಒಳಗಾಗಿ ಜೀವತೆತ್ತ ಅಕ್ಷತಾ ಪೈ ಶವ ಸಿದ್ಧಾಪುರಕ್ಕೆ ಆಗಮಿಸಿದೆ. ಮೃತ ಅಕ್ಷತಾ ಪತಿ ಆಶಯ ನಿನ್ನೆ ಅಲ್ಲಿದ್ದರು. ನಿನ್ನೆಯ ಘಟನೆಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *