ಗಾಂಧಿ ಕಾಲಿಟ್ಟಮನೆ ಇನ್ನೂ 750ವರ್ಷ ಸುಭದ್ರ!

350 ವರ್ಷಗಳ ಮನೆಗೆ ಇನ್ನೂ 750 ವರ್ಷಗಳ
ಆಯುಷ್ಯ!
ಸಾಮಾನ್ಯವಾಗಿ ಒಂದು ಕಟ್ಟಡ ಒಂದು ಮನೆಯ ಸಧೃಡತೆಯ ಅವಧಿ ನೂರು ವರ್ಷಗಳು ಎಂಬುದು ಸಾಮಾನ್ಯ ಗೃಹಿಕೆ, ಆದರೆ ಇಲ್ಲೊಂದು ಮನೆ ಈಗಾಗಲೇ 350 ವಸಂತಗಳನ್ನು ಕಳೆದಿದ್ದು ಇಂಜಿನಿಯರ್ ಗಳ ಸಮೀಕ್ಷೆಯಿಂದ ಈ ಮನೆ ಇನ್ನೂ 750ವರ್ಷಗಳ ವರೆಗೆ ಭದ್ರವಾಗಿರಲಿದೆ ಎನ್ನುವ ವಿಸ್ಮಯದ ವಿಚಾರ ಬೆರಗುಗೊಳಿಸುವಂತಿದೆ.
ಇದೇ ಮನೆಗೆ ಮಹಾತ್ಮಾಗಾಂಧಿ ಕೂಡಾ ಭೇಟಿ ನೀಡಿದ್ದರು ಎನ್ನುವ ವಿಚಾರ ಕುತೂಹಲ ಕೆರಳಿಸಿದೆ.
ಈ ವಿಶಿಷ್ಟ ಮನೆ ಇರುವುದು ಸಿದ್ದಾಪುರದ ಹೃದಯ ಭಾಗದಲ್ಲಿ ಪಟ್ಟಣ ಪಂಚಾಯತ್
ಎದುರಿನ ಎರಡನೇ ರಸ್ತೆಯಲ್ಲಿರುವ ಈ ಮನೆ ಮಣ್ಣು ಮತ್ತು ಮರಗಳಿಂದ ನಿರ್ಮಾಣವಾಗಿದೆ. ಇಲ್ಲಿರುವ ಮರದ ಕೆತ್ತನೆ ಶತಮಾನಗಳ ಹಿಂದಿನ ಕುಸುರಿ ಕಲೆಗೆ ಪುಟವಿಟ್ಟಂತಿದೆ.
ಈ ಮನೆಯ ಆಯುಷ್ಯ ಈಗಾಗಲೇ 350 ವರ್ಷಗಳು ಇದು ಮತ್ತೂ 750 ವರ್ಷಗಳ ವರೆಗೆ ಸುಭದ್ರವಾಗಿರುತ್ತದೆ ಎನ್ನುವ ತಜ್ಞರ ಅಭಿಪ್ರಾಯದಂತೆ ಬದಲಾವಣೆಗಳನ್ನು ಮಾಡದೆ ಹೀಗೇ ಉಳಿಸಿಕೊಳ್ಳಬೇಕೆಂದಿದ್ದೇನೆ ಎನ್ನುತ್ತಾರೆ ಈ ಮನೆಯ ಮಾಲಿಕ ರಾಧಾಕೃಷ್ಣ ಹೆಗಡೆ.
ಅಂದಹಾಗೆ ದೊಡ್ಮನೆ ಕುಟುಂಬದ ಈ ಪರಿವಾರ ಈ ಮನೆಯನ್ನು ಬೇರೆಯವರಿಂದ ಖರೀದಿಸಿದ್ದಂತೆ.
1934 ರಲ್ಲಿ ಈ ಮನೆಗೆ ಮಹಾತ್ಮಾಗಾಂಧಿ ಭೇಟಿ ನೀಡಿದ್ದು, ಸ್ವಾತಂತ್ರ್ಯ ಹೋರಾಟಗಾರ್ತಿ ಮಹಾದೇವಿತಾಯಿ ಇದೇ ಮನೆಯಿಂದ ಗಾಂಧಿ ಸಂಪರ್ಕದಿಂದ ವಿನೋಭಾಭಾವೆಯವರ ಆಶ್ರಮ ಸೇರಿದ್ದು ಸೇರಿದಂತೆ ಈ ಮನೆಗೂ ದೇಶದ ಸ್ವಾತಂತ್ರ್ಯ ಹೋರಾಟ, ಗಾಂಧಿ-ಶಾಂತಿ ಚಳವಳಿಗೂ ನಂಟಿದೆ.ಈ ನಂಟಿನ ನೆನಪು ಉಳಿಸುವ ಕೆಲಸಕ್ಕೆ ಈ ಕುಟುಂಬ ಮನಸ್ಸುಮಾಡಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ‌ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆಗಳಲ್ಲಿ ನಿರಂತರ ಮಳೆಯಾಗಿದೆ. ಇದರ ಪರಿಣಾಮ ಶಿರಸಿ-ಅಂಕೋಲಾ ಮಾರ್ಗದ ಮಧ್ಯೆ ಗುಡ್ಡ...

Recommended For You

About the Author: Kanneshwar Naik

Leave a Reply

Your email address will not be published. Required fields are marked *