

ಸಿದ್ದಾಪುರದ
ಹಲಗೇರಿ ಗ್ರಾಪಂ ವ್ಯಾಪ್ತಿಯ ಹೊನ್ನೆಕೈ ಊರಿನ ಸಂಪರ್ಕ ರಸ್ತೆಗಳು ಪೂರ್ತಿ ಕಚ್ಚಾ ರಸ್ತೆಗಳಾಗಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅವನ್ನು ಸರ್ವಋತು ರಸ್ತೆಗಳಾಗಿ ಅಭಿವೃದ್ಧಿಪಡಿಸಬೇಕೆಂದು ಹೊನ್ನೆಕೈ ಊರಿನ ಗ್ರಾಮಸ್ಥರು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಆಗ್ರಹಿಸಿದ್ದಾರೆ.
ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು ಹೊನ್ನೆಕೈ ಊರಿನಿಂದ ಬೆಳ್ಳೆಮಡಿಕೆ ಮತ್ತು ಬೈಲಳ್ಳಿ ಊರುಗಳನ್ನು ಸಂಪರ್ಕಿಸುವ ಸುಮಾರು ಒಂದೂವರೆ ಕಿ.ಮೀ. ರಸ್ತೆ ಹಾಗೂ ಹೊನ್ನೆಕೈನಿಂದ ಚಂದ್ರಘಟಗಿ ಹಾಗೂ ಹೇಮಗಾರ ಗ್ರಾಮವನ್ನು ಸಂಪರ್ಕಿಸುವ ಸುಮಾರು 2 ಕಿಮೀ.ರಸ್ತೆ ಪೂರ್ತಿ ಕಚ್ಚಾರಸ್ತೆಯಾಗಿದ್ದು ಸಾರ್ವಜನಿಕರ, ವಾಹನಗಳ, ಜಾನುವಾರುಗಳ ಸಂಚಾರಕ್ಕೆ ಅನಾನುಕೂಲವಾಗುತ್ತಿದೆ. ಹೊನ್ನೆಕೈನಿಂದ ಚಂದ್ರಘಟಗಿ, ಹೇಮಗಾರ ರಸ್ತೆಯಲ್ಲಿ ಹೊಳೆಗೆ ಸೇತುವೆ ನಿರ್ಮಿಸಲಾಗಿದ್ದರೂ ಮಳೆಯಿಂದಾಗಿ ರಸ್ತೆ ಸಂಪೂರ್ಣ ಹಾಳಾಗಿದ್ದು ಓಡಾಟ ಮಾಡಲು ಸಾಧ್ಯವಾಗದ ಸ್ಥಿತಿ ಇದೆ.
ಆದ್ದರಿಂದ ಈ ರಸ್ತೆಗಳನ್ನು ಸರ್ವಋತು ರಸ್ತೆಗಳಾಗಿ ಅಭಿವೃದ್ಧಿಪಡಿಸಬೇಕೆಂದು ಹೊನ್ನೆಕೈ ಗ್ರಾಮದ ರಾಘವೇಂದ್ರ ಡಿ.ಹೆಗಡೆ, ಗಣಪತಿ ಎನ್.ಹೆಗಡೆ, ಅಚ್ಯುತ ಡಿ.ಹೆಗಡೆ, ತಿಮ್ಮಜ್ಜ ಹೆಗಡೆ,ಗಣಪತಿ ಎಸ್.ಹೆಗಡೆ, ವಿವೇಕಾನಂದ ಎಂ.ಹೆಗಡೆ, ಪ್ರಕಾಶ ಹೆಗಡೆ, ಶ್ರೀಪಾದ ಹೆಗಡೆ,ಗಜಾನನ ಹೆಗಡೆ, ನಾಗಪತಿ ಭಟ್, ಮಹಾಬಲೇಶ್ವರ ಹೆಗಡೆ, ಸಿ.ಎನ್.ಹೆಗಡೆ ಮುಂತಾದವರು ಶಾಸಕರನ್ನು ಕೋರಿದ್ದಾರೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






